AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿಎಫ್​-2 ಟೀಸರ್​ ಲೀಕ್​ ಮಾಡಿದ ಮಹಾನುಭಾವರಿಗೆ ದೇವರು ಒಳ್ಳೇದು ಮಾಡಲಿ- ಯಶ್​

ಮೆಷಿನ್​ ಗನ್​ನಲ್ಲಿ ಬುಲೆಟ್​ ಹಾರಿಸೋದು, ಕಾದ ಗನ್ನಿನ ನಳಿಕೆ ಮೂಲಕ ರಾಕಿ ಭಾಯ್​ ಸಿಗರೇಟ್​ ಹಚ್ಚಿಕೊಳ್ಳೋ ದೃಶ್ಯಗಳು ಕಣ್ಣಿಗೆ ಸಾಕಷ್ಟು ಮುದ ನೀಡಿದೆ. ಇನ್ನು, ರವೀನಾ ಟಂಡನ್​ ರಾಜಕಾರಣಿ ಲುಕ್​ನಲ್ಲಿ ಮಿಂಚಿದ್ದಾರೆ.

ಕೆಜಿಎಫ್​-2 ಟೀಸರ್​ ಲೀಕ್​ ಮಾಡಿದ ಮಹಾನುಭಾವರಿಗೆ ದೇವರು ಒಳ್ಳೇದು ಮಾಡಲಿ- ಯಶ್​
ರಾಜೇಶ್ ದುಗ್ಗುಮನೆ
| Edited By: |

Updated on:Jan 13, 2021 | 9:54 AM

Share

ಯಶ್​ ಅಭಿನಯದ ಕೆಜಿಎಫ್​-2 ಸಿನಿಮಾ ಟೀಸರ್ ಅಂದುಕೊಂಡಿದ್ದಕ್ಕಿಂತಲೂ ಒಂದು ದಿನ ಮೊದಲೇ ರಿಲೀಸ್​ ಆಗಿದೆ. ರಾಕಿ ಭಾಯ್​ ಭರ್ಜರಿ ಎಂಟ್ರಿ ಕೊಟ್ಟಿದ್ದು, ಚಿತ್ರದ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.

ಕೆಜಿಎಫ್​-1 ಚಿತ್ರದಲ್ಲಿ ‘ಪವರ್​ಫುಲ್​ ಪೀಪಲ್​ ಕೇಮ್​ ಫ್ರಮ್​ ಪವರ್​ಫುಲ್​ ಪ್ಲೇಸಸ್​’ ಎನ್ನುವ ಡೈಲಾಗ್​ ಬಳಕೆ ಮಾಡಲಾಗಿತ್ತು. ಈ ಬಾರಿ ‘ಪವರ್​ಫುಲ್​ ಪೀಪಲ್​ ಮೇಕ್​ ಪ್ಲೇಸಸ್​ ಪವರ್​ಫುಲ್​’ ಎನ್ನುವ ಡೈಲಾಗ್​ ಬಳಸಲಾಗಿದ್ದು, ಸಖತ್​ ಥ್ರಿಲ್​ ನೀಡಿದೆ. ಅಲ್ಲದೆ, ಸಿನಿಮಾದಲ್ಲಿ ಸಂಜಯ್​ ದತ್​ ಹಾಗೂ ಯಶ್​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೆಷಿನ್​ ಗನ್​ನಲ್ಲಿ ಬುಲೆಟ್​ ಹಾರಿಸೋದು, ಕಾದ ಗನ್ನಿನ ನಳಿಕೆ ಮೂಲಕ ರಾಕಿ ಭಾಯ್​ ಸಿಗರೇಟ್​ ಹಚ್ಚಿಕೊಳ್ಳೋ ದೃಶ್ಯಗಳು ಕಣ್ಣಿಗೆ ಸಾಕಷ್ಟು ಮುದ ನೀಡಿದೆ. ಇನ್ನು, ರವೀನಾ ಟಂಡನ್​ ರಾಜಕಾರಣಿ ಲುಕ್​ನಲ್ಲಿ ಮಿಂಚಿದ್ದಾರೆ.

ಇನ್ನು, ಚಿತ್ರದ ಟೀಸರ್​ ಲೀಕ್​ ಆದ ಬಗ್ಗೆ ಯಶ್​ ಉತ್ತರ ನೀಡಿದ್ದಾರೆ. ಯಾರೋ ಪುಣ್ಯಾತ್ಮರು, ಮಹಾನುಭಾವರು ಟೀಸರ್​ ಲೀಕ್​ ಮಾಡಿದ್ದಾರೆ. ಅವರಿಗೆ ಇದರಿಂದ ಏನು ಖುಷಿ ಸಿಗತ್ತೋ ಗೊತ್ತಿಲ್ಲ.  ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ. ಅಭಿಮಾನಿಗಳಿಗೋಸ್ಕರ ರಾತ್ರಿಯೇ ರಿಲೀಸ್​ ಮಾಡಿದ್ದೇವೆ, ಎಂದಿದ್ದಾರೆ ಯಶ್.

Published On - 9:58 pm, Thu, 7 January 21

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?