AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ನಾಡು-ನುಡಿಯ ಸಾರವ ಸಾರಿದ ಕನ್ನಡದ ಚಿತ್ರಗೀತೆಗಳಿವು..

ಕನ್ನಡ ರಾಜ್ಯೋತ್ಸವ 2023: ಕನ್ನಡ ನಾಡು, ನುಡಿಯ ಬಗ್ಗೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಸಿನಿಮಾದಲ್ಲಿ ಹಾಡುಗಳು ಕೂಡ ಹೇರಳವಾಗಿ ಬಳಕೆ ಆಗಿದೆ. ಕನ್ನಡದ ಮಣ್ಣಿನ ವಿಶೇಷತೆ, ಕನ್ನಡದ ನುಡಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ರೀತಿಯಲ್ಲಿ ಹಾಡುಗಳು ಮೂಡಿ ಬಂದಿವೆ. ಆ ರೀತಿಯ ಹಾಡುಗಳ ಬಗ್ಗೆ ಇಲ್ಲಿದೆ ವಿವರ.

ನಮ್ಮ ನಾಡು-ನುಡಿಯ ಸಾರವ ಸಾರಿದ ಕನ್ನಡದ ಚಿತ್ರಗೀತೆಗಳಿವು..
ನಮ್ಮ ನಾಡು-ನುಡಿಯ ಸಾರವ ಸಾರಿದ ಕನ್ನಡದ ಚಿತ್ರಗೀತೆಗಳಿವು..
ರಾಜೇಶ್ ದುಗ್ಗುಮನೆ
|

Updated on: Oct 31, 2023 | 12:59 PM

Share

ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಣೆಗೆ ಎಲ್ಲ ಕಡೆಗಳಲ್ಲೂ ಸಿದ್ಧತೆ ನಡೆದಿದೆ. ನವೆಂಬರ್ ತಿಂಗಳಾದ್ಯಂತ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಕನ್ನಡ ನಾಡು, ನುಡಿಯ ಬಗ್ಗೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಸಿನಿಮಾದಲ್ಲಿ ಹಾಡುಗಳು ಕೂಡ ಹೇರಳವಾಗಿ ಬಳಕೆ ಆಗಿದೆ. ಕನ್ನಡದ ಮಣ್ಣಿನ ವಿಶೇಷತೆ, ಕನ್ನಡದ ನುಡಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ರೀತಿಯಲ್ಲಿ ಹಾಡುಗಳು ಮೂಡಿ ಬಂದಿವೆ. ಆ ರೀತಿಯ ಹಾಡುಗಳ ಬಗ್ಗೆ ಇಲ್ಲಿದೆ ವಿವರ.

ಕನ್ನಡ ನಾಡಿನ ಜೀವ ನದಿ..

ವಿಷ್ಣುವರ್ಧನ್, ಖುಷ್ಬೂ  ನಟನೆಯ ‘ಜೀವನದಿ’ ಸಿನಿಮಾ 1996ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಬರುವ ‘ಕನ್ನಡ ನಾಡಿನ ಜೀವ ನದಿ..’ ಹಾಡು ಎಲ್ಲರ ಗಮನ ಸೆಳೆಯಿತು. ಕೇಳುಗರ ಫೇವರಿಟ್ ಸಾಲಿನಲ್ಲಿ ಈ ಹಾಡಿಗೆ ಈಗಲೂ ಸ್ಥಾನ ಇದೆ. ಕಾವೇರಿ ಹಾಗೂ ಕರ್ನಾಟಕದ ಮಣ್ಣಿನ ವಿಶೇಷತೆಯನ್ನು ಇದು ವಿವರಿಸುತ್ತದೆ.

ಕಲ್ಲಾದರೆ ನಾನು

ಕನ್ನಡ ನಾಡಿನ ಮಣ್ಣಿನ ವಿಶೇಷತೆ ತುಂಬಾನೆ ದೊಡ್ಡದು. ‘ಸಿಂಹಾದ್ರಿಯ ಸಿಂಹ’ ಸಿನಿಮಾದಲ್ಲಿ ಬರುವ ‘ಕಲ್ಲಾದರೆ ನಾನು..’ ಹಾಡನ್ನು ಯಾರೂ ಮಿಸ್ ಮಾಡಿಕೊಳ್ಳುವಂತಿಲ್ಲ. ಈ ಹಾಡು ವಿಶೇಷ ಎನಿಸಿಕೊಂಡಿದೆ. ಹೇಗಾದರೂ ಸರಿ ಕನ್ನಡ ನಾಡಲ್ಲಿ ಮತ್ತೆ ಹುಟ್ಟಬೇಕು ಎಂಬ ಬಯಕೆಯನ್ನು ನಾಯಕ ವ್ಯಕ್ತಪಡಿಸುತ್ತಾನೆ.

ಕನ್ನಡ ನಾಡಿನ ವೀರ ರಮಣಿಯ..

‘ನಾಗರಹಾವು’ ಸಿನಿಮಾದಲ್ಲಿ ಬರುವ ‘ಕನ್ನಡ ನಾಡಿನ ವೀರ ರಮಣಿಯ..’ ಹಾಡನ್ನು ಕನ್ನಡ ರಾಜ್ಯೋತ್ಸವದಂದು ಮಿಸ್ ಮಾಡಿಕೊಳ್ಳಲೇ ಬಾರದು. ಚಿತ್ರದುರ್ಗದ ಕಲ್ಲಿನ ಕೋಟೆತ ವಿಶೇಷತೆ ವಿವರಿಸುವಾಗ ಈ ಹಾಡು ಬರುತ್ತದೆ.

ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..

‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..’ ಹಾಡು ಗಮನ ಸೆಳೆಯುವಂತಿದೆ.   ‘ವಿಜಯನಗರ ವೀರಪುತ್ರ’ ಚಿತ್ರದ ಈ ಹಾಡಿಗೆ ಸಾಹಿತ್ಯ ನೀಡಿರುವವರು ಆರ್.ಎನ್ ಜಯಗೋಪಾಲ್ ಹಾಗೂ ಹಾಡಿದವರು ಪಿ.ಬಿ. ಶ್ರೀನಿವಾಸ್.

ಅವ್ವ ಕಣೋ ಕನ್ನಡ..

ಪ್ರೇಮ್ ನಟನೆಯ ‘ಪಲ್ಲಕ್ಕಿ’ ಚಿತ್ರದ ‘ಅವ್ವ ಕಣೋ ಕನ್ನಡ..’ ಸಾಂಗ್​ ಅನ್ನು ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿರುವ ಈ ಹಾಡಿಗೆ, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

ಕನ್ನಡದ ಮಾತು ಚೆನ್ನ..

‘ಸಮರ’ ಸಿನಿಮಾದ ‘ಕನ್ನಡದ ಮಾತು ಚೆನ್ನ..’ ಹಾಡು ರಾಜ್​ಕುಮಾರ್ ಕಂಠದಲ್ಲಿ ಮೂಡಿ ಬಂದಿದೆ. ಶಿವರಾಜ್​ಕುಮಾರ್ ಮೊದಲಾದವರು ‘ಸಮರ’ ಸಿನಿಮಾದಲ್ಲಿ ನಟಿಸಿದ್ದಾರೆ.

ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ..

ಅಂಬರೀಷ್​ ಅಭಿನಯದ ‘ತಿರುಗು ಬಾಣ’ ಚಿತ್ರದ ‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ.. ’ಹಾಡಿಗೆ ದನಿ ನೀಡಿದವರು ಎಸ್.ಪಿ.ಬಾಲಸುಬ್ರಮಣ್ಯಂ. ಆರ್.ಎನ್ ಜಯಗೋಪಾಲ್ ಬರೆದ ಸಾಹಿತ್ಯಕ್ಕೆ, ಸತ್ಯಂರವರು ಸಂಗೀತ ನೀಡಿದರು.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್​ಕುಮಾರ್ ಪ್ರತಿಮೆ ವಿವಾದ; ಆಕ್ರೋಶ ಹೊರಹಾಕಿದ ಅಣ್ಣಾವ್ರ ಫ್ಯಾನ್ಸ್

‘ಕರುನಾಡೇ..

ರವಿಚಂದ್ರನ್ ನಟನೆಯ ‘ಮಲ್ಲ’ ಸಿನಿಮಾದ ‘ಕರುನಾಡೇ..’ ಹಾಡನ್ನು ಬಹುತೇಕರು ಕೇಳಿರುತ್ತಾರೆ. ಈ ಸಿನಿಮಾ ಬಂದು 19 ವರ್ಷಗಳ ಮೇಲಾಗಿದೆ. ಆದಾಗ್ಯೂ ಈ ಹಾಡು ಫೇವರಿಟ್​ಲಿಸ್ಟ್​​ನಲ್ಲಿ ಇದೆ.

ಇದನ್ನೂ ಓದಿ: ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಉದಯಿಸಲು ಕಾರಣ ಯಾರು? ಹಂಸಲೇಖ ಹೇಳಿದ್ದು ಹೀಗೆ

‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’

‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ರಾಜ್​ಕುಮಾರ್ ಅವರ ಕಂಠದಲ್ಲಿ ಮೂಡಿ ಬಂದಿತ್ತು. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಈ ಹಾಡನ್ನು ಶೂಟ್ ಮಾಡಲಾಯಿತು. ಈ ಹಾಡಿನ ಪ್ರತಿ ಸಾಲುಗಳು ಅರ್ಥಪೂರ್ಣವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ