AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ’ ಹಾದಿ ಹಿಡಿದ ರಾಜಮೌಳಿ, ಹೈದರಾಬಾದ್​​ನಲ್ಲೇ ವಾರಣಾಸಿ ಸೃಷ್ಟಿಸಿದ ನಿರ್ದೇಶಕ

SS Rajamouli: ಎಸ್​ಎಸ್ ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಸಿನಿಮಾ ಹಾಲಿವುಡ್ ಲೆವೆಲ್​​ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಇದೊಂದು ಸಾಹಸಮಯ ಪ್ರಯಾಣದ ಕತೆಯನ್ನು ಒಳಗೊಂಡಿದ್ದು, ಭಾರತ ಸೇರಿದಂತೆ ವಿಶ್ವದ ಹಲವು ನಗರಗಳಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ. ಇದೀಗ ರಾಜಮೌಳಿ, ಹೈದರಾಬಾದ್​​ನಲ್ಲಿ ಬೀಡು ಬಿಟ್ಟಿದ್ದು, ವಾರಣಾಸಿಯನ್ನೇ ಹೈದರಾಬಾದ್​​ನಲ್ಲಿ ಸೃಷ್ಟಿಸಿದ್ದಾರೆ.

‘ಕಲ್ಕಿ’ ಹಾದಿ ಹಿಡಿದ ರಾಜಮೌಳಿ, ಹೈದರಾಬಾದ್​​ನಲ್ಲೇ ವಾರಣಾಸಿ ಸೃಷ್ಟಿಸಿದ ನಿರ್ದೇಶಕ
Rajamouli
ಮಂಜುನಾಥ ಸಿ.
|

Updated on: Jun 18, 2025 | 3:14 PM

Share

ವಾರಣಾಸಿ ಭೂಮಿಯ ಮೇಲೆ ಸೃಷ್ಟಿಯಾದ ಮೊದಲ ನಗರ, ಎಂದೂ ಅಳಿಯದ ಎನ್ನುತ್ತದೆ ಪುರಾಣ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ವಾರಣಾಸಿ (Varanasi) ನಗರದ ಬಗ್ಗೆ ಸಾಕಷ್ಟು ವಿಷಯವನ್ನು ಹೇಳಲಾಗಿತ್ತು. ಆ ಸಿನಿಮಾದ ಕತೆ ನಡೆಯುವುದೇ ವಾರಣಾಸಿ ನಗರದಲ್ಲಿ. ಇದೀಗ ರಾಜಮೌಳಿ ಸಹ ವಾರಣಾಸಿ ನಗರದ ಪುರಾಣ ಐತಿಹ್ಯಕ್ಕೆ ಮನಸೋತಂತಿದೆ. ತಾವು ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣವನ್ನು ಅವರು ವಾರಣಾಸಿಯಲ್ಲಿ ಮಾಡಲಿದ್ದಾರೆ. ಹಾಗೆಂದು ರಾಜಮೌಳಿ ವಾರಣಾಸಿ ನಗರಕ್ಕೆ ಹೋಗುತ್ತಿಲ್ಲ ಬದಲಿಗೆ ಹೈದರಾಬಾದ್​​ನಲ್ಲೇ ವಾರಣಾಸಿಯನ್ನು ಸೃಷ್ಟಿಸುತ್ತಿದ್ದಾರೆ!

ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಮೂರನೇ ಶೆಡ್ಯೂಲ್​​ ಹೈದರಾಬಾದ್​​ನಲ್ಲಿ ಪ್ರಾರಂಭವಾಗಿದೆ. ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಫಿಲಂ ಸಿಟಿಯಲ್ಲಿ ಬಲು ಅದ್ಧೂರಿಯಾಗಿ ವಾರಣಾಸಿ ನಗರದ ಸೆಟ್ ಅನ್ನು ನಿರ್ಮಾಣ ಮಾಡಲಾಗುತ್ತಿದೆಯಂತೆ. ರಾಜಮೌಳಿ ನಿರ್ದೇಶಿಸುತ್ತಿರುವ ಕತೆ ಸಾಹಸಮಯ ಪ್ರಯಾಣದ ಕತೆ ಹೊಂದಿದ್ದು, ಸಿನಿಮಾನಲ್ಲಿ ಪೌರಾಣಿಕ ಕತೆಯನ್ನು ಆಧರಿಸಿ ಕುತೂಹಲಕಾರಿ ತಿರುವುಗಳು ಇರಲಿವೆ.

ಇದೇ ಕಾರಣಕ್ಕೆ ರಾಜಮೌಳಿಯ ಸಿನಿಮಾ ಪೌರಾಣಿಕ ಮಹತ್ವ ಹೊಂದಿದ ಭಾರತದ ನಗರಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಮಾತ್ರವಲ್ಲದೆ ವಿದೇಶದಲ್ಲಿಯೂ ಸಾಕಷ್ಟು ಚಿತ್ರೀಕರಣ ನಡೆಯಲಿದೆ. ಈಗಾಗಲೇ ಒರಿಸ್ಸಾ, ಅಸ್ಸಾಂ ಇನ್ನೂ ಕೆಲವೆಡೆ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಈಗ ಫಿಲಂ ಸಿಟಿಯಲ್ಲಿ ವಾರಣಾಸಿಯ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಮುಂದಿನ ಶೆಡ್ಯೂಲ್​​ನಲ್ಲಿ ಚಿತ್ರತಂಡ ಕೀನ್ಯಾಕ್ಕೆ ತೆರಳಲಿದ್ದು, ಕೀನ್ಯಾನಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತದೆಯಂತೆ.

ಇದನ್ನೂ ಓದಿ:ಕಡಿಮೆ ಬಜೆಟ್ ಸಿನಿಮಾ ನೋಡಿ ಮನಸಾರೆ ಕೊಂಡಾಡಿದ ರಾಜಮೌಳಿ

ಕೀನ್ಯಾದ ಬಯಲು ಪ್ರದೇಶದಲ್ಲಿ ಅದ್ಧೂರಿ ಚೇಸ್​ ಸೀಕ್ವೆನ್ಸ್ ಚಿತ್ರೀಕರಣ ಮಾಡಲಾಗುತ್ತದೆಯಂತೆ. ಅದಾದ ಬಳಿಕ ಚಿತ್ರತಂಡ ಅಮೆಜಾನ್ ಕಾಡುಗಳಿಗೆ ತೆರಳಲಿದ್ದು, ಅಲ್ಲಿ ಕುತೂಹಲಕಾರಿ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಿದೆ. ಈ ಸಿನಿಮಾ, ಭಾರತದ ಈ ವರೆಗಿನ ಬಲು ದುಬಾರಿ ಸಿನಿಮಾ ಆಗಿರಲಿದ್ದು, ಸಿನಿಮಾಕ್ಕಾಗಿ ಸುಮಾರು 700 ಕೋಟಿ ಬಜೆಟ್ ಹಾಕಲಾಗುತ್ತಿದೆ. ಸಿನಿಮಾನಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ, ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸುತ್ತಿದ್ದಾರೆ.

‘ಇಂಡಿಯಾನಾ ಜೋನ್ಸ್’ ಹಾಲಿವುಡ್ ಸಿನಿಮಾದಿಂದ ಸ್ಪೂರ್ತಿ ಪಡೆದು ಈ ಸಿನಿಮಾವನ್ನು ರಾಜಮೌಳಿ ಮಾಡುತ್ತಿದ್ದಾರೆ. ‘ಇಂಡಿಯಾನಾ ಜೋನ್ಸ್’ ಒಂದು ಸಾಹಸಮಯ ಯಾತ್ರೆಯ ಕತೆ ಒಳಗೊಂಡಿತ್ತು. ಈ ಸಿನಿಮಾಕ್ಕಾಗಿ ರಾಜಮೌಳಿ ಹಲವು ಹಾಲಿವುಡ್ ಸ್ಟುಡಿಯೋಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದು, ಅದ್ಧೂರಿ ವಿಎಫ್​ಎಕ್ಸ್, ಸೌಂಡ್ ಡಿಸೈನ್ ಇನ್ನೂ ಕೆಲವು ನವೀನ ತಂತ್ರಜ್ಞಾನಗಳನ್ನು ಸಿನಿಮಾಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!