AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಬ್​ ಡ್ರೈವರ್​ಗಳ ಕಥೆ ಹೇಳುವ ‘ಯೆಲ್ಲೋ ಬೋರ್ಡ್​’; ಕಿಚ್ಚ ಶುಭಕೋರಿದ ಈ ಸಿನಿಮಾದಲ್ಲಿ ಏನಿದೆ ವಿಶೇಷ?

ನಟ ಪ್ರದೀಪ್​ ಅವರು ಈ ಚಿತ್ರದ ಬಗ್ಗೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ‘ಟೈಗರ್​’ ಸಿನಿಮಾ ಬಳಿಕ ಹೊಸದೇನಾದರೂ ಮಾಡಬೇಕು ಎಂದುಕೊಂಡಾಗ ಅವರಿಗೆ ಸಿಕ್ಕಿದ್ದೇ ‘ಯೆಲ್ಲೋ ಬೋರ್ಡ್​’ ಪ್ರಾಜೆಕ್ಟ್​.

ಕ್ಯಾಬ್​ ಡ್ರೈವರ್​ಗಳ ಕಥೆ ಹೇಳುವ ‘ಯೆಲ್ಲೋ ಬೋರ್ಡ್​’; ಕಿಚ್ಚ ಶುಭಕೋರಿದ ಈ ಸಿನಿಮಾದಲ್ಲಿ ಏನಿದೆ ವಿಶೇಷ?
‘ಯೆಲ್ಲೋ ಬೋರ್ಡ್’ ಸಿನಿಮಾ ತಂಡ
Follow us
TV9 Web
| Updated By: ಮದನ್​ ಕುಮಾರ್​

Updated on: Aug 29, 2021 | 12:09 PM

‘ಯೆಲ್ಲೋ ಬೋರ್ಡ್​’ ಸಿನಿಮಾದ ಒಂದು ಟೀಸರ್​ ಮತ್ತು ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. ಕಿಚ್ಚ ಸುದೀಪ್​ ಅವರು ಇಡೀ ತಂಡಕ್ಕೆ ಶುಭಕೋರಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಈ ಸಿನಿಮಾದಲ್ಲಿ ಕ್ಯಾಬ್​ ಡ್ರೈವರ್​ಗಳ ಕುರಿತಾಗಿ ಕಥೆ ಇರಲಿದೆ. ಕ್ಯಾಬ್​ ಡ್ರೈವರ್​ ಪಾತ್ರದಲ್ಲಿ ನಟ ಪ್ರದೀಪ್​ ಕಾಣಿಸಿಕೊಂಡಿದ್ದಾರೆ. ತ್ರಿಲೋಕ್​ ರೆಡ್ಡಿ ನಿರ್ದೇಶನ ಮಾಡಿದ್ದು, ವಿಂಟೇಜ್​ ಫಿಲ್ಮ್ಸ್​ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಅದ್ವಿಕ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ‘ಪ್ರೀತಿಯೇ..’ ಗೀತೆಗೆ ಜನಮೆಚ್ಚುಗೆ ಸಿಗುತ್ತಿದೆ. ಯೂಟ್ಯೂಬ್​ನಲ್ಲಿ​ 13 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ‘ಯೆಲ್ಲೋ ಬೋರ್ಡ್​’ ಚಿತ್ರತಂಡ ಅನೇಕ ವಿಚಾರಗಳನ್ನು ಹಂಚಿಕೊಂಡಿತು.

ಅಹಲ್ಯಾ ಸುರೇಶ್​, ಸ್ನೇಹಾ, ಚಂದನಾ, ಭವಾನಿ ಪ್ರಕಾಶ್​ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಮೊದಲು ನಾನು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅನೇಕ ಕ್ಯಾಬ್​ ಡ್ರೈವರ್​ಗಳ ಜೊತೆ ಮಾತನಾಡಿದ್ದೆ. ಆ ಸಂದರ್ಭದಲ್ಲಿ ಆದ ಅನುಭವಗಳನ್ನು ಇಟ್ಟುಕೊಂಡು ಈ ಕಥೆ ಸಿದ್ಧವಾಯ್ತು. ಒಬ್ಬ ಕ್ಯಾಬ್​ ಚಾಲಕನ ಪ್ರೇಮಕಥೆ ನನಗೆ ಇಷ್ಟವಾಗಿ, ಅದು ಕೂಡ ಸ್ಫೂರ್ತಿ ಆಯಿತು. ಒಟ್ಟಾರೆ ಕ್ಯಾಬ್​​ ಡ್ರೈವರ್​ಗಳ ಜೀವನ ಹೇಗಿರುತ್ತದೆ? ಅವರ ಹೋರಾಟಗಳೇನು? ಅವರ ಮೇಲೆ ಆಗುತ್ತಿರುವ ದಬ್ಬಾಳಿಕೆಗಳೇನು ಎಂಬುದನ್ನೆಲ್ಲ ವಿಚಾರಿಸಿದಾಗ ಅವರಲ್ಲಿ ನನಗೆ ಒಬ್ಬ ಹೀರೋ ಕಾಣಿಸಿದ’ ಎನ್ನುವ ಮೂಲಕ ಕಥೆ ಬಗ್ಗೆ ವಿವರಣೆ ನೀಡಿದ್ದಾರೆ ನಿರ್ದೇಶಕ ತ್ರಿಲೋಕ್​ ರೆಡ್ಡಿ.

ನಟ ಪ್ರದೀಪ್​ ಅವರು ಈ ಚಿತ್ರದ ಬಗ್ಗೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ‘ಟೈಗರ್​’ ಸಿನಿಮಾ ಬಳಿಕ ಹೊಸದೇನಾದರೂ ಮಾಡಬೇಕು ಎಂದುಕೊಂಡಾಗ ಅವರಿಗೆ ಸಿಕ್ಕಿದ್ದೇ ‘ಯೆಲ್ಲೋ ಬೋರ್ಡ್​’ ಪ್ರಾಜೆಕ್ಟ್​. ‘ಈ ಸಿನಿಮಾದಲ್ಲಿ ಅನಗತ್ಯವಾಗಿ ಕಮರ್ಷಿಯಲ್​ ಅಂಶಗಳನ್ನು ತುರುಕಿಲ್ಲ. ಹೀರೋಯಿಸಂ, ಡೈಲಾಗ್​ಗಳೆಲ್ಲ ಕಥೆಗೆ ಪೂರಕವಾಗಿವೆ. ನಾನು ಪಕ್ಕಾ ಡ್ರೈವರ್​ ರೀತಿ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅವರ ಹಾವ-ಭಾವವನ್ನು ಅರ್ಥಮಾಡಿಕೊಂಡು ನಟಿಸಿದ್ದೇನೆ. ಅದಕ್ಕಾಗಿ ತುಂಬ ದಿನಗಳ ಕಾಲ ಬೇಕಂತಲೇ ಕ್ಯಾಬ್​ನಲ್ಲಿ ಓಡಾಡಿ, ಡ್ರೈವರ್​ಗಳನ್ನು ಹತ್ತಿರದಿಂದ ಗಮನಿಸಿದೆ’ ಎಂದು ಪಾತ್ರಕ್ಕಾಗಿ ತಾವು ಮಾಡಿಕೊಂಡ ತಯಾರಿ ಬಗ್ಗೆ ಹೇಳಿಕೊಳ್ಳುತ್ತಾರೆ ಪ್ರದೀಪ್​. ಒಬ್ಬ ಡ್ರೈವರ್​ ಮನಸ್ಸು ಮಾಡಿದರೆ ಈ ಸಮಾಜವನ್ನು ಹೇಗೆ ಬದಲಾಯಿಸಬಹುದು ಎಂಬ ಕಾನ್ಸೆಪ್ಟ್​ ಈ ಚಿತ್ರದಲ್ಲಿದೆ ಎನ್ನುವ ಮೂಲಕ ಪ್ರದೀಪ್​ ಅವರು ಕಥೆಯ ಬಗ್ಗೆ ಕೌತುಕ ಮೂಡಿಸಿದ್ದಾರೆ.

‘ನಿನ್ನ ಗುಂಗಲ್ಲಿ..’ ಹಾಡು ಮಾಡಿ ಫೇಮಸ್​ ಆಗಿರುವ ಅದ್ವಿಕ್​ ಅವರು ‘ಯೆಲ್ಲೋ ಬೋರ್ಡ್​’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ‘ಪ್ರೀತಿಯೇ..’ ಗೀತೆ ಸೇರಿ ಒಟ್ಟು 7 ಹಾಡುಗಳು ಈ ಸಿನಿಮಾದಲ್ಲಿವೆ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಕುಟುಂಬದಲ್ಲಿ ​ಮದುವೆ ಸಂಭ್ರಮ; ಇಲ್ಲಿವೆ ಕಲರ್​ಫುಲ್​ ಫ್ಯಾಮಿಲಿ ಫೋಟೋಗಳು

ಸುದೀಪ್​ ಮುಂದಿನ ಸಿನಿಮಾ ಯಾವುದು? ಫೋಟೋ ಮೂಲಕ ಸುಳಿವು ನೀಡಿದ ಕಾಲಿವುಡ್​ ನಿರ್ದೇಶಕ

ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು