AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜು ತಾಳಿಕೋಟೆ ಮೂಲ ಹೆಸರು ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ: ಇಲ್ಲಿದೆ ಜೀವನದ ಕಥೆ

‘ಕಲಿಯುಗದ ಕುಡುಕ’ ಹಾಸ್ಯ ನಾಟಕದ ಮೂಲಕ ತುಂಬಾ ಜನಪ್ರಿಯತೆ ಪಡೆದಿದ್ದ ಕಲಾವಿದ ರಾಜು ತಾಳಿಕೋಟೆ ಇನ್ನಿಲ್ಲ. ಬಾಲ ನಟನಾಗಿಯೇ ರಂಗಭೂಮಿಯಲ್ಲಿ ರಾಜು ತಾಳಿಕೋಟೆ ತೊಡಗಿಕೊಂಡಿದ್ದರು. ಸ್ವಂತ ನಾಟಕ ಕಂಪನಿಯನ್ನು ಅವರು ನಡೆಸುತ್ತಿದ್ದರು. ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ ಹೆಸರಿನ ಅವರು ರಾಜು ತಾಳಿಕೋಟೆ ಎಂದೇ ರಂಗಭೂಮಿ ಹಾಗೂ ಸಿನಿಮಾದಲ್ಲಿ ಫೇಮಸ್ ಆಗಿದ್ದರು.

ರಾಜು ತಾಳಿಕೋಟೆ ಮೂಲ ಹೆಸರು ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ: ಇಲ್ಲಿದೆ ಜೀವನದ ಕಥೆ
Raju Talikote
ಮದನ್​ ಕುಮಾರ್​
|

Updated on: Oct 13, 2025 | 7:50 PM

Share

ಖ್ಯಾತ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ (Raju Talikote) ಅವರು ಇಂದು (ಅಕ್ಟೋಬರ್ 13) ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಸಿನಿಮಾ ಚಿತ್ರೀಕರಣದ ಸಲುವಾಗಿ ಉಡುಪಿಗೆ ತೆರಳಿದ್ದಾಗ ಅವರು ಹೃದಯಾಘಾತದಿಂದ (Heart Attack) ಮೃತರಾದರು. ರಾಜು ತಾಳಿಕೋಟೆ ಅವರ ಮೂಲ ಹೆಸರು ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ. ಅವರು ಜನಿಸಿದ್ದು 1965ರಲ್ಲಿ. ತಾಳಿಕೋಟೆ ಊರಿನಲ್ಲಿ ಹುಟ್ಟಿಬೆಳೆದ ಕಾರಣ ರಾಜು ತಾಳಿಕೋಟೆ ಎಂಬುದೇ ಅವರ ಹೆಸರಾಯಿತು. ನಾಟಕಗಳಲ್ಲಿ ಹಾಗೂ ಸಿನಿಮಾದಲ್ಲಿ ಅದೇ ಹೆಸರಿನಿಂದ ಅವರು ಫೇಮಸ್ ಆದರು. ರಾಜು ತಾಳಿಕೋಟೆ ಅವರ ತಂದೆ-ತಾಯಿ ಕೂಡ ರಂಗಭೂಮಿ ಕಲಾವಿದರಾಗಿದ್ದರು. ‘ಶ್ರೀಗುರು ಖಾಸ್ಗತೇಶ್ವರ ನಾಟ್ಯ ಸಂಘ’ ಎಂಬ ನಾಟಕ ತಂಡವನ್ನು ನಡೆಸುತ್ತಿದ್ದರು.

ತಾಳಿಕೋಟೆಯ ಶ್ರೀಗುರು ಖಾಸ್ಗತೇಶ್ವರ ಮಠದಲ್ಲಿ ರಾಜು ತಾಳಿಕೋಟೆ ಅವರು ಶಾಲೆಗೆ ಸೇರಿದ್ದರು. ಬಾಲ ನಟನಾಗಿ ರಾಜು ತಾಳಿಕೋಟೆ ಅವರು ಅಭಿನಯಿಸುತ್ತಿದ್ದರು. 4ನೇ ತರಗತಿ ತನಕ ಅವರು ಅಲ್ಲಿ ಓದಿದರು. ತಂದೆ-ತಾಯಿ ತೀರಿಕೊಂಡ ನಂತರ ಶಿಕ್ಷಣ ಮೊಟಕುಗೊಳಿಸಿದರು. ಹೋಟೆಲ್ ಕ್ಲೀನರ್ ಆಗಿ ಕೆಲಸ ಮಾಡಿದರು. ಲಾರಿ ಕ್ಲೀನರ್ ಆಗಿದ್ದರು. ಬಳಿಕ ಮತ್ತೆ ರಂಗಭೂಮಿಯಲ್ಲೇ ಅವರು ತೊಡಗಿಕೊಂಡರು. ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ಅವರು ಅನುಭವ ಪಡೆದರು. ಪಾಲಕರ ನಾಟಕ ತಂಡವನ್ನು ರಾಜು ತಾಳಿಕೋಟೆ ಮುಂದುವರಿಸಿದರು.

ಕ್ಯಾಸೆಟ್ ಸಲುವಾಗಿಯೇ ಹಲವು ನಾಟಕಗಳನ್ನು ರಾಜು ತಾಳಿಕೋಟೆ ಅವರು ರಚಿಸಿದರು. ‘ಕಲಿಯುಗದ ಕುಡುಕ’ ನಾಟಕದ ಮೂಲಕ ರಾಜು ತಾಳಿಕೋಟೆ ಅವರು ಫೇಮಸ್ ಆದರು. 15 ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ಆ ನಾಟಕ ಕಂಡಿತ್ತು. 1990ರ ದಶಕದಲ್ಲಿ ‘ಕಲಿಯುಗದ ಕುಡುಕ’ ನಾಟಕದ ಕ್ಯಾಸೆಟ್ ರೆಕಾರ್ಡ್ ಮಾಡಲಾಯಿತು. ಆ ಕ್ಯಾಸೆಟ್ ಬಿಡುಗಡೆ ಆದ ಬಳಿಕ ಅವರು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ‘ಕುಡುಕರ ಸಾಮ್ರಾಜ್ಯ’, ‘ಹತ್ತಿಗುಡಿ ಲಕ್ಕವ್ವ’ ಮುಂತಾದ ನಾಟಕಗಳಿಂದಲೂ ಅವರ ಖ್ಯಾತಿ ಹೆಚ್ಚಿತು.

ಇದನ್ನೂ ಓದಿ: ‘ಇಬ್ಬರು ಹೆಂಡತಿಯರು ನನ್ನ ಪಾಲಿನ ಶಕ್ತಿ’; ಸಂಸಾರದ ಬಗ್ಗೆ ರಾಜು ತಾಳಿಕೋಟೆ ಮುಕ್ತ ಮಾತು

ರಾಜು ತಾಳಿಕೋಟೆ ಅವರ ತಾಯಿ ಹೆಸರು ಮಹಬೂಬಿ ತಾಳಿಕೋಟೆ. ಹಿರಿಯ ಸಹೋದರ ವಿಜಯಕುಮಾರ. ಸಹೋದರಿಯರು ಮಮತಾಜ್ ಶೇಖ್ ಮತ್ತು ಸೈದಾಮಾ ಕರ್ಜಗಿ. ರಾಜು ಅವರ ಮೊದಲ ಪತ್ನಿ ಪ್ರೇಮಾ. ಅವರಿಗೆ ಎರಡು ಗಂಡು, ಒಂದು ಹೆಣ್ಣು ಮಗಳು. ಎರಡನೇ ಪತ್ನಿ ಪ್ರೇಮಾ ಸಿಂಧನೂರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಶಾಜೀದಾ ಹಾಗೂ ಶಬ್ಬು ಎಂಬುದು ಮಕ್ಕಳ ಹೆಸರು. ‘ಹೆಂಡತಿ ಅಂದರೆ‌ ಹೆಂಡತಿ’ ರಾಜೂ ತಾಳಿಕೋಟೆ ನಟನೆ ಮೊದಲ ಸಿನಿಮಾ. ‘ಪಂಜಾಬಿ ಹೌಸ್’ ಎರಡನೇ ಸಿನಿಮಾ.

‘ಮನಸಾರೆ’, ‘ಪಂಚರಂಗಿ’, ‘ರಾಜಧಾನಿ’, ‘ಲೈಫು ಇಷ್ಟೇನೇ’, ‘ಅಲೆಮಾರಿ’, ‘ಮೈನಾ’, ‘ಟೋಪಿವಾಲಾ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋನಲ್ಲಿ ರಾಜು ತಾಳಿಕೋಟೆ ಅವರು ಸ್ಪರ್ಧಿಸಿದ್ದರು. ಚಿತ್ರರಂಗ ಹಾಗೂ ನಾಟಕದಲ್ಲಿ ಎಷ್ಟೇ ಬೇಡಿಕೆ ಇದ್ದರೂ ಕೂಡ ರಾಜು ತಾಳಿಕೋಟೆ ಅವರು ಕೃಷಿಯಲ್ಲಿ ತೊಡಗಿಕೊಂಡಿದ್ದರು. ಆಡು ಸಾಕಣೆ ಮಾಡುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?