AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSR Dreams: ಸುಶಾಂತ್​ ಸಿಂಗ್​ ಕಂಡ ಆ 50 ಕನಸುಗಳ ಬಗ್ಗೆ ನಿಮಗೆ ಗೊತ್ತೇ?

Sushant Singh Rajput Death Anniversary: ಪದವಿ ಮುಗಿಯುವುದಕ್ಕೂ ಮೊದಲೇ ಸುಶಾಂತ್​ ನಟನೆಗೆ ಕಾಲಿಡುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ, ಪದವಿ ಪೂರ್ಣಗೊಂಡಿರಲಿಲ್ಲ. ಅವರಿಗೆ ಪದವಿ ಪಡೆಯುವ ಆಸೆ ಇತ್ತು.

SSR Dreams: ಸುಶಾಂತ್​ ಸಿಂಗ್​ ಕಂಡ ಆ 50 ಕನಸುಗಳ ಬಗ್ಗೆ ನಿಮಗೆ ಗೊತ್ತೇ?
ಸುಶಾಂತ್​ ಸಿಂಗ್​
Follow us
ರಾಜೇಶ್ ದುಗ್ಗುಮನೆ
|

Updated on:Jun 13, 2021 | 7:40 PM

ಸುಶಾಂತ್ ಸಿಂಗ್​ ರಜಪೂತ್​ ಕೇವಲ ನಟನಾಗಿರಲಿಲ್ಲ. ಅವರಲ್ಲಿ ಒಂದು ಅಗಾಧವಾದ ಕನಸಿತ್ತು. ಸಾರ್ವಜನಿಕವಾಗಿ ಕಾಣಿಸಿಕೊಂಡಾಗೆಲ್ಲ ಅವರು ನಗುತ್ತಲೇ ಮಾತನಾಡುತ್ತಿದ್ದರು. ಇಷ್ಟೆಲ್ಲ ಕನಸುಗಳನ್ನು ಕಂಡಿದ್ದ ಸುಶಾಂತ್​ ನಿಧನರಾಗಿ ಸೋಮವಾರ (ಜೂನ್​ 14) ಒಂದು ವರ್ಷ ಕಳೆಯಲಿದೆ. ಹಾಗಾದರೆ ಸುಶಾಂತ್ ಸಿಂಗ್​ ಕಂಡ ಕನಸುಗಳೇನು? ಆ ಬಗ್ಗೆ ಇಲ್ಲಿದೆ ಮಾಹಿತಿ.  

ಸುಶಾಂತ್​ ಸಿಂಗ್​ ಆಗಸದಲ್ಲಿ ಹಾರಾಡುವ ಕನಸು ಕಂಡಿದ್ದರು. ಅಂದರೆ, ಪೈಲಟ್​ ಲೈಸೆನ್ಸ್​ ಪಡೆದು ಫ್ಲೈಟ್​ ಹಾರಿಸುವ ಕನಸನ್ನು ಕಂಡಿದ್ದರು. ಅವರಿಗೆ, ಆಗಸದಲ್ಲಿ ಹಾರಾಡುವುದು ಎಂದರೆ, ಒಂದು ಅದ್ಭುತ ಎನಿಸುತ್ತಿತ್ತಂತೆ.

ಇನ್ನು, ಆಸಕ್ತ 100 ಮಕ್ಕಳನ್ನು ಸುಶಾಂತ್​ ನಾಸಾ ವರ್ಕ್​ಶಾಪ್​ಗೆ ಕಳಿಸಬೇಕು ಎಂದುಕೊಂಡಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು, ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನಾಸಾ ವರ್ಕ್​​ಶಾಪ್​ಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ, ಅದು ಸಾಧ್ಯವಾಗಿಲ್ಲ. ನಟನಾದಮೇಲೆ ಅಲ್ಲಿಗೆ ತೆರಳೋಕೆ ಅವಕಾಶ ಸಿಕ್ಕಿತ್ತು ಎಂದಿದ್ದರು.

ಸುಶಾಂತ್​ ಐರನ್​ ಮ್ಯಾನ್​ ಮ್ಯಾರಥಾನ್​ನಲ್ಲಿ ಪಾಲ್ಗೊಳ್ಳುವ ಆಸೆ ಇಟ್ಟುಕೊಂಡಿದ್ದರು. ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೆಣ್ಣುಮಕ್ಕಳಿಗೆ ಹೇಳಿಕೊಡುವುದು, ಕೃಷಿ ಮಾಡೋದು ಹೇಗೆ ಎಂದು ಕಲಿಯುವುದು, ಮಳೆಯಲ್ಲಿ ಫುಟ್​ಬಾಲ್​ ಆಡುವುದು, ಯುರೋಪ್​ ರಾಷ್ಟ್ರಗಳನ್ನು ರೈಲಿನಲ್ಲಿ ಸುತ್ತುವುದು, ಲ್ಯಾಂಬೋರ್ಗಿನಿ ಕಾರು ಖರೀದಿಸೋದು, ಪುಸ್ತಕ ಬರೆಯೋದು ಅವರ ಕನಸುಗಳ ಸಾಲಿನಲ್ಲಿದ್ದವು.

ಪದವಿ ಮುಗಿಯುವುದಕ್ಕೂ ಮೊದಲೇ ಸುಶಾಂತ್​ ನಟನೆಗೆ ಕಾಲಿಡುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ, ಪದವಿ ಪೂರ್ಣಗೊಂಡಿರಲಿಲ್ಲ. ಅವರಿಗೆ ಪದವಿ ಪಡೆಯುವ ಆಸೆ ಇತ್ತು. ಧ್ಯಾನ ಮಾಡಲು ಕೇದಾರನಾಥಕ್ಕೆ ಹೋಗಬೇಕು ಎಂದುಕೊಂಡಿದ್ದರು. ಇದೇ ರೀತಿಯಲ್ಲಿ ಸುಶಾಂತ್ ಒಟ್ಟು 50 ಆಸೆಗಳನ್ನು ಹೊಂದಿದ್ದರು. ಆದರೆ, ಆ ಎಲ್ಲ ಆಸೆಗಳು ಈಡೇರುವ ಮೊದಲೇ ಸುಶಾಂತ್​ ಮೃತಪಟ್ಟಿದ್ದಾರೆ.

ಸುಶಾಂತ್​ ಸಿಂಗ್​ ಮೃತಪಟ್ಟು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸುಶಾಂತ್​ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಟ್ವೀಟ್​ ಮಾಡುವ ಮೂಲಕ ಸುಶಾಂತ್​ಗೆ ನಮನ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?

Published On - 7:38 pm, Sun, 13 June 21

ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್
Weekly Horoscope: ಮೇ 26 ರಿಂದ ಜೂನ್​ 1 ರವರೆಗಿನ ವಾರ ಭವಿಷ್ಯ
Weekly Horoscope: ಮೇ 26 ರಿಂದ ಜೂನ್​ 1 ರವರೆಗಿನ ವಾರ ಭವಿಷ್ಯ