AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಂಗಿ ತರಂಗದಲ್ಲಿ’ ಹೀರೋ ಆಗಿ ರಕ್ಷಿತ್ ನಟಿಸಬೇಕಿತ್ತು.. ಆಮೇಲೆ ಏನಾಯ್ತು?

Rangitharanga Movie: ಕನ್ನಡ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾ ‘ರಂಗಿತರಂಗ’. ಈ ಸಿನಿಮಾ ಬಿಡುಗಡೆ ಆಗಿ 10 ವರ್ಷಗಳಾಯ್ತು. ಸಿನಿಮಾ ಅನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದರು, ಅವರ ಸಹೋದರ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದರು. ಸಾಯಿಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಅಸಲಿಗೆ ಈ ಸಿನಿಮಾನಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಬೇಕಿತ್ತಂತೆ. ಆದರೆ ನಟಿಸಲಿಲ್ಲ ಏಕೆ?

‘ರಂಗಿ ತರಂಗದಲ್ಲಿ’ ಹೀರೋ ಆಗಿ ರಕ್ಷಿತ್ ನಟಿಸಬೇಕಿತ್ತು.. ಆಮೇಲೆ ಏನಾಯ್ತು?
Rangitharanga
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 03, 2025 | 3:26 PM

Share

2015ರಲ್ಲಿ ಬಿಡುಗಡೆ ಕಂಡಿದ್ದ ‘ರಂಗಿ ತರಂಗ’ ಇಂದು (ಜುಲೈ 4) ರೀ-ರಿಲೀಸ್ ಆಗಿದೆ. ಈ ಚಿತ್ರವನ್ನು ಥಿಯೇಟರ್​ನಲ್ಲಿ ಮಿಸ್​​ ಮಾಡಿಕೊಂಡವರು ಥಿಯೇಟರ್​ನಲ್ಲಿಯೇ ನೋಡುವ ಅವಕಾವನ್ನು ಕಲ್ಪಿಸಲಾಗಿದೆ ಎಂಬುದು ವಿಶೇಷ. ‘ರಂಗಿ ತರಂಗ’ ಸಿನಿಮಾಗೆ ನಿರೂಪ್ ಭಂಡಾರಿ ಹೀರೋ ಆದರೆ, ಅವರ ಸಹೋದರ ಅನುಪ್ ಭಂಡಾರಿ ನಿರ್ದೇಶನ ಇತ್ತು. ಈ ಸಿನಿಮಾಗೆ ರಕ್ಷಿತ್ ಶೆಟ್ಟಿ ಹೀರೋ ಆಗಿ ನಟಿಸಬೇಕಿತ್ತು. ಈ ವಿಚಾರವನ್ನು ಅನುಪ್ ಹೇಳಿಕೊಂಡಿದ್ದಾರೆ.

ಅನುಪ್ ಭಂಡಾರಿ ಅವರು ನಿರ್ದೇಶನದಲ್ಲಿ ಮೊದಲ ಅನುಭವ. ಈ ಸಿನಿಮಾಗೆ ಅವರು ನಿರ್ದೇಶನ ಮತ್ತು ಸಹೋದರ ಎಂದಾಗ ಅಂಜಿಕೆ ಆಯಿತು. ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನುಪ್, ‘ಮೊದಲು ಈ ಸಿನಿಮಾಗೆ ನಿರೂಪ್ ಅವರೇ ಹೀರೋ ಆಗಿ ಆಯ್ಕೆ ಆದರು. ಆದರೆ, ನಾನು ನಿರ್ದೇಶನ ತಮ್ಮ ನಟನೆ ಎಂದಾಗ ಯಾರದರೂ ಸಿಗುತ್ತಾರಾ ಎನ್ನುವ ಪ್ರಶ್ನೆ ಮೂಡಿತು. ಆಗ ನಿರೂಪ್ ರಕ್ಷಿತ್ ಶೆಟ್ಟಿ ಬಗ್ಗೆ ಹೇಳಿದ’ ಎಂದಿದ್ದಾರೆ.

ಇದನ್ನೂ ಓದಿ:ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್ ಸಿನಿಮಾ

‘ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮಾಡಿದ್ದಾರೆ. ನಮ್ಮ ರೀತಿಯದ್ದೇ ಆಲೋಚನೆ ಅನಿಸುತ್ತದೆ ಎಂದು ರಕ್ಷಿತ್ ಬಗ್ಗೆ ನಿರೂಪ್ ಹೇಳಿದ. ಆಗ ನಾನು ಅವರನ್ನು ಸಂಪರ್ಕಿಸಿದೆ. ಆ ಸಂದರ್ಭದಲ್ಲಿ ಅವರು ಉಳಿದವರು ಕಂಡಂತೆ ಸಿನಿಮಾ ಮಾಡುತ್ತಿದ್ದರು. ಅದು ಮುಗಿದ ಬಳಿಕವೇ ಈ ಚಿತ್ರವನ್ನು ಅವರು ಮಾಡಬೇಕಿತ್ತು. ಅದಾದ ಮೇಲೂ ಭೇಟಿ ಮಾಡಿದ್ದೆ’ ಎಂದಿದ್ದಾರೆ ಅನುಪ್.

ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಈ ಸಿನಿಮಾ ಮಾಡಲಿಲ್ಲ. ‘ಕಪಾಲಿ ಥಿಯೇಟರ್​ನಲ್ಲಿ ಜನರು ಸಿನಿಮಾ ನೋಡಿ ಚೆನ್ನಾಗಿಲ್ಲ ಎಂದು ಹೇಳುತ್ತಾ ಬರುತ್ತಿದ್ದರು. ಆದರೆ, ರಕ್ಷಿತ್ ಅವರು ಸಿನಿಮಾ ನೋಡಿ ಹೊಗಳಿದ್ದರು’ ಎಂದಿದ್ದಾರೆ ಅನುಪ್. ರಕ್ಷಿತ್ ಅವರ ಜಡ್ಜ್​ಮೆಂಟ್ ಸರಿ ಆಗಿತ್ತು. ಸಿನಿಮಾ ಸೂಪರ್ ಹಿಟ್ ಆಯಿತು. ಆ ಸಂದರ್ಭದಲ್ಲಿ ರಿಲೀಸ್ ಆದ ‘ಬಾಹುಬಲಿ’ ಚಿತ್ರಕ್ಕೆ ಈ ಚಿತ್ರವು ಸ್ಪರ್ಧೆ ನೀಡಿತು ಮತ್ತು ಗೆಲುವು ಕಂಡಿತು. ಈ ಚಿತ್ರ ಜುಲೈ 4ರಂದು ಮತ್ತೆ ಥಿಯೇಟರ್​ಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Thu, 3 July 25

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ