AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಟಿಕೆಟ್ ಸಿಗುತ್ತಿಲ್ಲವೆ? ಹಾಗಿದ್ದರೆ ಹೀಗೆ ಮಾಡಿ

Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೇಶದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಂತೂ ಸಾಕಷ್ಟು ಶೋಗಳನ್ನು ಸಿನಿಮಾಕ್ಕೆ ನೀಡಲಾಗಿದೆ. ಆದರೆ ಬಹುತೇಕ ಶೋಗಳು ಮುಂಗಡವಾಗಿ ಬುಕ್ ಆಗಿವೆ. ಆದರೆ ಮೊದಲ ದಿನವೇ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿಯೇ ತೀರಬೇಕು ಎಂಬ ಆಸೆ ಇದ್ದವರಿಗೆ, ದಾರಿ ಇಲ್ಲಿದೆ...

ಬೆಂಗಳೂರಿನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಟಿಕೆಟ್ ಸಿಗುತ್ತಿಲ್ಲವೆ? ಹಾಗಿದ್ದರೆ ಹೀಗೆ ಮಾಡಿ
Kantara Chapter 1 Ticket
ಮಂಜುನಾಥ ಸಿ.
|

Updated on:Oct 02, 2025 | 11:09 AM

Share

ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. ಕರ್ನಾಟದಲ್ಲಂತೂ ಮುಂದಿನ ಎರಡು ಮೂರು ದಿನಗಳಿಗೆ ಸಿನಿಮಾ ಟಿಕೆಟ್​​ಗಳು ಮುಂಗಡವಾಗಿ ಬುಕಿಂಗ್ ಆಗಿಬಿಟ್ಟಿವೆ. ಬೆಂಗಳೂರಿನಲ್ಲಿ ಹಲವಾರು ಸಂಖ್ಯೆಯಲ್ಲಿ ಶೋಗಳಿವೆ, ಕೆಲವು ಚಿತ್ರಮಂದಿರಗಳಂತೂ ದಿನಕ್ಕೆ ಆರು ಶೋ ಪ್ರದರ್ಶಿಸುತ್ತಿವೆ. ಹಾಗಿದ್ದರೂ ಸಹ ಎಲ್ಲ ಶೋಗಳು ಬುಕ್ ಆಗಿವೆ. ಸಿನಿಮಾ ನೋಡಲು ಉತ್ಸುಕರಾಗಿರುವ ವೀಕ್ಷಕರಿಗೆ ಟಿಕೆಟ್ ಸಿಗುತ್ತಿಲ್ಲ. ಸಿನಿಮಾ ನೋಡಲೇ ಬೇಕು ಎಂದುಕೊಂಡವರಿಗೆ ಕೆಲವು ದಾರಿಗಳಂತೂ ಇವೆ.

ಅಕ್ಟೋಬರ್ 02, ಬೆಳಿಗ್ಗೆ 11 ಗಂಟೆ ವೇಳೆಗೆ ಬುಕ್​​ಮೈ ಶೋನಲ್ಲಿ ತೋರಿಸುತ್ತಿರುವ ಮಾಹಿತಿಯಂತೆ. ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಎಲ್ಲ ಶೋಗಳು ಸಹ ಫುಲ್ ಆಗಿವೆ. ಆದರೆ ಬೆಂಗಳೂರಿನ ಕೆಲವೆಡೆ ಕೆಲವು ಶೋಗಳ ಟಿಕೆಟ್​​ಗಳು ಈಗಲೂ ಬುಕ್ ಮೈ ಶೋನಲ್ಲಿ ಅವೆಲೆಬಲ್ ಇದ್ದು, ಅವುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಶೀಘ್ರವೇ ಬುಕ್ ಮಾಡಿಕೊಂಡಲ್ಲಿ, ಇಂದೇ ಸಿನಿಮಾ ನೋಡುವ ಅವಕಾಶ ಸಿಗಲಿದೆ.

ಎಚ್​​ಎಸ್​​ಆರ್ ಬಡಾವಣೆ ಹರಳೂರು ರಸ್ತೆಯಲ್ಲಿರುವ ಪಿಎನ್​​ಆರ್ ಫೆಲಿಸಿಟಿ ಮಾಲ್​​ನಲ್ಲಿ ಇಂದು ರಾತ್ರಿ 10:15ರ ಶೋಗೆ ಕೆಲವು ಟಿಕೆಟ್​​ಗಳು ಲಭ್ಯವಿದೆ. ಸರ್ಜಾಪುರದ ರವಿ ಡಿಜಿಟಲ್​​ ಚಿತ್ರಮಂದಿರದಲ್ಲಿ ಇಂದು ರಾತ್ರಿ 10:15ರ ಶೋನಲ್ಲಿ ಕೆಲವು ಟಿಕೆಟ್​​ಗಳು ಖರೀದಿಗೆ ಲಭ್ಯವಿದೆ. ಟಿಕೆಟ್ ಬೆಲೆಯೂ ಸಹ ಇಲ್ಲಿ ಕಡಿಮೆ ಇದೆ. ಹೊಸ ಜೆಸಿ ರಸ್ತೆಯಲ್ಲಿರುವ ಸ್ವಾಗತ್ ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ 10:30 ಗಂಟೆ ಶೋನ ಕೆಲವು ಟಿಕೆಟ್​​ಗಳು ಲಭ್ಯವಿದೆ. ಆಸಕ್ತರು ಗಮನಿಸಬಹುದಾಗಿದೆ.

ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ಫಸ್ಟ್ ಶೋ ನೋಡಿದವರ ಕ್ರೇಜಿ ಪ್ರತಿಕ್ರಿಯೆ: ವಿಡಿಯೋ

ಸುಲ್ತಾನ್​​ಪಾಳ್ಯದ ಪುಷ್ಪಾಂಜಲಿ ಏಸಿ ಚಿತ್ರಮಂದಿರದಲ್ಲಿ ಸಂಜೆ 6:30 ಹಾಗೂ ರಾತ್ರಿ 9:30ರ ಶೋನ ಟಿಕೆಟ್​​ಗಳು ಖರೀದಿಗೆ ಲಭ್ಯವಿದೆ. ಇಲ್ಲಿ ಸಹ ಟಿಕೆಟ್ ದರ ಕಡಿಮೆಯೇ ಇದೆ. ಗಾಂಧಿ ನಗರದ ಸಂತೋಶ್ ಚಿತ್ರಮಂದಿರದಲ್ಲಿ ಸಂಜೆ 7:30 ಮತ್ತು ರಾತ್ರಿ 10:45ರ ಶೋಗೆ ಟಿಕೆಟ್​​ಗಳು ಬುಕ್​​ಮೈ ಶೋನಲ್ಲಿ ಲಭ್ಯವಿವೆ. ಟಿಕೆಟ್ ದರಗಳು ಸಹ ಕಡಿಮೆ ಇವೆ. ಲಿಂಗರಾಜಪುರಂನಲ್ಲಿ ಅಮೃತ್ ಚಿತ್ರಮಂದಿರದಲ್ಲಿ ಸಂಜೆ 4:30 ಮತ್ತು ರಾತ್ರಿ 9:30ಕ್ಕೆ ಶೋ ಇದ್ದು ಎರಡೂ ಶೋನ ಟಿಕೆಟ್​​ಗಳು ಲಭ್ಯವಿವೆ. ಗೊಲ್ಲರಹಟ್ಟಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ರಾತ್ರಿ 9:30 ಶೋಗೆ ಬುಕಿಂಗ್ ಅವೆಲೆಬಲ್ ಇದೆ.

ಯಲಹಂಕದ ಪ್ರಕಾಶ್ ಚಿತ್ರಮಂದಿರದಲ್ಲಿ ರಾತ್ರಿ 10:30 ಶೋಗೆ ಟಿಕೆಟ್​​ಗಳು ಸಾಕಷ್ಟಿವೆ. ಸುಲಭವಾಗಿ ಟಿಕೆಟ್ ಲಭ್ಯ ಆಗಲಿವೆ. ಹೆಸರಘಟ್ಟದ ಎಸ್​​ಎಲ್​​ಎನ್ ಚಿತ್ರಮಂದಿರದಲ್ಲಿ ಸಹ ರಾತ್ರಿಶೋಗೆ ಟಿಕೆಟ್​ಗಳು ಲಭ್ಯವಿವೆ. ಬೆಂಗಳೂರಿನ ಹೊರವಲಯದ ಆನೆಕಲ್​​ನ ಅನ್ನಪೂರ್ಣೇಶ್ವರಿ ಚಿತ್ರಮಂದಿರದಲ್ಲಿ ಸಂಜೆ 4:30 ಮತ್ತು ರಾತ್ರಿ 7:30ರ ಶೋಗೆ ಟಿಕೆಟ್​​ಗಳು ಲಭ್ಯ ಇವೆ. ಹಾಗೆಯೇ ಬೆಂಗಳೂರಿನಿಂದ ತುಸು ದೂರದಲ್ಲಿರುವ ದೊಡ್ಡಬಳ್ಳಾಪುರದ ರಾಜ್​ಕಮಲ್ ಮತ್ತು ಸೌಂದರ್ಯಮಹಲ್ ಚಿತ್ರಮಂದಿರಗಳಲ್ಲಿಯೂ ಸಹ ಟಿಕೆಟ್​​ಗಳು ಲಭ್ಯವಿವೆ.

ಇವುಗಳ ಹೊರತಾಗಿ ಯಲಹಂಕದ ಗ್ಯಾಲೆರಿಯಾ ಮಾಲ್​​ನ ಪಿವಿಆರ್​​ನಲ್ಲಿ ಐಮ್ಯಾಕ್ಸ್​​ನಲ್ಲಿ ರಾತ್ರಿ 10 ಗಂಟೆ ಶೋಗೆ ಸಾಕಷ್ಟು ಟಿಕೆಟ್​​ಗಳು ಲಭ್ಯವಿವೆ. ಟಿಕೆಟ್ ದರ 800 ರೂಪಾಯಿಗಳಿವೆ. ಇನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬೆಂಗಳೂರಿನಲ್ಲಿಯೇ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆ ಆಗಿದ್ದು, ಪರಭಾಷೆಯ ಶೋನ ಟಿಕೆಟ್​​ಗಳು ಬಹುತೇಕ ಖಾಲಿ ಇವೆ. ಹಾಗಾಗಿ ಕನ್ನಡದಲ್ಲಿ ನೋಡಲು ಟಿಕೆಟ್ ಸಿಗದವರು ಪರಭಾಷೆಯಲ್ಲಿ ಬೆಂಗಳೂರಿನಲ್ಲಿಯೇ ಸಿನಿಮಾ ನೋಡಬಹುದಾಗಿದೆ. ಅದರ ಮಾಹಿತಿ ಬುಕ್​​ಮೈಶೋನಲ್ಲಿ ಲಭ್ಯವಿದೆ.

ಸೂಚನೆ: ಅಕ್ಟೋಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ಬುಕ್​​ಮೈಶೋನಲ್ಲಿ ಲಭ್ಯವಿದ್ದ ಬುಕಿಂಗ್ ಮಾಹಿತಿಯ ಆಧಾರದಲ್ಲಿ ನೀಡಿರುವ ವರದಿಯಾಗಿದೆ. ಸಮಯ ಕಳೆದಂತೆ ಈಗ ಖಾಲಿ ಇರುವ ಶೋಗಳು ಸಹ ಫುಲ್ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:05 am, Thu, 2 October 25

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ