AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಕ್ಕಸಪುರದೋಳ್’ ವಿಲನ್ ಅನಿರುದ್ಧ್ ಭಟ್ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು

ಕಳೆದ 9 ವರ್ಷಗಳಿಂದ ಕಿರುಚಿತ್ರಗಳನ್ನು ಮಾಡುತ್ತಾ ಬಂದ ಅನಿರುದ್ಧ್ ಭಟ್ ಅವರು ಈಗ ಸ್ಟಾರ್ ಆಗಿದ್ದಾರೆ. ‘ರಕ್ಕಸಪುರದೋಳ್’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರವನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಅಪ್ಪಟ ಕನ್ನಡದ ಕಲಾವಿದ ಅನಿರುದ್ಧ್ ಭಟ್ ಅವರ ಹಿನ್ನೆಲೆ ಏನು? ಪೂರ್ತಿ ಮಾಹಿತಿ ಇಲ್ಲಿದೆ ಓದಿ..

‘ರಕ್ಕಸಪುರದೋಳ್’ ವಿಲನ್ ಅನಿರುದ್ಧ್ ಭಟ್ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು
Raj B. Shetty, Anirudh Bhat
ಮದನ್​ ಕುಮಾರ್​
|

Updated on: Feb 15, 2026 | 2:22 PM

Share

ಜನಮೆಚ್ಚುಗೆ ಪಡೆದಿರುವ ‘ರಕ್ಕಸಪುರದೋಳ್’ (Rakkasapuradhol) ಸಿನಿಮಾದಿಂದ ನಟ ಅನಿರುದ್ಧ್ ಭಟ್ ಅವರ ಖ್ಯಾತಿ ಹೆಚ್ಚಾಗಿದೆ. ಈ ಸಿನಿಮಾ ನೋಡಿದ ಎಲ್ಲರೂ ಕೂಡ ಅನಿರುದ್ಧ್ ಭಟ್ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅನಿರುದ್ಧ್ ಭಟ್ ಅವರು ವಿಲನ್ ಪಾತ್ರ ಮಾಡಿದ್ದರೂ ಕೂಡ ಹೀರೋ ರೀತಿಯೇ ಮಿಂಚುತ್ತಿದ್ದಾರೆ. ಪ್ರೇಕ್ಷಕರು ಅವರನ್ನು ಆ ಪರಿ ಇಷ್ಟಪಟ್ಟಿದ್ದಾರೆ. ಬಣ್ಣದ ಲೋಕಕ್ಕೆ ಅನಿರುದ್ಧ್ ಭಟ್ (Anirudh Bhat) ಅವರು ತುಂಬ ಹೊಸಬರೇನೂ ಅಲ್ಲ. ‘ಟಿವಿ9 ಡಿಜಿಟಲ್’ ಜೊತೆ ಮಾತನಾಡಿರುವ ಅವರು ತಮ್ಮ ಹಿನ್ನೆಲೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುಳ್ಯದ ಹುಡುಗ: ಅನಿರುದ್ಧ್ ಭಟ್ ಅವರು ಮೂಲತಃ ಸುಳ್ಯದವರು. ಅಲ್ಲಿ ಜನಿಸಿದ ಅವರು ನಂತರ ಕುಶಾಲನಗರದಲ್ಲಿ 10ನೇ ತರಗತಿ ತನಕ ಓದಿದರು. ಉಡುಪಿಯಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಬೆಂಗಳೂರಿಗೆ ಬಂದು ಬಿಎಸ್ಸಿ ಅಗ್ರಿಕಲ್ಚರ್ ಡಿಗ್ರಿ ಪಡೆದುಕೊಂಡರು. ವಿದ್ಯಾಭ್ಯಾಸದ ಜೊತೆಯಲ್ಲೇ ಅವರಿಗೆ ಕಿರುಚಿತ್ರಗಳಲ್ಲಿ ಆಸಕ್ತಿ ಬೆಳೆಯಿತು. ಒಂದಷ್ಟು ಕಿರುಚಿತ್ರಗಳಿಗೆ ಅವರೇ ನಿರ್ದೇಶನ ಮಾಡಿ, ನಟಿಸಿದ್ದಾರೆ.

ಕಿರುಚಿತ್ರಗಳು: ‘ಸದ್ದಿಲ್ಲದೇ’, ‘ಬುದ್ಧಿವಂತ ದಡ್ಡರು’, ‘ಸರ್ಪ್ರೈಸ್ ಡಿನ್ನರ್’, ‘ಅಹಂ’, ‘ಡೋಂಟ್ ಲುಕ್ ಬ್ಯಾಕ್’ ಮುಂತಾದ ಕಿರುಚಿತ್ರಗಳನ್ನು ಅನಿರುದ್ಧ್ ಭಟ್ ಮಾಡಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ಕೆಲವು ಕಿರುಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ನಂತರ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಈವರೆಗಿನ ಸಿನಿಮಾಗಳು: ಅನಿರುದ್ಧ್ ಭಟ್ ಅವರು ನಟಿಸಿದ ಮೊದಲ ಸಿನಿಮಾ ‘ಗುರುದೇವ ಹೊಯ್ಸಳಾ’. ಆ ಬಳಿಕ ಅವರು ‘ಇಬ್ಬನಿ ತಬ್ಬಿದ ಇಳೆಯಲಿ’ ಮತ್ತು ‘ಮ್ಯಾಕ್ಸ್’ ಸಿನಿಮಾದಲ್ಲಿ ಅಭಿನಯಿಸಿದರು. ಆದರೆ ಅವರಿಗೆ ಅತಿ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದು 4ನೇ ಸಿನಿಮಾ ‘ರಕ್ಕಸಪುರದೋಳ್’.

Anirudh Bhat

Anirudh Bhat

ಎಡಿಟರ್ ಕೂಡ ಹೌದು: ಅನಿರುದ್ಧ್ ಭಟ್ ಅವರು ಆ್ಯಕ್ಟರ್ ಮಾತ್ರವಲ್ಲ, ಎಡಿಟರ್ ಕೂಡ ಹೌದು. ಜಾಹೀರಾತುಗಳು ಹಾಗೂ ವೆಡ್ಡಿಂಗ್ ವಿಡಿಯೋ ಸಂಕಲನ ಮಾಡುತ್ತಾರೆ. ಇದರಿಂದ ಅವರು ಹಣ ಸಂಪಾದನೆ ಮಾಡುತ್ತಾರೆ. ಉತ್ತಮ ನಟ ಆಗಬೇಕಿದ್ದರೆ ಸಿನಿಮಾದ ವಿವಿಧ ವಿಭಾಗಗಳ ಅರಿವು ಇರಬೇಕು ಎಂಬುದು ಅವರ ಬಲವಾದ ನಂಬಿಕೆ.

ಹೀರೋ ಆಗಬೇಕಿತ್ತು: ಎಲ್ಲರಂತೆ ಅನಿರುದ್ಧ್ ಅವರು ಕೂಡ ಹೀರೋ ಆಗಬೇಕು ಅಂತ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಆರಂಭದಿಂದಲೂ ಅವರಿಗೆ ನೆಗೆಟಿವ್ ಶೇಡ್ ಇರುವ ಪಾತ್ರಗಳೇ ಸಿಕ್ಕಿವೆ. ಆದರೆ ಮುಂದಿನ ದಿನಗಳಲ್ಲಿ ಹೀರೋ ಸೇರಿದಂತೆ ಎಲ್ಲ ಬಗೆಯ ಪಾತ್ರಗಳನ್ನು ಮಾಡಲು ಅವರು ಸಿದ್ಧವಾಗಿದ್ದಾರೆ.

ಇದನ್ನೂ ನೋಡಿ: ‘ರಕ್ಕಸಪುರದೋಳ್’ ನೋಡಲು ಬಂದ ಉಪೇಂದ್ರ

ನಟನೆ ಕಲಿತಿದ್ದು ಹೀಗೆ: ಅನಿರುದ್ಧ್ ಭಟ್ ಅವರು ಯಾವುದೇ ನಟನಾ ಶಾಲೆಗೆ ಹೋಗಿಲ್ಲ. ರಂಗಭೂಮಿಯಲ್ಲೂ ಅವರು ಕೆಲಸ ಮಾಡಿಲ್ಲ. ಕಿರುಚಿತ್ರಗಳನ್ನು ಮಾಡುತ್ತಾ, ಸಿನಿಮಾಗಳನ್ನು ನೋಡುತ್ತಲೇ ಅವರು ನಟನೆ ಕಲಿತಿದ್ದಾರೆ ಎಂಬುದು ವಿಶೇಷ.

ಅನಿರುದ್ಧ್ ಭಟ್ ವಯಸ್ಸು: 1997ರ ನವೆಂಬರ್ 30ರಂದು ಜನಿಸಿದ ಅನಿರುದ್ಧ್ ಭಟ್ ಅವರಿಗೆ ಈಗ 28 ವರ್ಷ ವಯಸ್ಸು. ಇನ್ನು 5-6 ವರ್ಷಗಳ ಕಾಲ ತಮಗೆ ಮದುವೆ ಬಗ್ಗೆ ಆಲೋಚನೆ ಇಲ್ಲ ಎಂದಿದ್ದಾರೆ. 6.1 ಅಡಿ ಎತ್ತರ ಇರುವ ಅವರ ಕಂಠ ಕೂಡ ಖಡಕ್ ಆಗಿದೆ.

6 ಭಾಷೆ ಬಲ್ಲವರು: ಅಪ್ಪಟ ಕನ್ನಡದ ಈ ಪ್ರತಿಭಾವಂತನಿಗೆ ಕನ್ನಡದ ಜೊತೆ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಕೂಡ ಗೊತ್ತಿವೆ. ಹಾಗಾಗಿ ಪರಭಾಷೆಯಿಂದ ಉತ್ತಮ ಅವಕಾಶಗಳು ಸಿಕ್ಕರೆ ನಟಿಸುವ ಹಂಬಲ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್