ಸಿಂಧೂರ ಆಪರೇಷನ್ಗೆ ಕಿಚ್ಚನ ಮೆಚ್ಚುಗೆ; ‘ನ್ಯಾಯ ಸಿಕ್ಕಿದೆ’ ಎಂದ ಸುದೀಪ್
ಮೇ 7ರಂದು ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರಕ್ಕೆ ನಟ ಕಿಚ್ಚ ಸುದೀಪ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಸೇನೆಯ ಕ್ರಮವನ್ನು ಅವರು ಮೆಚ್ಚಿಕೊಂಡಿದ್ದಾರೆ. ಭಾರತದ ಧೈರ್ಯ ಮತ್ತು ಸೇನೆಯ ಶೌರ್ಯವನ್ನು ಅವರು ತಮ್ಮ ಟ್ವೀಟ್ನಲ್ಲಿ ಪ್ರಶಂಸಿಸಿದ್ದಾರೆ.

ಇಂದು (ಮೇ 7) ಪ್ರತಿಯೊಬ್ಬರ ಭಾರತೀಯನ ಪಾಲಿಗೆ ವಿಶೇಷ ದಿನವಾಗಿತ್ತು. ಏಕೆಂದರೆ, ಪಹಲ್ಗಾಮ್ ದಾಳಿಗೆ (Pahalgam Attack) ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರರ ಅಡಗು ತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸೇನೆಯ ಕ್ರಮದ ಬಗ್ಗೆ ಅವರು ಶ್ಲಾಘನೆ ಹೊರಹಾಕಿದ್ದಾರೆ. ಈ ಮೊದಲು ‘ಪಹಲ್ಗಾಮ್’ ದಾಳಿ ಆದಾಗ ಸುದೀಪ್ ಸಂತಾಪ ಸೂಚಿಸಿದ್ದರು.
ಸಿಂಧೂರ ಆಪರೇಷನ್ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ‘ಓರ್ವ ಭಾರತೀಯನಾಗಿ, ಈ ಪವಿತ್ರ ಭೂಮಿಯ ಮಗನಾಗಿ ಹಲ್ಗಾಮ್ನಲ್ಲಿ ನಡೆದ ಘಟನೆ ನನಗೆ ನೋವನ್ನು ತಂದಿತ್ತು. ಇಂದು ನನಗೆ ನ್ಯಾಯ ಸಿಕ್ಕಂತೆ ಅನಿಸುತ್ತಿದೆ. ಆಪರೇಷನ್ ಸಿಂಧೂರ: ಕೇವಲ ಒಂದು ಧ್ಯೇಯವಲ್ಲ, ಬದಲಾಗಿ ಒಂದು ಪವಿತ್ರ ಪ್ರತಿಜ್ಞೆ’ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ: ಸೆಟ್ಟೇರಿತು ಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷ’; BRB ಫಸ್ಟ್ ಲುಕ್ ರಿವೀಲ್
‘ಭಾರತದ ಸಿಂಧೂರ ಮತ್ತೆ ನಮಗೆ ಸಿಕ್ಕಿದೆ. ನಮ್ಮ ಧೈರ್ಯಶಾಲಿಗಳು (ಯೋಧರು) ಸಿಂಧೂರದ ಗೌರವವನ್ನು ಬೆಂಕಿ ಮತ್ತು ನಿಖರತೆಯೊಂದಿಗೆ ಮತ್ತೆ ತಂದಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ಅನಂತ ವಂದನೆಗಳು. ದೃಢವಾಗಿ ಮತ್ತು ನಿರ್ಭೀತವಾಗಿ ನಿಂತ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದ. ಭಾರತ ಮರೆಯುವುದಿಲ್ಲ, ಭಾರತ ಕ್ಷಮಿಸುವುದಿಲ್ಲ’ ಎಂದು ಸುದೀಪ್ ಹೇಳಿದ್ದಾರೆ.
As an Indian… as a son of this sacred soil, I felt the tremor of pain in Pahalgam. Today, I feel the thunder of justice. Operation Sindoor: not just a mission, but a sacred vow. The sindoor of Bharat was stained… our bravehearts restored its honor with fire and precision. To… pic.twitter.com/QzYruEjHFc
— Kichcha Sudeepa (@KicchaSudeep) May 7, 2025
ಪಹಲ್ಗಾಮ್ನಲ್ಲಿ ಮುಗ್ಧರ ಮೇಲೆ ನಡೆದ ದಾಳಿಯನ್ನು ನೋಡಿ ಸುದೀಪ್ ಮರುಗಿದ್ದರು. ‘ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ಬದಲಾಗಿ ನಮ್ಮ ರಾಷ್ಟ್ರದ ಚೈತನ್ಯದ ಮೇಲಿನ ದಾಳಿ’ ಎಂದಿದ್ದ ಸುದೀಪ್, ಇದಕ್ಕೆ ಪ್ರತೀಕಾರ ಬೇಕು ಎಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:39 pm, Wed, 7 May 25