AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ಬಿಟ್ಟು ಹೋದ ದ್ವಿತ್ವ ಮತ್ತೆ ಶುರುವಾಗೋದು ಯಾವಾಗ? ಪವನ್ ಕೊಟ್ಟರು ಉತ್ತರ

Dvitva: ಪುನೀತ್ ರಾಜ್​ಕುಮಾರ್ ನಟಿಸಬೇಕಿದ್ದ ದ್ವಿತ್ವ ಸಿನಿಮಾವನ್ನು ಯಾವಾಗ ಶುರು ಮಾಡುತ್ತಾರೆ ಪವನ್ ಕುಮಾರ್?

ಪುನೀತ್ ಬಿಟ್ಟು ಹೋದ ದ್ವಿತ್ವ ಮತ್ತೆ ಶುರುವಾಗೋದು ಯಾವಾಗ? ಪವನ್ ಕೊಟ್ಟರು ಉತ್ತರ
ಪವನ್-ಪುನೀತ್-ದ್ವಿತ್ವ
ಮಂಜುನಾಥ ಸಿ.
|

Updated on: Jun 21, 2023 | 8:07 PM

Share

ಪುನೀತ್ ರಾಜ್​ಕುಮಾರ್ (Puneeth Rajkumar) ಅಗಲಿ ವರ್ಷದ ಮೇಲಾಯ್ತು. ಆದರೆ ಅವರ ನೆನಪು ಇಂದಿಗೂ ತುಸುವೂ ಮಾಸಿಲ್ಲ. ಹಲವು ಸುಂದರ ನೆನಪುಗಳು ಹಾಗೂ ಸಿನಿಮಾಗಳನ್ನು ಪುನೀತ್ ರಾಜ್​ಕುಮಾರ್ ಬಿಟ್ಟು ಹೋಗಿದ್ದಾರೆ. ಪುನೀತ್ ತಮ್ಮ ವೃತ್ತಿ ಜೀವನದಲ್ಲಿ ಹೊಳವು ದಾರಿಯಲ್ಲಿ ಇರುವಾಗಲೇ ಹೋಗಿಬಿಟ್ಟರಲ್ಲ ಎಂಬ ಬೇಸರ ಸಿನಿಮಾ ಪ್ರೇಮಿಗಳನ್ನು ಬಹುವಾಗಿ ಕಾಡಿತ್ತು ಈಗಲೂ ಕಾಡುತ್ತಿದೆ. ಸಿದ್ಧ ಮಾದರಿಯ ಮಾಸ್ ಸಿನಿಮಾಗಳಿಂದ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳತ್ತ ಹೊರಳುವ ಸಮಯದಲ್ಲಿಯೇ ಪುನೀತ್ ಅಗಲಿಬಿಟ್ಟರು. ಅವರು ದ್ವಿತ್ವ (Dvitva)  ಸಿನಿಮಾವನ್ನು ಒಪ್ಪಿಕೊಂಡಾಗ ಸಿನಿಮಾ ಪ್ರೇಮಿಗಳು ಹಾಗೂ ಅಪ್ಪು ಅಭಿಮಾನಿಗಳಿಬ್ಬರೂ ಖುಷಿ ವ್ಯಕ್ತಪಡಿಸಿದ್ದರು. ಆದರೆ ಆ ಸಿನಿಮಾ ಸೆಟ್ಟೇರುವ ಮುನ್ನವೇ ಅಪ್ಪು ಹೋಗಿಬಿಟ್ಟರು. ಈಗ ಆ ಸಿನಿಮಾ ಏನಾಗಿದೆ? ಮತ್ತೆ ಯಾವಾಗ ಶುರುವಾಗುತ್ತದೆ? ನಿರ್ದೇಶಕ ಪವನ್ (Pawan Kumar) ಆ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಹೊಸ ಸಿನಿಮಾ ಧೂಮಂನ ಕುರಿತಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ರಾಜ್​ಕುಮಾರ್ ಜೊತೆಗೆ ಮಾಡಬೇಕಿದ್ದ ದ್ವಿತ್ವ ಸಿನಿಮಾ ಬಗ್ಗೆ ಮಾತನಾಡಿದ ಪವನ್, ”ದ್ವಿತ್ವ ಸಿನಿಮಾವನ್ನು ಹತ್ತಿರದಲ್ಲಿ ಕೈಗೆತ್ತಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ತಾವೇಕೆ ಈಗ ದ್ವಿತ್ವ ಸಿನಿಮಾ ಮಾಡುತ್ತಿಲ್ಲ ಎಂಬುದಕ್ಕೆ ಎರಡು ಕಾರಣಗಳನ್ನು ಪವನ್ ಕುಮಾರ್ ನೀಡಿದ್ದಾರೆ.

”ದ್ವಿತ್ವ ಸಿನಿಮಾ ಬಗ್ಗೆ ನಾನು ಯೋಚಿಸಿದಾಗೆಲ್ಲ ನನಗೆ ಪುನೀತ್ ರಾಜ್​ಕುಮಾರ್ ಅವರೇ ಕಣ್ಣ ಮುಂದೆ ಬರುತ್ತಾರೆ. ನಾನು ಆ ಕತೆಯನ್ನು ಕಲ್ಪಿಸಿಕೊಂಡಿದ್ದೇ ಪುನೀತ್ ರಾಜ್​ಕುಮಾರ್ ಅವರ ಮೂಲಕ ಹಾಗಾಗಿ ನನಗೆ ಆ ನೆನಪಿನಿಂದ ಹೊರಗೆ ಬರಲು ಇನ್ನೂ ಆಗಿಲ್ಲ. ಆ ಪಾತ್ರಕ್ಕೆ ಬೇರೆಯವರನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಆ ನೆನಪುಗಳಿಂದ ಹೊರಬರಲೆಂದು ಆ ಸಿನಿಮಾವನ್ನು ಸದ್ಯಕ್ಕೆ ಪಕ್ಕಕ್ಕೆ ಇಟ್ಟಿದ್ದೀವಿ” ಎಂದಿದ್ದಾರೆ.

”ಆ ದುರ್ಘಟನೆ ನಡೆದಾಗ ಚಿತ್ರೀಕರಣದಿಂದ ಕೇವಲ ಎರಡು ವಾರ ನಾವು ದೂರವಿದ್ದೆವು. ಎಲ್ಲ ತಯಾರಿಯೂ ಆಗಿಬಿಟ್ಟಿತ್ತು. ಘಟನೆ ನಡೆದ ಕೆಲವು ದಿನಗಳ ಬಳಿಕ ಹೊಂಬಾಳೆಯವರು ಸಹ ಆ ಸಿನಿಮಾವನ್ನು ಸದ್ಯಕ್ಕೆ ಪಕ್ಕಕ್ಕಿಡೋಣ ಎಂದರು. ನನಗೂ ಸಹ ಹಾಗೆಯೇ ಅನ್ನಿಸುತ್ತಿದ್ದು, ಆ ಪಾತ್ರಕ್ಕೆ ಬೇರೆಯವರನ್ನು ಕಲ್ಪಿಸಿಕೊಳ್ಳಲು ಸಾಧ್ಯವವಾಗುವವರೆಗೆ ಆ ಸಿನಿಮಾವನ್ನು ಕೈಗೆತ್ತಿಕೊಳ್ಳುವುದು ಕಷ್ಟ” ಎಂದಿದ್ದಾರೆ ಪವನ್.

ಇದನ್ನೂ ಓದಿ:ಧೂಮಂ ಕನ್ನಡ ಡಬ್ಬಿಂಗ್ ಬಗ್ಗೆ ಸ್ಪಷ್ಟನೆ ಕೊಟ್ಟ ಪವನ್ ಕುಮಾರ್

”ಅಲ್ಲದೆ, ಈಗ ಸತತವಾಗಿ ಥ್ರಿಲ್ಲರ್ ಅಂಶಗಳಿರುವ ಸಿನಿಮಾಗಳನ್ನೆ ಮಾಡುತ್ತಾ ಬಂದಿದ್ದೇನೆ. ಲೂಸಿಯಾ ಬಳಿಕ ಯೂ-ಟರ್ನ್ ಇದೀಗ ಧೂಮಂ ಎಲ್ಲವೂ ಥ್ರಿಲ್ಲರ್ ಅಂಶಗಳುಳ್ಳ ಸಿನಿಮಾಗಳೇ ಆಗಿವೆ. ದ್ವಿತ್ವ ಸಹ ಸ್ವಲ್ಪ ಅದೇ ಜಾನರ್​ಗೆ ಸೇರಿದ ಸಿನಿಮಾ. ಹಾಗಾಗಿ ಒಂದರ ಹಿಂದೊಂದು ಥ್ರಿಲ್ಲರ್ ಬೇಡ ಅನಿಸುತ್ತಿದೆ. ಫೀಲ್ ಗುಡ್ ಮಾದರಿಯ ಅಥವಾ ನಿಜ ಜೀವನದಿಂದ ಇನ್​ಸ್ಪೈರ್ ಆಗಿರುವ ಪ್ರೇಮಕತೆ ಅಥವಾ ಬೇರೆ ರೀತಿಯ ಕತೆಯನ್ನು ಸಿನಿಮಾ ಮಾಡುವ ಆಲೋಚನೆಯೂ ಇದೆ. ಹಾಗಾಗಿ ಈ ಸದ್ಯಕ್ಕೆ ದ್ವಿತ್ವ ಸಿನಿಮಾವನ್ನು ಕೈಗೆತ್ತಿಕೊಳ್ಳುವುದಿಲ್ಲ” ಎಂದಿದ್ದಾರೆ ಪವನ್ ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು