AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanchari Vijay: ಸಂಚಾರಿ ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಚಿತ್ರದ ತೆರೆ ಹಿಂದಿನ ಇಂಟರೆಸ್ಟಿಂಗ್​ ಕಥೆ

Sanchari Vijay Death: ಯಾವುದೇ ಪುರುಷ ನಟರಿಂದ ಈ ಪಾತ್ರ ಮಾಡಿಸಬಾರದು. ಯಾರಾದರೂ ನಿಜವಾದ ಮಂಗಳಮುಖಿಯೇ ನಟಿಸಬೇಕು ಎಂದು ವಿದ್ಯಾ ಅವರು ಷರತ್ತು ಹಾಕಿದ್ದರು. ಹಾಗಾದರೆ ಸಂಚಾರಿ ವಿಜಯ್​ ಆಯ್ಕೆ ಆಗಿದ್ದು ಹೇಗೆ?

Sanchari Vijay: ಸಂಚಾರಿ ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಚಿತ್ರದ ತೆರೆ ಹಿಂದಿನ ಇಂಟರೆಸ್ಟಿಂಗ್​ ಕಥೆ
ಸಂಚಾರಿ ವಿಜಯ್​, ನಾನು ಅವನಲ್ಲ ಅವಳು ಸಿನಿಮಾದ ಪಾತ್ರ
ಮದನ್​ ಕುಮಾರ್​
|

Updated on: Jun 15, 2021 | 9:58 AM

Share

ನಟ ಸಂಚಾರಿ ವಿಜಯ್​ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಸಿನಿಮಾ ‘ನಾನು ಅವನಲ್ಲ ಅವಳು’. ಆ ಚಿತ್ರಕ್ಕೆ ಬಿ.ಎಸ್​. ಲಿಂಗದೇವರು ನಿರ್ದೇಶನ ಮಾಡಿದ್ದರು. ಮಂಗಳಮುಖಿ ಪಾತ್ರದಲ್ಲಿ ಸಂಚಾರಿ ವಿಜಯ್​ ಅವರ ನಟನೆ ಅದ್ಭುತವಾಗಿತ್ತು. ಅದಕ್ಕಾಗಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿ ಸಿಕ್ಕಿತು. ಫಿಲ್ಮ್​ ಫೇರ್​ ಪ್ರಶಸ್ತಿ ಕೂಡ ಒಲಿದುಬಂತು. ಮೊದಲು ಹುಡುಗನಾಗಿದ್ದು, ನಂತರ ಲಿಂಗ ಪರಿವರ್ತನೆಗೆ ಒಳಗಾಗುವ ಓರ್ವ ಮಂಗಳಮುಖಿಯ ಪಾತ್ರ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಆ ಘಟನೆಗಳನ್ನು ನಿರ್ದೇಶಕ ಲಿಂಗದೇವರು ನೆನಪಿಸಿಕೊಂಡಿದ್ದಾರೆ.

ಮಂಗಳಮುಖಿ ವಿದ್ಯಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿತ್ತು. ಯಾವುದೇ ಪುರುಷ ನಟರಿಂದ ಈ ಪಾತ್ರ ಮಾಡಿಸಬಾರದು. ಯಾರಾದರೂ ಒಬ್ಬರು ನಿಜವಾದ ಮಂಗಳಮುಖಿಯೇ ನಟಿಸಬೇಕು ಎಂದು ವಿದ್ಯಾ ಅವರು ಷರತ್ತು ಹಾಕಿದ್ದರು. ಹಾಗಾಗಿ ಕೆಲವು ಮಂಗಳಮುಖಿಯರಿಗೆ ಆಡಿಷನ್​ ಕೂಡ ಮಾಡಲಾಗಿತ್ತು. ಆದರೆ ಎರಡು ಶೇಡ್​ನ ಆ ಪಾತ್ರದಲ್ಲಿ ಮಾದೇಶ ಎಂಬ ಶೇಡ್​ ನಿಭಾಯಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಆಗ ವಿದ್ಯಾ ಅವರಿಂದ ಒಪ್ಪಿಗೆ ಪಡೆದು, ಮಂಗಳಮುಖಿ ಬದಲು ಬೇರೆ ನಟನನ್ನು ಆಯ್ಕೆ ಮಾಡುವ ಕೆಲಸ ಶುರುವಾಯಿತು. ಹಾಗೆ ಆಯ್ಕೆ ಆದವರೇ ಸಂಚಾರಿ ವಿಜಯ್​.

‘ಒಗ್ಗರಣೆ’ ಸಿನಿಮಾದಲ್ಲಿ ಸಂಚಾರಿ ವಿಜಯ್​ ಮಾಡಿದ ಒಂದು ದೃಶ್ಯವನ್ನು ನೋಡಿ ಲಿಂಗದೇವರು ಇಂಪ್ರೆಸ್​ ಆದರು. ವಿಜಯ್​ ಅವರನ್ನು ಕರೆದು ಮಾತನಾಡಿಸಿದಾಗ ಅವರಿಗೆ ಸಂಚಾರಿ ನಾಟಕ ತಂಡದಲ್ಲಿ ಕೆಲಸ ಮಾಡಿದ ಅನುಭವ ಇದೆ ಎಂಬುದು ತಿಳಿಯಿತು. ಆರಂಭದಲ್ಲಿಯೇ ಸಂಚಾರಿ ವಿಜಯ್​ ಈ ಪಾತ್ರ ಮಾಡಲು ಒಪ್ಪಿಕೊಳ್ಳಲಿಲ್ಲ. ಎಲ್ಲಿ ತಮ್ಮನ್ನು ಇದೇ ರೀತಿಯ ಪಾತ್ರಕ್ಕೆ ಬ್ರ್ಯಾಂಡ್​ ಮಾಡಿ ಬಿಡುತ್ತಾರೋ ಎಂಬ ಆತಂಕ ಅವರಿಗೆ ಇತ್ತು. ನಂತರ ನಿರ್ದೇಶಕರು ಅವರ ಮನವೊಲಿಸಿದರು. ಚಿತ್ರೀಕರಣ ಶುರು ಆದ ಬಳಿಕ ನಮ್ಮೆಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ಭಾವ ಇಡೀ ಚಿತ್ರತಂಡಕ್ಕೆ ಮೂಡಿತ್ತು.

ಚಿತ್ರದಲ್ಲಿ ಸಂಚಾರಿ ವಿಜಯ್​ ಅವರ ನಟನೆ ನೋಡಿದ ಎಲ್ಲರೂ ಫಿದಾ ಆಗಿದ್ದರು. ಅವರಿಗೆ ಖಂಡಿತ ಪ್ರಶಸ್ತಿ ಬರುತ್ತದೆ ಎಂದು ಅನೇಕರು ಭಾವಿಸಿದ್ದರು. ಅದು ನಿಜವಾಯಿತು ಕೂಡ. ರಾಷ್ಟ್ರ ಪ್ರಶಸ್ತಿ ಬಂದ ಬಳಿಕ ಸಂಚಾರಿ ವಿಜಯ್​ ಅವರ ಜನಪ್ರಿಯತೆ ದಿಢೀರ್​ ಹೆಚ್ಚಾಯಿತು. ನಟ ಪ್ರಕಾಶ್​ ರೈ ಅವರು ತಮ್ಮ ಸಿನಿಮಾ ಕೆಲಸಗಳಿಗೆ ಬಿಡುವು ಮಾಡಿಕೊಂಡು ಬಂದು ವಿಜಯ್​ಗೆ ಸನ್ಮಾನ ಮಾಡಿದರು. ಆ ಬಳಿಕ ಸಾಲು ಸಾಲು ಪ್ರಶಸ್ತಿ ಮತ್ತು ಅವಕಾಶಗಳು ಹರಿದುಬಂದರೂ ಕೂಡ ವಿಜಯ್​ ಅವರು ತಮ್ಮ ವಿನಯವಂತಿಕೆ ಮರೆತಿರಲಿಲ್ಲ.

ಇದನ್ನೂ ಓದಿ:

Sanchari Vijay Death: ಕಣ್ಣೀರು ಹಾಕುತ್ತ ನಟ ಸಂಚಾರಿ ವಿಜಯ್ ಬಗ್ಗೆ ಏನು ಹೇಳುತ್ತಿದೆ ಇಡೀ ಸ್ಯಾಂಡಲ್​ವುಡ್​?

Sanchari Vijay Death: ‘ಕನ್ನಡಿಗರು ಸಂಚಾರಿ ವಿಜಯ್​ ಅವರನ್ನು ಕಡೆಗಣಿಸಿದರು’; ನೋವಿನಿಂದ ಮಾತನಾಡಿದ್ದ ದರ್ಶನ್​

ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್