AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಮ್ ಹಾಗೂ ‘ಬಾ ನಲ್ಲೆ ಮಧುಚಂದ್ರಕೆ’: ನಾಗತಿಹಳ್ಳಿ ನೆನಪು

Baa Nalle Madhuchandrake: ಕೆ ಶಿವರಾಮ್ ಅವರು ಮೊದಲು ನಟಿಸಿದ ಸಿನಿಮಾ ‘ಬಾ ನಲ್ಲೆ ಮಧುಚಂದ್ರಕೆ’ ಆ ಸಿನಿಮಾ ಈಗ ಕಲ್ಟ್ ಕ್ಲಾಸಿಕ್. ಆ ಸಿನಿಮಾದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು, ಶಿವರಾಮ್ ಅವರ ಜೊತೆಗೆ ಸಿನಿಮಾದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಶಿವರಾಮ್ ಹಾಗೂ ‘ಬಾ ನಲ್ಲೆ ಮಧುಚಂದ್ರಕೆ’: ನಾಗತಿಹಳ್ಳಿ ನೆನಪು
ನಾಗತಿಹಳ್ಳಿ ಚಂದ್ರಶೇಖರ
ಮಂಜುನಾಥ ಸಿ.
|

Updated on: Feb 29, 2024 | 10:38 PM

Share

ಕೆ ಶಿವರಾಮ್ (K Shivaram) ಅಗಲಿದ್ದಾರೆ. ಐಎಎಸ್ ಅಧಿಕಾರಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿರುವ ಶಿವರಾಮ್ ಅವರು ಸಿನಿಮಾ ನಟರಾಗಿಯೂ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದಾದ ‘ಬಾ ನಲ್ಲೆ ಮಧುಚಂದ್ರಕೆ’ ಶಿವರಾಮ್ ನಟಿಸಿದ್ದ ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲಿಯೇ ನಾಯಕ ಹಾಗೂ ವಿಲನ್ ಎರಡೂ ಆಗಿದ್ದರು ಶಿವರಾಮ್. ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ‘ಬಾ ನಲ್ಲೆ ಮಧುಚಂದ್ರಕೆ’ ಎರಡನೇ ಸಿನಿಮಾ ಆಗಿತ್ತು. ಆ ಸಿನಿಮಾ ಹಾಗೂ ಆ ಸಿನಿಮಾಕ್ಕೆ ಶಿವರಾಮ್ ಅವರು ಆಯ್ಕೆ ಆಗಿದ್ದು, ಅಂದಿನ ಅವರ ವ್ಯಕ್ತಿತ್ವ ಇನ್ನಿತರೆ ವಿಷಯಗಳ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಟಿವಿ9 ಜೊತೆಗೆ ಮಾತನಾಡಿದ್ದಾರೆ.

‘ಬಹಳ ಕಷ್ಟದ ಬಾಲ್ಯ, ಯೌವ್ವನ ಕಳೆದು ಕನ್ನಡದಲ್ಲಿಯೇ ಐಎಎಸ್ ಬರೆದು ಅಧಿಕಾರಿಯಾಗಿದ್ದ ಶಿವರಾಮ್ ಅವರ ಬಗ್ಗೆ ನಾನು ಕೇಳಿದ್ದೆ, ನಾನೂ ಸಹ ಅದೇ ರೀತಿಯ ಹಿನ್ನೆಲೆಯನಾಗಿದ್ದ ಕಾರಣ ಅವರ ಬಗ್ಗೆ ಮೃದುಧೋರಣೆ ನನಗೆ ಇತ್ತು. 1992 ರ ಸಮಯದಲ್ಲಿ ಅವರು ಬೆಂಗಳೂರಿನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆಗ ಅವರೇ ನನ್ನನ್ನು ಸಂಪರ್ಕಿಸಿ, ಸಿನಿಮಾ ನಟರಾಗುವ ಆಸೆ ವ್ಯಕ್ತಪಡಿಸಿದರು. ನಾನು ಮೊದಲಿಗೆ ಅವರ ಬಳಿ ಕೆಲವು ಷರತ್ತುಗಳನ್ನು ಇರಿಸಿದ್ದೆ. ಸಿನಿಮಾ ನಟರಾಗಲು ನಟನಾ ಪ್ರತಿಭೆ ಅವಶ್ಯಕ ಎಂದಿದ್ದೆ. ಅದಕ್ಕೆ ಅವರು ‘ನಾನು ಮಣ್ಣಿನಂತೆ ನೀವು ಯಾವ ರೂಪ ಕೊಟ್ಟರೂ ಅದರಂತೆ ಆಗುತ್ತೇನೆ’ ಎಂದಿದ್ದರು, ಎಂದು ನೆನಪು ಮಾಡಿಕೊಂಡಿದ್ದಾರೆ ನಾಗತಿಹಳ್ಳಿ.

ಇದನ್ನೂ ಓದಿ:ಕೆ ಶಿವರಾಮ್ ಕುರಿತ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ

‘ಅದಾಗಲೇ ನಾನು ಬಾ ನಲ್ಲೆ ಮಧುಚಂದ್ರಕೆ ಕಾದಂಬರಿ ಬರೆದಿದ್ದೆ. ಆ ಕಾದಂಬರಿ ಹಲವು ಮರುಮುದ್ರಣಗಳನ್ನು ಕಂಡಿತ್ತು. ಆ ಕತೆಯ ನಾಯಕನೇ ವಿಲನ್ ಸಹ ಆಗಿದ್ದರಿಂದ ಯಾವುದೇ ದೊಡ್ಡ ನಟರು ಅದರಲ್ಲಿ ನಟಿಸಲು ಸಾಧ್ಯವಿರಲಿಲ್ಲ. ಹೊಸ ನಟರ ಮೇಲೆ ಬಂಡವಾಳ ಹಾಕಲು ನಿರ್ಮಾಪಕರಿಗೆ ಧೈರ್ಯವಿರಲಿಲ್ಲ. ಅದೇ ಸಮಯದಲ್ಲಿ ಶಿವರಾಮ್ ಅವರಿಗೆ ಒಬ್ಬರು ನಿರ್ಮಾಪಕರು ಸಿಕ್ಕಿದ್ದರು. ಸಿನಿಮಾ ಚಿತ್ರೀಕರಣ ಪ್ರಾರಂಭಿಸಿದೆವು. ಚಿತ್ರೀಕರಣದ ಸಮಯದಲ್ಲಿ ನನಗೆ ಶಿವರಾಮ್ ಅವರಿಗೆ ನಟನೆಯ ವಿಚಾರದಲ್ಲಿ ಆಗಾಗ್ಗೆ ಭಿನ್ನಾಭಿಪ್ರಾಯಗಳು ಬರುತ್ತಿದ್ದವು. ಆದರೂ ಸಹ ಅವರು ನಾಯಕ-ಖಳನಾಯಕ ಇಬ್ಬರೂ ಒಬ್ಬರೇ ಆಗಿರುವ ಇಬ್ಭಗೆ ವ್ಯಕ್ತಿತ್ವದ ಪಾತ್ರವನ್ನು ಚೆನ್ನಾಗಿಯೇ ನಿರ್ವಹಿಸಿದರು’ ಎಂದಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.

‘ಆ ಸಿನಿಮಾ ಹೆಚ್ಚು ಜನರನ್ನು ತಲುಪಲು ನಮಗೆ ಸಹಾಯ ಮಾಡಿದ್ದು ಹಂಸಲೇಖ. ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದ ಹಾಡುಗಳು ಬಹಳ ಜನಪ್ರಿಯವಾಗಿಬಿಟ್ಟವು. ಅಲ್ಲದೆ, ಶಿವರಾಮ್ ಅವರೂ ಸಹ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರಿಂದ ಅವರಿಗೆ ಹಲವು ಜಿಲ್ಲೆಗಳಲ್ಲಿ ಅಭಿಮಾನಿ ಬಳಗ ಆಗಲೇ ಇತ್ತು. ಹಾಗಾಗಿ ಆ ಸಿನಿಮಾ ಹಲವು ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿತು’ ಎಂದು ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ