AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜನಾ ಗಲ್ರಾನಿ ಬೆನ್ನಿನ ಮೇಲೆ ಪತಿಯ ಟ್ಯಾಟೂ; 15 ವರ್ಷಗಳ ನಂತರ ಬಹಿರಂಗ ಮಾಡಿದ ನಟಿ

ನಾನು ಟ್ಯಾಟೂವನ್ನು ಅನಾವರಣ ಮಾಡುತ್ತಿದ್ದೇನೆ. ಇದು ಹೆಚ್ಚು ವೈಯಕ್ತಿಕ ಮತ್ತು ಹೃದಯಕ್ಕೆ ಹತ್ತಿರವಾದುದ್ದು. ಇದು ನನ್ನ ಜೀವನದ ಪ್ರೀತಿಯ ಟ್ಯಾಟೂ ಎಂದು ಸಂಜನಾ ಪೋಸ್ಟ್ ಆರಂಭಿಸಿದ್ದಾರೆ.

ಸಂಜನಾ ಗಲ್ರಾನಿ ಬೆನ್ನಿನ ಮೇಲೆ ಪತಿಯ ಟ್ಯಾಟೂ; 15 ವರ್ಷಗಳ ನಂತರ ಬಹಿರಂಗ ಮಾಡಿದ ನಟಿ
ಸಂಜನಾ ಗಲ್ರಾನಿ
TV9 Web
| Edited By: |

Updated on:Jul 08, 2021 | 9:43 PM

Share

ನಟಿ ಸಂಜನಾ ಗಲ್ರಾನಿ ವೈದ್ಯ ಆಜೀಜ್​ ಅವರನ್ನು ವಿವಾಹವಾಗಿದ್ದಾರೆ. ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಈಗ ಬೆನ್ನಿನ ಭಾಗದಲ್ಲಿ ಅವರು  ಹಾಕಿಸಿಕೊಂಡ ಹಚ್ಚೆಯ ಫೋಟೋವನ್ನು ಸಂಜನಾ ಅನಾವರಣ ಮಾಡಿದ್ದಾರೆ. ಅಲ್ಲದೆ, ಈ ವಿಶೇಷ ಟ್ಯಾಟೂ ಎಷ್ಟು ಮುಖ್ಯ ಅನ್ನೋದನ್ನು ಸಂಜನಾ ಬರೆದುಕೊಂಡಿದ್ದಾರೆ. 

‘ನಾನು ಈ ಟ್ಯಾಟೂವನ್ನು ಅನಾವರಣ ಮಾಡುತ್ತಿದ್ದೇನೆ. ಇದು ಹೆಚ್ಚು ವೈಯಕ್ತಿಕ ಮತ್ತು ಹೃದಯಕ್ಕೆ ಹತ್ತಿರವಾದುದ್ದು. ಇದು ನನ್ನ ಜೀವನದ ಪ್ರೀತಿಯ ಟ್ಯಾಟೂ. ಅನಗತ್ಯ ಗಾಸಿಪ್​ನಿಂದ ದೂರವಿರೋಕೆ ನಾನು ಇಷ್ಟು ವರ್ಷಗಳ ಕಾಲ ಇದನ್ನು ಮುಚ್ಚಿಟ್ಟಿದ್ದೆ. ನಾವು ಈಗ ಅಧಿಕೃತವಾಗಿ ಮದುವೆ ಆಗಿದ್ದೇವೆ. ಹೀಗಾಗಿ ಇದನ್ನು ತೋರಿಸುತ್ತಿದ್ದೇನೆ’ ಎಂದು ಸಂಜನಾ ಪತ್ರ ಆರಂಭಿಸಿದ್ದಾರೆ.

‘ನಟನೆ ವೃತ್ತಿ ಆಯ್ಕೆ ಮಾಡಿಕೊಂಡ ಮಹಿಳೆಯರು ಅನೇಕ ಅನಗತ್ಯ ಆರೋಪಗಳನ್ನು ಎದುರಿಸಬೇಕಾಗುತ್ತದೆ. ನನ್ನ ರಾಖಿ ಬ್ರದರ್​​ಅನ್ನು ಸಹ ನನ್ನ ಶುಗರ್ ಡ್ಯಾಡಿ ಬಾಯ್‌ಫ್ರೆಂಡ್ ಎಂದು ಕರೆದಿದ್ದನ್ನು ನೋಡಿದ್ದೇನೆ. ಓರ್ವ ನಟಿಯೊಡನೆ ಸಾರ್ವಜನಿಕವಾಗಿ ಕಾಣುವ ಓರ್ವ ಸಹೋದರನೂ ಸಾರ್ವಜನಿಕರ ಕಣ್ಣಲ್ಲಿ ಗೆಳೆಯರಾಗುತ್ತಾನೆ. ಇದು ಮಾನಸಿಕವಾಗಿ ತೊಂದರೆ ಕೊಡುವುದೇ ಅಲ್ಲವೇ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಎಲ್ಲಾ ಬೆಳವಣಿಗೆ, ಆರೋಪ ಹಾಗೂ ನೆಗೆಟಿವಿಟಿ ಮಧ್ಯೆ ನಿಜವಾದ ಪ್ರೀತಿ ತನ್ನ ದಾರಿಯನ್ನು ಕಂಡುಕೊಂಡಿದೆ. ನಿಜವಾದ ಪ್ರೀತಿ ಮಾತ್ರ ಯಾವಾಗಲೂ ಇರುತ್ತದೆ. ಲವ್​ ಯು ಆಜೀಜ್​. ನಿಜವಾದ ಗೆಳೆಯ, ಲವರ್​, ಗಂಡ ಮತ್ತು ತಂದೆ ರೀತಿಯ ಮೆಂಟರ್​ ಆಗಿ ನನ್ನ ಜೀವನದಲ್ಲಿ ಇರುವುದಕ್ಕೆ ಧನ್ಯವಾದ’ ಎಂದಿದ್ದಾರೆ ಸಂಜನಾ.

ಇದನ್ನೂ ಓದಿ: Sanjana Galrani : ಬೆಂಗಳೂರಿನಲ್ಲಿ ಸಂಕಷ್ಟದಲ್ಲಿರೋ ಜನ್ರ ಸಹಾಯಕ್ಕೆ ಮುಂದಾಗ್ತಿರೋ ನಟಿ ಸಂಜನಾ ಗರ್ಲಾನಿ

Sanjjanaa Galrani: ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ; ಡ್ರಗ್​ ಕೇಸ್​ನಲ್ಲಿ ಹೊರಬಂದ ನಟಿ ಮೇಲೆ ಮತ್ತೊಂದು ಎಫ್​ಐಆರ್​

Published On - 9:34 pm, Thu, 8 July 21

Follow Us
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ