AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ದುಡ್ಡು ಬೇಕು ಅನ್ನೋದು ಸಿನಿಮಾ ಮಾಡೋಕೆ’; ಚಿತ್ರರಂಗದ ಮೇಲೆ ರವಿಚಂದ್ರನ್​ಗೆ ಇದೆ ಅತೀವ ಪ್ರೀತಿ

V. Ravichandran Birthday: ರವಿಚಂದ್ರನ್ ಮನೆ ಖಾಲಿ ಮಾಡಿದ, ದುಡ್ಡು ಕಳೆದುಕೊಂಡ ಎಂದೆಲ್ಲ ಹೇಳ್ತಾರೆ. ನಾನು ಇವತ್ತು ಹಣ ಕಳೆದುಕೊಂಡಿದ್ದಲ್ಲ, ಕಳೆದ 30 ವರ್ಷಗಳಿಂದ ದುಡ್ಡನ್ನು ಕಳೆದುಕೊಂಡೇ ಬರ್ತಿದೀನಿ ಎಂದಿದ್ದರು ರವಿಚಂದ್ರನ್.

‘ನನಗೆ ದುಡ್ಡು ಬೇಕು ಅನ್ನೋದು ಸಿನಿಮಾ ಮಾಡೋಕೆ’; ಚಿತ್ರರಂಗದ ಮೇಲೆ ರವಿಚಂದ್ರನ್​ಗೆ ಇದೆ ಅತೀವ ಪ್ರೀತಿ
ರವಿಚಂದ್ರನ್
ರಾಜೇಶ್ ದುಗ್ಗುಮನೆ
|

Updated on: May 30, 2023 | 10:23 AM

Share

ನಟ ವಿ. ರವಿಚಂದ್ರನ್ (Ravichandran) ಅವರು ಇಂದು (ಮೇ 30) 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅಭಿಮಾನಿಗಳು ಅವರ ಮನೆಯ ಎದುರು ಬಂದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ರವಿಚಂದ್ರನ್ ಅವರು ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿ ಅವರು ಕೈ ಸುಟ್ಟಿಕೊಂಡಿದ್ದೂ ಇದೆ. ಆದರೆ, ಅವರೆಂದೂ ಸಿನಿಮಾ ಕೃಷಿ ನಿಲ್ಲಿಸಿಲ್ಲ. ಈ ವಿಚಾರದ ಕುರಿತು ಅವರು ಒಮ್ಮೆ ಮಾತನಾಡಿದ್ದರು. ‘ನನಗೆ ರಾಯಲ್ ಆಗಿ ಬದುಕೋಕೆ ಹಣ ಬೇಡ, ರಾಯಲ್ ಆಗಿ ಸಿನಿಮಾ ಮಾಡೋಕೆ ಹಣ ಬೇಕು’ ಎಂದಿದ್ದರು.

ರವಿಚಂದ್ರನ್ ಅವರಿಗೆ ಚಿತ್ರರಂಗದ ಬಗ್ಗೆ ಅಪಾರ ಪ್ರೀತಿ ಇದೆ. ಇದನ್ನು ಅನೇಕ ವೇದಿಕೆ ಮೇಲೆ ಅವರು ತೋರಿಸಿದ್ದರು. ‘ರವಿಚಂದ್ರನ್ ಮನೆ ಖಾಲಿ ಮಾಡಿದ, ದುಡ್ಡು ಕಳೆದುಕೊಂಡ ಎಂದೆಲ್ಲ ಹೇಳ್ತಾರೆ. ನಾನು ಇವತ್ತು ಹಣ ಕಳೆದುಕೊಂಡಿದ್ದಲ್ಲ, ಕಳೆದ 30 ವರ್ಷಗಳಿಂದ ದುಡ್ಡನ್ನು ಕಳೆದುಕೊಂಡೇ ಬರ್ತಿದೀನಿ. ನಾನು ಕಳೆದುಕೊಂಡೇ ನಗ್ತಾ ಬಂದಿರೋದು. ನಾನು ದುಡ್ಡು ಕಳೆದುಕೊಂಡಿದ್ದು ನಿಮಗೋಸ್ಕರ. ನಿಮ್ಮ ಮನಸ್ಸು ಗೆಲ್ಲಲು ಎಲ್ಲವನ್ನೂ ಕಳೆದುಕೊಂಡಿದ್ದೀನಿ’ ಎಂದಿದ್ದರು ರವಿಚಂದ್ರನ್.

‘ನನಗೆ ಈ ಬಗ್ಗೆ ಬೇಸರ ಇಲ್ಲ. ಗೆಲ್ತೀನಿ ಅನ್ನೋ ಆವೇಶ ಇದೆಯಲ್ಲ ಅದು ಯಾವಾಗಲೂ ಕಡಿಮೆ ಆಗಿಲ್ಲ. ನಾನು ಯಾರಿಗೋ ಕಾಂಪಿಟೇಟರ್​ ಅಲ್ಲ. ನನ್ನನ್ನು ನಾನು ಗೆಲ್ಲಬೇಕಿದೆ. ನಾನು ದುಡ್ಡಿಗೋಸ್ಕರ ದುಡಿದಿಲ್ಲ. ನನಗೆ ದುಡ್ಡು ಬೇಡವೂ ಬೇಡ. ನನಗೆ ದುಡ್ಡು ಬೇಕು ಅನ್ನೋದು ಸಿನಿಮಾ ಮಾಡೋಕೆ. ಅದಕ್ಕೋಸರ ಇಲ್ಲಿ ಬಂದು ಕೂತಿದಿನಿ. ನಾನು ದುಡಿಯೋದು ರಾಯಲ್ ಆಗಿ ಬದುಕಬೇಕು ಎಂದಲ್ಲ, ರಾಯಲ್ ಆಗಿ ಸಿನಿಮಾ ಮಾಡಬೇಕು ಎಂದು’ ಎಂದಿದ್ದರು ರವಿಚಂದ್ರನ್.

ಇದನ್ನೂ ಓದಿ: ‘ನನಗೆ ವಯಸ್ಸಾಗಿದೆ ಎಂದು ತುಂಬ ಜಾಣತನದಿಂದ ಹೇಳಿದ್ರು’ ರವಿಚಂದ್ರನ್

‘ಸಿನಿಮಾ ಸೋತಿದೆ ಎಂದು ನನಗೆ ಬೇಸರ ಆಗಿಲ್ಲ. ನಿಮ್ಮನ್ನು ಮೆಚ್ಚಿಸಿಲ್ಲ ಎಂಬುದಷ್ಟೇ ಬೇಸರ. ನಿಮಗೆ ನನ್ನ ಸಿನಿಮಾಗೆ ನುಗ್ಗಿ ಅಭ್ಯಾಸ. ಆ ದಿನ ಮತ್ತೆ ಬರುತ್ತೆ. ಆ ಬಗ್ಗೆ ಭರವಸೆ ನೀಡುತ್ತೇನೆ. ನನ್ನ ಜೊತೆ ಇದ್ದವರು ಬೆಳೆದಿದ್ದಾರೆ. ಮಾತೆತ್ತಿದರೆ ರವಿಚಂದ್ರನ್ ಪ್ರೇಮಲೋಕದ ಬಗ್ಗೆ ಮಾತಾಡ್ತಾರೆ ಎಂದು ಅನೇಕರು ಟೀಕೆ ಮಾಡಿದ್ದಿದೆ. ಹುಟ್ಟಿಸಿದ ಅಪ್ಪ-ಅಮ್ಮನ ಬದಲಾಯಿಸೋಕೆ ಆಗುತ್ತಾ? ಆ ಸಿನಿಮಾ ನಮ್ಮನ್ನು ಇಲ್ಲಿವರೆಗೆ ತಂದು ಬಿಟ್ಟಿದೆ. ಆ ಸಿನಿಮಾ ಅಷ್ಟು ಕೆಲಸ ಮಾಡಿದೆ. ಆ ಸಿನಿಮಾ ನೋಡಿ ನಿಮ್ಮ ಅಪ್ಪ-ಅಮ್ಮ ಪ್ರೀತಿಸಿ ಕಲಿತಿರಬಹುದು’ ಎಂದು ಹೇಳಿದ್ದರು ರವಿಚಂದ್ರನ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ