AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎದ್ದೇಳು ಮಂಜುನಾಥ 2’ ಚಿತ್ರದಲ್ಲಿ ಜಗ್ಗೇಶ್​ ಇರಲ್ಲ; ಹಾಗಾದರೆ ಈ ಸಿನಿಮಾದ ಹೀರೋ ಯಾರು?

‘ಎದ್ದೇಳು ಮಂಜುನಾಥ’ ಎಂದಾಗ ಜಗ್ಗೇಶ್​ ನೆನಪಾಗುತ್ತಾರೆ. ಆದರೆ ಈ ಚಿತ್ರದ 2ನೇ ಪಾರ್ಟ್ ಬರುತ್ತಿದ್ದು, ಅದರಲ್ಲಿ ಜಗ್ಗೇಶ್​ ನಟಿಸುತ್ತಿಲ್ಲ.

‘ಎದ್ದೇಳು ಮಂಜುನಾಥ 2’ ಚಿತ್ರದಲ್ಲಿ ಜಗ್ಗೇಶ್​ ಇರಲ್ಲ; ಹಾಗಾದರೆ ಈ ಸಿನಿಮಾದ ಹೀರೋ ಯಾರು?
ಗುರು ಪ್ರಸಾದ್
TV9 Web
| Updated By: ಮದನ್​ ಕುಮಾರ್​|

Updated on: Mar 07, 2022 | 9:42 AM

Share

2009ರಲ್ಲಿ ತೆರೆಕಂಡ ‘ಎದ್ದೇಳು ಮಂಜುನಾಥ’ (Eddelu Manjunatha) ಸಿನಿಮಾವನ್ನು ಜನರು ಈಗಲೂ ನೋಡಿ ಎಂಜಾಯ್​ ಮಾಡುತ್ತಾರೆ. ನಿರ್ದೇಶಕ ಗುರುಪ್ರಸಾದ್​ ಮತ್ತು ನಟ ಜಗ್ಗೇಶ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದ ಆ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಈಗ ಆ ಸಿನಿಮಾದ ‘ಪಾರ್ಟ್​ 2’ ಬರುತ್ತಿದೆ. ಹೌದು, ‘ಎದ್ದೇಳು ಮಂಜುನಾಥ 2’ ಚಿತ್ರವನ್ನು ಜನರ ಮುಂದಿಡಲು ನಿರ್ದೇಶಕ ಗುರುಪ್ರಸಾದ್​ (Mata Guruprasad) ಅವರು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಹೀರೋ ಜಗ್ಗೇಶ್​ ಅಲ್ಲ! ಮಾ.6ರಂದು ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅನೇಕ ವಿಚಾರಗಳನ್ನು ಗುರುಪ್ರಸಾದ್​ ಹಂಚಿಕೊಂಡರು. ವಿಶೇಷ ಏನೆಂದರೆ ‘ಎದ್ದೇಳು ಮಂಜುನಾಥ 2’ (Eddelu Manjunatha 2) ಸಿನಿಮಾದಲ್ಲಿ ಅವರೇ ಹೀರೋ ಆಗಿ ನಟಿಸುತ್ತಿದ್ದಾರೆ. ಆದರೆ ಈ ಪಾತ್ರವನ್ನು ಹೀರೋ ಎನ್ನುವ ಬದಲು ಕಥಾನಾಯಕ ಎಂದು ಅವರು ಹೇಳಿಕೊಂಡಿದ್ದಾರೆ. ಒಟ್ಟಾರೆ ಈ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬುದರ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ಮಹಾಲಕ್ಷ್ಮೀ ಅಭಿನಯಿಸಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್​ ಕೂಡ ಮುಕ್ತಾಯ ಆಗಿದೆ.

‘ಮಂಜುನಾಥನ ಪಾತ್ರ ಎಂದರೆ ಒಬ್ಬ ವ್ಯಕ್ತಿಯ ಸೋಮಾರಿತನ ಅಂತ ಬಿಂಬಿಸಿದ್ದೆ. ಈಗ ಬೇರೆ ವಿಚಾರ ತರುತ್ತೇನೆ. ಕನ್ನಡ ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ಆ ರೀತಿಯ ಒಂದು ಪಾತ್ರ ಬರುತ್ತಿದೆ. ಅದನ್ನು ನಾನೇ ನಿಭಾಯಿಸಿದ್ದೇನೆ. ಅದೇನು ಎಂಬುದನ್ನು ನಾನು ಈಗ ಹೇಳಲ್ಲ. ಜನರು ಚಿತ್ರಮಂದಿರದಲ್ಲಿಯೇ ನೋಡಬೇಕು. ನಾನು ನೋಡಿದ, ಅನುಭವಿಸಿದ ಅನೇಕ ಯಾತನೆಗಳು ಇದರಲ್ಲಿ ಇದೆ. ಈ ಸಿನಿಮಾ ಸಾಕಷ್ಟು ನಗಿಸುತ್ತದೆ’ ಎಂದು ಗುರು ಪ್ರಸಾದ್​ ಹೇಳಿದ್ದಾರೆ.

‘ಶರತ್​ ಲೋಹಿತಾಶ್ವ ಅವರು ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೆಂಡತಿಯನ್ನು ಯಾಕೆ ಕೊಂದೆ ಎಂದು ನನ್ನನ್ನು ವಿಚಾರಣೆ ನಡೆಸುವ ಪಾತ್ರ ಅವರದ್ದು. ಯಾಕೆ ಕೊಂದೆ ಎಂಬ ಪ್ರಶ್ನೆಗೆ ದ್ವಿತೀಯಾರ್ಧದಲ್ಲಿ ಉತ್ತರ ಸಿಗತ್ತೆ’ ಎಂದು ಹೇಳಿರುವ ನಿರ್ದೇಶಕರು, ‘ಈ ಚಿತ್ರದಲ್ಲಿ ಸಾಕಷ್ಟು ಬಾಂಬ್​ಗಳಿವೆ’ ಅಂತ ಕೂಡ ಹೇಳಿದ್ದಾರೆ. ಆ ಮೂಲಕ ಕೌತುಕ ಮೂಡಿಸಲು ಪ್ರಯತ್ನಿಸಿದ್ದಾರೆ. ಹಾಗಾದರೆ ಆ ಬಾಂಬ್​ಗಳು ಯಾವುವು? ಅದರ ಬಗ್ಗೆ ಅವರು ಬೇರೆಯದೇ ರೀತಿಯಲ್ಲಿ ಉತ್ತರಿಸಿದ್ದಾರೆ.

‘ಬಾಂಬ್​ ಎಲ್ಲಿ ಮುಚ್ಚಿಟ್ಟಿದ್ದೇವೆ ಎಂಬುದನ್ನು ಮೊದಲೇ ಹೇಳಿದರೆ ಆ ಕೌತುಕ ಹೋಗುತ್ತದೆ. ದೇವರನ್ನು ನಂಬಿ ಬದುಕುವಂತಹ ವ್ಯಕ್ತಿ ಈ ಸಿನಿಮಾ ನೋಡಿದರೆ ದೇವರು ಇದ್ದಾನೋ ಇಲ್ಲವೋ ಎಂಬುಷ್ಟು ಚರ್ಚೆ ಮಾಡುವ ರೀತಿಯಲ್ಲಿ ಬಾಂಬ್​ ಇಟ್ಟಿದ್ದೇನೆ’ ಎಂದಿದ್ದಾರೆ ಗುರುಪ್ರಸಾದ್​. ಇದಕ್ಕೆ ಅವರು ಬಾಂಬ್​ ಅನ್ನೋದು ಯಾಕೆ? ಬಾಂಬ್​ ಅಂದ್ರೆ ವಿವಾದಗಳು ಎಂದುಕೊಳ್ಳಬಹುದಾ? ಅದನ್ನೂ ಅವರು ವಿವರಿಸಿದ್ದಾರೆ.

‘ಇದು ವಿವಾದ ಅಲ್ಲ. ಬರೀ ಮನರಂಜನೆ. ನನ್ನ ಪಾಲಿಗೆ ಅದು ವಿಚಾರ. ನಿಮ್ಮ ಪಾಲಿಗೆ ಅದು ವಿವಾದ ಆಗಿರಬಹುದು. ಈ ಸಿನಿಮಾ ಒಂದು ಸೀಕ್ವೆಲ್​ ಅಲ್ಲ. ಆದರೆ ಎದ್ದೇಳು ಮಂಜುನಾಥ ಎಂಬ ಶೀರ್ಷಿಕೆಗೆ ನ್ಯಾಯ ಕೊಡುತ್ತೇನೆ. ಒಂದು ಹಾಡು ಈ ಚಿತ್ರದಲ್ಲಿ ಇದೆ. ಪ್ರೇಮಕ್ಕೆ ಎರಡು ಮುಖ ಇರತ್ತೆ. ಕರ್ಕಶ ಮತ್ತು ಮಾಧುರ್ಯ ಕೂಡ ಪ್ರೇಮದಲ್ಲಿ ಇರುತ್ತದೆ. ಕಥೆಗೆ ಅನುಗುಣವಾಗಿ ಪ್ರೇಮ ಎಂಬುದು ಬೇರೆ ಬೇರೆ ರೀತಿಯಲ್ಲಿ ಬಿಂಬಿತ ಆಗುತ್ತದೆ’ ಎಂದಿದ್ದಾರೆ ಗುರು ಪ್ರಸಾದ್​.

ಇದನ್ನೂ ಓದಿ:

3 ತಿಂಗಳ ರಾಯರ ಸೇವೆ ಬಳಿಕ ನಡೆದಿದ್ದು ಪವಾಡ; ಬದುಕಿನ ಅಚ್ಚರಿಯ ವಿಚಾರ ತೆರೆದಿಟ್ಟ ನಟ ಜಗ್ಗೇಶ್​

ನಿರ್ದೇಶಕ ಗುರುಪ್ರಸಾದ್​ ಬರುತ್ತಿದ್ದಂತೆ ಕರ್ಪೂರ ಹಚ್ಚಿ ಈಡುಗಾಯಿ ಒಡೆದು ಮನಸು ಗೆಲ್ಲಬೇಕು ಅಂದುಕೊಂಡಿದ್ದೆ, ಆದರೆ ಆಗಿದ್ದೇ ಬೇರೆ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ