AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ನನ್ನ ಮಗ ಆಗಿರಬೇಕಿತ್ತು ಎಂದುಕೊಂಡಿದ್ದ ಸರೋಜಾ ದೇವಿ

ಸರೋಜಾ ದೇವಿ ಅವರು ಪುನೀತ್ ರಾಜ್ ಕುಮಾರ್​ನ ಬಾಲ್ಯದಿಂದಲೂ ನೋಡುತ್ತಾ ಬಂದವರು. ಅವರ ನಡುವಿನ ಆತ್ಮೀಯ ಬಾಂಧವ್ಯವನ್ನು ಹಿರಿಯ ನಿರ್ದೇಶಕ ಭಗವಾನ್ ವಿವರಿಸಿದ್ದರು. ಸರೋಜಾ ದೇವಿ ಅವರು ಪುನೀತ್ ಅವರನ್ನು ತಮ್ಮ ಮಗನಂತೆ ಕಾಣುತ್ತಿದ್ದರು. 'ಯಾರಿವನು' ಮತ್ತು 'ನಟಸಾರ್ವಭೌಮ' ಚಿತ್ರಗಳಲ್ಲಿ ಅವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ.

ಪುನೀತ್ ನನ್ನ ಮಗ ಆಗಿರಬೇಕಿತ್ತು ಎಂದುಕೊಂಡಿದ್ದ ಸರೋಜಾ ದೇವಿ
ಸರೋಜಾ ದೇವಿ-ಪುನೀತ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jul 14, 2025 | 11:37 AM

Share

ಸರೋಜಾ ದೇವಿ ಅವರು ನಿಧನ ಹೊಂದಿರೋದು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಸುಮಾರು ಏಳು ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಬಹುಶಃ ಇಂದು ಪುನೀತ್ ರಾಜ್​ಕುಮಾರ್ ನಮ್ಮ ಜೊತೆ ಇದ್ದಿದ್ದರೆ ಅವರು ತುಂಬಾನೇ ಬೇಸರ ಮಾಡಿಕೊಳ್ಳುತ್ತಿದ್ದರು ಎಂದರೂ ತಪ್ಪಾಗಲಾರದು. ಇದಕ್ಕೆ ಕಾರಣ ಪುನೀತ್ ರಾಜ್​ಕುಮಾರ್ ಹಾಗೂ ಸರೋಜಾ ದೇವಿ (B Saroja Devi) ಜೊತೆ ಇದ್ದ ಬಾಂಧವ್ಯ. ಸರೋಜಾ ದೇವಿಯನ್ನು ತಾಯಿ ರೀತಿಯಲ್ಲೇ ಪುನೀತ್ ಕಂಡಿದ್ದರು.

ಸರೋಜಾ ದೇವಿ ಅವರು ಪುನೀತ್ ರಾಜ್​ಕುಮಾರ್ ಚಿಕ್ಕ ವಯಸ್ಸು ಇದ್ದಾಗಿನಿಂದಲೂ ನೋಡುತ್ತಾ ಬರುತ್ತಿದ್ದಾರೆ. ಸೆಟ್​ಗೆ ರಾಜ್​ಕುಮಾರ್ ಜೊತೆ ಅಪ್ಪು ಕೂಡ ಬರುತ್ತಿದ್ದರು. ಆಗ ಸರೋಜಾ ದೇವಿ ಅವರು ಎತ್ತಿ ಆಡಿಸುತ್ತಿದ್ದರು. ಪುನೀತ್​ನ ಒಳ್ಳೆಯ ರೀತಿಯಲ್ಲಿ ಹ್ಯಾಂಡಲ್ ಮಾಡುತ್ತಿದ್ದರು. ಈ ಬಗ್ಗೆ ಹಿರಿಯ ನಿರ್ದೇಶಕ ಭಗವಾನ್ ಮಾತನಾಡಿದ್ದರು.

‘ಪಾರ್ವತಮ್ಮ ಅವರು ಸರೋಜಾ ದೇವಿಯನ್ನು ಕರೆದರು. ಅಪ್ಪುನ ನೀನು ಎಷ್ಟು ಚೆನ್ನಾಗಿ ಹ್ಯಾಂಡಲ್ ಮಾಡ್ತೀಯಾ. ನಿನಗೆ ಅವನು ತುಂಬಾನೇ ಹೊಂದಿಕೊಂಡಿದ್ದಾನೆ ಎಂದು ಪಾರ್ವತಮ್ಮ ಸರೋಜಾ ದೇವಿಗೆ  ಹೇಳಿದ್ದರು’ ಎಂದಿದ್ದರು ಭಗವಾನ್. ಪುನೀತ್​ ಹಾಗೂ ಸರೋಜಾ ದೇವಿ ನಟಿಸಿದ ‘ಯಾರಿವನು’ ಸಿನಿಮಾಗೆ ಭಗವಾನ್​ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಮಾಡುವಂತೆ ಹೇಳಿದ್ದು ಪಾರ್ವತಮ್ಮ.

ಇದನ್ನೂ ಓದಿ
Image
ತಾಯಿಗೆ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ
Image
ಬಿ ಸರೋಜಾದೇವಿ ನಿಧನ; ಆರೂವರೆ ದಶಕ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ತಾರೆ
Image
ಈ ನಟಿ ಜೊತೆ ಕದ್ದು ಮುಚ್ಚಿ ಓಡಾಡಿದ್ದ ಸಲ್ಮಾನ್ ಖಾನ್?
Image
ಸೂತಕದ ಮನೆಯಲ್ಲೂ ಸೆಲ್ಫಿ ಹುಚ್ಚು; ತಾಳ್ಮೆ ಕಳೆದುಕೊಂಡು ಕೂಗಾಡಿದ ರಾಜಮೌಳಿ

‘ಪುನೀತ್ ಹಾಗೂ ಸರೋಜಾ ದೇವಿ ಬಾಂಧವ್ಯ ನೋಡಿ ನನಗೆ ಒಂದು ಕಥೆ ಮಾಡುವಂತೆ ಪಾರ್ವತಮ್ಮ ಹೇಳಿದರು. ಆ ಸಮಯಕ್ಕೆ ಸರಿಯಾಗಿ ಒಂದು ಇಂಗ್ಲಿಷ್ ಸಿನಿಮಾ ಬಂತು. ಉದಯ್ ಶಂಕರ್​ ಅವರಿಗೆ ಆ ಸಿನಿಮಾ ತೋರಿಸಿದೆ. ಉದಯ್ ಶಂಕರ್ ಕಥೆ ಬರೆದರು. ಅದುವೇ ಯಾರಿವನು’ ಎಂದಿದ್ದರು ಭಗವಾನ್.

‘ಆ ಚಿತ್ರದಲ್ಲಿ ಪುನೀತ್​ ತುಂಬ ಒಳ್ಳೆಯ ರೀತಿಯಲ್ಲಿ ನಟಿಸಿದ್ದ. ಶ್ರೀನಾಥ್​ ಜೊತೆ ಇರುವಾಗ ಶ್ರೀನಾಥ್​ ಮಗನಂತೆ, ರಾಜ್​ಕುಮಾರ್​ ಜೊತೆ ರಾಜ್​ಕುಮಾರ್​ ಮಗನಂತೆ ನಟಿಸಿದ್ದ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಈ ರೀತಿ ಯಾವುದೇ ಕಲಾವಿದ ನಟಿಸಿದಾಗ ಎಷ್ಟು ಖುಷಿ ಆಗುತ್ತದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು ಭಗವಾನ್.

ಇದನ್ನೂ ಓದಿ: ಈಜುಡುಗೆ ತೊಡಲ್ಲ, ಸ್ಲೀವ್​ಲೆಸ್ ಹಾಕಲ್ಲ; ತಾಯಿಗೆ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ

‘ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ ಎಂಬ ಹಾಡಿನ ಶೂಟ್ ದೃಶ್ಯ. ಇದನ್ನು ನೋಡಿ ಸರೋಜಾ ದೇವಿ ಅವರು ‘ಈ ಮಗು ನನ್ನ ಮಗವೇ ಆಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಅಂತ ಹೇಳಿದ್ದರು. ಆಕೆ ಏಳು ಭಾಷೆಯ ತಾರೆ. ಅಂಥವರ ಜೊತೆ ಅಪ್ಪು ನಟಿಸಿದ್ದ’ ಎಂದು ಭಗವಾನ್ ವಿವರಿಸಿದ್ದರು. ಪುನೀತ್ ಅವರ ‘ನಟಸಾರ್ವಭೌಮ’ ಚಿತ್ರದಲ್ಲಿ ಸರೋಜಾ ದೇವಿ ಅತಿಥಿ ಪಾತ್ರ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.