AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಪರಿಚಯಿಸಿದ ಮತ್ತೊಬ್ಬ ದರ್ಶನ್ ಯಾರು? ಶೂಟಿಂಗ್ ಸಮಯದ ತಮಾಷೆ ನೆನಪಿಸಿಕೊಂಡ ಡಿ ಬಾಸ್!

Roberrt Success Meet: ನಾನೂ ದರ್ಶನ್, ಇವರೂ ದರ್ಶನ್ ಎಂದು ದರ್ಶನ್ ಹೆಸರಿನ ಇಬ್ಬರು ಸಿನಿಮಾ ಸೆಟ್​ನಲ್ಲಿ ಇದ್ದ ಕ್ಷಣಗಳನ್ನು, ಅಲ್ಲಿ ಘಟಿಸಿದ ಹಾಸ್ಯ ಪ್ರಸಂಗಗಳನ್ನು ನೆನಪಿಸಿಕೊಂಡಿದ್ದಾರೆ.

ದರ್ಶನ್ ಪರಿಚಯಿಸಿದ ಮತ್ತೊಬ್ಬ ದರ್ಶನ್ ಯಾರು? ಶೂಟಿಂಗ್ ಸಮಯದ ತಮಾಷೆ ನೆನಪಿಸಿಕೊಂಡ ಡಿ ಬಾಸ್!
ದರ್ಶನ್​ ರಾಬರ್ಟ್​ ಸಿನಿಮಾ ಪೋಸ್ಟರ್​
TV9 Web
| Updated By: ganapathi bhat|

Updated on:Apr 06, 2022 | 7:03 PM

Share

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ನಡೆಯುತ್ತಿದೆ. ನಟ ದರ್ಶನ್, ನಟಿ ಆಶಾ ಭಟ್, ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಗೌಡ ಮತ್ತಿತರರು ಚಿತ್ರದ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ. ಇಡೀ ಚಿತ್ರತಂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಇಡೀ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವೇದಿಕೆಯಲ್ಲಿ ಮಾತು ಆರಂಭಿಸಿದ ದರ್ಶನ್ ಎಲ್ಲರಿಗೂ ಧನ್ಯವಾದ ಹೇಳಿದ ಬಳಿಕ, ವಿಶೇಷವಾಗಿ ಮೂವರನ್ನು ವೇದಿಕೆ ಮೇಲೆ ಕರೆದು ಎಲ್ಲರಿಗೂ ಪರಿಚಯಿಸಿದರು. ಈ ಮೂವರು ಇಡೀ ಚಿತ್ರ ತಯಾರಿಯ ಆರಂಭದ ದಿನಗಳಿಂದ ಇಂದಿನವರೆಗೂ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದರು. ಇವರಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಲೇಬೇಕು ಎಂದಿದ್ದಾರೆ. ಚಿರಾಗ್ ಮತ್ತು ದರ್ಶನ್ ಎಂಬವರನ್ನು ವೇದಿಕೆಗೆ ಕರೆದು ಮಾತನಾಡಿದರು.

ನಾನೂ ದರ್ಶನ್, ಇವರೂ ದರ್ಶನ್ ಎಂದು ದರ್ಶನ್ ಹೆಸರಿನ ಇಬ್ಬರು ಸಿನಿಮಾ ಸೆಟ್​ನಲ್ಲಿ ಇದ್ದ ಕ್ಷಣಗಳನ್ನು, ಅಲ್ಲಿ ಘಟಿಸಿದ ಹಾಸ್ಯ ಪ್ರಸಂಗಗಳನ್ನು ನೆನಪಿಸಿಕೊಂಡಿದ್ದಾರೆ. ನಾನು ದರ್ಶನ್, ಇವನ ಹೆಸರು ಏನು ಎಂದು ಕೇಳಿದರೆ ಅವನೂ ದರ್ಶನ್. ಸಾಲದ್ದಕ್ಕೆ, ನನ್ನ ಹೆಸರಿನ ಇನಿಶಿಯಲ್ ಎಸ್. ಇವನ ಹೆಸರೂ ಎಸ್. ದರ್ಶನ್. ಪಾಸ್​ಪೋರ್ಟ್ ತರಿಸಿ ನೋಡಿದಾಗ ಅಲ್ಲೂ ಹಾಗೇ ಇದೆ. ಇಬ್ಬರ ಹೆಸರೂ ಒಂದೇ ಎಂದು ತಮಾಷೆಯಾಗಿ ಮಾತನಾಡಿದ್ದಾರೆ.

ಯಾರಾದ್ರೂ ಇವನಿಗೆ ‘ಏ ದರ್ಶನ್ ಬಾರೋ’ ಎಂದು ಬೈದರೆ ಅದು ನನಗೋ ಅವನಿಗೋ ಎಂಬಂತೆ ತಮಾಷೆ ಘಟಿಸುತ್ತಿತ್ತು. ಜೋರಾಗಿ ಕೂಗಿ ಬೈದವರು ಆಮೇಲೆ, ಸರ್ ನಿಮಗಲ್ಲ ಸರ್, ಈ ದರ್ಶನ್​ಗೆ ಎಂದು ಹೇಳುತ್ತಿದ್ದರು ಎಂದು ಡಿ ಬಾಸ್ ತಮ್ಮ ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಈ ಸಿನಿಮಾ ನನ್ನದೊಬ್ಬನದ್ದೇ ಅಲ್ಲ. ಇಲ್ಲಿ ಇಡೀ ಸಿನಿಮಾ ತಂಡದ ಪರಿಶ್ರಮ ಇದೆ. ಎಲ್ಲರೂ ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಿರ್ಮಾಪಕ ಉಮಾಪತಿ ಗೌಡ, ನಿರ್ದೇಶಕರ ತರುಣ್ ಸುಧೀರ್, ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ, ಸಂಗೀತ ನಿರ್ದೇಶಕ ಹರಿಕೃಷ್ಣಅ ವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Roberrt Review: ಹೇಗಿದೆ ಗೊತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ? ಹಿಟ್ R ಪ್ಲಾಪ್?

ಇದನ್ನೂ ಓದಿ: Roberrt Collection: 59.8 ಕೋಟಿ ರೂ. ಬಾಚಿಕೊಂಡ ‘ರಾಬರ್ಟ್​’! ಇಲ್ಲಿದೆ 4 ದಿನದ ಬಾಕ್ಸ್​ ಆಫೀಸ್​ ರಿಪೋರ್ಟ್​

Published On - 9:38 pm, Tue, 16 March 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ