AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಹಾಡನ್ನು ನಾನು ಹಾಡಬೇಕಿತ್ತು’; ಬೇಸರ ಮಾಡಿಕೊಂಡ ಸೋನು ನಿಗಮ್

ಸಲೀಂ ಮರ್ಚಂಟ್ ಅವರಿಗೆ ಸೋನು ನಿಗಮ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಲೀಂ ಅವರು ಸೋನು ನಿಗಮ್​ಗೆ ಒಂದು ಪ್ರಶ್ನೆ ಇಟ್ಟಿದ್ದರು. ‘ಒಂದು ಹಾಡನ್ನು ನೀವು ಹಾಡಿಲ್ಲ ಮತ್ತು ಆ ಹಾಡನ್ನು ನಿಮಗೆ ಹಾಡಬೇಕು ಎಂದು ಯಾವಾಗಲೂ ಅನಿಸುತ್ತದೆ ಎಂದರೆ ಅದು ಯಾವ ಹಾಡು’ ಎಂದು ಕೇಳಲಾಯಿತು. ಇದಕ್ಕೆ ಸೋನು ಉತ್ತರಿಸಿದ್ದರು.

‘ಆ ಹಾಡನ್ನು ನಾನು ಹಾಡಬೇಕಿತ್ತು’; ಬೇಸರ ಮಾಡಿಕೊಂಡ ಸೋನು ನಿಗಮ್
ಸೋನು ನಿಗಮ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Nov 20, 2024 | 8:08 AM

Share

ಸೋನು ನಿಗಮ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಹಾಡಿದ ಹಾಡುಗಳು ಸೂಪರ್ ಹಿಟ್ ಆಗಿವೆ. ಕನ್ನಡದ ‘ಮಾಯಾವಿ..’ ಹಾಡನ್ನು ಹಾಡಿ ಅವರು ಮತ್ತೆ ಸುದ್ದಿ ಆಗಿದ್ದಾರೆ. ಈ ಹಾಡನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸೋನು ನಿಗಮ್ ಹಾಗೂ ಸಂಜಿತ್ ಹೆಗಡೆ ಜುಗಲ್​ಬಂದಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಸೋನು ನಿಗಮ್ ಅವರು ‘ಮಾಯಾವಿ..’ ಹಾಡಿನ ಬಗ್ಗೆ ಸಂದರ್ಶನ ನೀಡುವಾಗ ಒಂದು ವಿಚಾರ ರಿವೀಲ್ ಮಾಡಿದ್ದಾರೆ.

ಸಲೀಂ ಮರ್ಚಂಟ್ ಅವರಿಗೆ ಸೋನು ನಿಗಮ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಲೀಂ ಅವರು ಸೋನು ನಿಗಮ್​ಗೆ ಒಂದು ಪ್ರಶ್ನೆ ಇಟ್ಟಿದ್ದರು. ‘ಒಂದು ಹಾಡನ್ನು ನೀವು ಹಾಡಿಲ್ಲ ಮತ್ತು ಆ ಹಾಡನ್ನು ನಿಮಗೆ ಹಾಡಬೇಕು ಎಂದು ಯಾವಾಗಲೂ ಅನಿಸುತ್ತದೆ ಎಂದರೆ ಅದು ಯಾವ ಹಾಡು’ ಎಂದು ಕೇಳಲಾಯಿತು. ‘ಆ ರೀತಿಯ ಬಹಳಷ್ಟು ಹಾಡುಗಳು ಇವೆ’ ಎಂದರು ಸೋನು ನಿಗಮ್.

ಆದರೆ, ಸೋನು ನಿಗಮ್​ಗೆ ಒಂದು ಹಾಡಿನ ಬಗ್ಗೆ ವಿಶೇಷ ಪ್ರೀತಿ ಇತ್ತು. ಆ ಬಗ್ಗೆ ಹೇಳಿಕೊಂಡರು. ‘ಖುದಾ ಜಾನೆ. ಇದು ನನ್ನ ಫೇವರಿಟ್ ಹಾಡು. ಅದು ನನಗೆ ಸಿಕ್ಕರೆ ಖುಷಿ ಆಗುತ್ತಿತ್ತು. ಆದರೆ, ಕೆಕೆ ಇದನ್ನು ಚೆನ್ನಾಗಿ ಹಾಡಿದ್ದಾರೆ. ನನಗೆ ಸಿಕ್ಕರೆ ನಾನು ಹಾಡುತ್ತಿದ್ದೆ. ಆದರೆ, ಕೆಕೆ ಅಷ್ಟು ಉತ್ತಮವಾಗಿ ಆ ಹಾಡು ಮೂಡಿ ಬರಲು ಸಾಧ್ಯವಾಗುತ್ತಲೇ ಇರಲಿಲ್ಲ’ ಎಂದಿದ್ದಾರೆ ಸೋನು ನಿಗಮ್.

ಇದನ್ನೂ ಓದಿ: ಸಂಜಿತ್ ಹೆಗಡೆ-ಸೋನು ನಿಗಮ್ ಸಮ್ಮಿಲನ; ‘ಮಾಯಾವಿ..’ ಹಾಡು ಸಖತ್ ಇಂಪು

ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಬಚನಾ ಯೇ ಹಸೀ’ ಚಿತ್ರದ ಹಾಡು ಇದಾಗಿದೆ. ಖ್ಯಾತ ಗಾಯಕ ಕೆಕೆ ಈ ಹಾಡನ್ನು ಹಾಡಿದ್ದರು. ಈ ಹಾಡು ಭರ್ಜರಿ ಹಿಟ್ ಆಗಿತ್ತು. ಕೆಕೆ ಅವರು ಇಂದು ನಮ್ಮ ಜೊತೆ ಇಲ್ಲ ಅನ್ನೋದು ಬೇಸರದ ವಿಚಾರ. ಅವರು ಕೋಲ್ಕತ್ತಾದಲ್ಲಿ ಕಾನ್ಸರ್ಟ್ ನಡೆಸಿದ್ದರು. ವೇದಿಕೆ ಮೇಲೆ ಹಾಡುವಾಗಲೇ ಅವರಿಗೆ ಸಮಸ್ಯೆ ಉಂಟಾಯಿತು. ಆ ಬಳಿಕ ಅವರು ನಿಧನ ಹೊಂದಿದರು. ಈ ವೇಳೆ ಸೋನು ನಿಗಮ್ ಬೇಸರ ಹೊರಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ