AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivarajkumar: ‘ಶಕ್ತಿಧಾಮ ಬಗ್ಗೆ ನೀವು ಮಿಸ್ಟೇಕ್​ ಮಾಡ್ಕೊಂಡಿದ್ದೀರಿ, ಪುನೀತ್​ ಮಾಡಿದ ಸಹಾಯ ಬೇರೆ’: ಶಿವಣ್ಣ ಸ್ಪಷ್ಟನೆ

Shakthidhama: ‘ಮೊದಲಿನಿಂದಲೂ ಶಕ್ತಿಧಾಮದ ಜವಾಬ್ದಾರಿ ಇತ್ತು. ಈ ಕುರಿತಂತೆ ನೀವು ಮಿಸ್ಟೇಕ್​ ಮಾಡಿಕೊಂಡಿದ್ದೀರಿ’ ಎನ್ನುವ ಮೂಲಕ ಶಿವರಾಜ್​ಕುಮಾರ್​ ಅವರು ಕೆಲವು ಸ್ಪಷ್ಟನೆ ನೀಡಿದ್ದಾರೆ.

ಮದನ್​ ಕುಮಾರ್​
|

Updated on:May 01, 2023 | 6:23 PM

Share

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಗೀತಾ ಶಿವರಾಜ್​ಕುಮಾರ್​ ಅವರು ಕಾಂಗ್ರೆಸ್​ ಸೇರ್ಪಡೆ ಆದ ಬಳಿಕ ನಟ ಶಿವರಾಜ್​ಕುಮಾರ್​ (Shivarajkumar) ಅವರು ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ನಡೆಸಿದ ಅವರಿಗೆ ಶಕ್ತಿಧಾಮ ಬಗ್ಗೆ ಪ್ರಶ್ನೆ ಎದುರಾಯಿತು. ‘ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ನಿಧನದ ನಂತರ ಶಕ್ತಿಧಾಮದ ಜವಾಬ್ದಾರಿ ನಿಮ್ಮ ಮೇಲೆ ಜಾಸ್ತಿ ಆಗಿದೆಯೇ’ ಎಂದು ಕೇಳಿದ ಪ್ರಶ್ನೆಗೆ ಶಿವಣ್ಣ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಒಂದು ಸ್ಪಷ್ಟನೆ ನೀಡಿದ್ದಾರೆ. ‘ಮೊದಲಿನಿಂದಲೂ ಶಕ್ತಿಧಾಮದ ಜವಾಬ್ದಾರಿ ಇತ್ತು. ಈ ಕುರಿತಂತೆ ನೀವು ಮಿಸ್ಟೇಕ್​ ಮಾಡಿಕೊಂಡಿದ್ದೀರಿ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ. ಅಲ್ಲದೇ, ಶಕ್ತಿಧಾಮದ (Shakthidhama) ಹಿಂದಿನ ವಿವರಗಳನ್ನು ಅವರು ತಿಳಿಸಿದ್ದಾರೆ.

‘ಶಕ್ತಿಧಾಮ ಶುರುವಾಗಿದ್ದು 1998ರಲ್ಲಿ. ಆಗ ಅಮ್ಮ ಶುರು ಮಾಡಿದ್ದು ಇದು. ಅಂದಿನಿಂದ ಇಂದಿನ ತನಕ ಸಾಕಷ್ಟು ಜನ ಟ್ರಸ್ಟಿಗಳು ಆಗಿದ್ದಾರೆ. ಅಮ್ಮ ಪ್ರೆಸಿಡೆಂಟ್​ ಆಗಿದ್ದರು. ಕೆಂಪಯ್ಯ, ಸುಮನಾ, ಜಯದೇವ್​, ಕೋಮಲಮ್ಮ ಮುಂತಾದವರು ಇದ್ದಾರೆ. ದೊರೆ ಭಗವಾನ್​ ಕೂಡ ಇದ್ದರು. ಇವರೆಲ್ಲರೂ ನೋಡಿಕೊಳ್ಳುತ್ತಿದ್ದರು. ನಾನೇ ಹೋಗುತ್ತಿರಲಿಲ್ಲ. ಅಮ್ಮ ಯಾವಾಗಲೂ ಬಯ್ಯುತ್ತಿದ್ದರು. ಒಮ್ಮೆ ಹೋಗಿ ಬಾ ಅಂತ ಹೇಳುತ್ತಿದ್ದರು. ಕಷ್ಟದಲ್ಲಿ ಇರುವವರನ್ನು ನೋಡೋಕೆ ಆಗಲ್ಲ. ಬೇಕಿದ್ದರೆ ದುಡ್ಡು ಕೊಡುತ್ತೇನೆ ಅಂತ ನಾನು ಹೇಳುತ್ತಿದ್ದೆ. ಆಗ ನಾವೆಲ್ಲ ಯುವಕರು. ಶೂಟಿಂಗ್​ನಲ್ಲಿ ಬ್ಯುಸಿ ಇರುತ್ತಿದ್ದೆವು’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ: Vishal: ‘ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯಲು ಸಿದ್ಧನಿದ್ದೇನೆ, ಆದರೆ..’: ವಾಸ್ತವ ಸ್ಥಿತಿ ವಿವರಿಸಿದ ನಟ ವಿಶಾಲ್​

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

‘ಇದೆಲ್ಲ ಆವಾಗಿನಿಂದಲೇ ನಡೆಯುತ್ತಿದೆ. ಪುನೀತ್​ ಮಾಡುತ್ತಿದ್ದದ್ದು ಬೇರೆ. ಅವರು ಬೇರೆ ಶಾಲೆಗಳಿಗೆ ಸಹಾಯ ಮಾಡುತ್ತಿದ್ದರು. ಅಮ್ಮ ಮತ್ತು ಇತರೆ ಟ್ರಸ್ಟಿಗಳು ಶಕ್ತಿಧಾಮ ನೋಡಿಕೊಳ್ಳುತ್ತಿದ್ದರು. ಅಮ್ಮ ಹೋದ್ಮೇಲೆ 2016-17ರಲ್ಲಿ ಗೀತಾ ಅವರು ಪ್ರೆಸಿಡೆಂಟ್​ ಆಗಿ ಬೇರೆ ಥರ ಡೆವೆಲಪ್​ಮೆಂಟ್​ ಆಯಿತು. ಅಲ್ಲಿ ಶಾಲೆ ಕಟ್ಟಬೇಕು ಎಂಬ ಕನಸು ಕೆಂಪಯ್ಯ ಅವರದ್ದು. ನಮ್ಮದೇ ಆದಂತಹ ಶಾಲೆ ಇರಬೇಕು ಅಂತ ನಿರ್ಧಾರ ಮಾಡಿದ್ದು ಅವರು’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಶಕ್ತಿಧಾಮದ ಮಕ್ಕಳಿಗೆ ಲಾಲ್​ಬಾಗ್ ತೋರಿಸಿದ ಶಿವಣ್ಣ

ಶಿವಣ್ಣ ರಾಜಕೀಯಕ್ಕೆ ಬರಲ್ಲ:

ಸಿನಿಮಾ ಕಲಾವಿದರು ರಾಜಕೀಯಕ್ಕೆ ಬರುವುದು ಕಾಮನ್​. ಆದರೆ ಶಿವರಾಜ್​ಕುಮಾರ್​ ಅವರು ರಾಜಕೀಯಕ್ಕೆ ಎಂಟ್ರಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ‘ಯಾರಾದರೂ ಕಷ್ಟ ಅಂತ ಬಂದು ಸಹಾಯ ಕೇಳಿದರೆ ದುಡ್ಡು ಕೊಡುತ್ತೇನೆ. ಆದರೆ ರಾಜಕೀಯಕ್ಕೆ ಬರಲ್ಲ. ನನ್ನ ಕೈಯಲ್ಲಿ ಆಗುವಷ್ಟು ಸಹಾಯ ಮಾಡ್ತೀನಿ. ಮಾರ್ನಿಂಗ್​ ವಾಕ್​ ಮಾಡುವಾಗ ಬಂದು ಸಹಾಯ ಕೇಳ್ತಾರೆ. ಕೆಲವರಿಗೆ 5 ಸಾವಿರ, ತುಂಬ ಕಷ್ಟ ಇದ್ದರೆ 10 ಸಾವಿರ ರೂಪಾಯಿ ಕೊಡುತ್ತೇನೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:45 pm, Mon, 1 May 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?