ಫೆಬ್ರವರಿಯ ಈ ವಿಶೇಷ ದಿನದಂದು ರೆಡ್ ಕಾರ್ಪೆಟ್ ಸ್ಟುಡಿಯೋ ರೀ ಲಾಂಚ್ ಮಾಡಲಿದ್ದಾರೆ ಪವಿತ್ರಾ ಗೌಡ
ಪವಿತ್ರಾ ಗೌಡ ರವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ನಂತರ ಜೈಲುವಾಸ ಅನುಭವಿಸಿದ್ದಾರೆ. ಈಗ 'ರೆಡ್ ಕಾರ್ಪೆಟ್ ಸ್ಟುಡಿಯೋ'ವನ್ನು ಫೆಬ್ರವರಿ 14 ರಂದು ರೀ ಲಾಂಚ್ ಮಾಡುತ್ತಿದ್ದಾರೆ. ಕೆಂಪು ಥೀಮ್ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಸಾಕಷ್ಟು ತೊಂದರೆ ಅನುಭವಿಸಿ ಬಂದಿದ್ದಾರೆ ಪವಿತ್ರಾಗೌಡ. ಅವರು ಬರೋಬ್ಬರಿ 6 ತಿಂಗಳು ಜೈಲಿನಲ್ಲಿ ಇರಬೇಕಾಗಿ ಬಂದಿತ್ತು. ಈಗ ಎಲ್ಲವನ್ನೂ ಮರೆತು ಅವರು ಮುಂದೆ ಬಂದಿದ್ದಾರೆ. ಮತ್ತೆ ಸಾಮಾನ್ಯ ಜೀವನ ನಡೆಸೋ ತವಕದಲ್ಲಿ ಅವರಿದ್ದಾರೆ. ಈಗ ಅವರು ‘ರೆಡ್ ಕಾರ್ಪೆಟ್ ಸ್ಟುಡಿಯೋ’ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಫೆಬ್ರವರಿಯ ವಿಶೇಷ ದಿನದಂದು ಇದನ್ನು ರೀ ಲಾಂಚ್ ಮಾಡಲು ಪ್ಲ್ಯಾನ್ ನಡೆದಿದೆ.
ಪವಿತ್ರಾ ಗೌಡ ಅವರು ಈ ಮೊದಲೇ ‘ರೆಡ್ ಕಾರ್ಪೆಟ್’ ಸ್ಟುಡಿಯೋನ ಹೊಂದಿದ್ದರು. ಆದರೆ, ಕಾರಣಾಂತರಗಳಿಂದ ಇದು ಸರಿಯಾಗಿ ಕಾರ್ಯ ನಿರ್ವಹಿಸಿರಲಿಲ್ಲ. ಪವಿತ್ರಾ ಜೈಲಿನಲ್ಲಿ ಇದ್ದಾಗ ಇದನ್ನು ಸರಿಯಾಗಿ ನೋಡಿಕೊಳ್ಳುವವರು ಇರಲಿಲ್ಲ ಎನ್ನಲಾಗಿದೆ. ಈಗ ಫೆಬ್ರವರಿ 14ರಂದು ಇದನ್ನು ಅವರು ರೀಲಾಂಚ್ ಮಾಡುತ್ತಿದ್ದಾರೆ.
ಕೆಂಪು ಥೀಮ್
ಫೆಬ್ರವರಿ 14 ಎಂದರೆ ಪ್ರೇಮಿಗಳ ದಿನ. ಈ ವಿಶೇಷ ದಿನವೇ ಈ ಸ್ಟುಡಿಯೋ ರೀ ಲಾಂಚ್ ಮಾಡಲಿದ್ದಾರೆ. ರೆಡ್ ಥೀಮ್ನಲ್ಲಿ ‘ರೆಡ್ ಕಾರ್ಪೆಟ್ ಸ್ಟುಡಿಯೋ’ ರೀ ಲಾಂಚ್ ಮಾಡಲಾಗುತ್ತಿದೆ ಅನ್ನೋದು ವಿಶೇಷ. ಈಗಾಗಲೇ ಇದರ ಪ್ರಮೋಷನ್ ಭರ್ಜರಿಯಾಗಿ ಸಾಗಿದೆ.
ಫೆಬ್ರವರಿ 16 ಅಂದುಕೊಂಡಿದ್ರು!
ದರ್ಶನ್ ಹಾಗೂ ಪವಿತ್ರಾ ಮಧ್ಯೆ ಒಳ್ಳೆಯ ಆಪ್ತತೆ ಇತ್ತು. ಈಗ ಇಬ್ಬರ ನಡುವೆ ಯಾವ ರೀತಿಯ ಒಡನಾಟ ಇದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟನೆ ಇಲ್ಲ. ಫೆಬ್ರವರಿ 16ರಂದು ದರ್ಶನ್ ಜನ್ಮದಿನ. ಆ ದಿನವೇ ಸ್ಟುಡಿಯೋ ರೀ ಲಾಂಚ್ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅವರ ಜನ್ಮದಿನಕ್ಕೂ ಎರಡು ದಿನ ಮೊದಲು ಈ ಸ್ಟುಡಿಯೋ ಲಾಂಚ್ ಆಗುತ್ತಿದೆ.
ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬಕ್ಕೆ ಬರಲಿದೆ ‘ಡೆವಿಲ್’ ಟೀಸರ್; ಸಿಹಿ ಸುದ್ದಿ ನೀಡಿದ ದಾಸ
ಸೆಲೆಬ್ರಿಟಿಗಳು
ಈಗಾಗಲೇ ಅನೇಕ ಸೆಲೆಬ್ರಿಟಿಗಳು ಹಾಗೂ ಸೆಲೆಬ್ರಿಟಿಗಳ ಮಕ್ಕಳ ಮೂಲಕ ‘ರೆಡ್ ಕಾರ್ಪೆಟ್ ಸ್ಟುಡಿಯೋ’ನ ಪ್ರಚಾರ ಮಾಡುವ ಕೆಲಸವನ್ನು ಪವಿತ್ರಾ ಮಾಡುತ್ತಿದ್ದಾರೆ. ರೀ ಲಾಂಚ್ ದಿನ ಯಾರೆಲ್ಲಾ ಆಗಮಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.