AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧಿನಗರಕ್ಕೆ ಬಂದ ಹೊಸಬರ ‘ಲೆಕ್ಕಾಚಾರ’ವೇ ಬೇರೆ; ಇದೆಲ್ಲ ‘ಪ್ರೀತಿಯಲ್ಲಿ ಸಹಜ’ ಅಂತಾರೆ

ಪ್ರೀತಿ ಮಾಡುವವರು ಲೆಕ್ಕಾಚಾರ ಹಾಕುವುದಿಲ್ಲವೇ? ಒಂದು ವೇಳೆ ಲೆಕ್ಕಾಚಾರ ಹಾಕಿದರೆ ಅದು ನಿಜವಾದ ಪ್ರೀತಿಯೇ? ಈ ಪ್ರಶ್ನೆಗೆ ಹುಡುಕಾಟ ‘ಲೆಕ್ಕಾಚಾರ’ ಸಿನಿಮಾದಲ್ಲಿದೆ.

ಗಾಂಧಿನಗರಕ್ಕೆ ಬಂದ ಹೊಸಬರ ‘ಲೆಕ್ಕಾಚಾರ’ವೇ ಬೇರೆ; ಇದೆಲ್ಲ ‘ಪ್ರೀತಿಯಲ್ಲಿ ಸಹಜ’ ಅಂತಾರೆ
‘ಲೆಕ್ಕಾಚಾರ’ ಸಿನಿಮಾ ತಂಡ
TV9 Web
| Edited By: |

Updated on: Jun 27, 2022 | 9:29 AM

Share

ಚಿತ್ರರಂಗ ಎಂದರೆ ಅದು ಕೇವಲ ಹೈ ಬಜೆಟ್​ನ ಸಿನಿಮಾಗಳಿಗೆ ಸೀಮಿತವಲ್ಲ. ಬಣ್ಣದ ಲೋಕ ಬರೀ ಸ್ಟಾರ್​ ನಟ-ನಟಿಯರ ಆಳ್ವಿಕೆಗೆ ಸಿಲುಕಿಲ್ಲ. ಇಲ್ಲಿ ಹೊಸಬರಿಗೂ ಕನ್ನಡ ಚಿತ್ರರಂಗದಲ್ಲಿ (Sandalwood) ಅವಕಾಶ ಇದೆ. ಯಾರೇ ಬಂದರೂ ಗಾಂಧಿನಗರ ಕೈ ಬೀಸಿ ಕರೆಯುತ್ತದೆ. ತಮ್ಮ ತಮ್ಮ ಪ್ರತಿಭೆ, ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳಲು ಬೇಕಾದಷ್ಟು ಅವಕಾಶವನ್ನೂ ಈ ಕ್ಷೇತ್ರ ನೀಡುತ್ತದೆ. ಚಿತ್ರರಂಗಕ್ಕೆ ಕಾಲಿಡುವ ಪ್ರತಿ ಹೊಸಬರ ತಂಡವೂ ತನ್ನದೇ ಆದಂತಹ ಲೆಕ್ಕಾಚಾರ ಹಾಕಿಕೊಂಡಿರುತ್ತದೆ. ಇಲ್ಲೊಂದು ತಂಡ ‘ಲೆಕ್ಕಾಚಾರ’ (Lekkachara) ಎಂಬುದನ್ನೇ ಶೀರ್ಷಿಕೆ ಮಾಡಿಕೊಂಡು ಸಿನಿಮಾ ನಿರ್ಮಿಸಿದೆ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಗಿದೆ. ‘ಪ್ರೀತಿಯಲ್ಲಿ ಸಹಜ’ ಎಂದು ಟ್ಯಾಗ್​ಲೈನ್​ ಈ ಸಿನಿಮಾಗೆ ಇದೆ. ಹೊಸಬರೇ ಸೇರಿಕೊಂಡು ಈ ಪ್ರಯತ್ನ ಮಾಡಿದ್ದಾರೆ. ಇದೊಂದು ಮ್ಯೂಸಿಕಲ್​ ಮತ್ತು ರೊಮ್ಯಾಂಟಿಕ್​ ಸಿನಿಮಾ ಎಂದು ತಂಡ ಹೇಳಿಕೊಂಡಿದೆ.

ಹೊಸ ಕಲಾವಿದರಾದ ನಟ ಕಾರ್ತಿಕ್​ ಮತ್ತು ನಟಿ ಯಶಸ್ವಿ ಅವರು ‘ಲೆಕ್ಕಚಾರ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಗ್ಯಾರೇಜ್​ನಲ್ಲಿ ಕೆಲಸ ಮಾಡುವ ನಾಲ್ಕು ಹುಡುಗರ ಕಥೆ ಈ ಸಿನಿಮಾದಲ್ಲಿದೆ. ಆ ಪೈಕಿ ಒಬ್ಬನ ಲವ್​ ಸ್ಟೋರಿ ಇಲ್ಲಿನ ಹೈಲೈಟ್​. ನಾಯಕಿ ಯಶಸ್ವಿ ಅವರಿಗೆ ಇದು ಮೊದಲ ಸಿನಿಮಾ. ಕಾಲೇಜಿಗೆ ಹೋಗುತ್ತ, ಗ್ಯಾರೇಜ್​ ಹುಡುಗನ ಪ್ರೀತಿಯಲ್ಲಿ ಬೀಳುವ ಹುಡುಗಿ ಪಾತ್ರ ಅವರದ್ದು. ‘ಆಡಿಷನ್​ ಮೂಲಕ ನನಗೆ ಈ ಪಾತ್ರ ಸಿಕ್ಕಿತು. ಸ್ಟೋರಿಯೂ ತುಂಬ ಇಷ್ಟ ಆಗಿದ್ದರಿಂದ ನಟಿಸಿದ್ದೇನೆ’ ಎಂದಿದ್ದಾರೆ ಯಶಸ್ವಿ.

ಪ್ರೀತಿಯಲ್ಲಿ ಲೆಕ್ಕಾಚಾರ ಸಹಜ. ಆದರೆ ಲೆಕ್ಕಾಚಾರ ಇಲ್ಲದ ಪ್ರೀತಿಯೇ ನಿಜವಾದ ಪ್ರೀತಿ. ಅದೇ ನಿಷ್ಕಲ್ಮಶ ಪ್ರೀತಿ ಎಂಬ ಒನ್​ಲೈನ್​ ಕಥೆ ಈ ಚಿತ್ರದಲ್ಲಿ ಇದೆ. ‘ಎಸ್​. ಸೀಮಾ ಪಿಕ್ಚರ್ಸ್​’ ಬ್ಯಾನರ್​ ಮೂಲಕ ‘ಲೆಕ್ಕಾಚಾರ’ ಸಿನಿಮಾ ನಿರ್ಮಾಣ ಆಗುತ್ತಿದೆ. ಎಂ.ಜಿ. ರಾಜ್​ ನಿರ್ದೇಶನ ಮಾಡಿದ್ದಾರೆ. ಆರ್​. ಚಂದ್ರು ಮತ್ತು ಕುಮಾರ್​ ಅವರು ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಆರ್​. ಚಂದ್ರು ಈಗಾಗಲೇ ಫೇಮಸ್​ ಆಗಿದ್ದಾರೆ. ಆದರೆ ‘ಲೆಕ್ಕಾಚಾರ’ ಚಿತ್ರವನ್ನು ನಿರ್ಮಾಣ ಮಾಡಿರುವ ಈ ಚಂದ್ರು ಬೇರೆ. ಗೊಂದಲವೇ ಬೇಡ ಅಂತ ಇನ್ಮುಂದೆ ‘ಚಂದ್ರು ಲೆಕ್ಕಾಚಾರ’ ಎಂದು ತಮ್ಮ ಹೆಸರಿನ ಜೊತೆ ಸಿನಿಮಾದ ಹೆಸರನ್ನೂ ಸೇರಿಸಿಕೊಳ್ಳಲು ತೀರ್ಮಾನಿಸಿದ್ದಾರೆ ನಿರ್ಮಾಪಕ ಚಂದ್ರು.

ಇದನ್ನೂ ಓದಿ
Image
ಚಾಮರಾಜನಗರದಲ್ಲಿ ‘ಬೈರಾಗಿ’ ಪ್ರೀ ರಿಲೀಸ್ ಇವೆಂಟ್; ಲೈವ್​ ನೋಡಲು ಇಲ್ಲಿ ಕ್ಲಿಕ್ ಮಾಡಿ
Image
777 Charlie: ರಕ್ಷಿತ್ ಶೆಟ್ಟಿ ‘ಚಾರ್ಲಿ’ ಅಭಿನಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಫಿದಾ..!
Image
ತುಳುನಾಡಿನ ಸಂಸ್ಕೃತಿ ಸಾರುವ ‘ವೀರ ಕಂಬಳ’ ಸಿನಿಮಾಗೆ ರಾಜೇಂದ್ರ ಸಿಂಗ್​ ಬಾಬು ನಿರ್ದೇಶನ
Image
‘ಬಾಲಿವುಡ್​ ಮೇಲೆ ಸ್ಯಾಂಡಲ್​ವುಡ್​ ಎಸೆದ ಅಣುಬಾಂಬ್​ ಇದು’: ಯಶ್​ ಗೆಲುವನ್ನು ಹೀಗೆ ವರ್ಣಿಸಿದ ಆರ್​ಜಿವಿ

ಕಾರ್ತಿಕ್​ ಅವರು ಸಂಗೀತ ನಿರ್ದೇಶನ ಮಾಡಿದ್ದು, ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಈ ಗೀತೆಗಳಿಗೆ ರಾಜೇಶ್​ ಕೃಷ್ಣನ್​, ಅನುರಾಧಾ ಭಟ್​, ಸಮನ್ವಿತಾ ಶರ್ಮಾ, ಸಮೀರ್​ ಮುಡಿಪು ಅವರು ಧ್ವನಿ ನೀಡಿದ್ದಾರೆ. ಸಿರಿ ಮ್ಯೂಸಿಕ್​ ಮೂಲಕ ಹಾಡುಗಳು ಹೊರಬಂದಿವೆ.

ಇದನ್ನೂ ಓದಿ: Gym Ravi: 50 ದಿನ ಪೂರೈಸಿದ ‘ಪುರುಷೋತ್ತಮ’ ಸಿನಿಮಾ; ಹೀರೋ ಆಗಿ ಗೆಲುವು ಕಂಡ ಜಿಮ್​ ರವಿ

ಸಾಯಿ ಬಾಬಾ ಭಕ್ತಿಗೀತೆಗೆ 7 ಸಂಗೀತ ನಿರ್ದೇಶಕರ ಧ್ವನಿ; ಪ್ರತಿ ಗುರುವಾರ ಒಂದೊಂದು ಗೀತೆ ರಿಲೀಸ್​

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ