AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಒಂದು ಘಟನೆಯಿಂದ ಅಂಬಿಗೆ ಅಣ್ಣಾವ್ರ ಮೇಲಿನ ಗೌರವ ಹೆಚ್ಚಿತ್ತು

ರಾಜ್​ಕುಮಾರ್ ಮತ್ತು ಅಂಬರೀಷ್ ಅವರ ಮಧ್ಯೆ ನಿಕಟ ಸ್ನೇಹ ಇತ್ತು. ರಾಜ್​ಕುಮಾರ್ ಅವರು ಕಲಾವಿದರ ಮೇಲಿನ ಗೌರವವನ್ನು ನೆನಪಿಸಿಕೊಂಡಿದ್ದರು. "ಒಡ ಹುಟ್ಟಿದವರು" ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು ಎಂಬುದು ವಿಶೇಷ.ರಾಜ್ಕುಮಾರ್ ನಿಧನ ಹೊಂದಿದ ಬಳಿಕ ಅಂಬರೀಷ್ ಅವರು ಸಾಕಷ್ಟು ಬೇಸರ ಮಾಡಿಕೊಂಡಿದ್ದರು.

ಆ ಒಂದು ಘಟನೆಯಿಂದ ಅಂಬಿಗೆ ಅಣ್ಣಾವ್ರ ಮೇಲಿನ ಗೌರವ ಹೆಚ್ಚಿತ್ತು
ರಾಜ್​ಕುಮಾರ್-ಅಂಬಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:May 07, 2025 | 7:50 AM

Share

ರಾಜ್​ಕುಮಾರ್ (Rajkumar) ಹಾಗೂ ಅಂಬರೀಷ್ ಮಧ್ಯೆ ಒಳ್ಳೆಯ ಒಡನಾಟ ಇದ್ದೇ ಇತ್ತು. ಇದು ಅನೇಕರಿಗೆ ತಿಳಿದಿದೆ. ಇವರು ಒಟ್ಟಾಗಿ ಸಿನಿಮಾ ಕೂಡ ಮಾಡಿದ್ದರು. ರಾಜ್​ಕುಮಾರ್ ಬಗ್ಗೆ ಅಂಬರೀಷ್ ಅವರು ಅನೇಕ ಬಾರಿ ಹೇಳಿಕೊಂಡಿದ್ದು ಇದೆ. ಈಗ ಅವರು ಹೇಳಿದ ಹಳೆಯ ಘಟನೆ ಒಂದನ್ನು ನೆನಪಿಸಿಕೊಳ್ಳೋಣ. ಅಂಬರೀಷ್​ ಇನ್ನೂ ಸ್ಟಾರ್ ನಟ ಆಗಿರಲಿಲ್ಲ. ಆದಾಗ್ಯೂ ರಾಜ್​ಕುಮಾರ್ ಅವರೇ ಬಂದು ಅಂಬರೀಷ್ ಅವರನ್ನು ಮಾತನಾಡಿಸಿದ್ದರು. ಇದು ರಾಜ್​ಕುಮಾರ್ ಅವರ ದೊಡ್ಡ ಗುಣ ಎಂದು ಅಂಬರೀಷ್ ಅವರು ಹಾಡಿ ಹೊಗಳಿದ್ದರು.

‘ನನ್ನ ಹೆಸರು ಚಿತ್ರರಂಗದಲ್ಲಿ ಗೊತ್ತಿರಲಿಲ್ಲ. ರಾಜ್​ಕುಮಾರ್ ಅವರ ಸಿನಿಮಾಗಳನ್ನು ಮೊದಲ ದಿನದಿಂದಲೂ ನೋಡುತ್ತಿದ್ದೆ. ನನ​ಗೆ ಪ್ರಶಸ್ತಿ ಬಂದಿತ್ತು. ಅದನ್ನು ಸ್ವೀಕರಿಸಲು ಹೋಗಿದ್ದೆ. ರಾಜ್​ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ನನ್ನ ತಾಯಿಗೆ ರಾಜ್​ಕುಮಾರ್ ಎಂದರೆ ಸಾಕಷ್ಟು ಪ್ರೀತಿ. ಅವರು ರಾಜ್​ಕುಮಾರ್​ಗೆ ವಂದಿಸುವಂತೆ ಕೇಳುತ್ತಲೇ ಇದ್ದರು. ನಮಸ್ಕಾರ ಮಾಡಿದರೆ ರಾಜ್​ಕುಮಾರ್​ಗೆ ಕಾಣೋದಿಲ್ಲ ಅನ್ನೋದು ನನ್ನ ವಾದ. ಹೀಗಾಗಿ, ಸುಮ್ಮನೆ ಇದ್ದೆ’ ಎಂದಿದ್ದರು ಅಂಬರೀಷ್.

‘ರಾಜ್​ಕುಮಾರ್​​ ನನ್ನನ್ನು ನೋಡಿದ್ದರು. ಅವರು ನನ್ನನ್ನು ನೋಡಿ ಹೇಗಿದ್ದೀರಾ ಅಂಬರೀಷ್ ಎಂದು ಕೇಳಿದ್ದರು. ಅಮ್ಮ ಮೈಸೂರು ಹೋಗೋತನಕವೂ ಬಿಡಲಿಲ್ಲ. ನಿನ್ನನ್ನು ಯಾರು ಎಂದು ಅವರು ಬಂದು ಮಾತನಾಡಿಸಬೇಕು? ಅವರು ಬಂದು ನಿನ್ನ ಮಾತನಾಡಿಸಬೇಕಾ? ನಿನಗೆ ಹೋಗಿ ಅವರ ಮಾತನಾಡಿಸೋಕೆ ಆಗೋದಿಲ್ಲವಾ ಎಂದು ಅಮ್ಮ  ಕೇಳುತ್ತಲೇ ಇದ್ದರು’ ಎಂದು ಅವರು ವಿವರಿಸಿದ್ದರು.

ಇದನ್ನೂ ಓದಿ
Image
‘ಎಲ್ಲರಿಗೂ ಒಂದೇ ರೀತಿಯ ಸಂಭಾವನೆ’; ಸಮಂತಾ ಹೊಸ ನಿಯಮ
Image
ಪಾಕ್ ಉಗ್ರ ನೆಲೆಗಳ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್; ಉಘೇ ಎಂದ ಬಾಲಿವುಡ್
Image
ಜೀವನದಲ್ಲಿ ಇರೋ ಕೊನೆಯ ಆಸೆಯನ್ನು ಈಡೇರಿಸಿಕೊಂಡ ರಶ್ಮಿಕಾ ಮಂದಣ್ಣ
Image
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ

‘ದೊಡ್ಡವರು ಬಂದು ಚಿಕ್ಕವರ ಮಾತನಾಡಿಸಿದರೆ ಅವರ ಮೇಲಿನ ಗೌರವ ಹೆಚ್ಚಾಗುತ್ತದೆ’ ಎಂದಿದ್ದರು ಅಂಬರೀಷ್. ‘ಒಡ ಹುಟ್ಟಿದವರು’ ಸಿನಿಮಾದಲ್ಲಿ ಅಂಬರೀಷ್ ರಾಜ್​ಕುಮಾರ್ ಒಟ್ಟಿಗೆ ನಟಿಸಿದ್ದರು. ‘ರಾಜ್​ಕುಮಾರ್ ಯಾವಾಗಲೂ ಕಲಾವಿದರ ಪರ’ ಎನ್ನುತ್ತಿದ್ದರು ಅಂಬಿ. ‘ರಾಜ್​ಕುಮಾರ್ ಆಲೋಚನೆಗಳು ನಮ್ಮ ಜೊತೆ ಇದೆ. ಅದನ್ನು ನಡೆಸಿಕೊಂಡು ಹೋಗೋದು ಕಷ್ಟ. ಆದರೆ ಪ್ರಯತ್ನ ಮಾಡಬೇಕು. ಅವರು ಹಣ ನೋಡಲಿಲ್ಲ. ಕೇವಲ ಕಲೆ ಎನ್ನುತ್ತಿದ್ದರು’ ಎಂದಿದ್ದರು ಅಂಬರೀಷ್.

ಇದನ್ನೂ ಓದಿ: ‘ಒಡಹುಟ್ಟಿದವರು’ ಸಿನಿಮಾ ಮಾಡಲು ರಾಜ್​ಕುಮಾರ್​ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್

ರಾಜ್​ಕುಮಾರ್ ಹಾಗೂ ಅಂಬರೀಷ್ ಒಡನಾಟ ತುಂಬಾನೇ ಚೆನ್ನಾಗಿತ್ತು. ರಾಜ್​ಕುಮಾರ್ ನಿಧನ ಹೊಂದಿದ ಬಳಿಕ ಅಂಬರೀಷ್ ಅವರು ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಹಲವು ವೇದಿಕೆ ಮೇಲೆ ಅವರು ರಾಜ್​ಕುಮಾರ್​ನ ನೆನಪಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:49 am, Wed, 7 May 25

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್