AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಟಿಕೆಟ್ ಸಿಗುತ್ತಿಲ್ಲವೆ? ಹಾಗಿದ್ದರೆ ಹೀಗೆ ಮಾಡಿ

Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೇಶದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಂತೂ ಸಾಕಷ್ಟು ಶೋಗಳನ್ನು ಸಿನಿಮಾಕ್ಕೆ ನೀಡಲಾಗಿದೆ. ಆದರೆ ಬಹುತೇಕ ಶೋಗಳು ಮುಂಗಡವಾಗಿ ಬುಕ್ ಆಗಿವೆ. ಆದರೆ ಮೊದಲ ದಿನವೇ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಯೇ ತೀರಬೇಕು ಎಂಬ ಆಸೆ ಇದ್ದವರಿಗೆ, ದಾರಿ ಇಲ್ಲಿದೆ...

ಬೆಂಗಳೂರಿನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಟಿಕೆಟ್ ಸಿಗುತ್ತಿಲ್ಲವೆ? ಹಾಗಿದ್ದರೆ ಹೀಗೆ ಮಾಡಿ
Kantara Chapter 1 Ticket
ಮಂಜುನಾಥ ಸಿ.
|

Updated on:Oct 02, 2025 | 11:09 AM

Share

ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ಕರ್ನಾಟದಲ್ಲಂತೂ ಮುಂದಿನ ಎರಡು ಮೂರು ದಿನಗಳಿಗೆ ಸಿನಿಮಾ ಟಿಕೆಟ್​​ಗಳು ಮುಂಗಡವಾಗಿ ಬುಕಿಂಗ್ ಆಗಿಬಿಟ್ಟಿವೆ. ಬೆಂಗಳೂರಿನಲ್ಲಿ ಹಲವಾರು ಸಂಖ್ಯೆಯಲ್ಲಿ ಶೋಗಳಿವೆ, ಕೆಲವು ಚಿತ್ರಮಂದಿರಗಳಂತೂ ದಿನಕ್ಕೆ ಆರು ಶೋ ಪ್ರದರ್ಶಿಸುತ್ತಿವೆ. ಹಾಗಿದ್ದರೂ ಸಹ ಎಲ್ಲ ಶೋಗಳು ಬುಕ್ ಆಗಿವೆ. ಸಿನಿಮಾ ನೋಡಲು ಉತ್ಸುಕರಾಗಿರುವ ವೀಕ್ಷಕರಿಗೆ ಟಿಕೆಟ್ ಸಿಗುತ್ತಿಲ್ಲ. ಸಿನಿಮಾ ನೋಡಲೇ ಬೇಕು ಎಂದುಕೊಂಡವರಿಗೆ ಕೆಲವು ದಾರಿಗಳಂತೂ ಇವೆ.

ಅಕ್ಟೋಬರ್ 02, ಬೆಳಿಗ್ಗೆ 11 ಗಂಟೆ ವೇಳೆಗೆ ಬುಕ್​​ಮೈ ಶೋನಲ್ಲಿ ತೋರಿಸುತ್ತಿರುವ ಮಾಹಿತಿಯಂತೆ. ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಎಲ್ಲ ಶೋಗಳು ಸಹ ಫುಲ್ ಆಗಿವೆ. ಆದರೆ ಬೆಂಗಳೂರಿನ ಕೆಲವೆಡೆ ಕೆಲವು ಶೋಗಳ ಟಿಕೆಟ್​​ಗಳು ಈಗಲೂ ಬುಕ್ ಮೈ ಶೋನಲ್ಲಿ ಅವೆಲೆಬಲ್ ಇದ್ದು, ಅವುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಶೀಘ್ರವೇ ಬುಕ್ ಮಾಡಿಕೊಂಡಲ್ಲಿ, ಇಂದೇ ಸಿನಿಮಾ ನೋಡುವ ಅವಕಾಶ ಸಿಗಲಿದೆ.

ಎಚ್​​ಎಸ್​​ಆರ್ ಬಡಾವಣೆ ಹರಳೂರು ರಸ್ತೆಯಲ್ಲಿರುವ ಪಿಎನ್​​ಆರ್ ಫೆಲಿಸಿಟಿ ಮಾಲ್​​ನಲ್ಲಿ ಇಂದು ರಾತ್ರಿ 10:15ರ ಶೋಗೆ ಕೆಲವು ಟಿಕೆಟ್​​ಗಳು ಲಭ್ಯವಿದೆ. ಸರ್ಜಾಪುರದ ರವಿ ಡಿಜಿಟಲ್​​ ಚಿತ್ರಮಂದಿರದಲ್ಲಿ ಇಂದು ರಾತ್ರಿ 10:15ರ ಶೋನಲ್ಲಿ ಕೆಲವು ಟಿಕೆಟ್​​ಗಳು ಖರೀದಿಗೆ ಲಭ್ಯವಿದೆ. ಟಿಕೆಟ್ ಬೆಲೆಯೂ ಸಹ ಇಲ್ಲಿ ಕಡಿಮೆ ಇದೆ. ಹೊಸ ಜೆಸಿ ರಸ್ತೆಯಲ್ಲಿರುವ ಸ್ವಾಗತ್ ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ 10:30 ಗಂಟೆ ಶೋನ ಕೆಲವು ಟಿಕೆಟ್​​ಗಳು ಲಭ್ಯವಿದೆ. ಆಸಕ್ತರು ಗಮನಿಸಬಹುದಾಗಿದೆ.

ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ಫಸ್ಟ್ ಶೋ ನೋಡಿದವರ ಕ್ರೇಜಿ ಪ್ರತಿಕ್ರಿಯೆ: ವಿಡಿಯೋ

ಸುಲ್ತಾನ್​​ಪಾಳ್ಯದ ಪುಷ್ಪಾಂಜಲಿ ಏಸಿ ಚಿತ್ರಮಂದಿರದಲ್ಲಿ ಸಂಜೆ 6:30 ಹಾಗೂ ರಾತ್ರಿ 9:30ರ ಶೋನ ಟಿಕೆಟ್​​ಗಳು ಖರೀದಿಗೆ ಲಭ್ಯವಿದೆ. ಇಲ್ಲಿ ಸಹ ಟಿಕೆಟ್ ದರ ಕಡಿಮೆಯೇ ಇದೆ. ಗಾಂಧಿ ನಗರದ ಸಂತೋಶ್ ಚಿತ್ರಮಂದಿರದಲ್ಲಿ ಸಂಜೆ 7:30 ಮತ್ತು ರಾತ್ರಿ 10:45ರ ಶೋಗೆ ಟಿಕೆಟ್​​ಗಳು ಬುಕ್​​ಮೈ ಶೋನಲ್ಲಿ ಲಭ್ಯವಿವೆ. ಟಿಕೆಟ್ ದರಗಳು ಸಹ ಕಡಿಮೆ ಇವೆ. ಲಿಂಗರಾಜಪುರಂನಲ್ಲಿ ಅಮೃತ್ ಚಿತ್ರಮಂದಿರದಲ್ಲಿ ಸಂಜೆ 4:30 ಮತ್ತು ರಾತ್ರಿ 9:30ಕ್ಕೆ ಶೋ ಇದ್ದು ಎರಡೂ ಶೋನ ಟಿಕೆಟ್​​ಗಳು ಲಭ್ಯವಿವೆ. ಗೊಲ್ಲರಹಟ್ಟಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ರಾತ್ರಿ 9:30 ಶೋಗೆ ಬುಕಿಂಗ್ ಅವೆಲೆಬಲ್ ಇದೆ.

ಯಲಹಂಕದ ಪ್ರಕಾಶ್ ಚಿತ್ರಮಂದಿರದಲ್ಲಿ ರಾತ್ರಿ 10:30 ಶೋಗೆ ಟಿಕೆಟ್​​ಗಳು ಸಾಕಷ್ಟಿವೆ. ಸುಲಭವಾಗಿ ಟಿಕೆಟ್ ಲಭ್ಯ ಆಗಲಿವೆ. ಹೆಸರಘಟ್ಟದ ಎಸ್​​ಎಲ್​​ಎನ್ ಚಿತ್ರಮಂದಿರದಲ್ಲಿ ಸಹ ರಾತ್ರಿಶೋಗೆ ಟಿಕೆಟ್​ಗಳು ಲಭ್ಯವಿವೆ. ಬೆಂಗಳೂರಿನ ಹೊರವಲಯದ ಆನೆಕಲ್​​ನ ಅನ್ನಪೂರ್ಣೇಶ್ವರಿ ಚಿತ್ರಮಂದಿರದಲ್ಲಿ ಸಂಜೆ 4:30 ಮತ್ತು ರಾತ್ರಿ 7:30ರ ಶೋಗೆ ಟಿಕೆಟ್​​ಗಳು ಲಭ್ಯ ಇವೆ. ಹಾಗೆಯೇ ಬೆಂಗಳೂರಿನಿಂದ ತುಸು ದೂರದಲ್ಲಿರುವ ದೊಡ್ಡಬಳ್ಳಾಪುರದ ರಾಜ್​ಕಮಲ್ ಮತ್ತು ಸೌಂದರ್ಯಮಹಲ್ ಚಿತ್ರಮಂದಿರಗಳಲ್ಲಿಯೂ ಸಹ ಟಿಕೆಟ್​​ಗಳು ಲಭ್ಯವಿವೆ.

ಇವುಗಳ ಹೊರತಾಗಿ ಯಲಹಂಕದ ಗ್ಯಾಲೆರಿಯಾ ಮಾಲ್​​ನ ಪಿವಿಆರ್​​ನಲ್ಲಿ ಐಮ್ಯಾಕ್ಸ್​​ನಲ್ಲಿ ರಾತ್ರಿ 10 ಗಂಟೆ ಶೋಗೆ ಸಾಕಷ್ಟು ಟಿಕೆಟ್​​ಗಳು ಲಭ್ಯವಿವೆ. ಟಿಕೆಟ್ ದರ 800 ರೂಪಾಯಿಗಳಿವೆ. ಇನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬೆಂಗಳೂರಿನಲ್ಲಿಯೇ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆ ಆಗಿದ್ದು, ಪರಭಾಷೆಯ ಶೋನ ಟಿಕೆಟ್​​ಗಳು ಬಹುತೇಕ ಖಾಲಿ ಇವೆ. ಹಾಗಾಗಿ ಕನ್ನಡದಲ್ಲಿ ನೋಡಲು ಟಿಕೆಟ್ ಸಿಗದವರು ಪರಭಾಷೆಯಲ್ಲಿ ಬೆಂಗಳೂರಿನಲ್ಲಿಯೇ ಸಿನಿಮಾ ನೋಡಬಹುದಾಗಿದೆ. ಅದರ ಮಾಹಿತಿ ಬುಕ್​​ಮೈಶೋನಲ್ಲಿ ಲಭ್ಯವಿದೆ.

ಸೂಚನೆ: ಅಕ್ಟೋಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ಬುಕ್​​ಮೈಶೋನಲ್ಲಿ ಲಭ್ಯವಿದ್ದ ಬುಕಿಂಗ್ ಮಾಹಿತಿಯ ಆಧಾರದಲ್ಲಿ ನೀಡಿರುವ ವರದಿಯಾಗಿದೆ. ಸಮಯ ಕಳೆದಂತೆ ಈಗ ಖಾಲಿ ಇರುವ ಶೋಗಳು ಸಹ ಫುಲ್ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:05 am, Thu, 2 October 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!