ರಜನಿಕಾಂತ್ ಗೆಳೆಯ ರಾಜ್‌ ಬಹದ್ದೂರ್ ಕಡೆಯಿಂದ ‘ಗಾರುಡಿಗ’ ಚಿತ್ರಕ್ಕೆ ಸಿಕ್ತು ಶುಭ ಹಾರೈಕೆ

‘ಗಾರುಡಿಗ’ ಸಿನಿಮಾದಲ್ಲಿ ಹಳ್ಳಿಯ ಯುವಕನಾಗಿ ಮಾಗಡಿ ಮೂಲದ ರುದ್ವಿನ್ ಅವರು ನಟಿಸಿದ್ದಾರೆ. ನಾಯಕಿಯಾಗಿ ಎರಡು ಶೇಡ್‌ಗಳು ಇರುವ ಪಾತ್ರದಲ್ಲಿ ಮಾನಸಾ ನಟಿಸಿದ್ದಾರೆ. ಅರ್ಚನಾ, ಅರ್ಜುನ್, ಸೋನು, ಮೋಹನ್, ಗಿರೀಶ್, ಸಂಜು ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡು ಬಿಡುಗಡೆ ಆಗಿದೆ.

ರಜನಿಕಾಂತ್ ಗೆಳೆಯ ರಾಜ್‌ ಬಹದ್ದೂರ್ ಕಡೆಯಿಂದ ‘ಗಾರುಡಿಗ’ ಚಿತ್ರಕ್ಕೆ ಸಿಕ್ತು ಶುಭ ಹಾರೈಕೆ
‘ಗಾರುಡಿಗ’ ಕನ್ನಡ ಸಿನಿಮಾ ತಂಡ
Follow us
|

Updated on: Nov 13, 2023 | 9:05 PM

ಚಿತ್ರರಂಗಕ್ಕೆ ಬರುವ ಹೊಸಬರ ಸಂಖ್ಯೆಗೆ ಕೊರತೆಯಿಲ್ಲ. ಈಗ ‘ಗಾರುಡಿಗ’ (Gaarudiga) ಶೀರ್ಷಿಕೆಯ ಚಿತ್ರದಲ್ಲಿ ಕೂಡ ಅನೇಕ ಹೊಸಬರು ಎಂಟ್ರಿ ನೀಡುತ್ತಿದ್ದಾರೆ. ಈ ಸಿನಿಮಾದ ಪ್ರಮೋಷನ್​ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಅದರ ಮೊದಲ ಹಂತವಾಗಿ ಸಾಂಗ್​ ರಿಲೀಸ್​ ಕಾರ್ಯಕ್ರಮ ಮಾಡಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಗ್ರ್ಯಾಂಡ್​ ಆಗಿ ಈ ಕಾರ್ಯ್ರಕಮ ನಡೆಯಿತು. ‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಆಪ್ತ ಗೆಳೆಯರಾದ ರಾಜ್‌ ಬಹದ್ದೂರ್ (Raj Bahadur) ಅವರು ಈ ಸಮಾರಂಭಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದು ವಿಶೇಷ. ‘ಗಾರುಡಿಗ’ ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ವಕೀಲರಾಗಿರುವ ಡಾ. ಎಂ. ವೆಂಕಟಸ್ವಾಮಿ ಅವರು ‘ಎಂ.ವಿ. ಫಿಲ್ಮ್ಸ್​’ ಸಂಸ್ಥೆಯ ಮೂಲಕ ‘ಗಾರುಡಿಗ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿಧ ಆರ್. ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏನು ಈ ಸಿನಿಮಾದ ಕಥೆ ಎಂಬ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ‘ರೈತನಾಗಿದ್ದವನು ನಗರಕ್ಕೆ ಬಂದು ತನ್ನ ಬುದ್ಧಿಶಕ್ತಿಯ ಬಲದಿಂದ ಒಂದು ಚಕ್ರವ್ಯೂಹವನ್ನು ಯಾವ ರೀತಿ ಭೇದಿಸುತ್ತಾನೆ ಎಂಬುದು ಈ ಚಿತ್ರದಲ್ಲಿದೆ’ ಎಂದು ತಂಡವರು ಹೇಳಿಕೊಂಡಿದ್ದಾರೆ.

‘ಗಾರುಡಿಗ’ ಸಿನಿಮಾದ ಹಾಡು:

‘ಶ್ರೀಮಂತ ಕುಟುಂಬದ ಹುಡುಗರು ಘೋರ ಅಪಘಾತಗಳನ್ನು ಮಾಡಿ, ಅದನ್ನು ಮುಚ್ಚಿಟ್ಟು ಆರಾಮಾಗಿ ಇರುತ್ತಾರೆ. ಆದರೆ ಅವರ ಬದುಕಿನಲ್ಲಿ ಬದಲಾವಣೆ ಆಗುತ್ತದೆ. ಹೀರೋ ತನ್ನ ಚಾಣಾಕ್ಷತನದಿಂದ ಕೆಲಸ ಸಾಧಿಸುತ್ತಾನೆ. ಆ ಶ್ರೀಮಂತರನ್ನು ಅಪರಾಧದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅವರಿಂದಲೇ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುತ್ತಾನೆ. ಆ ಮೂಲಕ ಗೆಲುವು ಕಾಣುತ್ತಾನೆ. ಆ ಬಳಿಕ ದುಷ್ಟರಿಗೆ ಶಿಕ್ಷೆ ಆಗುತ್ತಾ ಎಂಬುದು ಕುತೂಹಲ. ಮನಸಾಕ್ಷಿಗಿಂತಲೂ ದೊಡ್ಡದು ಯಾವುದೂ ಇಲ್ಲ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ‘ಗಾರುಡಿಗ’ ತಂಡದವರು ಹೇಳಿದ್ದಾರೆ.

ಇದನ್ನೂ ಓದಿ: ಯೋಗರಾಜ್​ ಭಟ್​ ಧ್ವನಿಯಲ್ಲಿ ಮೂಡಿಬಂತು ‘ಬೆಂಬಿಡದ ನಾವಿಕ’ ಟೀಸರ್​; ಏನಿದರ ಕಥೆ?

ಈ ಸಿನಿಮಾದಲ್ಲಿ ಹಳ್ಳಿಯ ಯುವಕನಾಗಿ ಮಾಗಡಿ ಮೂಲದ ರುದ್ವಿನ್ ಅವರು ನಟಿಸಿದ್ದಾರೆ. ನಾಯಕಿಯಾಗಿ ಎರಡು ಶೇಡ್‌ಗಳು ಇರುವ ಪಾತ್ರದಲ್ಲಿ ಮಾನಸಾ ನಟಿಸಿದ್ದಾರೆ. ಅರ್ಚನಾ, ಅರ್ಜುನ್, ಸೋನು, ಮೋಹನ್, ಗಿರೀಶ್, ಸಂಜು ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಆನೇಕಲ್, ಹೊಸಪೇಟೆ, ಕನಕಪುರ, ಹಾರೋಹಳ್ಳಿ ಮುಂತಾದೆಡೆ ಶೂಟಿಂಗ್​ ಮಾಡಲಾಗಿದೆ. ‘ಬಡವರ ಮಕ್ಕಳು ಬರುತ್ತಿದ್ದೇವೆ. ಪ್ರೀತಿ ಕೊಡಿ’ ಎಂದು ‘ಗಾರುಡಿಗ’ ಟೀಮ್​ ಕೇಳಿಕೊಂಡಿದೆ. ಚಿತ್ರದ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಎಂ. ಸಂಜೀವ್‌ ರಾವ್ ಅವರು ಸಂಗೀತ ನಿರ್ದೇಶನ, ಅನಿರುದ್ದ್-ಭರತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಭಾರ್ಗವ್-ಚೆಲುವಮೂರ್ತಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ವಿಧ ಆರ್., ಎಂ. ಸಂಜೀವ್‌ ರಾವ್ ಸಾಹಿತ್ಯ ಬರೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ರಸ್ತೆಯಲ್ಲಿ ತಳ್ಳುಗಾಡಿ ಇಟ್ಟಿದ್ದಕ್ಕೆ ಗಲಾಟೆ: ವ್ಯಾಪಾರಿ ಮೇಲೆ ಪಿಸಿ ಹಲ್ಲೆ
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ