AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಿಚಾರವನ್ನು ಪಾರ್ವತಮ್ಮನಿಂದ ಮುಚ್ಚೇ ಇಟ್ಟಿದ್ದರು ರಾಜ್​ಕುಮಾರ್

ರಾಜ್​ಕುಮಾರ್ ಅವರ ಜನ್ಮದಿನದಂದು, ಅವರ ಮತ್ತು ಮುಖ್ಯಮಂತ್ರಿ ಚಂದ್ರು ಅವರ ನಿಕಟ ಸ್ನೇಹದ ಅಪರಿಚಿತ ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಬಿಡದಿಯಲ್ಲಿನ ಚಿತ್ರೀಕರಣದ ಸಮಯದಲ್ಲಿ ಕೆಲವು ವಿಚಾರಗಳು ನಡೆಯುತ್ತಿದ್ದವು. ಅದನ್ನು ಪಾರ್ವತಮ್ಮ ಅವರಿಂದ ಈ ವಿಷಯವನ್ನು ಮರೆಮಾಡಿದ್ದರು. ಅದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಈ ವಿಚಾರವನ್ನು ಪಾರ್ವತಮ್ಮನಿಂದ ಮುಚ್ಚೇ ಇಟ್ಟಿದ್ದರು ರಾಜ್​ಕುಮಾರ್
ರಾಜ್​ಕುಮಾರ್-ಪಾರ್ವತಮ್ಮ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 24, 2025 | 9:08 AM

ರಾಜ್​ಕುಮಾರ್ (Rajkumar) ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಇದು ಅಭಿಮಾನಿಗಳ ಪಾಲಿಗೆ ವಿಶೇಷ ದಿನ ಎಂದೇ ಹೇಳಬಹುದು. ಅವರನ್ನು ಆರಾಧಿಸುವವರು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ರಾಜ್​ಕುಮಾರ್ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ರಾಜ್​ಕುಮಾರ್ ಅವರಿಗೂ ಅದೇ ರೀತಿ. ಇನ್ನು ಕುಟುಂಬ ಎನ್ನುವ ವಿಚಾರಕ್ಕೆ ಬಂದರೆ ರಾಜ್​ಕುಮಾರ್ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು. ಪಾರ್ವತಮ್ಮ ಅವರ ಬಳಿ ರಾಜ್​ಕುಮಾರ್ ಏನನ್ನೂ ಮುಚ್ಚಿ ಇಡುತ್ತಲೇ ಇರಲಿಲ್ಲ. ಆದರೆ, ಒಂದು ವಿಚಾರವನ್ನು ಅವರು ಪಾರ್ವತಮ್ಮ ಅವರಿಂದ ಮುಚ್ಚಿಟ್ಟಿದ್ದರು.

ಮುಖ್ಯಮಂತ್ರಿ ಚಂದ್ರು ಹಾಗೂ ರಾಜ್​ಕುಮಾರ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಒಡನಾಟ ಇದೆ. ಈ ಒಡನಾಟದ ಬಗ್ಗೆ ಅವರು ‘ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದರು. ಪಾರ್ವತಮ್ಮ ಅವರಿಂದ ಮುಚ್ಚಿಟ್ಟ ವಿಚಾರ ಏನು ಎಂಬುದು ಕೂಡ ಇಲ್ಲಿ ರಿವೀಲ್ ಆಗಿತ್ತು.

ರಾಜ್​ಕುಮಾರ್ ಅವರಿಗೆ ತಿಂಡಿ ಬಗ್ಗೆ ಸಾಕಷ್ಟು ಪ್ರೀತಿ. ಒಮ್ಮೆ ಬಿಡದಿಯಲ್ಲಿ ಶೂಟ್ ಇತ್ತು. ಮುಖ್ಯಮಂತ್ರಿ ಚಂದ್ರು ಜೊತೆ ಸೇರಿ ರಾಜ್​ಕುಮಾರ್ ಶೂಟಿಂಗ್ ಸ್ಥಳಕ್ಕೆ ಹೊರಟರು. ಈ ವೇಳೆ ಬಿಡದಿ ಬಳಿ ಇಡ್ಲಿ, ಚಿತ್ರಾನ್ನ, ವಡೆ ತೆಗೆದುಕೊಂಡು ಪಾರ್ಸಲ್ ಮಾಡಿಕೊಂಡು ತಿಂದರು. ಆ ಬಳಿಕ ನೇರವಾಗಿ ಶೂಟಿಂಗ್ ಸೆಟ್​ಗೆ ಹೋದರು.

ಇದನ್ನೂ ಓದಿ
Image
ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್​ಕುಮಾರ್; ಆ ಬಳಿಕ ನಡೆದಿದ್ದು ಏನು
Image
ರಾಜ್​ಕುಮಾರ್ ಮೊದಲ ಆಡಿಷನ್ ಹೇಗಿತ್ತು? ವಿವರಿಸಿದ್ದ ಅಣ್ಣಾವ್ರು
Image
ಪಹಲ್ಗಾಮ್ ದಾಳಿ ಬಗ್ಗೆ ಪಾಕ್ ನಟನ ಅಭಿಪ್ರಾಯವೇನು? ದೂಷಿಸಿದ್ದು ಯಾರನ್ನು?
Image
ರಾಜ್​ಕುಮಾರ್ ಜನ್ಮದಿನಕ್ಕೆ ಶಿವಣ್ಣನ ಹೊಸ ಸಿನಿಮಾ ಘೋಷಣೆ; ಟೈಟಲ್ ಏನು?

ಇದನ್ನೂ ಓದಿ: ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್​ಕುಮಾರ್; ಆ ಬಳಿಕ ನಡೆದಿದ್ದು ಏನು?

ರಾಜ್​ಕುಮಾರ್ ಹೊರಟಿದ್ದ ಸಿನಿಮಾದ ಶೂಟ್​ಗೆ ಪಾರ್ವತಮ್ಮ ಅವರದ್ದೇ ಬಂಡವಾಳ ಇತ್ತು. ಹೀಗಾಗಿ, ತಿಂಡಿ ವ್ಯವಸ್ಥೆಯನ್ನು ಅವರೇ ಮಾಡಿಸಿದ್ದರು. ಈಗ ಹೊರಗೆ ತಿಂದು ಬಂದರೆ ಪಾರ್ವತಮ್ಮ ಬೈಯ್ಯುತ್ತಾರೆ ಎಂಬುದು ಅಣ್ಣಾವ್ರಿಗೆ ತಿಳಿದಿತ್ತೆನ್ನಿ. ‘ಸೆಟ್​ನಲ್ಲಿ ಊಟ ಇದ್ದರೂ ಹೊರೆ ತಿಂದು ಬರೋದೇಕೆ’ ಎಂದು ಅವರು ಪ್ರಶ್ನೆ ಮಾಡುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ರಾಜ್​ಕುಮಾರ್ ಅವರು ಈ ವಿಚಾರವನ್ನು ಎಲ್ಲಿಯೂ ಹೇಳುತ್ತಿರಲಿಲ್ಲ. ಮುಖ್ಯಮಂತ್ರಿ ಚಂದ್ರು ಹಾಗೂ ಕಾರು ಚಾಲಕನಿಗೂ ಈ ಬಗ್ಗೆ ಸ್ಟ್ರಿಕ್ಟ್ ಆಗಿ ರಾಜ್​ಕುಮಾರ್ ಅವರು ಹೇಳಿರುತ್ತಿದ್ದರು. ಸೆಟ್​ಗೆ ಬಂದ ಬಳಿಕ ಸ್ವಲ್ಪ ತಿಂಡಿ ತಿನ್ನುತ್ತಿದ್ದ ಅವರು, ಅಡುಗೆಯವರನ್ನು ಹೊಗಳುತ್ತಿದ್ದರು. ಬಟ್ಟಲಿಗೆ ಹಾಕಿಕೊಂಡು ಹೋದ ಬಳಿಕ ಅವರು 15 ನಿಮಿಷ ಬರುತ್ತಿರಲಿಲ್ಲ. ಬೇಗ ಬಂದರೆ ಹೆಚ್ಚು ತಿಂದಿಲ್ಲ ಅನ್ನೋದು ಗೊತ್ತಾಗುತ್ತಿತ್ತು ಎಂಬುದು ರಾಜ್​ಕುಮಾರ್ ಅಭಿಪ್ರಾಯ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್