Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: ಯಶ್​ ನಟನೆಯ ‘ಕೆಜಿಎಫ್​ 2’ ತಂಡದಿಂದ ಸರ್​ಪ್ರೈಸ್​; ಪವರ್​ಫುಲ್​ ಪೋಸ್ಟರ್​ ರಿಲೀಸ್​

ಮಾಳವಿಕಾ ಅವಿನಾಶ್, ಅರ್ಚನಾ ಜೋಯಿಸ್​, ರವೀನಾ ಟಂಡನ್​ ಮೊದಲಾದ ಮಹಿಳಾ ಕಲಾವಿದರು ಇರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ವಿಶೇಷ ಸಾಲುಗಳನ್ನು ಕೂಡ ಬರೆಯಲಾಗಿದೆ.

KGF Chapter 2: ಯಶ್​ ನಟನೆಯ ‘ಕೆಜಿಎಫ್​ 2’ ತಂಡದಿಂದ ಸರ್​ಪ್ರೈಸ್​; ಪವರ್​ಫುಲ್​ ಪೋಸ್ಟರ್​ ರಿಲೀಸ್​
ಕೆಜಿಎಫ್​ 2 ಪೋಸ್ಟರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 08, 2022 | 3:51 PM

ಯಶ್ (Yash) ನಟನೆಯ ‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾ (KGF Chapter 2 Movie) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ತೆರೆಗೆ ಬರೋಕೆ ಇನ್ನು ಹೆಚ್ಚು ದಿನಗಳು ಉಳಿದಿಲ್ಲ. ಸಿನಿಮಾ ತಂಡ ಈಗ ನಿಧಾನವಾಗಿ ಪ್ರಚಾರ ಕಾರ್ಯ ಆರಂಭಿಸಿದೆ. ಮಾರ್ಚ್​ 27ರಂದು ಟ್ರೇಲರ್ ರಿಲೀಸ್ ಮಾಡುವ ಬಗ್ಗೆ ಈಗಾಗಲೇ ಘೋಷಣೆ ಆಗಿದೆ. ಈಗ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ‘ವಿಶ್ವ ಮಹಿಳಾ ದಿನಾಚರಣೆ’ (International Women’s Day) ಹಿನ್ನೆಲೆಯಲ್ಲಿ ಈ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ‘ಕೆಜಿಎಫ್​’ ಹಾಗೂ ‘ಕೆಜಿಎಫ್​ 2’ನಲ್ಲಿ ಬರುವ ಎಲ್ಲಾ ಪ್ರಮುಖ ಮಹಿಳಾ ಪಾತ್ರಗಳನ್ನು ಪೋಸ್ಟರ್​ನಲ್ಲಿ ತೋರಿಸಲಾಗಿದೆ.

ಮಾಳವಿಕಾ ಅವಿನಾಶ್, ಅರ್ಚನಾ ಜೋಯಿಸ್​, ರವೀನಾ ಟಂಡನ್​ ಮೊದಲಾದ ಮಹಿಳಾ ಕಲಾವಿದರು ಇರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ವಿಶೇಷ ಸಾಲುಗಳನ್ನು ಕೂಡ ಬರೆಯಲಾಗಿದೆ. ‘ನೀವು ಜನ್ಮ ನೀಡುತ್ತೀರಿ. ನೀವು ಪೋಷಿಸುತ್ತೀರಿ. ನೀವು ತ್ಯಾಗ ಮಾಡುತ್ತೀರಿ. ನೀವು ಪ್ರೀತಿಸುತ್ತೀರಿ. ನೀವು ಕಾಳಜಿ ವಹಿಸುತ್ತೀರಿ. ನೀವು ಶಕ್ತಿವಂತರು. ನೀವು ಸೃಷ್ಟಿಕರ್ತರು. ನೀವೇ ಬ್ರಹ್ಮಾಂಡ. ಅವರೆಲ್ಲರಿಗೂ ವಂದನೆಗಳು’ ಎಂದು ಬರೆಯಲಾಗಿದೆ.

ಪೋಸ್ಟರ್​ ನೋಡಿ ಅನೇಕರು ಖುಷಿ ಪಟ್ಟಿದ್ದಾರೆ. ಈ ಪೋಸ್ಟರ್​ನಲ್ಲಿ ರಿಲೀಸ್ ಡೇಟ್​ ಉಲ್ಲೇಖವಾಗಿಲ್ಲ. ಈ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ದಾರೆ. ‘ಸಿನಿಮಾ ಬಿಡುಗಡೆ ದಿನಾಂಕವನ್ನು ಪೋಸ್ಟರ್​ನಲ್ಲಿ ಯಾಕೆ ಹಾಕಿಲ್ಲ?’ ಎಂದು ಕೇಳಿದ್ದಾರೆ. ಏಪ್ರಿಲ್​ 14ರಂದು ಸಿನಿಮಾ ತೆರೆಗೆ ಬರೋದು ಬಹುತೇಕ ಖಚಿತವಾಗಿದೆ. ಹೀಗಾಗಿ, ಪೋಸ್ಟರ್​ನಲ್ಲಿ ರಿಲೀಸ್ ದಿನಾಂಕ ಉಲ್ಲೇಖ ಮಾಡದ ಮಾತ್ರಕ್ಕೆ ಸಿನಿಮಾ ಬಿಡುಗಡೆ ದಿನಾಂಕ ವಿಳಂಬವಾಗುವುದಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

ಪಿಂಕ್​ವಿಲ್ಲಾ ವೆಬ್​ ಸೈಟ್​ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಯಶ್,​ ‘ಕೆಜಿಎಫ್​ 2’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ಕೆಜಿಎಫ್​ನ ಮೊದಲ ಭಾಗ ಶೂಟ್​ ಮಾಡುವಾಗ ‘ಕೆಜಿಎಫ್​ 2’ನ ಕೆಲ ಪಾರ್ಟ್​ಗಳನ್ನು ಶೂಟ್​ ಮಾಡಲಾಗಿತ್ತು. ಇದು ಯಾವ ಭಾಷೆ ಅಥವಾ ಯಾವ ಮಾರುಕಟ್ಟೆ ಎನ್ನುವುದಲ್ಲ. ನಾವು ಎಷ್ಟು ಜನರಿಗೆ ರೀಚ್​ ಆಗುತ್ತೇವೆ ಎನ್ನುವುದು ಪ್ರಮುಖವಾಗುತ್ತದೆ. ಎಲ್ಲಾ ವಯಸ್ಸಿನವರು ಆನಂದಿಸಬಹುದಾದ ಕಥೆಯನ್ನು ಹೇಳುವ ಗುರಿಯನ್ನು ನಾನು ಹೊಂದಿದ್ದೇನೆ’ ಎಂದಿದ್ದರು.

ಇದನ್ನೂ ಓದಿ: Yash: ಮುಂಬೈನಲ್ಲಿ ಕಾಣಿಸಿಕೊಂಡ ಯಶ್​; ಇದರ ಹಿಂದಿರೋ ರಹಸ್ಯ ಏನು?

KGF Chapter 2: ‘ಕೆಜಿಎಫ್​ 2’ ಹೇಗಿದೆ? ಯಶ್​ ಕೊಟ್ರು ಸಂಪೂರ್ಣ ಮಾಹಿತಿ

Published On - 3:44 pm, Tue, 8 March 22

ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ