AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಗ್ಗಜ ರಾಮೋಜಿ ರಾವ್ ನಿರ್ಮಿಸಿದ್ದ ಕನ್ನಡ ಸಿನಿಮಾಗಳು ಇವು

ಆಂಧ್ರದ ದಿಗ್ಗಜ ಉದ್ಯಮಿ ರಾಮೋಜಿ ರಾವ್ ನಿನ್ನೆ (ಜೂನ್ 08) ನಿಧನ ಹೊಂದಿದ್ದಾರೆ. ರಾಮೋಜಿ ರಾವ್ ಕನ್ನಡದ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಇಲ್ಲಿದೆ ರಾಮೋಜಿ ರಾವ್ ನಿರ್ಮಿಸಿದ ಕನ್ನಡ ಸಿನಿಮಾಗಳ ಪಟ್ಟಿ.

ದಿಗ್ಗಜ ರಾಮೋಜಿ ರಾವ್ ನಿರ್ಮಿಸಿದ್ದ ಕನ್ನಡ ಸಿನಿಮಾಗಳು ಇವು
ಮಂಜುನಾಥ ಸಿ.
|

Updated on: Jun 09, 2024 | 10:59 AM

Share

ಯಶಸ್ವಿ ಸಿನಿಮಾ ನಿರ್ಮಾಪಕ, ಮಾಧ್ಯಮ ಲೋಕದ ದಿಗ್ಗಜ, ಕ್ರಿಯಾಶೀಲ ಉದ್ಯಮಿ ರಾಮೋಜಿ ರಾವ್ (Ramoji Rao) ನಿನ್ನೆ ಅಂದರೆ ಜೂನ್ 8ಕ್ಕೆ ನಿಧನ ಹೊಂದಿದ್ದಾರೆ. ತೆಲುಗು ಚಿತ್ರರಂಗದ (Tollywood) ದಿಗ್ಗಜರು ಸೇರಿದಂತೆ ಇತರೆ ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕಾರಣಿಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ರಾಮೋಜಿ ರಾವ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಆಂಧ್ರ ಕಂಡ ಅದ್ಭುತ ಉದ್ಯಮಿ ರಾಮೋಜಿ ರಾವ್. ಅವರು ಹಲವಾರು ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲದೆ, ತೆಲುಗು ಚಿತ್ರರಂಗ ಇಂದು ವಿಶ್ವಮಟ್ಟದಲ್ಲಿ ಹೆಸರು ಗಳಿಸಲು ಮೂಲ ಕಾರಣರಲ್ಲಿ ಒಬ್ಬರು ಸಹ ಆಗಿದ್ದಾರೆ ರಾಮೋಜಿ ರಾವ್. ಅಂದಹಾಗೆ ರಾಮೋಜಿ ರಾವ್ ಕೆಲವು ಕನ್ನಡ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ.

ರಾಮೋಜಿ ರಾವ್ ಅವರು 1983 ರಲ್ಲಿ ಉಷಾಕಿರಣ್ ಮೂವೀಸ್ ಹೆಸರಿನ ನಿರ್ಮಾಣ ಸಂಸ್ಥೆ ಆರಂಭ ಮಾಡಿದರು. ರಾಮೋಜಿ ರಾವ್ ನಿರ್ಮಿಸಿದ ಮೊದಲ ಸಿನಿಮಾ 1984 ರಲ್ಲಿ ಬಿಡುಗಡೆ ಆದ ‘ಶ್ರೀವಾರಿಕಿ ಪ್ರೇಮಲೇಖ’. ಅದಾದ ಬಳಿಕ ನಾಲ್ಕು ದಶಕಗಳ ಕಾಲ ರಾಮೋಜಿ ರಾವ್ ಸಿನಿಮಾ ನಿರ್ಮಾಣ ಮಾಡುತ್ತಲೇ ಬಂದರು. ಹಲವಾರು ಸೂಪರ್-ಡೂಪರ್ ಹಿಟ್ ತೆಲುಗು ಸಿನಿಮಾಗಳ ನಿರ್ಮಿಸಿದ ರಾಮೋಜಿ ರಾವ್, ಕೆಲವು ಸೂಪರ್ ಹಿಟ್ ಕನ್ನಡ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ.

ಕನ್ನಡದಲ್ಲಿ ರಾಮೋಜಿ ರಾವ್ ಅವರು ಮೊದಲಿಗೆ ನಿರ್ಮಿಸಿದ್ದು ಪ್ರಭುದೇವ ಸಹೋದರ ಪ್ರಸಾದ್ ನಾಯಕನಾಗಿ ನಟಿಸಿದ ‘ಚಿತ್ರ’ ಸಿನಿಮಾ. ಈ ಸಿನಿಮಾ ತೆಲುಗಿನ ‘ಚಿತ್ರಂ’ ರೀಮೇಕ್. ತೆಲುಗಿನಲ್ಲಿಯೂ ಸಹ ಉಷಾಕಿರಣ್ ಮೂವೀಸ್​ನಿಂದಲೇ ಈ ಸಿನಿಮಾ ನಿರ್ಮಿಸಲಾಗಿತ್ತು. ತೆಲುಗು, ಕನ್ನಡ ಎರಡರಲ್ಲೂ ಸೂಪರ್ ಹಿಟ್ ಆಯ್ತು ಈ ಸಿನಿಮಾ. ಅದಾದ ಬಳಿಕ 2002 ರಲ್ಲಿ ‘ನಿನಗಾಗಿ’ ಸಿನಿಮಾ ನಿರ್ಮಾಣ ಮಾಡಿದರು. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದರೆ, ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿ ಇಬ್ಬರೂ ಸ್ಟಾರ್​ಗಳಾದರು.

ಇದನ್ನೂ ಓದಿ:ರಾಮೋಜಿ ರಾವ್ ನಿಧನಕ್ಕೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಸಂತಾಪ

‘ನಿನಗಾಗಿ’ ಸಿನಿಮಾ ಸಹ ಅವರದ್ದೇ ನಿರ್ಮಾಣದ ತೆಲುಗು ಸಿನಿಮಾ ‘ನುವ್ವೆ ಕಾವಾಲಿ’ ರೀಮೇಕ್. ಆ ಸಿನಿಮಾದಲ್ಲಿಯೂ ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು ರಾಮೋಜಿ ರಾವ್. ಅದರ ಮುಂದಿನ ವರ್ಷವೇ ‘ಆನಂದ’ ಸಿನಿಮಾ ನಿರ್ಮಾಣ ಮಾಡಿದರು. ಇದು ತೆಲುಗಿನ ‘ಆನಂದಂ’ ಸಿನಿಮಾದ ರೀಮೇಕ್ ಆಗಿತ್ತು. ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಕನ್ನಡದಲ್ಲಿ ಉತ್ತಮವಾಗಿ ಪ್ರದರ್ಶನ ಕಾಣಲಿಲ್ಲ. ‘ಆನಂದ’ ಸಿನಿಮಾ ಆಗಿ ನಾಲ್ಕು ವರ್ಷಗಳ ಬಳಿಕ ‘ಸಿಕ್ಸರ್’ ಹೆಸರಿನ ನಿರ್ಮಾಣ ಮಾಡಿದರು. ಪ್ರಜ್ವಲ್ ದೇವರಾಜ್ ಅವರ ಮೊದಲ ಸಿನಿಮಾ ಅದಾಗಿತ್ತು. ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು. ರಾಮೋಜಿ ರಾವ್​​ ನಿರ್ಮಾಣ ಮಾಡಿದ ಏಕೈಕ ಒರಿಜಿನಲ್ ಕನ್ನಡ ಸಿನಿಮಾ ಇದಾಗಿತ್ತು.

2009 ರಲ್ಲಿ ‘ಸವಾರಿ’ ಸಿನಿಮಾ ನಿರ್ಮಾಣ ಮಾಡಿದರು. ಈ ಸಿನಿಮಾ ಸಹ ತೆಲುಗಿನ ‘ಗಮ್ಯಂ’ ಸಿನಿಮಾ ರೀಮೇಕ್ ಆಗಿತ್ತು. ‘ಸವಾರಿ’ ಬಳಿಕ ಇನ್ಯಾವುದೇ ಕನ್ನಡ ಸಿನಿಮಾವನ್ನು ರಾಮೋಜಿ ರಾವ್ ನಿರ್ಮಾಣ ಮಾಡಲಿಲ್ಲ. ಅಲ್ಲದೆ 2015 ರ ಬಳಿಕ ಯಾವುದೇ ತೆಲುಗು ಸಿನಿಮಾವನ್ನು ಸಹ ನಿರ್ಮಾಣ ಮಾಡಲಿಲ್ಲ ರಾಮೋಜಿ ರಾವ್ ಅವರು. ಪ್ರೇಕ್ಷಕರ ಅಭಿರುಚಿ ಬದಲಾಗುತ್ತಿದ್ದಂತೆ ರಾಮೋಜಿ ರಾವ್ ಅವರು ಸಿನಿಮಾ ನಿರ್ಮಾಣ ನಿಲ್ಲಿಸಿ ಬೇರೆ ಉದ್ಯಮಗಳ ಕಡೆಗೆ ಗಮನ ಹರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ