AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂದು ಬಾಲಿವುಡ್​ನವರು ಗೇಲಿ ಮಾಡುತ್ತಿದ್ದರು’; ಹಿಂದಿಯವರಿಗೆ ಸೆಡ್ಡು ಹೊಡೆದು ನಿಂತ ರವಿ ಬಸ್ರೂರು

ರವಿ ಬಸ್ರೂರು ಅವರು ‘ಉಗ್ರಮ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಈ ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯಿತು. 2014ರಲ್ಲಿ ಅವರು ‘ಗರ್ ಗರ್ ಮಂಡಲ’ ಹೆಸರಿನ ಚಿತ್ರವನ್ನೂ ನಿರ್ದೇಶನ ಮಾಡಿದರು. ಆ ಬಳಿಕ ಹಲವು ಚಿತ್ರಗಳು ಅವರನ್ನು ಹುಡುಕಿ ಬಂದವು.

‘ಅಂದು ಬಾಲಿವುಡ್​ನವರು ಗೇಲಿ ಮಾಡುತ್ತಿದ್ದರು’; ಹಿಂದಿಯವರಿಗೆ ಸೆಡ್ಡು ಹೊಡೆದು ನಿಂತ ರವಿ ಬಸ್ರೂರು
ರವಿ-ಪ್ರಶಾಂತ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 01, 2024 | 6:25 AM

Share

ಸಂಗೀತ ಸಂಯೋಜಕ ರವಿ ಬಸ್ರೂರು (Ravi Basrur) ಅವರು ಮಾಡಿದ ಹೆಸರು ತುಂಬಾನೇ ದೊಡ್ಡದು. ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ‘ಕೆಜಿಎಫ್’ ಚಿತ್ರಕ್ಕೆ ಅವರು ಕೊಟ್ಟ ಸಂಗೀತ ಬೇರೆಯದೇ ರೀತಿ ಇತ್ತು. ‘ಕೆಜಿಎಫ್ 2’ ಚಿತ್ರದಿಂದ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿ ಆದರು. ಸದ್ಯ ಅವರ ಕೈಯಲ್ಲಿ 8-10 ಸಿನಿಮಾಗಳಿವೆ. ಈ ಪೈಕಿ ‘ಮಾರ್ಟಿನ್’ ರೀತಿಯ ದೊಡ್ಡ ಬಜೆಟ್ ಚಿತ್ರ ಕೂಡ ಇದೆ. ತೆಲುಗು ಸಿನಿಮಾಗಳಿವೆ. ರವಿ ಬಸ್ರೂರು ಅವರನ್ನು ಹಿಂದಿ ಮಂದಿ ಈ ಮೊದಲು ಟೀಕಿಸುತ್ತಿದ್ದರಂತೆ. ಈಗ ಹಿಂದಿಯವರಿಗೆ ರವಿ ಬಸ್ರೂರ್ ನೀಡುತ್ತಿದ್ದ ರೀತಿಯ ಸಂಗೀತವೇ ಬೇಕಿದೆ. ಈ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಮಾತನಾಡಿದ್ದರು.

ರವಿ ಬಸ್ರೂರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011ರಲ್ಲಿ. ಆಗ ಅವರು ಆಲ್ಬಂ ಸಾಂಗ್ ಮಾಡಿದರು. ಅವರು ಗಾಯಕನಾಗಿ, ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡರು. 2014ರಲ್ಲಿ ಅವರು ‘ಉಗ್ರಮ್’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ಈ ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯಿತು. 2014ರಲ್ಲಿ ಅವರು ‘ಗರ್ ಗರ್ ಮಂಡಲ’ ಹೆಸರಿನ ಚಿತ್ರವನ್ನೂ ನಿರ್ದೇಶನ ಮಾಡಿದರು. ಆ ಬಳಿಕ ಹಲವು ಚಿತ್ರಗಳು ಅವರನ್ನು ಹುಡುಕಿ ಬಂದವು.

‘ಕೆಜಿಎಫ್ 2’ ಚಿತ್ರದಿಂದ ರವಿ ಅವರ ಖ್ಯಾತಿ ಹೆಚ್ಚಾಯಿತು. ಈ ಚಿತ್ರ ರಿಲೀಸ್ ಆಗುವ ಮೊದಲೇ ಹಿಂದಿಯಿಂದ ಅವರಿಗೆ ಆಫರ್​ಗಳು ಬಂದಿದ್ದವು. 2021ರಲ್ಲಿ ಸಲ್ಮಾನ್ ಖಾನ್ ಅವರ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದರು. ಅಜಯ್ ದೇವಗನ್ ನಟನೆಯ ‘ಭೋಲಾ’ ಚಿತ್ರಕ್ಕೂ ರವಿ ಸಂಗೀತ ನಿಡಿದ್ದಾರೆ. ಈ ಮೊದಲು ಅವರನ್ನು ಟೀಕಿಸುತ್ತಿದ್ದವರೇ ಈಗ ಹೊಗಳುತ್ತಿದ್ದಾರೆ.

‘ಮುಂಬೈಗೆ ಹೋದಾಗ ನನ್ನನ್ನು ಗೇಲಿ ಮಾಡುತ್ತಿದ್ದರು. ನಿಮ್ಮದು ಜಂಗ್​ ಚಕರೆ ಚಕರೆ ಮ್ಯೂಸಿಕ್ ಎಂದು ಟೀಕಿಸುತ್ತಿದ್ದರು. ಈಗ ಅವರಿಗೆ ಇದೇ ಬೇಕಿದೆ. ನಮ್ಮಲ್ಲಿ ಒಂದು ಶಕ್ತಿ, ವೈಬ್ ಇದೆ. ಆ ಕಾಲಾಕ್ಕೆ ಒಂದು ಸೆಲೆಬ್ರೇಷನ್ ಎಂಬುದು ಬಂದಾಗ ಅದನ್ನು ಬಳಸುತ್ತಿದ್ದರು. ನಮ್ಮ ರಕ್ತದಲ್ಲಿ ಅದು ಬಂದಿದೆ. ಈ ಮ್ಯೂಸಿಕ್ ಬೇರೆ ವೈಬ್ ಕೊಡುತ್ತಿದೆ ಎಂಬುದು ಅವರಿಗೆ ಗೊತ್ತಾಗಿದೆ’ ಎಂದು ರವಿ ಬಸ್ರೂರು ಅವರು ಹೇಳಿದ್ದರು.

ಇದನ್ನೂ ಓದಿ: ಚಿತ್ರರಂಗಕ್ಕೆ ಎಂಟ್ರಿ ಪಡೆದ ರವಿ ಬಸ್ರೂರು ಪುತ್ರ ಪವನ್; ‘ಕ್ಲಿಕ್​’ ಸಿನಿಮಾದ ವಿಶೇಷತೆ ಏನು?

ಸದ್ಯ ರವಿ ಬಸ್ರೂರು ಅವರು ‘ಮಾರ್ಟಿನ್’, ‘ಕಾಲಿಯನ್’, ‘ಅಹೋ ವಿಕ್ರಮಾರ್ಕ’, ‘ಮ್ಯಾಕ್ರೋ’ ಮೊದಲಾದ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ಅವರು ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್