‘ಟೈಮ್​ಗೆ​ ಸರಿಯಾಗಿ ಶೂಟಿಂಗ್​ಗೆ ಬರ್ತೀನಿ, ಪ್ಲೀಸ್​ ಚಾನ್ಸ್​ ಕೊಡಿ’; ನಿರ್ಮಾಪಕಿ ಬಳಿ ಶಾರುಖ್​ ಮನವಿ

Shah Rukh Khan: ‘ಮುಂದಿನ ಸಿನಿಮಾದಲ್ಲಿ ನನಗೊಂದು ಚಿಕ್ಕ ಅವಕಾಶ ಕೊಡಿ. ಸರಿಯಾದ ಸಮಯಕ್ಕೆ ನಾನು ಶೂಟಿಂಗ್​ಗೆ ಬರುತ್ತೇನೆ. ತುಂಬ ಪ್ರೊಫೆಷನಲ್​ ಆಗಿ ಇರುತ್ತೇನೆ. ಈ ಬಗ್ಗೆ ಪ್ರಾಮಿಸ್​ ಮಾಡುತ್ತೇನೆ’ ಎಂದು ಶಾರುಖ್​ ಖಾನ್ ಮನವಿ ಮಾಡಿದ್ದಾರೆ.

‘ಟೈಮ್​ಗೆ​ ಸರಿಯಾಗಿ ಶೂಟಿಂಗ್​ಗೆ ಬರ್ತೀನಿ, ಪ್ಲೀಸ್​ ಚಾನ್ಸ್​ ಕೊಡಿ’; ನಿರ್ಮಾಪಕಿ ಬಳಿ ಶಾರುಖ್​ ಮನವಿ
ಶಾರುಖ್​ ಖಾನ್​
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 04, 2021 | 4:02 PM

ಬಾಲಿವುಡ್​ನಲ್ಲಿ ಸದ್ಯ ಶಾರುಖ್​ ಖಾನ್​ ಸ್ಥಿತಿ ಯಾವ ರೀತಿ ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ ಯಾವ ಸಿನಿಮಾ ಕೂಡ ಗೆದ್ದಿಲ್ಲ. ಏನೇ ಪ್ರಯತ್ನಪಟ್ಟರೂ ವಿಜಯಲಕ್ಷ್ಮೀ ಅವರ ಕಡೆಗೆ ಸುಳಿಯುತ್ತಿಲ್ಲ. ಹಾಗಾಗಿ, ‘ಜೀರೋ’ ಸಿನಿಮಾ ಸೋತ ಬಳಿಕ ಅವರು ದೀರ್ಘ ಗ್ಯಾಪ್​ ಪಡೆದುಕೊಂಡಿದ್ದರು. ಈಗ ‘ಪಠಾಣ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಷ್ಟೇ ಬಾರಿ ಸೋತಿದ್ದರೂ ಕೂಡ ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಮುಗಿಬೀಳುವುದನ್ನು ನಿಲ್ಲಿಸಿಲ್ಲ. ಆದರೆ ಅವರೆಲ್ಲರನ್ನೂ ಬಿಟ್ಟು, ಓರ್ವ ನಟಿಯ ಬಳಿ ಶಾರುಖ್​ ಅವಕಾಶ ಕೇಳಿದ್ದಾರೆ.

ಶಾರುಖ್​ ಹೀಗೆ ಅವಕಾಶ ಕೇಳಿರುವುದು ಆಲಿಯಾ ಭಟ್​ ಬಳಿ. ಇದು ನಿಜವೋ ಅಥವಾ ತಮಾಷೆಯೋ ಅಂತ ನೀವೇ ನಿರ್ಧರಿಸಿ. ಅಸಲಿಗೆ ನಡೆದ ಘಟನೆ ಏನೆಂದರೆ, ಈಗ ಆಲಿಯಾ ಭಟ್​ ನಿರ್ಮಾಪಕಿ ಕೂಡ ಆಗಿದ್ದಾರೆ. ‘ಡಾರ್ಲಿಂಗ್ಸ್’ ಶೀರ್ಷಿಕೆಯ ಹೊಸ ಚಿತ್ರಕ್ಕೆ ಅವರು ಬಂಡವಾಳ ಹೂಡುವುದರ ಜೊತೆಗೆ ನಟಿಸುತ್ತಿದ್ದಾರೆ ಕೂಡ. ಆ ಚಿತ್ರದ ಮೊದಲ ದಿನದ ಚಿತ್ರೀಕರಣದ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್​ ಮಾಡಿರುವ ಶಾರುಖ್​ ಅವರು, ಆಲಿಯಾ ಬಳಿ ಬಹಿರಂಗವಾಗಿಯೇ ಅವಕಾಶ ಕೇಳಿದ್ದಾರೆ.

‘ಈ ಸಿನಿಮಾ ಆದ ಬಳಿಕ ನಿಮ್ಮ ಹೋಮ್​ ಪ್ರೊಡಕ್ಷನ್​ನಲ್ಲಿ ಬರುವ ಮುಂದಿನ ಸಿನಿಮಾದಲ್ಲಿ ನನಗೊಂದು ಚಿಕ್ಕ ಅವಕಾಶ ಕೊಡಿ. ಸರಿಯಾದ ಸಮಯಕ್ಕೆ ನಾನು ಶೂಟಿಂಗ್​ಗೆ ಬರುತ್ತೇನೆ. ತುಂಬ ಪ್ರೊಫೆಷನಲ್​ ಆಗಿ ಇರುತ್ತೇನೆ. ಈ ಬಗ್ಗೆ ಪ್ರಾಮಿಸ್​ ಮಾಡುತ್ತೇನೆ’ ಎಂದು ಶಾರುಖ್​ ಖಾನ್​ ಟ್ವೀಟ್​ ಮಾಡಿದ್ದಾರೆ. ಇದು ಸದ್ಯ ವೈರಲ್​ ಆಗುತ್ತಿದೆ. ಆಲಿಯಾ ನಿರ್ಮಿಸುತ್ತಿರುವ ‘ಡಾರ್ಲಿಂಗ್ಸ್​’ ಚಿತ್ರಕ್ಕೆ ಶಾರುಖ್​ ಪತ್ನಿ ಗೌರಿ ಖಾನ್​ ಕೂಡ ನಿರ್ಮಾಪಕಿ ಎಂಬುದು ಗಮನಿಸಬೇಕಾದ ಅಂಶ.

ಶಾರುಖ್​ ಮಾಡಿದ ಟ್ವೀಟ್​ಗೆ ಆಲಿಯಾ ಕೂಡಲೇ ಉತ್ತರ ನೀಡಿದ್ದಾರೆ. ‘ಹಹ್ಹಹ್ಹ.. ಇದಕ್ಕಿಂತ ಹೆಚ್ಚು ನಾನು ಏನ್ನನ್ನೂ ಕೇಳಲು ಸಾಧ್ಯವಿಲ್ಲ. ಆಯಿತು, ಒಪ್ಪಂದಕ್ಕೆ ಸಹಿ ಮಾಡಿದ್ದೇನೆ. ಲವ್​ ಯೂ ಮೈ ಫೇವರಿಟ್​’ ಎಂದು ಆಲಿಯಾ ಪ್ರತಿಕ್ರಿಯಿಸಿದ್ದಾರೆ. ಇಬ್ಬರ ನಡುವಿನ ಈ ಟ್ವೀಟ್​ ಮಾತುಕತೆ ಅಭಿಮಾನಿಗಳ ಗಮನ ಸೆಳೆದಿದೆ. 2016ರಲ್ಲಿ ಗೌರಿ ಶಿಂದೆ ನಿರ್ದೇಶನ ಮಾಡಿದ್ದ ‘ಡಿಯರ್​ ಜಿಂದಗಿ’ ಸಿನಿಮಾದಲ್ಲಿ ಶಾರುಖ್​ ಮತ್ತು ಆಲಿಯಾ ಜೊತೆಯಾಗಿ ನಟಿಸಿದ್ದರು.

ಇದನ್ನೂ ಓದಿ:

Shah Rukh Khan: ‘ನೀವು ನಿರುದ್ಯೋಗಿ ಆಗಿಬಿಟ್ರಾ’ ಎಂದು ನೇರವಾಗಿ ಕೇಳಿದ ನೆಟ್ಟಿಗನಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ಏನು?

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ