AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj: ಮೇಘನಾ ರಾಜ್ ಪೋಸ್ಟ್ ಮೂಡಿಸಿದ ಕುತೂಹಲ; ಫೆಬ್ರವರಿ 12ಕ್ಕೆ ಚಿರಂಜೀವಿ ಸರ್ಜಾ ಮಗುವಿನ ನಾಮಕರಣ?

Meghana Raj Son: ಅಕ್ಟೋಬರ್ 22ರಂದು ಮೇಘನಾ ತಾಯಿ ಆಗಿದ್ದರು. ಅವರಿಗೆ ಗಂಡು ಮಗು ಹುಟ್ಟಿದ್ದರಿಂದ ಎಲ್ಲರೂ ಜೂ. ಸರ್ಜಾ ಅವರ ಆಗಮನವಾಗಿದೆ ಎಂದೇ ಹೇಳಿದ್ದರು.

Meghana Raj: ಮೇಘನಾ ರಾಜ್ ಪೋಸ್ಟ್ ಮೂಡಿಸಿದ ಕುತೂಹಲ; ಫೆಬ್ರವರಿ 12ಕ್ಕೆ ಚಿರಂಜೀವಿ ಸರ್ಜಾ ಮಗುವಿನ ನಾಮಕರಣ?
ಮೇಘನಾ-ಚಿರು ಸರ್ಜಾ
ರಾಜೇಶ್ ದುಗ್ಗುಮನೆ
| Edited By: |

Updated on: Feb 10, 2021 | 9:24 PM

Share

ಬೆಂಗಳೂರು: ನಟಿ ಮೇಘನಾ ರಾಜ್​ ಎಕ್ಸೈಟ್​ ಆಗಿದ್ದಾರಂತೆ. ಶುಕ್ರವಾರ ವಿಶೇಷ ದಿನ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮೇಘನಾ ಮಗುವಿಗೆ ನಾಮಕರಣ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಸ್ಯಾಂಡಲ್​ವುಡ್​ ಸ್ಟಾರ್​ ಚಿರಂಜೀವಿ ಸರ್ಜಾ ಜೂನ್​ 7ರಂದು ಮೃತಪಟ್ಟಿದ್ದರು. ಆ ವೇಳೆಗೆ ಮೇಘನಾ ತುಂಬು ಗರ್ಭಿಣಿ. ಗಂಡನನ್ನು ಕಳೆದುಕೊಂಡ ನೋವಲ್ಲೇ ಮೇಘನಾಗೆ ಸೀಮಂತ ಶಾಸ್ತ್ರ ಕೂಡ ಮಾಡಲಾಗಿತ್ತು. ಚಿರಂಜೀವಿ ಕಟೌಟ್​ ಪಕ್ಕದಲ್ಲಿ ಇರಿಸಿಕೊಂಡು ಮೇಘನಾ ಸೀಮಂತ ಮಾಡಿಕೊಂಡಿದ್ದು, ಅಭಿಮಾನಿಗಳು ಸಾಕಷ್ಟು ನೊಂದುಕೊಂಡಿದ್ದರು.

ಅಕ್ಟೋಬರ್ 22ರಂದು ಮೇಘನಾ ತಾಯಿ ಆಗಿದ್ದರು. ಅವರಿಗೆ ಗಂಡು ಮಗು ಹುಟ್ಟಿದ್ದರಿಂದ ಎಲ್ಲರೂ ಜೂ. ಸರ್ಜಾ ಅವರ ಆಗಮನವಾಗಿದೆ ಎಂದೇ ಹೇಳಿದ್ದರು. ಚಿರು ತಮ್ಮ ಧ್ರುವ ಮಗುವನ್ನು ಎತ್ತಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಇದಾದ ನಂತರ ಚಿರು ಕುಟುಂಬದಿಂದ ಮಗುವಿನ ವಿಚಾರವಾಗಿ ಯಾವುದೇ ಅಪ್​​ಡೇಟ್​ ಬಂದಿರಲಿಲ್ಲ. ಅನೇಕರು ಮಗುವಿನ ನಾಮಕರಣ ಯಾವಾಗ? ಅವರಿಗೆ ಏನು ಹೆಸರಿಡುತ್ತೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ ಕೊನೆಗೂ ಉತ್ತರ ಸಿಗುವ ಲಕ್ಷಣ ಗೋಚರವಾಗಿದೆ.

View this post on Instagram

A post shared by Meghana Raj Sarja (@megsraj)

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿರುವ ಮೇಘನಾ, ಫೆಬ್ರವರಿ 12ರಂದು ಎಕ್ಸೈಟಿಂಗ್ ನ್ಯೂಸ್​ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.

ಇದನ್ನೂ ಓದಿ: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ..ಎಲ್ಲ ಪಾಲಕರಿಗೆ ನಟಿ ಮೇಘನಾ ರಾಜ್​ ಸಂದೇಶ

ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?