Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubha Poonja: ಈ ವಾರ ಸೇಫ್​ ಆದ ಶುಭಾ ಪೂಂಜಾಗೆ ಕಿಚ್ಚ ಸುದೀಪ್​ ಕಡೆಯಿಂದ ಸರ್​ಪ್ರೈಸ್​ ಗಿಫ್ಟ್

ಬಿಗ್​ ಬಾಸ್​ನ ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್​ ಮಾತನಾಡಿದ್ದಾರೆ. ಈ ವಿಡಿಯೋವನ್ನು ಕಲರ್ಸ್​ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Shubha Poonja: ಈ ವಾರ ಸೇಫ್​ ಆದ ಶುಭಾ ಪೂಂಜಾಗೆ ಕಿಚ್ಚ ಸುದೀಪ್​ ಕಡೆಯಿಂದ ಸರ್​ಪ್ರೈಸ್​ ಗಿಫ್ಟ್
ಶುಭಾ ಪೂಂಜಾ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Mar 14, 2021 | 6:50 PM

ವೀಕೆಂಡ್​ ಬಂತೆಂದರೆ ಬಿಗ್​ ಬಾಸ್​ ಮನೆಗೆ ವಿಶೇಷ ಕಳೆ ಬರುತ್ತದೆ. ಕಿಚ್ಚ ಸುದೀಪ್​ ಬರೋದೇ ಇದಕ್ಕೆ ಕಾರಣ. ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಎರಡನೇ ವಾರ ಪೂರ್ಣಗೊಳಿಸುತ್ತಿದೆ. ಈ ವಾರ ಬಿಗ್​ ಬಾಸ್​ ಮನೆಯಿಂದ ಯಾರು ಹೊರ ಹೋಗುತ್ತಾರೆ ಅನ್ನೋದು ಸದ್ಯದ ಕುತೂಹಲ. ಈ ಕುತೂಹಲಗಳ ಮಧ್ಯೆಯೇ ವಾರಾಂತ್ಯದಲ್ಲಿ ಕಿಚ್ಚ ಸುದೀಪ್​ ಶುಭಾ ಪೂಂಜಾ ಬೆನ್ನು ತಟ್ಟಿದ್ದಾರೆ. ಎರಡನೇ ವಾರ ನೇರವಾಗಿ ನಾಮಿನೇಟ್​ ಆದವರ ಸಾಲಿನಲ್ಲಿ ಪೂಜಾ ಇದ್ದರು. ಆದರೆ, ಅವರು ಮನೆಯಲ್ಲಿ ಸ್ಪರ್ಧಾತ್ಮಕವಾಗಿ ಆಡಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಟಾಸ್ಕ್​ ವಿಚಾರ ಬಂದಾಗಲೂ ಎಲ್ಲರನ್ನೂ ಒಂದೇ ರೀತಿ ಕಂಡಿದ್ದರು. ಎದುರಾಳಿಗಳಿಗೂ ಟಿಪ್ಸ್​ ನೀಡಿದ್ದರು ಶುಭಾ. ಇದು ಸುದೀಪ್​ಗೆ ಇಷ್ಟವಾಗಿದೆ. ಹೀಗಾಗಿ, ಶುಭಾಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಈ ವಾರ ಯಾರು ಸೇಫ್​ ಆಗುತ್ತಾರೆ ಎನ್ನುವ ವಿಚಾರವನ್ನು ಮನೆ ಸದಸ್ಯರಿಗೆ ಕೇಳಿದಾಗ ಬಹುತೇಕರು ಶುಭಾ ಅವರ ಹೆಸರನ್ನು ಹೇಳಿದ್ದರು. ಅಂತೆಯೇ ಶುಭಾ ಸೇಫ್​ ಆದರು. ಸೇಫ್​ ಆಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಶುಭಾ ಕುಣಿದು ಕುಪ್ಪಳಿಸಿದ್ದಾರೆ.

ಬಿಗ್​ ಬಾಸ್​ನ ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್​ ಮಾತನಾಡಿದ್ದಾರೆ. ಈ ವಿಡಿಯೋವನ್ನು ಕಲರ್ಸ್​ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ವಾರ ಒಬ್ಬರು ಆಲ್​ರೌಂಡರ್​ ಸಿಕ್ಕಿದ್ರು ಅಂತ ನನಗನ್ನಿಸಿತು. ಆಟ ಆಡುವಾಗ ಮನಸ್ಸಿಟ್ಟು ಆಡಿದರು. ತಪ್ಪು ಮಾಡಿದಾಗ ಒಪ್ಪಿಕೊಂಡರು. ಬೇರೆಯವರು ತಪ್ಪು ಮಾಡಿದಾಗ ನೇರವಾಗಿ ಹೇಳಿದರು. ಸೈಡ್​ಗೆ ಕರೆದು ತಿದ್ದಿದರು. ಚಿಕ್ಕ ಚಿಕ್ಕ ವಿಚಾರಗಳನ್ನು ದೊಡ್ಡದಾಗಿ ತೆಗೆದುಕೊಳ್ಳಲ್ಲ. ಅವರು ಬಹಳಾನೇ ಪ್ರಾಮಾಣಿಕ. ಅವರು ಬೇರಾರು ಅಲ್ಲ ನಮ್ಮ ಗಾಬರಿ ಗೋಪಾಲಮ್ಮ ಶುಭಾ ಪೂಂಜಾ ಎಂದರು ಸುದೀಪ್​. ಈ ಮೂಲಕ ಸುದೀಪ್ ಈ ವಾರದ ಚಪ್ಪಾಳೆಯನ್ನು​​ ಶುಭಾಗೆ ನೀಡಿದರು. ಇದು ಅವರಿಗೆ ಸರ್​ಪ್ರೈಸ್ ಗಿಫ್ಟ್​ ಸಿಕ್ಕಂತಾಗಿದೆ.

ಇದನ್ನೂ ಓದಿ: Bigg Boss Kannada 8: ಬಿಗ್​ ಬಾಸ್​​ನಲ್ಲಿರುವ ಶುಭಾ ಪೂಂಜಾಗೆ ಅಶ್ಲೀಲ ಕಮೆಂಟ್​; ನಿಮಗೂ ಅಕ್ಕ-ತಂಗಿ ಇದ್ದಾರೆ ಅಲ್ವೇ? ನಟಿ ಪ್ರಶ್ನೆ!

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ