AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮನೆಯ ನೀರು ಅಮೃತ ಎಂದ ಅಭಿಮಾನಿ; ರಾಜ್​ಕುಮಾರ್ ಮಾಡಿದ್ದೇನು?

ಶಿವರಾಜ್ ಕುಮಾರ್ ಅವರು ತಮ್ಮ ತಂದೆ ರಾಜ್ ಕುಮಾರ್ ಅವರ ಚೆನ್ನೈ ಜೀವನದ ಬಗ್ಗೆ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಾಜ್ ಕುಮಾರ್ ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದಾಗ, ಅವರ ಮನೆಯಲ್ಲಿ ಪ್ರತಿ ದಿನ ನೂರಾರು ಜನರಿಗೆ ಊಟ ಹಾಗೂ ಜ್ಯೂಸ್​ನ ಉಚಿತವಾಗಿ ನೀಡುತ್ತಿದ್ದರು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ನಿಮ್ಮ ಮನೆಯ ನೀರು ಅಮೃತ ಎಂದ ಅಭಿಮಾನಿ; ರಾಜ್​ಕುಮಾರ್ ಮಾಡಿದ್ದೇನು?
ಶಿವರಾಜ್​ಕುಮಾರ್
ರಾಜೇಶ್ ದುಗ್ಗುಮನೆ
|

Updated on:Nov 14, 2024 | 11:54 AM

Share

ಮೊದಲಿನ ಕಾಲದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದುದೇ ಚೆನ್ನೈನಲ್ಲಾಗಿತ್ತು. ಈ ಕಾರಣಕ್ಕೆ ಬಹುತೇಕ ಸ್ಟಾರ್ ಹೀರೋಗಳು ಅಲ್ಲಿಯೇ ಸೆಟಲ್ ಆಗಿದ್ದರು. ರಾಜ್​ಕುಮಾರ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಚೆನ್ನೈನಲ್ಲಿ ವಾಸವಿದ್ದರು. ಅಲ್ಲಿಯೇ ಇದ್ದುಕೊಂಡು ಹಲವು ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದರು. ವಿಶೇಷ ಎಂದರೆ ರಾಜ್​ಕುಮಾರ್ ಮನೆ ಮುಂದೆ ನಿತ್ಯವೂ ಜ್ಯೂಸ್ ಹಂಚಲಾಗುತ್ತಿತ್ತು. ಅಷ್ಟೇ ಅಲ್ಲ, ಬಂದ ಕಲಾವಿದರಿಗೆ ಊಟವನ್ನು ಹಾಕಲಾಗುತ್ತಿತ್ತು. ಈ ಬಗ್ಗೆ ಶಿವರಾಜ್​ಕುಮಾರ್ ಮಾತನಾಡಿದ್ದಾರೆ.

ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕಾಗಿ ಅವರು ವಿವಿಧ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾ ಇದ್ದಾರೆ. ಕೈರಾಮ್ ವಾಶಿ ಯ್ಯೂಟ್ಯೂಬ್ ಚಾನೆಲ್​ಗೂ ಶಿವರಾಜ್​ಕುಮಾರ್ ಅವರು ಸಂದರ್ಶನ ನೀಡಿದ್ದು, ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದಾರೆ.

‘ಚೆನ್ನೈನಲ್ಲಿದ್ದಾಗ ನಿತ್ಯ ನೂರಾರು ಜನರು ಬಂದು ನಮ್ಮನೆಯಲ್ಲಿ ಊಟ ಮಾಡುತ್ತಿದ್ದರು. ರಾಜ್​ಕುಮಾರ್ ಮನೆಯಲ್ಲಿ ಎಲ್ಲರಿಗೂ ಬಿಸಿ ಅನ್ನ, ಬಿಸಿ ಸಾರು ಕೊಡಲಾಗುತ್ತಿತ್ತು. ಅದುವೇ ಸ್ಪೇಷಾಲಿಟಿ. ಎಷ್ಟಾದರೂ ತಿನ್ನಿ, ವೇಸ್ಟ್ ಮಾಡಬೇಡಿ ಎಂದು ಅಪ್ಪಾಜಿ ಹೇಳುತ್ತಿದ್ದರು. ನಾವಿದ್ದ ಮನೆಯ ಸಮೀಪವೇ ಎನ್​ಟಿಆರ್ ಹಾಗೂ ಎಂಜಿಆರ್​ ಮನೆಗಳು ಇದ್ದವು. ಹೀಗಾಗಿ, ಅದನ್ನು ನೋಡಲು ಜನರು ಅಲ್ಲಿಗೆ ಬರುತ್ತಿದ್ದರು. ಶೂಟಿಂಗ್ ನೋಡೋಕೆ ರಾಜ್​ಕುಮಾರ್ ಅವಕಾಶ ಕೊಡುತ್ತಿದ್ದರು. ಯಾರೋ ಬಂದು ಅಣ್ಣಾ ನಿಮ್ಮ ಮನೆಯ ನೀರು ಕೊಡಿ ಕುಡಿದುಬಿಡ್ತೀವಿ ಎಂದರು. ಆ ನೀರನ್ನು ಕುಡಿದ ಬಳಿಕ ಅಮೃತ ಕುಡಿದಂತೆ ಆಯ್ತು ಎಂದಿದ್ದರು’ ಎಂದು ಶಿವಣ್ಣ ವಿವರಿಸಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್, ಡಾಲಿ

ಆ ಒಂದು ಮಾತಿನಿಂದ ರಾಜ್​ಕುಮಾರ್​ಗೆ ಒಂದು ಆಲೋಚನೆ ಬಂತು. ‘ಹೊರಗಡೆ ಎಲ್ಲರಿಗೂ ಸಿಗುವ ರೀತಿ ನಿತ್ಯ ಜ್ಯೂಸ್ ಮಾಡಿಡಿ ಎಂದರು. ಅಂದಿನಿಂದ ಮಜ್ಜಿಗೆ ಅಥವಾ ಜ್ಯೂಸ್ ಇಡುತ್ತಾ ಇದ್ದರು. ಡ್ರಮ್ ಅಲ್ಲಿ ಐಸ್ ಹಾಕಿ ಇಟ್ಟು ಬಿಡ್ತಾ ಇದ್ರು. ದುಡ್ಡು ಎಷ್ಟು ಖರ್ಚಾಗುತ್ತದೆ ಎಂಬುದರ ಆಲೋಚನೆ ಅವರಿಗೆ ಇಲ್ಲ. ರಾಜ್​ಕುಮಾರ್ ಮನೆಯ ಸಮೀಪ ಕೋಲ್ಡ್ ಜ್ಯೂಸ್ ಇದೆ ಕುಡಿದು ಬರೋಣ ಎಂದು ಆಟೋ ಡ್ರೈವರ್ ಹೇಳುತ್ತಿದ್ದರು. ಅದು ನಮಗೆ ಕೇಳುತ್ತಿತ್ತು’ ಎಂದಿದ್ದಾರೆ ಶಿವಣ್ಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:54 am, Thu, 14 November 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ