AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂದು ಬಾಲಿವುಡ್​ನವರು ಗೇಲಿ ಮಾಡುತ್ತಿದ್ದರು’; ಹಿಂದಿಯವರಿಗೆ ಸೆಡ್ಡು ಹೊಡೆದು ನಿಂತ ರವಿ ಬಸ್ರೂರು

ರವಿ ಬಸ್ರೂರು ಅವರು ‘ಉಗ್ರಮ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಈ ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯಿತು. 2014ರಲ್ಲಿ ಅವರು ‘ಗರ್ ಗರ್ ಮಂಡಲ’ ಹೆಸರಿನ ಚಿತ್ರವನ್ನೂ ನಿರ್ದೇಶನ ಮಾಡಿದರು. ಆ ಬಳಿಕ ಹಲವು ಚಿತ್ರಗಳು ಅವರನ್ನು ಹುಡುಕಿ ಬಂದವು.

‘ಅಂದು ಬಾಲಿವುಡ್​ನವರು ಗೇಲಿ ಮಾಡುತ್ತಿದ್ದರು’; ಹಿಂದಿಯವರಿಗೆ ಸೆಡ್ಡು ಹೊಡೆದು ನಿಂತ ರವಿ ಬಸ್ರೂರು
ರವಿ-ಪ್ರಶಾಂತ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 01, 2024 | 6:25 AM

ಸಂಗೀತ ಸಂಯೋಜಕ ರವಿ ಬಸ್ರೂರು (Ravi Basrur) ಅವರು ಮಾಡಿದ ಹೆಸರು ತುಂಬಾನೇ ದೊಡ್ಡದು. ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ‘ಕೆಜಿಎಫ್’ ಚಿತ್ರಕ್ಕೆ ಅವರು ಕೊಟ್ಟ ಸಂಗೀತ ಬೇರೆಯದೇ ರೀತಿ ಇತ್ತು. ‘ಕೆಜಿಎಫ್ 2’ ಚಿತ್ರದಿಂದ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿ ಆದರು. ಸದ್ಯ ಅವರ ಕೈಯಲ್ಲಿ 8-10 ಸಿನಿಮಾಗಳಿವೆ. ಈ ಪೈಕಿ ‘ಮಾರ್ಟಿನ್’ ರೀತಿಯ ದೊಡ್ಡ ಬಜೆಟ್ ಚಿತ್ರ ಕೂಡ ಇದೆ. ತೆಲುಗು ಸಿನಿಮಾಗಳಿವೆ. ರವಿ ಬಸ್ರೂರು ಅವರನ್ನು ಹಿಂದಿ ಮಂದಿ ಈ ಮೊದಲು ಟೀಕಿಸುತ್ತಿದ್ದರಂತೆ. ಈಗ ಹಿಂದಿಯವರಿಗೆ ರವಿ ಬಸ್ರೂರ್ ನೀಡುತ್ತಿದ್ದ ರೀತಿಯ ಸಂಗೀತವೇ ಬೇಕಿದೆ. ಈ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಮಾತನಾಡಿದ್ದರು.

ರವಿ ಬಸ್ರೂರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011ರಲ್ಲಿ. ಆಗ ಅವರು ಆಲ್ಬಂ ಸಾಂಗ್ ಮಾಡಿದರು. ಅವರು ಗಾಯಕನಾಗಿ, ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡರು. 2014ರಲ್ಲಿ ಅವರು ‘ಉಗ್ರಮ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಈ ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯಿತು. 2014ರಲ್ಲಿ ಅವರು ‘ಗರ್ ಗರ್ ಮಂಡಲ’ ಹೆಸರಿನ ಚಿತ್ರವನ್ನೂ ನಿರ್ದೇಶನ ಮಾಡಿದರು. ಆ ಬಳಿಕ ಹಲವು ಚಿತ್ರಗಳು ಅವರನ್ನು ಹುಡುಕಿ ಬಂದವು.

‘ಕೆಜಿಎಫ್ 2’ ಚಿತ್ರದಿಂದ ರವಿ ಅವರ ಖ್ಯಾತಿ ಹೆಚ್ಚಾಯಿತು. ಈ ಚಿತ್ರ ರಿಲೀಸ್ ಆಗುವ ಮೊದಲೇ ಹಿಂದಿಯಿಂದ ಅವರಿಗೆ ಆಫರ್​ಗಳು ಬಂದಿದ್ದವು. 2021ರಲ್ಲಿ ಸಲ್ಮಾನ್ ಖಾನ್ ಅವರ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದರು. ಅಜಯ್ ದೇವಗನ್ ನಟನೆಯ ‘ಭೋಲಾ’ ಚಿತ್ರಕ್ಕೂ ರವಿ ಸಂಗೀತ ನಿಡಿದ್ದಾರೆ. ಈ ಮೊದಲು ಅವರನ್ನು ಟೀಕಿಸುತ್ತಿದ್ದವರೇ ಈಗ ಹೊಗಳುತ್ತಿದ್ದಾರೆ.

‘ಮುಂಬೈಗೆ ಹೋದಾಗ ನನ್ನನ್ನು ಗೇಲಿ ಮಾಡುತ್ತಿದ್ದರು. ನಿಮ್ಮದು ಜಂಗ್​ ಚಕರೆ ಚಕರೆ ಮ್ಯೂಸಿಕ್ ಎಂದು ಟೀಕಿಸುತ್ತಿದ್ದರು. ಈಗ ಅವರಿಗೆ ಇದೇ ಬೇಕಿದೆ. ನಮ್ಮಲ್ಲಿ ಒಂದು ಶಕ್ತಿ, ವೈಬ್ ಇದೆ. ಆ ಕಾಲಾಕ್ಕೆ ಒಂದು ಸೆಲೆಬ್ರೇಷನ್ ಎಂಬುದು ಬಂದಾಗ ಅದನ್ನು ಬಳಸುತ್ತಿದ್ದರು. ನಮ್ಮ ರಕ್ತದಲ್ಲಿ ಅದು ಬಂದಿದೆ. ಈ ಮ್ಯೂಸಿಕ್ ಬೇರೆ ವೈಬ್ ಕೊಡುತ್ತಿದೆ ಎಂಬುದು ಅವರಿಗೆ ಗೊತ್ತಾಗಿದೆ’ ಎಂದು ರವಿ ಬಸ್ರೂರು ಅವರು ಹೇಳಿದ್ದರು.

ಇದನ್ನೂ ಓದಿ: ಚಿತ್ರರಂಗಕ್ಕೆ ಎಂಟ್ರಿ ಪಡೆದ ರವಿ ಬಸ್ರೂರು ಪುತ್ರ ಪವನ್; ‘ಕ್ಲಿಕ್​’ ಸಿನಿಮಾದ ವಿಶೇಷತೆ ಏನು?

ಸದ್ಯ ರವಿ ಬಸ್ರೂರು ಅವರು ‘ಮಾರ್ಟಿನ್’, ‘ಕಾಲಿಯನ್’, ‘ಅಹೋ ವಿಕ್ರಮಾರ್ಕ’, ‘ಮ್ಯಾಕ್ರೋ’ ಮೊದಲಾದ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ಅವರು ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್