AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನ್ನಿ ಲಿಯೋನ್​ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್​ ತೆರೆದಿಟ್ಟ ಮಾದಕ ನಟಿ

Sunny Leone: 2011ರಲ್ಲಿ ಡೇನಿಯಲ್​ ವೆಬರ್​ ಮತ್ತು ಸನ್ನಿ ಲಿಯೋನ್​ ಬಾಳ ಬಂಧನಕ್ಕೆ ಒಳಗಾದರು. ಅಂದಿನಿಂದ ಇಂದಿನವರೆಗೆ ಈ ಜೋಡಿಯ ಮಧ್ಯೆ ಯಾವುದೇ ಕಿರಿಕ್​ ಆಗಿಲ್ಲ.

ಸನ್ನಿ ಲಿಯೋನ್​ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್​ ತೆರೆದಿಟ್ಟ ಮಾದಕ ನಟಿ
ಡೇನಿಯಲ್ ವೆಬರ್ ಮತ್ತು ಸನ್ನಿ ಲಿಯೋನ್
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: May 01, 2021 | 5:27 PM

ಮಾದಕ ನಟಿ ಸನ್ನಿ ಲಿಯೋನ್​ ಅವರು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಪಡ್ಡೆಗಳ ನಿದ್ದೆ ಕದಿಯುವ ಈ ಮಾಜಿ ನೀಲಿ ತಾರೆ ಈಗ ಹಿಂದಿ ಸಿನಿಮಾದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಯಾಗಿ ದಾಂಪತ್ಯ ಜೀವನ ನಡೆಸುತ್ತಿರುವ ಸನ್ನಿ ಲಿಯೋನ್​ ಹಾಗೂ ಅವರ ಪತಿ ಡೇನಿಯಲ್​ ವೆಬರ್​ಗೆ ಈಗ 10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ.

2011ರಲ್ಲಿ ಡೇನಿಯಲ್​ ವೆಬರ್​ ಮತ್ತು ಸನ್ನಿ ಲಿಯೋನ್​ ಬಾಳ ಬಂಧನಕ್ಕೆ ಒಳಗಾದರು. ಅಂದಿನಿಂದ ಇಂದಿನವರೆಗೆ ಈ ಜೋಡಿ ಮಧ್ಯೆ ಯಾವುದೇ ಕಿರಿಕ್​ ಆಗಿಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಚೆನ್ನಾಗಿ ಸಂಸಾರ ನಡೆಸುತ್ತಿದ್ದಾರೆ. ಎಂತೆಂಥ ಸೆಲೆಬ್ರಿಟಿಗಳ ದಾಂಪತ್ಯದಲ್ಲಿ ಬಿರುಕು ಮೂಡಿದರೂ ಸನ್ನಿ ಲಿಯೋನ್​-ಡೇನಿಯಲ್​ ವೆಬರ್​ ಮಾತ್ರ ಅದಕ್ಕೆ ಆಸ್ಪದ ನೀಡಿಲ್ಲ. ಹಾಗಾದರೆ ಅವರ ಸುಖಿ ದಾಂಪತ್ಯದ ಗುಟ್ಟೇನು? ಈ ಬಗ್ಗೆ ಸ್ವತಃ ಸನ್ನಿ ಲಿಯೋನ್​ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಸನ್ನಿ ಲಿಯೋನ್​ ಮತ್ತು ಡೇನಿಯಲ್​ ವೆಬರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ದಾಂಪತ್ಯದ 5 ಸೀಕ್ರೆಟ್​ಗಳನ್ನು ಬಹಿರಂಗ ಪಡಿಸಿದ್ದಾರೆ. ಪತಿ-ಪತ್ನಿಯ ಬಂಧ ಸದಾ ಗಟ್ಟಿಯಾಗಿರಬೇಕು ಎಂದರೆ ಏನು ಮಾಡಬೇಕು ಎಂದು ಅವರು ಹೇಳಿದ್ದಾರೆ.

ಅವರ ಪ್ರಕಾರ, 1) ಸದಾ ಮಾತನಾಡುತ್ತ ಇರಬೇಕು. 2) ನೈಟ್​ ಡೇಟಿಂಗ್​ ಪ್ಲ್ಯಾನ್​ ಮಾಡಬೇಕು. 3) ಒಟ್ಟಿಗೆ ಅಡುಗೆ ಮಾಡಬೇಕು. 4) ಒಬ್ಬರನ್ನೊಬ್ಬರು ನಗಿಸಬೇಕು. 5) ಪರಸ್ಪರರಿಗೆ ಮೆಚ್ಚುಗೆ ಸೂಚಿಸಬೇಕು.

View this post on Instagram

A post shared by Sunny Leone (@sunnyleone)

2011ರ ಏ.9ರಂದು ಡೇನಿಯಲ್​ ವೇಬರ್​ ಮತ್ತು ಸನ್ನಿ ಲಿಯೋನ್​ ಮದುವೆಯಾದರು. 2017ರಲ್ಲಿ ನಿಶಾ ಎಂಬ ಹೆಣ್ಣುಮಗುವನ್ನು ಈ ಜೋಡಿ ದತ್ತು ಪಡೆದುಕೊಂಡಿತು. ನಂತರ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡುಮಕ್ಕಳನ್ನು ಪಡೆದುಕೊಂಡರು. ಬಾಲಿವುಡ್​ನ ಅನೇಕ ಐಟಂ ಸಾಂಗ್​ಗಳಲ್ಲಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್​ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ಹಾಡಿಗೆ ಮತ್ತೆ ಸೊಂಟ ಬಳುಕಿಸೋಕೆ ಬಂದ ಸನ್ನಿ ಲಿಯೋನ್​..

Sunny Leone : ಮೂರನೆ ಚಿತ್ರದ ಶೂಟಿಂಗ್​ಗೆ ನಟಿ ಸನ್ನಿ ಲಿಯೋನ್ ಕೇರಳದಲ್ಲಿ…!

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ