AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನತಾರಾಗೆ ಕೊಟ್ಟಿದ್ದ ಆಫರ್​ ಬಾಚಿಕೊಂಡ ಸ್ಯಾಂಡಲ್​ವುಡ್​​ ನಟಿ; ಕಾಲಿವುಡ್​​​ನಲ್ಲಿ ಹೆಚ್ಚಾಯ್ತು ಕನ್ನಡ ಮಂದಿಯ ಹವಾ

ನಯನತಾರಾ ಶೀಘ್ರವೇ ವಿವಾಹವಾಗುತ್ತಿದ್ದಾರೆ. ಈ ಕಾರಣಕ್ಕೆ ಅವರು ಬಂದ ಆಫರ್​ಗಳನ್ನು ರಿಜೆಕ್ಟ್​ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಒಪ್ಪಿಕೊಂಡ ಕೆಲ ಸಿನಿಮಾಗಳಿದ್ದು, ಅದರ ಶೂಟಿಂಗ್ ಮುಗಿಸಲೇಬೇಕಿದೆ.

ನಯನತಾರಾಗೆ ಕೊಟ್ಟಿದ್ದ ಆಫರ್​ ಬಾಚಿಕೊಂಡ ಸ್ಯಾಂಡಲ್​ವುಡ್​​ ನಟಿ; ಕಾಲಿವುಡ್​​​ನಲ್ಲಿ ಹೆಚ್ಚಾಯ್ತು ಕನ್ನಡ ಮಂದಿಯ ಹವಾ
ನಯನತಾರಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 19, 2021 | 2:47 PM

Share

ತಮಿಳು, ತೆಲುಗು ಹಾಗೂ ಬಾಲಿವುಡ್​ನಲ್ಲಿ ಕನ್ನಡದ ಸಾಕಷ್ಟು ನಟಿಯರು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಸೇರಿ ಸಾಕಷ್ಟು ಹೀರೋಯಿನ್​ಗಳನ್ನು ಪರಭಾಷೆಗಳಿಂದ ಆಫರ್​ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕರಾವಳಿ ಬೆಡಗಿ ಕೃತಿ ಶೆಟ್ಟಿ (Krithi Shetty), ಪೂಜಾ ಹೆಗ್ಡೆ (Pooja Hegde) ಮೊದಲಾದವರು ಕೂಡ ಈ ಸಾಲಿನಲ್ಲಿ ಇದ್ದಾರೆ. ಈಗ ನಟಿ ನಯನತಾರಾ (Nayanthara) ಅವರಿಗೆ ಸಿಕ್ಕಿದ್ದ ಆಫರ್​ಅನ್ನು ಕನ್ನಡದ ನಟಿ ಬಾಚಿಕೊಂಡಿದ್ದಾರೆ. ಯಾರವರು? ಶ್ರದ್ಧಾ ಶ್ರೀನಾಥ್ (Shraddha Srinath)​. ಅದ್ಭುತ ನಟನೆ ಮೂಲಕ ಹೆಸರು ಮಾಡಿರುವ ಶ್ರದ್ಧಾ ಈಗ ತಮಿಳು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ನಯನತಾರಾ ಶೀಘ್ರವೇ ವಿವಾಹವಾಗುತ್ತಿದ್ದಾರೆ. ಈ ಕಾರಣಕ್ಕೆ ಅವರು ಬಂದ ಆಫರ್​ಗಳನ್ನು ರಿಜೆಕ್ಟ್​ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಒಪ್ಪಿಕೊಂಡ ಕೆಲ ಸಿನಿಮಾಗಳಿದ್ದು, ಅದರ ಶೂಟಿಂಗ್ ಮುಗಿಸಲೇಬೇಕಿದೆ. ಶಾರುಖ್​ ಖಾನ್​ ಹಾಗೂ ನಿರ್ದೇಶಕ ಅಟ್ಲೀ ಸಿನಿಮಾದಿಂದ ನಯನತಾರಾ ಹೊರ ನಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಈ ಸಿನಿಮಾದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಈ ಸಿನಿಮಾ ಬದಲಿಗೆ ಯುವರಾಜ್​ ಧಯಲಾನ್​ ನಿರ್ದೇಶನದ ತಮಿಳು ಸಿನಿಮಾದಿಂದ ಅವರು ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದರು. ಹೀಗಾಗಿ, ಶಾರುಖ್​ ಸಿನಿಮಾ ಕೆಲಸಗಳು ವಿಳಂಬವಾಗಿದೆ. ನಯನತಾರಾ ಇಲ್ಲದೆ ಇರುವ ದೃಶ್ಯಗಳ ಚಿತ್ರೀಕರಣವನ್ನು ಯುವರಾಜ್​ ಮಾಡಿ ಮುಗಿಸಿದ್ದಾರೆ. ಅಟ್ಲೀ ಚಿತ್ರದ ಕೆಲಸಗಳನ್ನು ಮುಗಿಸಿ ನಯನತಾರಾ ಇತ್ತ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ಶಾರುಖ್​ ಸಿನಿಮಾ ಕೆಲಸಗಳು ವಿಳಂಬವಾಗುತ್ತಿರುವುದರಿಂದ ಅವರಿಗೆ ಡೇಟ್​ ಹೊಂದಿಸೋದು ಕಷ್ಟವಾಗುತ್ತಿದೆ. ಹೀಗಾಗಿ, ಅವರು ಯುವರಾಜ್​ ನಿರ್ದೇಶನದ ಚಿತ್ರದಿಂದ ಹೊರ ಬಂದಿದ್ದಾರೆ.

ನಯನತಾರಾ ಬದಲಿಗೆ ಶ್ರದ್ಧಾ ಅವರನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಿನಿಮಾ ನಿರ್ಮಾಪಕ ಎಸ್​.ಆರ್. ಪ್ರಭು ಅವರು ಖಚಿತಪಡಿಸಿದ್ದಾರೆ. ಈ ವಿಚಾರ ಕೇಳಿ ಶ್ರದ್ಧಾ ಅಭಿಮಾನಿಗಳ ಖುಷಿ ಹೆಚ್ಚಿದೆ. ಕನ್ನಡದ ಯು-ಟರ್ನ್​ ಸಿನಿಮಾ ಶ್ರದ್ಧಾಗೆ ಖ್ಯಾತಿ ತಂದು ಕೊಟ್ಟಿತು. ಈ ಸಿನಿಮಾ ತೆರೆಕಂಡ ನಂತರ ಸಾಕಷ್ಟು ಆಫರ್​ಗಳು ಅವರಿಗೆ ಬಂದವು.

ಇದನ್ನೂ ಓದಿ: ಪ್ರಿಯಕರನ​ ಬದಲು ಮರದ ಜತೆ ನಯನತಾರಾ ಮದುವೆ; ಏನಿದು ಸಮಾಚಾರ?

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,