AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSR Dreams: ಸುಶಾಂತ್​ ಸಿಂಗ್​ ಕಂಡ ಆ 50 ಕನಸುಗಳ ಬಗ್ಗೆ ನಿಮಗೆ ಗೊತ್ತೇ?

Sushant Singh Rajput Death Anniversary: ಪದವಿ ಮುಗಿಯುವುದಕ್ಕೂ ಮೊದಲೇ ಸುಶಾಂತ್​ ನಟನೆಗೆ ಕಾಲಿಡುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ, ಪದವಿ ಪೂರ್ಣಗೊಂಡಿರಲಿಲ್ಲ. ಅವರಿಗೆ ಪದವಿ ಪಡೆಯುವ ಆಸೆ ಇತ್ತು.

SSR Dreams: ಸುಶಾಂತ್​ ಸಿಂಗ್​ ಕಂಡ ಆ 50 ಕನಸುಗಳ ಬಗ್ಗೆ ನಿಮಗೆ ಗೊತ್ತೇ?
ಸುಶಾಂತ್​ ಸಿಂಗ್​
ರಾಜೇಶ್ ದುಗ್ಗುಮನೆ
|

Updated on:Jun 13, 2021 | 7:40 PM

Share

ಸುಶಾಂತ್ ಸಿಂಗ್​ ರಜಪೂತ್​ ಕೇವಲ ನಟನಾಗಿರಲಿಲ್ಲ. ಅವರಲ್ಲಿ ಒಂದು ಅಗಾಧವಾದ ಕನಸಿತ್ತು. ಸಾರ್ವಜನಿಕವಾಗಿ ಕಾಣಿಸಿಕೊಂಡಾಗೆಲ್ಲ ಅವರು ನಗುತ್ತಲೇ ಮಾತನಾಡುತ್ತಿದ್ದರು. ಇಷ್ಟೆಲ್ಲ ಕನಸುಗಳನ್ನು ಕಂಡಿದ್ದ ಸುಶಾಂತ್​ ನಿಧನರಾಗಿ ಸೋಮವಾರ (ಜೂನ್​ 14) ಒಂದು ವರ್ಷ ಕಳೆಯಲಿದೆ. ಹಾಗಾದರೆ ಸುಶಾಂತ್ ಸಿಂಗ್​ ಕಂಡ ಕನಸುಗಳೇನು? ಆ ಬಗ್ಗೆ ಇಲ್ಲಿದೆ ಮಾಹಿತಿ.  

ಸುಶಾಂತ್​ ಸಿಂಗ್​ ಆಗಸದಲ್ಲಿ ಹಾರಾಡುವ ಕನಸು ಕಂಡಿದ್ದರು. ಅಂದರೆ, ಪೈಲಟ್​ ಲೈಸೆನ್ಸ್​ ಪಡೆದು ಫ್ಲೈಟ್​ ಹಾರಿಸುವ ಕನಸನ್ನು ಕಂಡಿದ್ದರು. ಅವರಿಗೆ, ಆಗಸದಲ್ಲಿ ಹಾರಾಡುವುದು ಎಂದರೆ, ಒಂದು ಅದ್ಭುತ ಎನಿಸುತ್ತಿತ್ತಂತೆ.

ಇನ್ನು, ಆಸಕ್ತ 100 ಮಕ್ಕಳನ್ನು ಸುಶಾಂತ್​ ನಾಸಾ ವರ್ಕ್​ಶಾಪ್​ಗೆ ಕಳಿಸಬೇಕು ಎಂದುಕೊಂಡಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು, ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನಾಸಾ ವರ್ಕ್​​ಶಾಪ್​ಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ, ಅದು ಸಾಧ್ಯವಾಗಿಲ್ಲ. ನಟನಾದಮೇಲೆ ಅಲ್ಲಿಗೆ ತೆರಳೋಕೆ ಅವಕಾಶ ಸಿಕ್ಕಿತ್ತು ಎಂದಿದ್ದರು.

ಸುಶಾಂತ್​ ಐರನ್​ ಮ್ಯಾನ್​ ಮ್ಯಾರಥಾನ್​ನಲ್ಲಿ ಪಾಲ್ಗೊಳ್ಳುವ ಆಸೆ ಇಟ್ಟುಕೊಂಡಿದ್ದರು. ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೆಣ್ಣುಮಕ್ಕಳಿಗೆ ಹೇಳಿಕೊಡುವುದು, ಕೃಷಿ ಮಾಡೋದು ಹೇಗೆ ಎಂದು ಕಲಿಯುವುದು, ಮಳೆಯಲ್ಲಿ ಫುಟ್​ಬಾಲ್​ ಆಡುವುದು, ಯುರೋಪ್​ ರಾಷ್ಟ್ರಗಳನ್ನು ರೈಲಿನಲ್ಲಿ ಸುತ್ತುವುದು, ಲ್ಯಾಂಬೋರ್ಗಿನಿ ಕಾರು ಖರೀದಿಸೋದು, ಪುಸ್ತಕ ಬರೆಯೋದು ಅವರ ಕನಸುಗಳ ಸಾಲಿನಲ್ಲಿದ್ದವು.

ಪದವಿ ಮುಗಿಯುವುದಕ್ಕೂ ಮೊದಲೇ ಸುಶಾಂತ್​ ನಟನೆಗೆ ಕಾಲಿಡುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ, ಪದವಿ ಪೂರ್ಣಗೊಂಡಿರಲಿಲ್ಲ. ಅವರಿಗೆ ಪದವಿ ಪಡೆಯುವ ಆಸೆ ಇತ್ತು. ಧ್ಯಾನ ಮಾಡಲು ಕೇದಾರನಾಥಕ್ಕೆ ಹೋಗಬೇಕು ಎಂದುಕೊಂಡಿದ್ದರು. ಇದೇ ರೀತಿಯಲ್ಲಿ ಸುಶಾಂತ್ ಒಟ್ಟು 50 ಆಸೆಗಳನ್ನು ಹೊಂದಿದ್ದರು. ಆದರೆ, ಆ ಎಲ್ಲ ಆಸೆಗಳು ಈಡೇರುವ ಮೊದಲೇ ಸುಶಾಂತ್​ ಮೃತಪಟ್ಟಿದ್ದಾರೆ.

ಸುಶಾಂತ್​ ಸಿಂಗ್​ ಮೃತಪಟ್ಟು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸುಶಾಂತ್​ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಟ್ವೀಟ್​ ಮಾಡುವ ಮೂಲಕ ಸುಶಾಂತ್​ಗೆ ನಮನ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?

Published On - 7:38 pm, Sun, 13 June 21

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ