AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಹೀಗೂ ಪ್ರಪೋಸ್​ ಮಾಡಬಹುದಾ? ಕನ್ನಡದ ಸಿನಿಮಾ ಹಾಡುಗಳಲ್ಲಿದೆ ಡಿಫರೆಂಟ್​ ಪ್ರೇಮ ನಿವೇದನೆ

Kannada Love Songs | Valentine's Day 2023: ಕೆಲವು ಸಿನಿಮಾಗಳಲ್ಲಿ ಪ್ರೇಮ ನಿವೇದನೆಯ ಸನ್ನಿವೇಶದಲ್ಲಿ ಬರುವ ಹಾಡಿನ ಸಾಲುಗಳು ಕ್ರೇಜಿ ಎನಿಸುತ್ತವೆ. ಜನ ಹಿಂಗೂ ಪ್ರಪೋಸ್​ ಮಾಡ್ತಾರಾ ಅಂತ ಅಚ್ಚರಿ ಮೂಡಿಸುತ್ತವೆ.

Valentine's Day: ಹೀಗೂ ಪ್ರಪೋಸ್​ ಮಾಡಬಹುದಾ? ಕನ್ನಡದ ಸಿನಿಮಾ ಹಾಡುಗಳಲ್ಲಿದೆ ಡಿಫರೆಂಟ್​ ಪ್ರೇಮ ನಿವೇದನೆ
ಕನ್ನಡ ಲವ್​ ಸಾಂಗ್ಸ್​
ಮದನ್​ ಕುಮಾರ್​
| Edited By: |

Updated on:Feb 14, 2023 | 6:39 AM

Share

ಪ್ರೇಮಿಗಳ ಪಾಲಿಗೆ ಫೆಬ್ರವರಿ 14 ಅಂದ್ರೆ ಸಂಭ್ರಮ. ವ್ಯಾಲೆಂಟೈನ್​ ಡೇ (Valentine’s Day) ಸಡಗರದಲ್ಲಿ ಯುವ ಜನತೆ ಮಿಂದೇಳುತ್ತದೆ. ಇಂದು ಜೋಡಿಗಳಿಗೆ ಹಬ್ಬದ ವಾತಾವರಣ. ಒನ್​ ಸೈಡ್​​ ಪ್ರೇಮಿಗೆ ಏನೋ ಒಂಥರ ತಳಮಳ. ಈ ಶುಭದಿನದಲ್ಲಿ ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂಬ ತಾತರ. ಪ್ರಪೋಸ್​ (Love Propose) ಮಾಡಲು ಹುಡುಗ-ಹುಡುಗಿಯರು ಲೆಕ್ಕವಿಲ್ಲದಷ್ಟು ದಾರಿ ಕಂಡುಕೊಂಡಿದ್ದಾರೆ. ಮಂಡಿಯೂರಿ, ಹೂಗುಚ್ಛ ನೀಡುವುದು ಕೆಲವರ ಸ್ಟೈಲ್​. ಕವನ ಬರೆದು ಇಂಪ್ರೆಸ್​ ಮಾಡೋದು ಇನ್ನೂ ಕೆಲವರ ಸ್ಟೈಲ್​. ಗಿಫ್ಟ್​ ನೀಡಿ ಮನವೊಲಿಸಿಕೊಳ್ಳಬೇಕು ಎಂಬುವವರ ಸಂಖ್ಯೆಗೆ ಲೆಕ್ಕವೇ ಇಲ್ಲ. ಪ್ರೇಮ ನಿವೇದನೆ ಮಾಡಿಕೊಳ್ಳುವ ಸನ್ನಿವೇಶಗಳನ್ನು ಕನ್ನಡ ಸಿನಿಮಾಗಳ ಅನೇಕ ಹಾಡುಗಳಲ್ಲಿ ಕಟ್ಟಿಕೊಡಲಾಗಿದೆ. ಆ ಪೈಕಿ ಕೆಲವು ಒರಟಾಗಿ ಕಾಣುತ್ತವೆ. ಮತ್ತೆ ಕೆಲವು ಏನೋ ಡಿಫರೆಂಟ್​ ಆಗಿದೆ ಎನಿಸುತ್ತವೆ. ಚಂದನವನದಲ್ಲಿ ಒಂದಷ್ಟು ಹಾಡುಗಳು (Kannada Movie Songs) ಈ ಕಾರಣಕ್ಕಾಗಿ ಸೌಂಡು ಮಾಡಿದ್ದುಂಟು.

ಪ್ರೀತ್ಸೇ… ಪ್ರೀತ್ಸೇ…

ಉಪೇಂದ್ರ, ಶಿವರಾಜ್​ಕುಮಾರ್​, ಸೊನಾಲಿ ಬೇಂದ್ರೆ ನಟನೆಯ ‘ಪ್ರೀತ್ಸೆ’ ಸಿನಿಮಾದ ಟೈಟಲ್​ ಟ್ರ್ಯಾಕ್ ಇಂದಿಗೂ ಕೇಳುಗರ ಫೇವರಿಟ್​ ಪಟ್ಟಿಯಲ್ಲಿದೆ. ನಾಯಕಿಯನ್ನು ಪರಿಪರಿಯಾಗಿ ಬೇಡಿಕೊಳ್ಳುವ ಪ್ರೇಮಿಯ ಸಾಲುಗಳು ಈ ಹಾಡಿನಲ್ಲಿವೆ. ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯದಲ್ಲಿ ಬಂದ ಈ ಹಾಡಿಗೆ ಧ್ವನಿ ನೀಡಿರುವುದು ಹೇಮಂತ್​. ‘ಮಾತಾಡ್ತಾ ಪ್ರೀತ್ಸೇ.. ಮುದ್ದಾಡ್ತಾ ಪ್ರೀತ್ಸೆ’ ಎನ್ನುವ ಹೀರೋ ನಂತರ ‘ದಯಮಾಡಿ ಪ್ರೀತ್ಸೇ ಕೃಪೆ ತೋರಿ ಪ್ರೀತ್ಸೇ’ ಅಂತ ಬೇಡಿಕೊಳ್ಳುತ್ತಾನೆ.

ಇದನ್ನೂ ಓದಿ
Image
Vijay Kiragandur: ‘ಮೋದಿ ಜತೆ ಬೆರೆತಿದ್ದರಿಂದ ಪಾಸಿಟಿವ್​ ವೈಬ್ರೇಷನ್​ ಬಂತು’; ನಿರ್ಮಾಪಕ ವಿಜಯ್​ ಕಿರಗಂದೂರು
Image
Yash Meets Modi: ‘ಚಿತ್ರರಂಗದ ಬಗೆಗಿನ ಸಣ್ಣ ವಿಚಾರಗಳನ್ನೂ ಮೋದಿ ತಿಳಿದುಕೊಂಡಿರುವುದು ಅಚ್ಚರಿ ಎನಿಸಿತು’: ಯಶ್​
Image
Rishab Shetty: ‘ಮೋದಿ ಹಲವು ಬಾರಿ ಕಾಂತಾರ ಬಗ್ಗೆ ಮಾತಾಡಿದ್ದು ಕೇಳಿ ಖುಷಿ ಆಯ್ತು’: ಪ್ರಧಾನಿ ಭೇಟಿ ಬಗ್ಗೆ ರಿಷಬ್​ ಪ್ರತಿಕ್ರಿಯೆ
Image
PM Narendra Modi: ಪ್ರಧಾನಿ ಜತೆ ಸ್ಯಾಂಡಲ್​ವುಡ್ ಮಂದಿ; ಇಲ್ಲಿದೆ ಫೋಟೋ ಗ್ಯಾಲರಿ

ಇದನ್ನೂ ಓದಿ: Valentine’s Day: ಪ್ರೇಮಿಗಳ ದಿನದ ಬಗ್ಗೆ ನಿಮಗೆ ಎಷ್ಟು ಗೊತ್ತು? ಕೆಲವು ಇಂಟರೆಸ್ಟಿಂಗ್​​​ ಸಂಗತಿಗಳು ಇಲ್ಲಿವೆ

ಐ ಲವ್​ ಯೂ ಅಂತ ಒಮ್ಮೆ ಹೇಳೇ..

ಪುನೀತ್​ ರಾಜ್​ಕುಮಾರ್​ ನಟನೆಯ ‘ರಾಜ್​ ದಿ ಶೋ ಮ್ಯಾನ್​’ ಸಿನಿಮಾಗೆ ನಿರ್ದೇಶನ ಮಾಡಿದ್ದು ‘ಜೋಗಿ’ ಪ್ರೇಮ್​. ಆ ಚಿತ್ರಕ್ಕೆ ಸಂಗೀತ ನೀಡಿದ್ದು ವಿ. ಹರಿಕೃಷ್ಣ. ಒಂದೇ ಒಂದು ಬಾರಿ ಐ ಲವ್​ ಯೂ ಅಂತ ಹೇಳು ಎಂದು ನಾಯಕಿಗೆ ಮನವಿ ಮಾಡಿಕೊಳ್ಳುವ ‘ಹೇ ಪಾರೂ..’ ಹಾಡಿನ ಲಿರಿಕ್ಸ್​ ತುಂಬ ಕ್ಯಾಚಿ ಆಗಿದೆ. ವಿ. ನಾಗೇಂದ್ರ ಪ್ರಸಾದ್​ ಬರೆದ ಈ ಗೀತೆ ಟಿಪ್ಪು ಅವರ ಕಂಠದಲ್ಲಿ ಮೂಡಿಬಂದು ಸೂಪರ್​ ಹಿಟ್​ ಆಯಿತು.

ಇದನ್ನೂ ಓದಿ: Rose Day ಒಂದೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್​ ಡೇ ಪ್ರೇಮಿಗಳಿಗಷ್ಟೇ ಸೀಮಿತವಲ್ಲ !

18 ಭಾಷೆಯಲ್ಲಿ ಪ್ರಪೋಸ್​ ಮಾಡಿದ ಉಪೇಂದ್ರ!

ಉಪೇಂದ್ರ ಏನೇ ಮಾಡಿದರೂ ಅದು ಡಿಫರೆಂಟ್​ ಆಗಿರುತ್ತದೆ. ನಟ, ನಿರ್ದೇಶಕನಾಗಿ ಮಾತ್ರವಲ್ಲದೇ ಗೀತರಚನೆಕಾರನಾಗಿಯೂ ತಾವು ಡಿಫರೆಂಟ್​ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ‘ಓಂಕಾರ’ ಸಿನಿಮಾದಲ್ಲಿನ ‘ಬಾಲೋ ಭಾಷಿ ಬೆಂಗಾಲಿಲಿ..’ ತುಂಬ ಭಿನ್ನವಾಗಿದೆ. ‘ಲವ್​ ಲವ್​ ಯೂ’ ಎಂಬುದನ್ನು ಬರೋಬ್ಬರಿ 18 ಭಾಷೆಯಲ್ಲಿ ಹೇಳುವ ಹಾಡು ಇದು. ಕನ್ನಡ, ತಮಿಳು, ತೆಲುಗು, ತುಳು, ಮಲಯಾಳಿ, ಸಂಸ್ಕೃತ, ಹಿಂದಿ, ಫ್ರೆಂಚ್, ಬೆಂಗಾಲಿ, ಸ್ಪ್ಯಾನಿಶ್​ ಮುಂತಾದ ಭಾಷೆಗಳಲ್ಲಿ ಪ್ರೀತಿಗೆ ಏನೆನ್ನುತ್ತಾರೆ ಎಂಬುದನ್ನು ತಿಳಿಯಬೇಕೆಂದರೆ ಈ ಹಾಡು ಕೇಳಬೇಕು.

ಎಕ್ಸ್​ಕ್ಯೂಸ್​ ಮೀ.. ಎಕ್ಸ್​ಕ್ಯೂಸ್​ ಮೀ..

ಪ್ರೇಮ್​ ನಿರ್ದೇಶನದ ಸೂಪರ್​ ಹಿಟ್​ ಸಿನಿಮಾ ‘ಎಕ್ಸ್​ಕ್ಯೂಸ್​ ಮೀ’. ಆ ಚಿತ್ರದ ಹಾಡುಗಳು ಹೊಸ ಸೆನ್ಸೇಷನ್​ ಸೃಷ್ಟಿ ಮಾಡಿದ್ದವು. ಟೈಟಲ್​ ಟ್ರ್ಯಾಕ್​ ಅಂತೂ ಬೇರೆಯದೇ ರೀತಿಯಲ್ಲಿ ಮೂಡಿಬಂತು. ‘ನಾ ಪ್ರೇಮಿ, ನೀ ಲುಕ್​ ಮೀ, ಯೂ ಕ್ಯಾಚ್​ ಮೀ, ಯೂ ಮ್ಯಾಚ್​ ಮೀ, ಯೂ ಯೂಸ್​ ಮೀ, ಯೂ ಲವ್​ ಮೀ, ಬಾರಮ್ಮಿ..’ ಎಂಬಂತಹ ಸಾಲುಗಳು ಕ್ರೇಜಿ ಎನಿಸುತ್ತವೆ. ಹಿಂಗೂ ಪ್ರಪೋಸ್​ ಮಾಡಬಹುದಾ ಎನಿಸುವಂತಹ ಪ್ರಶ್ನೆ ಹುಟ್ಟುಹಾಕುವಂತಿದೆ ಈ ಗೀತೆಯ ಸಾಹಿತ್ಯ. ವಿ. ನಾಗೇಂದ್ರ ಪ್ರಸಾದ್​ ಬರೆದ ಈ ಹಾಡಗೆ ಧ್ವನಿ ನೀಡಿರುವುದು ಆರ್​.ಪಿ. ಪಟ್ನಾಯಕ್​ ಮತ್ತು ನಂದಿತಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:30 am, Tue, 14 February 23

Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆ ಎಲ್ಲ ದೋಚಿದ ಖದೀಮರು!
ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆ ಎಲ್ಲ ದೋಚಿದ ಖದೀಮರು!