AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಂಗಿ ತರಂಗದಲ್ಲಿ’ ಹೀರೋ ಆಗಿ ರಕ್ಷಿತ್ ನಟಿಸಬೇಕಿತ್ತು.. ಆಮೇಲೆ ಏನಾಯ್ತು?

Rangitharanga Movie: ಕನ್ನಡ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾ ‘ರಂಗಿತರಂಗ’. ಈ ಸಿನಿಮಾ ಬಿಡುಗಡೆ ಆಗಿ 10 ವರ್ಷಗಳಾಯ್ತು. ಸಿನಿಮಾ ಅನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದರು, ಅವರ ಸಹೋದರ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದರು. ಸಾಯಿಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಅಸಲಿಗೆ ಈ ಸಿನಿಮಾನಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಬೇಕಿತ್ತಂತೆ. ಆದರೆ ನಟಿಸಲಿಲ್ಲ ಏಕೆ?

‘ರಂಗಿ ತರಂಗದಲ್ಲಿ’ ಹೀರೋ ಆಗಿ ರಕ್ಷಿತ್ ನಟಿಸಬೇಕಿತ್ತು.. ಆಮೇಲೆ ಏನಾಯ್ತು?
Rangitharanga
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 03, 2025 | 3:26 PM

Share

2015ರಲ್ಲಿ ಬಿಡುಗಡೆ ಕಂಡಿದ್ದ ‘ರಂಗಿ ತರಂಗ’ ಇಂದು (ಜುಲೈ 4) ರೀ-ರಿಲೀಸ್ ಆಗಿದೆ. ಈ ಚಿತ್ರವನ್ನು ಥಿಯೇಟರ್​ನಲ್ಲಿ ಮಿಸ್​​ ಮಾಡಿಕೊಂಡವರು ಥಿಯೇಟರ್​ನಲ್ಲಿಯೇ ನೋಡುವ ಅವಕಾವನ್ನು ಕಲ್ಪಿಸಲಾಗಿದೆ ಎಂಬುದು ವಿಶೇಷ. ‘ರಂಗಿ ತರಂಗ’ ಸಿನಿಮಾಗೆ ನಿರೂಪ್ ಭಂಡಾರಿ ಹೀರೋ ಆದರೆ, ಅವರ ಸಹೋದರ ಅನುಪ್ ಭಂಡಾರಿ ನಿರ್ದೇಶನ ಇತ್ತು. ಈ ಸಿನಿಮಾಗೆ ರಕ್ಷಿತ್ ಶೆಟ್ಟಿ ಹೀರೋ ಆಗಿ ನಟಿಸಬೇಕಿತ್ತು. ಈ ವಿಚಾರವನ್ನು ಅನುಪ್ ಹೇಳಿಕೊಂಡಿದ್ದಾರೆ.

ಅನುಪ್ ಭಂಡಾರಿ ಅವರು ನಿರ್ದೇಶನದಲ್ಲಿ ಮೊದಲ ಅನುಭವ. ಈ ಸಿನಿಮಾಗೆ ಅವರು ನಿರ್ದೇಶನ ಮತ್ತು ಸಹೋದರ ಎಂದಾಗ ಅಂಜಿಕೆ ಆಯಿತು. ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನುಪ್, ‘ಮೊದಲು ಈ ಸಿನಿಮಾಗೆ ನಿರೂಪ್ ಅವರೇ ಹೀರೋ ಆಗಿ ಆಯ್ಕೆ ಆದರು. ಆದರೆ, ನಾನು ನಿರ್ದೇಶನ ತಮ್ಮ ನಟನೆ ಎಂದಾಗ ಯಾರದರೂ ಸಿಗುತ್ತಾರಾ ಎನ್ನುವ ಪ್ರಶ್ನೆ ಮೂಡಿತು. ಆಗ ನಿರೂಪ್ ರಕ್ಷಿತ್ ಶೆಟ್ಟಿ ಬಗ್ಗೆ ಹೇಳಿದ’ ಎಂದಿದ್ದಾರೆ.

ಇದನ್ನೂ ಓದಿ:ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್ ಸಿನಿಮಾ

‘ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮಾಡಿದ್ದಾರೆ. ನಮ್ಮ ರೀತಿಯದ್ದೇ ಆಲೋಚನೆ ಅನಿಸುತ್ತದೆ ಎಂದು ರಕ್ಷಿತ್ ಬಗ್ಗೆ ನಿರೂಪ್ ಹೇಳಿದ. ಆಗ ನಾನು ಅವರನ್ನು ಸಂಪರ್ಕಿಸಿದೆ. ಆ ಸಂದರ್ಭದಲ್ಲಿ ಅವರು ಉಳಿದವರು ಕಂಡಂತೆ ಸಿನಿಮಾ ಮಾಡುತ್ತಿದ್ದರು. ಅದು ಮುಗಿದ ಬಳಿಕವೇ ಈ ಚಿತ್ರವನ್ನು ಅವರು ಮಾಡಬೇಕಿತ್ತು. ಅದಾದ ಮೇಲೂ ಭೇಟಿ ಮಾಡಿದ್ದೆ’ ಎಂದಿದ್ದಾರೆ ಅನುಪ್.

ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಈ ಸಿನಿಮಾ ಮಾಡಲಿಲ್ಲ. ‘ಕಪಾಲಿ ಥಿಯೇಟರ್​ನಲ್ಲಿ ಜನರು ಸಿನಿಮಾ ನೋಡಿ ಚೆನ್ನಾಗಿಲ್ಲ ಎಂದು ಹೇಳುತ್ತಾ ಬರುತ್ತಿದ್ದರು. ಆದರೆ, ರಕ್ಷಿತ್ ಅವರು ಸಿನಿಮಾ ನೋಡಿ ಹೊಗಳಿದ್ದರು’ ಎಂದಿದ್ದಾರೆ ಅನುಪ್. ರಕ್ಷಿತ್ ಅವರ ಜಡ್ಜ್​ಮೆಂಟ್ ಸರಿ ಆಗಿತ್ತು. ಸಿನಿಮಾ ಸೂಪರ್ ಹಿಟ್ ಆಯಿತು. ಆ ಸಂದರ್ಭದಲ್ಲಿ ರಿಲೀಸ್ ಆದ ‘ಬಾಹುಬಲಿ’ ಚಿತ್ರಕ್ಕೆ ಈ ಚಿತ್ರವು ಸ್ಪರ್ಧೆ ನೀಡಿತು ಮತ್ತು ಗೆಲುವು ಕಂಡಿತು. ಈ ಚಿತ್ರ ಜುಲೈ 4ರಂದು ಮತ್ತೆ ಥಿಯೇಟರ್​ಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Thu, 3 July 25

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ