ಸ್ಟಾರ್​ ನಟರ ನಡುವೆ ಕನ್ನಡದ ನಟಿಯನ್ನು ಗುರುತಿಸಿದ ಪಾಕ್​ ಜನ: ಕೆಜಿಎಫ್ ಮಹಿಮೆ

‘ಕೆಜಿಎಫ್​’ ಬಾಕ್ಸ್ ಆಫೀಸ್​ನಲ್ಲಿ ಭಾರಿ ಮೊತ್ತ ಕಲೆ ಹಾಕಿರಬಹುದು ಆದರೆ ಅದರ ನಿಜವಾದ ಯಶಸ್ಸೆಂದರೆ ಆ ಸಿನಿಮಾವನ್ನು ಕನ್ನಡ ಚಿತ್ರರಂಗವನ್ನು ಗಡಿಗಳ ಆಚೆಗೆ ಕೊಂಡೊಯ್ದಿರುವುದು. ಅದಕ್ಕೆ ತಾಜಾ ಉದಾಹರಣೆಯನ್ನು ಸಿನಿಮಾದ ನಟಿ ಮಾಳವಿಕಾ ಅವಿನಾಶ್ ನೀಡಿದ್ದಾರೆ.

ಸ್ಟಾರ್​ ನಟರ ನಡುವೆ ಕನ್ನಡದ ನಟಿಯನ್ನು ಗುರುತಿಸಿದ ಪಾಕ್​ ಜನ: ಕೆಜಿಎಫ್ ಮಹಿಮೆ
Follow us
| Updated By: ಮಂಜುನಾಥ ಸಿ.

Updated on: Oct 11, 2024 | 10:24 AM

‘ಕೆಜಿಎಫ್’ ಚಿತ್ರವು ಮಾಡಿದ ದಾಖಲೆ ಹಾಗೂ ಅದು ಕೊಟ್ಟ ಜನಪ್ರಿಯತೆಯನ್ನು ಯಾರಿಂದಲೂ ಅಳಿಸೋಕೆ ಸಾಧ್ಯವಿಲ್ಲ. ಕನ್ನಡ ಚಿತ್ರರಂಗವನ್ನು ಬೇರೆ ಹಂತಕ್ಕೆ ಈ ಚಿತ್ರವು ಕರೆದುಕೊಂಡು ಹೋಯಿತು. ವಿಶೇಷ ಎಂದರೆ, ಈ ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರಿಗೆ ಜನಪ್ರಿಯತೆ ಸಿಕ್ಕಿತು. ಈ ಬಗ್ಗೆ ನಟಿ ಮಾಳವಿಕಾ ಮೋಹನ್ ಅವರು ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಕೆಜಿಎಫ್’ಗಿಂತ ‘ಕೆಜಿಎಫ್ 2’ ಹೆಚ್ಚು ಜನಪ್ರಿಯತೆ ಪಡೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಯಶ್ ಅವರ ಜನಪ್ರಿಯತೆ ಎಷ್ಟು ಹೆಚ್ಚಿದೆ ಎಂದು ಹೇಳಬೇಕಿಲ್ಲ. ಇನ್ನು ಪ್ರಶಾಂತ್ ನೀಲ್ ಅವರಿಗೆ ಪರಭಾಷೆಯಿಂದ ಆಫರ್​ಗಳು ಬರೋಕೆ ಆರಂಭ ಆಗಿವೆ. ಈ ಎಲ್ಲಾ ವಿಚಾರಗಳ ಕುರಿತು ಮಾಳವಿಕಾ ಮಾತನಾಡಿದ್ದಾರೆ.

‘ನಾನು ಲಂಡನ್​ಗೆ ಹೋಗಿದ್ದೆ. ಚರ್ಮದ ಕ್ಲೀನಿಂಗ್ ಮಾಡಿಸೋಕೆ ಹೋಗಿದ್ದೆ. ಅಲ್ಲೊಬ್ಬಳು ನನ್ನ ಬಳಿ ಬಂದು ನಿಮ್ಮನ್ನು ನೋಡಿದ್ದೇನೆ ಎನ್ನುತ್ತಿದ್ದರು. ನಾನು ಎಸ್ಟೋನಿಯಾದವಳು ಎಂದಳು. ಕೆಜಿಎಫ್ ಅಲ್ಲಿ ನಿಮ್ಮನ್ನು ನೋಡಿದ್ದೇನೆ ಎಂದಳು’ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ ಮಾಳವಿಕಾ.

ಇದನ್ನೂ ಓದಿ:ಹೊಂಬಾಳೆ ಸಂಸ್ಥೆಗೆ 4 ರಾಷ್ಟ್ರ ಪ್ರಶಸ್ತಿ; ಅದೇ ಖುಷಿಯಲ್ಲಿ ‘ಕೆಜಿಎಫ್ 3’ ಬಗ್ಗೆ ನಿರ್ಮಾಪಕರ ಮಾತು

‘ನಾನು ಒಮ್ಮೆ ತಮಿಳು ಸಿನಿಮಾ ಶೂಟ್​ಗೆ ದುಬೈ ಹೋಗಿದ್ದೆ. ವಿಶಾಲ್, ಆರ್ಯ ಕೂಡ ಶೂಟ್​ನಲ್ಲಿ ಇದ್ದರು. ಅಲ್ಲಿದ್ದ ಪಾಕಿಸ್ತಾನಿ ಜೂನಿಯರ್ ಆರ್ಟಿಸ್ಟ್​ಗಳು ನನ್ನ ಬಳಿ ಬಂದು ಫೋಟೋ ಕೇಳಿದರು. ನಾನು ಪ್ರಶಾಂತ್ ನೀಲ್​ಗೆ ಕರೆ ಮಾಡಿ ಹೆಮ್ಮೆ ವ್ಯಕ್ತಪಡಿಸಿದೆ. ಭಾಷೆಗಳನ್ನು ಮೀರಿ ಸಾಗೋ ಶಕ್ತಿ ಕನ್ನಡ ಚಿತ್ರಕ್ಕೂ ಬಂದಿದೆ’ ಎಂದು ಹೆಮ್ಮೆಯಿಂದ ಹೇಳಿದರು ಅವರು.

‘ಕೆಜಿಎಫ್ 2’ ಚಿತ್ರದಲ್ಲಿ ಮಾಳವಿಕಾ ಅವರು ಟಿವಿ ಚಾನೆಲ್​ನ ಎಡಿಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಹೆಚ್ಚು ಹೊತ್ತು ತೆರೆಮೇಲೆ ಬರೋದಿಲ್ಲ. ಆದರೆ, ಅವರು ಕಾಣಿಸಿಕೊಂಡ ಹೊತ್ತಷ್ಟೂ ಸಾಕಷ್ಟು ಹೈಲೈಟ್ ಆಗಿದ್ದರು. ‘ಈಗೇನು ಮಾಡುತ್ತಾನೆ ನಿಮ್ಮ ಹೀರೋ’ ಎಂದೆಲ್ಲ ಕೇಳಿ ಜನಪ್ರಿಯತೆ ಪಡೆದಿದ್ದರು. ಆ ವಿಡಿಯೋಗಳು ವೈರಲ್ ಆಗಿದ್ದವು.

‘ಕೆಜಿಎಫ್ 2’ ಕ್ಲೈಮ್ಯಾಕ್ಸ್​ನಲ್ಲಿ ‘ಕೆಜಿಎಫ್ 3’ ಬಗ್ಗೆ ಅಪ್ಡೇಟ್ ನೀಡಲಾಗಿತ್ತು. ಶೀಘ್ರವೇ ಇದರ ಅಪ್ಡೇಟ್ ನೀಡೋದಾಗಿ ವಿಜಯ್ ಕಿರಂಗದೂರು ಅವುರ ಹೇಳಿಕೆ ನೀಡಿದ್ದಾರೆ. ‘ಕೆಜಿಎಫ್ 3’ ಸಿನಿಮಾದಲ್ಲಿಯೂ ಮಾಳವಿಕಾ ಅವಿನಾಶ್ ಪಾತ್ರ ಇರುವ ಸಾಧ್ಯತೆ ಹೆಚ್ಚಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ