AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನ ಸೀರೆ ಧರಿಸಿ ಬಂದ ಸುಧಾರಾಣಿ; ಇದರಲ್ಲಿವೆ ಎಂದೂ ಮಾಸದ ನೆನಪುಗಳು

ಹಿರಿಯ ನಟಿ ಸುಧಾರಾಣಿ ಅವರು ತಾಯಿಯ ಸೀರೆಯನ್ನು ಧರಿಸಿದ್ದಾರೆ. ಆ ಸೀರೆಯ ಜೊತೆ ಇರುವ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ವಿಚಾರವನ್ನು ಬರೆದುಕೊಂಡಿದ್ದಾರೆ. ಅಮ್ಮನ ನೆನಪಿನಲ್ಲಿ ಅವರು ಈ ಭಾವುಕವಾದ ಪೋಸ್ಟ್ ಮಾಡಿದ್ದಾರೆ. ಎಲ್ಲರಿಗೂ ತಾಯಿಯ ನೆನಪನ್ನು ತರಿಸುವಂತಿದೆ ಸುಧಾರಾಣಿ ಅವರ ಈ ಬರಹ..

ಅಮ್ಮನ ಸೀರೆ ಧರಿಸಿ ಬಂದ ಸುಧಾರಾಣಿ; ಇದರಲ್ಲಿವೆ ಎಂದೂ ಮಾಸದ ನೆನಪುಗಳು
Sudharani
ಮದನ್​ ಕುಮಾರ್​
|

Updated on: Feb 11, 2025 | 8:21 PM

Share

ಮೊನ್ನೆ ಜೀ ಟಿವಿಯ ಸರಿಗಮಪ ಕಾರ್ಯಕ್ರಮಕ್ಕೆ ಹೋಗೋದಕ್ಕೆ ಯಾವ ಸೀರೆ ಉಟ್ಕೊಳ್ಳೋದು ಅಂತ ಹುಡುಕ್ತಾ ಇದ್ದಾಗ ಕಬೋರ್ಡ್​ನಲ್ಲಿ ಅಮ್ಮನ ಈ ಸೀರೆ ಕಣ್ಣಿಗೆ ಬಿತ್ತು. ಈ ಸೀರೆ ನೋಡಿದ ತಕ್ಷಣ ನೆನಪಿನ ಹೂಗುಚ್ಛ ನನ್ನ ಕಣ್ಮುಂದೆ ಬರೋದಕ್ಕೆ ಶುರುವಾಯ್ತು. ತುಂಬಾ ವರ್ಷಗಳ ಹಿಂದೆ ಅಮ್ಮನ ಜೊತೆ ಸೀರೆ ಶಾಪಿಂಗ್​ಗೆ ಅಂತ ಹೋಗಿದ್ದಿರಬಹುದು. ಆಗ ಅಕುಲ್ ಬಾಲಾಜಿ ಅವರ ತಂದೆಯ ಅಂಗಡಿಯಲ್ಲಿ ಈ ಸೀರೆ ತಗೊಂಡಿದ್ದಿರಬಹುದು. ಅಮ್ಮ ಈ ಸೀರೆನ ತುಂಬಾ ಇಷ್ಟಪಟ್ಟು ಈ ಕಾಂಬಿನೇಷನ್​ ಚೆನ್ನಾಗಿದೆ ಅಂತ ಮೊದಲು ಈ ಸೀರೆನ ಆಯ್ಕೆ ಮಾಡಿಟ್ಕೊಂಡಿದ್ದರಬಹುದು. ಇದು ಅವಳ ಫೇವರಿಟ್ ಸೀರೆ ಆಗಿದ್ರಿಂದ ಸುಮಾರು ಬೇರೆ ಬೇರೆ ಸಂದರ್ಭಗಳಲ್ಲಿ ಈ ಸೀರೆ ಉಟ್ಟಿದ್ದಿರಬಹುದು.

ಹೀಗೆ ಎಲ್ಲಾ ನೆನೆಪುಗಳು ಮರುಕಳಿಸ್ತು. ಆಗಲೇ ನಿರ್ಧಾರ ಮಾಡಿದೆ ಕಾರ್ಯಕ್ರಮಕ್ಕೆ ಈ ಸೀರೆನೇ ಉಡೋದು ಅಂತ. ಆ ಲೈಟ್​ಗಳ ಮಧ್ಯ, ಅಲ್ಲಿರೋ ವೈಭವದ ಮಧ್ಯ ಈ ಸೀರೆ ಸಿಂಪಲ್ ಆಗಿ ಕಾಣಬಹುದು ಅನ್ನೋ ಒಂದು ಯೋಚನೆ ಕೂಡ ಮನಸ್ಸಿಗೆ ಬಂತು. ಆದ್ರು ಪರ್ವಾಗಿಲ್ಲ ಈ ಸೀರೆನೇ ಉಡಬೇಕು ಅಂತ ನಿರ್ಧಾರ ಮಾಡ್ಬಿಟ್ಟೆ. ಯಾಕಂದ್ರೆ.. ಗೊತ್ತಿಲ್ಲ.

ಅಮ್ಮ ಕಡೇ ಬಾರಿ ಈ ಸೀರೆ ಉಟ್ಟು ಹಾಗೆ ಇಟ್ಬಿಟ್ಟಿದ್ಲು ಅನ್ಸತ್ತೆ. ಈ ಸೀರೆ ಉಟ್ಟಾಗ ಅವಳು ಬಳಸುತ್ತಾ ಇದ್ದಂಥ ಟಾಲ್ಕಮ್ ಪೌಡರ್, ಅವಳ ಪರ್ಫ್ಯೂಮ್ ಅದೆಲ್ಲ ಇದ್ದು ಇಲ್ಲದ ಹಾಗೆ, ಆ ಸುವಾಸನೆ ಅಮ್ಮನ ಸೀರೆಯಲ್ಲಿ ಇನ್ನೂ ಇತ್ತು. ಈ ಸೀರೆ ನೋಡಿದರೆ ಗೊತ್ತಾಗತ್ತೆ, ಬಹಳಷ್ಟು ಸಾರಿ ಅವಳು ಈ ಸೀರೆ ಉಟ್ಟಿದ್ದರೂ ರೇಷ್ಮೆಯಲ್ಲಿ ಒಂದು ಮೃದುತನ ಇದೆ. ಅದರ ಜೊತೆಗೆ ಅಷ್ಟು ಸಾರಿ ಉಪಯೋಗಿಸಿದ್ರೂ ರೇಷ್ಮೆಯಲ್ಲಿರೋ ಆ ಗಟ್ಟಿತನ ಕೂಡ ಮಾಸಿಲ್ಲ. ಇದೆಲ್ಲವೂ ಸೀರೆಯ ಗುಣವಲ್ಲ, ಅವಳ ಗುಣವನ್ನ ಸೀರೆಯ ಮೂಲಕ ತೋರಿಸ್ತಾ ಇದೆ ಅನ್ನೋ ಹಾಗಿದೆ. ಅವಳಲ್ಲಿದ್ದ ಆ ಮೃದುತನ, ಗಟ್ಟಿತನ ಸೀರೆಯ ಮೂಲಕ ಎದ್ದು ಕಾಣ್ತಿರೋ ಹಾಗಿತ್ತು.

ಸೀರೆ ಮೇಲೆ ಅಷ್ಟೊಂದು ಲೈಟ್ಸ್ ಬಿದ್ದಾಗ ಆ ರೇಷ್ಮೆಯ ಮೇಲೊಂದು ಕಾಂತಿ, ತೇಜಸ್ಸು ಇತ್ತು. ಇದೆಲ್ಲ ಅಮ್ಮನ ಕಾಂತಿ, ಅವಳ ಮುಖದ ತೇಜಸ್ಸು ಹೊಳಪನ್ನ ತೋರಿಸ್ತಿತ್ತು. ಅವಳು ಜೀವನದಲ್ಲಿ ನೋಡಿದಂಥ ಏಳುಬೀಳುಗಳು, ಸುಖ ದುಃಖಗಳು, ನೋವು ನಲಿವುಗಳು ಎಲ್ಲವೂ ಈ ಸೀರೆಯಲ್ಲಿ ಕಾಣ್ತಿತ್ತು. ಅದೇ ರೀತಿ, ಅದೆಲ್ಲವನ್ನೂ ಮೀರಿ, ಕಷ್ಟಗಳನ್ನು ಗೆದ್ದು, ಅವಳು ಧೈರ್ಯವಾಗಿ ನಡೆದುಬಂದ ಪ್ರಯಾಣದ ಹಾದಿ ಕಾಣಿಸ್ತಾ ಇತ್ತು. ‘ಇದನ್ನೆಲ್ಲ ನೀನು ಜಯಿಸಿದ್ದೀಯಾ, ನಿನಗೆ ದೃಷ್ಟಿ ಬೀಳದೇ ಇರಲಿ’ ಅಂತ ಈ ಸೃಷ್ಟಿ ಅಮ್ಮನಿಗೆ ಹೇಳ್ತಿರೋ ಸಂಕೇತವೇ ಈ ಸೀರೆಯಲ್ಲಿರೋ ಕಪ್ಪು ಬಣ್ಣದ ಸೆರಗು, ಕಪ್ಪು ಅಂಚು ಅನ್ನಿಸ್ತಾ ಇತ್ತು.

ಇದನ್ನೂ ಓದಿ: ಶಿವಣ್ಣಗೆ ಪ್ರೀತಿಯ ಅಪ್ಪುಗೆ ಕೊಟ್ಟ ಸುಧಾರಾಣಿ; ಸಾವು ಗೆದ್ದು ಬಂದಿದ್ದಕ್ಕೆ ಭವ್ಯ ಸ್ವಾಗತ

ಈ ಸೀರೆ ಉಟ್ಟಾಗ ಅವಳೇ ನನ್ನನ್ನ ಅಪ್ಪಿಹಿಡಿದು ಮಡಿಲಲ್ಲಿ ಕೂರಿಸಿಕೊಂಡು ಅವಳ ಬದುಕಿನ ಅನುಭವದ ಪಾಠವನ್ನ ನನಗೆ ಕಲಿಸುತ್ತಿರೋ ಹಾಗೆ ಭಾಸವಾಯ್ತು. ಇಂಥದ್ದೊಂದು ವಿಶೇಷವಾದ ಸೀರೆ ಉಟ್ಟಾಗ ನನಗೆ ಅನ್ನಿಸಿದ್ದು ಒಂದೇ. ಅಮ್ಮನ ಪ್ರೀತಿಯ ಮುಂದೆ, ಆ ಭಾವನೆಗಳ ಮುಂದೆ ಬೇರೆ ಯಾವುದೇ ಹೊಸ ಡಿಸೈನರ್ ಸೀರೆ ಆಗ್ಲಿ, ಬ್ರ್ಯಾಂಡೆಡ್ ಬಟ್ಟೆ ಆಗ್ಲಿ ಸರಿಸಮವಲ್ಲ. ಅಮ್ಮನ ಅಪ್ಪುಗೆಯ ಅನುಭವ ಕೊಡೋ ಸೀರೆ ಎದುರು ಇನ್ಯಾವುದು ನಿಲ್ಲೋದಿಲ್ಲ, ಬೆಲೆ ಬಾಳೋದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?