Puneeth Rajkumar: ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಪುನೀತ್​ ರಾಜ್​ಕುಮಾರ್​

ಬಂಗಾರಪೇಟೆ ಪಾನಿ‌ಪುರಿ ಅಂದ್ರೆ ಇಂದು‌ ದೇಶದಾದ್ಯಂತ ಹೆಸರು ಮಾಡಿದೆ. ‘ಪವರ್ ಸ್ಟಾರ್’ ಪುನಿತ್ ರಾಜ್​ಕುಮಾರ್ ಬಂಗಾರಪೇಟೆಗೆ ಬಂದಾಗ ಒಮ್ಮೆ‌ ಪಾನಿಪುರಿ ಸವಿದು ಮೆಚ್ವುಗೆ ವ್ಯಕ್ತಪಡಿಸಿದ್ದರು.

Puneeth Rajkumar: ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಪುನೀತ್​ ರಾಜ್​ಕುಮಾರ್​
ಬಂಗಾರಪೇಟೆಯಲ್ಲಿ ಪಾನಿಪುರಿ ಸವಿದಿದ್ದ ಪುನೀತ್​ ರಾಜ್​ಕುಮಾರ್​
Follow us
| Edited By: ಮದನ್​ ಕುಮಾರ್​

Updated on:Nov 16, 2021 | 11:19 PM

ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ (Puneeth Rajkumar) ಆಹಾರ ಪ್ರಿಯ ಎಂಬುದು ಗೊತ್ತೇ ಇದೆ. ಅದರಲ್ಲೂ ಹೊಸ‌‌ ಹೊಸ ತಿಂಡಿ ತಿನಿಸುಗಳನ್ನು ಟೇಸ್ಟ್ ಮಾಡೋದು ಅವರ ಹವ್ಯಾಸ ಆಗಿತ್ತು. ಅದರಂತೆ ಪುನೀತ್ ರಾಜ್​ಕುಮಾರ್ ಅವರು ಚಿನ್ನದ ನಾಡು ಕೋಲಾರ ಜಿಲ್ಲೆಯ‌ ಬಂಗಾರಪೇಟೆಯಲ್ಲಿ‌ ಹೆಸರುವಾಸಿಯಾದ ಪಾನಿಪುರಿಯನ್ನು (Bangarapet Panipuri) ಸವಿದು ಸಂತೋಷ ಪಟ್ಟಿದ್ದರು. ಅದು 2012ರಲ್ಲಿ ಪುನೀತ್ ರಾಜ್​ಕುಮಾರ್ ಅವರ ‘ಅಣ್ಣಾ ಬಾಂಡ್’ (Anna Bond) ಸಿನಿಮಾದ ಶೂಟಿಂಗ್ ಸಮಯ. ಕೋಲಾರ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿತ್ತು. ಕೋಲಾರದ ಅಂತರಗಂಗೆ ಬೆಟ್ಟ, ತೇರಹಳ್ಳಿ‌ ಬೆಟ್ಟ ಹಾಗೂ ಕೆಜಿಎಫ್ ಸೈನೆಡ್ ಗುಡ್ಡದ‌ ಮೇಲೂ ಶೂಟಿಂಗ್ ಮಾಡಲಾಗಿತ್ತು. ಈ ವೇಳೆ ಕೆಜಿಎಫ್​ಗೆ ಬಂದಿದ್ದ ಅಪ್ಪು‌ ಅವರು ಶೂಟಿಂಗ್ ಮುಗಿದ ನಂತರ ಸಂಜೆ‌‌ ಬಂಗಾರಪೇಟೆಯ ವಾಸು ಅವರ ಪಾನಿಪುರಿ ಅಂಗಡಿಗೆ ಬಂದು ನಾಲ್ಕು ಪ್ಲೇಟ್ ಪಾನಿಪುರಿ ಸವಿದಿದ್ದನ್ನು ಇಂದಿಗೂ ಇಲ್ಲಿನ ಪಾನಿಪುರಿ ವ್ಯಾಪಾರಿ, ಪುನೀತ್ ಅವರ ದೊಡ್ಡ ಅಭಿಮಾನಿ ವಾಸು ಅವರು ನೆನಪು ಮಾಡಿಕೊಳ್ಳುತ್ತಾರೆ.

ಬಂಗಾರಪೇಟೆ ಪಾನಿ‌ಪುರಿ ಅಂದ್ರೆ ದೇಶದಾದ್ಯಂತ ಹೆಸರು ಮಾಡಿದೆ.  ಈ ಬಗ್ಗೆ ಕೇಳಿದ್ದ ಪುನೀತ್ ರಾಜ್​ಕುಮಾರ್ ಅವರು ಪಾನಿಪುರಿ ರುಚಿಗೆ ಮನಸೋತು ಶೂಟಿಂಗ್ ಮುಗಿದ ಬಳಿಕ ಒಂದು ದಿನ ಇಡೀ ಚಿತ್ರತಂಡಕ್ಕೂ ಪಾನಿಪುರಿ ಪಾರ್ಟಿ‌ ಕೊಟ್ಟು ಖುಷಿಪಟ್ಟಿದ್ದರಂತೆ. ಅವತ್ತು ವಾಸವಿ ಪಾನಿಪುರಿ ಅಂಗಡಿಯ ವಾಸು ತುಂಬಾ ಖುಷಿಯಿಂದ ಪಾನಿಪುರಿ ಮಾಡಿ ಕೊಟ್ಟಿದ್ದರಂತೆ.

ಒಟ್ಟಾರೆ ಡಾ. ರಾಜ್​ಕುಮಾರ್ ಅವರಂತೆಯೇ ತಿಂಡಿ‌ ತಿನಿಸುಗಳನ್ನು ಇಷ್ಟ ಪಡುತ್ತಿದ್ದ ಪುನೀತ್ ರಾಜ್​ಕುಮಾರ್ ಕೂಡ ಬೇರೆ ಬೇರೆ ಪ್ರದೇಶಗಳಿಗೆ ಹೋದಾಗ ಅಲ್ಲಿನ ವಿಶೇಷ ಆಹಾರ ಖಾದ್ಯಗಳನ್ನು ಸವಿಯುತ್ತಿದ್ದರು. ಅದು ಅವರ ಹವ್ಯಾಸ ಆಗಿತ್ತು. ಅದರಂತೆ ಕೋಲಾರಕ್ಕೆ ಬಂದು ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಪುನೀತ್ ರಾಜ್​ಕುಮಾರ್ ಈಗ ನೆನಪು ಮಾತ್ರ.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ:

ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ

‘ಆರು ಕೋಟಿ ಜನರ ಪರವಾಗಿ ಪುನೀತ್​ಗೆ ಅಂದು ಮುತ್ತು ಕೊಟ್ಟಿದ್ದೆ’: ಸಿಎಂ ಬೊಮ್ಮಾಯಿ ಭಾವುಕ ನುಡಿ

Published On - 11:03 pm, Tue, 16 November 21

ತಾಜಾ ಸುದ್ದಿ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ