AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಂಗೇನೋ ಬಂದಿರೋದು ದೊಡ್ ರೋಗ? ಹೋಗಲೋ’; ಡಾರ್ಲಿಂಗ್​​ ಕೃಷ್ಣಗೆ ಮಿಲನಾ ನಾಗರಾಜ್​ ಆವಾಜ್​

Love Mocktail 2: ನಟಿ ಮಿಲನಾ ನಾಗರಾಜ್​ ಅವರು ಪತಿ ಡಾರ್ಲಿಂಗ್​ ಕೃಷ್ಣ ಮೇಲೆ ಸಿಟ್ಟಾಗಿದ್ದಾರೆ. ಅದಕ್ಕಾಗಿ ಅವರು ಗರಂ ಆಗಿ ಮಾತನಾಡಿದ್ದಾರೆ. ಇದಕ್ಕೆಲ್ಲ ಕಾರಣ ‘ಲವ್​ ಮಾಕ್ಟೇಲ್​ 2’ ಟ್ರೇಲರ್​.

‘ನಿಂಗೇನೋ ಬಂದಿರೋದು ದೊಡ್ ರೋಗ? ಹೋಗಲೋ’; ಡಾರ್ಲಿಂಗ್​​ ಕೃಷ್ಣಗೆ ಮಿಲನಾ ನಾಗರಾಜ್​ ಆವಾಜ್​
ಮಿಲನಾ ನಾಗರಾಜ್​, ಡಾರ್ಲಿಂಗ್​ ಕೃಷ್ಣ
TV9 Web
| Edited By: |

Updated on:Jan 28, 2022 | 9:29 AM

Share

2020ರ ಆರಂಭದಲ್ಲಿ ‘ಲವ್​ ಮಾಕ್ಟೇಲ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ಈಗ ಆ ಚಿತ್ರಕ್ಕೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ನಟ, ನಿರ್ದೇಶಕ ಡಾರ್ಲಿಂಗ್​ ಕೃಷ್ಣ (Darling Krishna) ಅವರು ‘ಲವ್​ ಮಾಕ್ಟೇಲ್​ 2’ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಅವರ ಪತ್ನಿ, ನಟಿ ಮಿಲನಾ ನಾಗರಾಜ್​ (Milana Nagaraj) ಬಂಡವಾಳ ಹೂಡಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್​ ಮತ್ತು ಹಾಡುಗಳು ಗಮನ ಸೆಳೆದಿವೆ. ಇನ್ನೇನಿದ್ದರೂ ಟ್ರೇಲರ್​ ನೋಡುವ ಸಮಯ. ಆದರೆ ‘ಲವ್​ ಮಾಕ್ಟೇಲ್​ 2’ (Love Mocktail 2) ಟ್ರೇಲರ್​ ಬಿಡುಗಡೆ ಮಾಡಲು ಡಾರ್ಲಿಂಗ್​ ಕೃಷ್ಣ ಅವರು ಯಾಕೋ ವಿಳಂಬ ಮಾಡುತ್ತಿದ್ದಾರೆ. ಟ್ರೇಲರ್​ ಸಿದ್ಧವಾಗಿದ್ದರೂ ಕೂಡ ಅವರು ಅದನ್ನು ರಿಲೀಸ್​ ಮಾಡಿಲ್ಲ. ಇದು ಮಿಲನಾ ನಾಗರಾಜ್​ ಕೋಪಕ್ಕೆ ಕಾರಣ ಆಗಿದೆ. ಈ ವಿಚಾರವನ್ನೇ ಇಟ್ಟುಕೊಂಡು ಅವರೊಂದು ವಿಡಿಯೋ ಕ್ರಿಯೇಟ್​ ಮಾಡಿದ್ದಾರೆ. ಅದರಲ್ಲಿ ಗಂಡ-ಹೆಂಡತಿಯ ಜಗಳ ಸಖತ್ ಹೈಲೈಟ್​ ಆಗಿದೆ.

‘ಲವ್​ ಮಾಕ್ಟೇಲ್​’ ಸಿನಿಮಾದಲ್ಲಿ ಹೆಂಡತಿಯ ಬರ್ತ್​ಡೇ ವಿಶ್​ ಮಾಡಲು ಮರೆತ ಹೀರೋಗೆ ಹೀರೋಯಿನ್​ ಬೈಯ್ಯುವ ದೃಶ್ಯ ಗಮನ ಸೆಳೆದಿತ್ತು. ಅದೇ ಮಾದರಿಯಲ್ಲಿ ಈಗ ಮಿಲನಾ ನಾಗರಾಜ್​ ಅವರು ಡಾರ್ಲಿಂಗ್​ ಕೃಷ್ಣಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಸಖತ್​ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಇಬ್ಬರ ನಡುವಿನ ಸಂಭಾಷಣೆ ಹೀಗಿದೆ..

ಕೃಷ್ಣ: ಯಾಕ್​ ಚಿನ್ನೀ..?

ಮಿಲನಾ: ಏನು.. ಚಿನ್ನಿನಾ? ಯಾವಳೋ ಚಿನ್ನಿ? ಅವ್ರು ಯಾರ್ಯಾರೋ ಟ್ರೇಲರ್​ ರಿಲೀಸ್​ ಮಾಡ್ಕೊಂಡು ಓಡಾಡ್ತಾ ಇದಾರೆ. ನಿಂಗೇನೋ ಬಂದಿರೋದು ದೊಡ್​ ರೋಗ? ಟ್ರೇಲರ್​ ರೆಡಿ ಆಗಿ ಒಂದು ತಿಂಗಳಾಯ್ತು ತಾನೆ? ಇವತ್ತು ರಿಲೀಸ್​ ಆಗತ್ತೆ, ನಾಳೆ ರಿಲೀಸ್​ ಆಗತ್ತೆ ಅಂತ ನಾನು ಕಾಯ್ತಾನೇ ಇದೀನಿ. ನೀವು ಬೇರೆ ಶೂಟಿಂಗ್​ನಲ್ಲಿ ಮಜಾ ಮಾಡ್ಕೊಂಡು ಓಡಾಡ್ತಾ ಇದೀರಾ?

ಕೃಷ್ಣ: ನಾನು ಶೂಟಿಂಗ್​ಗೆ ಹೋಗೋದು ಶೂಟಿಂಗ್​ ಮಾಡೋಕೆ. ಮಜಾ ಮಾಡೋಕಲ್ಲ.

ಮಿಲನಾ: ಆಹಾಹಾ.. ನೋಡಿದೀನಿ ನಿಮ್ಮ ರೀಸೆಂಟ್​ ಫೋಟೋಶೂಟ್​ನಾ..

ಕೃಷ್ಣ: ಅಲ್ಲಾ.. ಅದು ಏನಾಯ್ತು ಅಂದ್ರೆ…

ಮಿಲನಾ: ಮನೆಗೆ ಬಂದವರಿಗೆಲ್ಲ ಟ್ರೇಲರ್​ ನೋಡಿ ಟ್ರೇಲರ್​ ನೋಡಿ ಅಂತ ಹಲ್ಲು ಕಿಸ್ಕೊಂಡು ತೋರ್ಸೋಕೆ ಆಗತ್ತೆ. ಟ್ರೇಲರ್​ ಮಾಡಿರೋದು ಜನರಿಗೆ ತೋರಿಸೋಕಾ ಅಥವಾ ಮನೆಗೆ ಬಂದವರಿಗೆ ತೋರಿಸೋಕಾ?

ಕೃಷ್ಣ: ಯಾಕೆ ತೋರಿಸ್ತೀನಿ ಅಂದ್ರೆ.. ಅವರ ಒಪೀನಿಯನ್​ ಬೇಕಾಗತ್ತಲ್ಲಾ…

ಮಿಲನಾ: ಆಹಾಹಾ.. ಒಪೀನಿಯನ್​? ನೀವು ಒಪೀನಿಯನ್​ ತಗೋಳೋದು? ಶೂಟಿಂಗ್​ನಲ್ಲಿ ನಾನು ಏನಾದರೂ ಒಪೀನಿಯನ್​ ಕೊಡೋಕೆ ಬಂದ್ರೆ ಡೈರೆಕ್ಟರ್​ ನಾನಾ ನೀನಾ ಅಂತ ಕಿಂಡಲ್​ ಮಾಡೋಕೆ ಆಗತ್ತೆ. ದುಡ್ಡು ಹಾಕಿ ಕೂತಿರುವ ಪ್ರೊಡ್ಯೂಸರ್​ಗೆ ಏನ್​ ಬೆಲೆ ಇಲ್ವಾ?

ಕೃಷ್ಣ: ಅಮ್ಮ.. ಈಗೇನು ಟ್ರೇಲರ್​ ತಾನೆ? ರಿಲೀಸ್​ ಮಾಡ್ತೀನಿ.

ಮಿಲನಾ: ಹೇ.. ಫಸ್ಟ್​ ಪಾರ್ಟ್​​ನಲ್ಲೇ ನಾನು ಸತ್ತು ಹೋಗಾಯ್ತು. ಸೆಕೆಂಡ್​ ಪಾರ್ಟ್​ನಲ್ಲಿ ನೀನು ಏನ್​ ಮಾಡಿದರೂ ನಂಗೇನು ಆಗಬೇಕಿದೆ? ಹೋಗಲೋ..

ಮಿಲನಾ ಮತ್ತು ಕೃಷ್ಣ ಅವರದ್ದು ಸಖತ್ ಕ್ರಿಯೇಟಿವ್​ ಜೋಡಿ. ಶೀಘ್ರದಲ್ಲೇ ಟ್ರೇಲರ್​ ಬರಲಿದೆ ಎಂಬುದನ್ನು ತಿಳಿಸಲು ಅವರು ಈ ರೀತಿ ಫನ್ನಿ ವಿಡಿಯೋ ಮಾಡಿದ್ದಾರೆ. ಆ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ:

‘ಮಿಲನಾ ಫೇಸ್​​ಬುಕ್ ಲೈವ್ ಬಂದು ನಿಜ ಬಯಲು ಮಾಡ್ತೀನಿ ಅಂದ್ರು’; ಡಾರ್ಲಿಂಗ್​ ಕೃಷ್ಣ

ರಘು ದೀಕ್ಷಿತ್ ಅಸಮಾಧಾನದ​ ಮಾತುಗಳಿಗೆ ಡಾರ್ಲಿಂಗ್​ ಕೃಷ್ಣ ಸ್ಪಷ್ಟನೆ

Published On - 9:16 am, Fri, 28 January 22

Follow Us
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?