AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ‘ತಮಿಳರಸನ್’ ಸಿನಿಮಾ ಹಕ್ಕು ನೀಡುವುದಾಗಿ 16 ಲಕ್ಷ ಪಡೆದು ಮೋಸ; ದೂರು ದಾಖಲು

38 ಲಕ್ಷ ರೂಪಾಯಿಗೆ ‘ತಮಿಳರಸನ್’ ಚಿತ್ರದ ತಮಿಳು ಹಾಗು ತೆಲುಗು ವರ್ಷನ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅಗ್ರಿಮೆಂಟ್ ಆಗಿತ್ತು. ಅಡ್ವಾನ್ಸ್ ರೂಪದಲ್ಲಿ 16 ಲಕ್ಷ ರೂಪಾಯಿ ಹಣವನ್ನು ಧೀರಜ್ ಪೈ ಅವರು ಕೌಸಲ್ಯ ರಾಣಿಗೆ ನೀಡಿದ್ದರು. ಉಳಿದ ಹಣ ಚಿತ್ರ ಬಿಡುಗಡೆ ಬಳಿಕ ನೀಡುವುದಾಗಿ ಒಪ್ಪಂದ ಆಗಿತ್ತು.

ಕರ್ನಾಟಕದಲ್ಲಿ ‘ತಮಿಳರಸನ್’ ಸಿನಿಮಾ ಹಕ್ಕು ನೀಡುವುದಾಗಿ 16 ಲಕ್ಷ ಪಡೆದು ಮೋಸ; ದೂರು ದಾಖಲು
ತಮಿಳರಸನ್
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Sep 17, 2023 | 11:09 AM

Share

ತಮಿಳು ಸಿನಿಮಾ ‘ತಮಿಳರಸನ್’ (Tamilarasan Movie)) ನಿರ್ಮಾಪಕಿಯಿಂದ ವಂಚನೆ ನಡೆದಿದೆ. ವಿಜಯ್ ಆ್ಯಂಟನಿ ನಟನೆಯ ಈ ಸಿನಿಮಾ ಹಂಚಿಕೆ ಹಕ್ಕನ್ನು ನೀಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ ಎಂದು ನಿರ್ಮಾಪಕಿ ಕೌಸಲ್ಯ ರಾಣಿ ವಿರುದ್ಧ ಧೀರಜ್ ಎಂಟರ್ ಪ್ರೈಸಸ್​ನ ವಿತರಕ ಮೋಹನ್ ದಾಸ್ ಪೈ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ತಮಿಳರಸನ್’ ಸಿನಿಮಾ ಏಪ್ರಿಲ್ 22ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಚಿತ್ರದ ತಮಿಳು ಹಾಗೂ ತೆಲುಗು ವರ್ಷನ್​ನ ಪ್ರದರ್ಶನದ ಹಕ್ಕನ್ನು ನೀಡುವುದಾಗಿ ಕೌಸಲ್ಯ ರಾಣಿ ಅವರು ಮೋಹನ್ ದಾಸ್ ಪೈಗೆ ಹೇಳಿದ್ದರು. 38 ಲಕ್ಷ ರೂಪಾಯಿಗೆ ತಮಿಳು ಹಾಗು ತೆಲುಗು ವರ್ಷನ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅಗ್ರಿಮೆಂಟ್ ಆಗಿತ್ತು. ಅಡ್ವಾನ್ಸ್ ರೂಪದಲ್ಲಿ 16 ಲಕ್ಷ ರೂಪಾಯಿ ಹಣವನ್ನು ಧೀರಜ್ ಪೈ ಅವರು ಕೌಸಲ್ಯ ರಾಣಿಗೆ ನೀಡಿದ್ದರು. ಉಳಿದ ಹಣ ಚಿತ್ರ ಬಿಡುಗಡೆ ಬಳಿಕ ನೀಡುವುದಾಗಿ ಒಪ್ಪಂದ ಆಗಿತ್ತು.

‘ಚಿತ್ರ ಬಿಡುಗಡೆಯನ್ನ ನಾನಾ ಕಾರಣದಿಂದ ಮುಂದೂಡಿದ್ದಾರೆ. ಇತ್ತ ಹಣ ಕೂಡ ನೀಡದೆ ಸತಾಯಿಸಿದ್ದಾರೆ. ಕೌಸಲ್ಯ ರಾಣಿ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಧೀರಜ್ ಪೈ ದೂರು ನೀಡಿದ್ದರು. ನ್ಯಾಯಾಲಯದ ಆದೇಶ ಹಿನ್ನಲೆ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಹನ್ಸಿಕಾ ಅವರಿಂದ ನಯನತಾರಾವರೆಗೆ; ಖಾಸಗಿ ಫೋಟೋ ಲೀಕ್ ಆಗಿ ಸಂಕಷ್ಟ ಅನುಭವಿಸಿದ್ದ ದಕ್ಷಿಣದ ನಟಿಯರಿವರು

‘ತಮಿಳರಸನ್’ ಸಿನಿಮಾದಲ್ಲಿ ವಿಜಯ್ ಆ್ಯಂಟನಿ ಅವರು ಇನ್ಸ್​ಪೆಕ್ಟರ್ ತಮಿಳರಸನ್ ಪಾತ್ರದಲ್ಲಿ ನಟಿಸಿದ್ದರು. ಸುರೇಶ್ ಗೋಪಿ, ಸಂಗೀತಾ, ಯೋಗಿ ಬಾಬು, ಕಸ್ತೂರಿ ಶಂಕರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ