
ಸ್ಟಾರ್ ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೃಷ್ಟಿಸಿದ ದಾಖಲೆ ಸಣ್ಣದೇನಲ್ಲ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಬಾಚಿದ ಈ ಚಿತ್ರ ಭಾರೀ ಯಶಸ್ಸು ಕಂಡಿತು. ಆದರೆ ಈ ಸಿನಿಮಾದ ಬಿಡುಗಡೆ ಮುನ್ನ ಎದುರಾದ ಆರ್ಥಿಕ ಸಂಕಷ್ಟ ಸಣ್ಣದಲ್ಲ. ಕೊನೆ ಕ್ಷಣದ ಸಾಲದ ಸುಳಿಗೆ ಸಿಲುಕಿದ್ದ ಸೂರ್ಯ, ಆ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗ ದೊಡ್ಡ ಆರ್ಥಿಕ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು. ಎಲ್ಲಾ ತೊಂದರೆಗಳನ್ನು ಬಗೆಹರಿಸಿ ಮೇ 15 ರಂದು ಚಿತ್ರವನ್ನು ಯಶಸ್ವಿಯಾಗಿ ರಿಲೀಸ್ ಮಾಡಲಾಯಿತು.
ಇತ್ತೀಚಿನ ಸಂದರ್ಶನದಲ್ಲಿ ಸೂರ್ಯ ಈ ಕಷ್ಟದ ಸಮಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಸಮಯದಲ್ಲಿ ತಮಗೆ ಹೆಂಡತಿ ಜ್ಯೋತಿಕಾ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ಕೊನೆ ಕ್ಷಣದಲ್ಲಿ ಸಾಲ ಪಡೆಯಲು ಜ್ಯೋತಿಕಾ ಧೈರ್ಯ ನೀಡಿದ್ದರು. ಈ ನಿರ್ಧಾರ ತಪ್ಪಾಗಿದ್ದರೆ ಕುಟುಂಬಕ್ಕೆ ದೊಡ್ಡ ಕಷ್ಟ ಎದುರಾಗುತ್ತಿತ್ತು.
ಚಿತ್ರರಂಗದಲ್ಲಿ ಎಷ್ಟೇ ವರ್ಷ ಅನುಭವ ಇದ್ದರೂ ಇಂತಹ ಕಷ್ಟಗಳು ಎದುರಾಗುತ್ತವೆ. ಆ ಸಮಯದಲ್ಲಿ ನಂಬಿಕೆಯೇ ನಮಗೆ ದೊಡ್ಡ ಶಕ್ತಿಯಾಯಿತು. ಕುಟುಂಬದ ಬೆಂಬಲ ಇದ್ದಿದ್ದರಿಂದಲೇ ಸಾಲ ಮಾಡಿ ಸಿನಿಮಾವನ್ನು ಹೊರತನ್ನಲು ಸಾಧ್ಯವಾಯಿತು.
ಇದನ್ನೂ ಓದಿ: ಶತಕೋಟಿ ಕ್ಲಬ್ ಸೇರಿದ ತಮಿಳು ನಟ ಸೂರ್ಯ; 100 ಕೋಟಿ ರೂಪಾಯಿ ಸಂಭಾವನೆ
ಇದು ಕೇವಲ ತಮ್ಮೊಬ್ಬರ ಶ್ರಮವಲ್ಲ ಎಂದು ಸೂರ್ಯ ಸ್ಪಷ್ಟಪಡಿಸಿದ್ದಾರೆ. ಹಣಕಾಸುದಾರರು ಮತ್ತು ಥಿಯೇಟರ್ ಮಾಲೀಕರು ನಮಗೆ ಸಾಥ್ ನೀಡಿದರು. ಶೇಕಡಾ 25 ರಿಂದ 30 ರಷ್ಟು ಹಣವನ್ನು ಆಮೇಲೆ ಪಡೆಯಲು ಒಪ್ಪಿಕೊಂಡರು. ಎಲ್ಲರ ಸಹಕಾರದಿಂದ ಸಿನಿಮಾ ಯಶಸ್ವಿಯಾಗಿ ಬಿಡುಗಡೆಯಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.