AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSR Dreams: ಸುಶಾಂತ್​ ಸಿಂಗ್​ ಕಂಡ ಆ 50 ಕನಸುಗಳ ಬಗ್ಗೆ ನಿಮಗೆ ಗೊತ್ತೇ?

Sushant Singh Rajput Death Anniversary: ಪದವಿ ಮುಗಿಯುವುದಕ್ಕೂ ಮೊದಲೇ ಸುಶಾಂತ್​ ನಟನೆಗೆ ಕಾಲಿಡುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ, ಪದವಿ ಪೂರ್ಣಗೊಂಡಿರಲಿಲ್ಲ. ಅವರಿಗೆ ಪದವಿ ಪಡೆಯುವ ಆಸೆ ಇತ್ತು.

SSR Dreams: ಸುಶಾಂತ್​ ಸಿಂಗ್​ ಕಂಡ ಆ 50 ಕನಸುಗಳ ಬಗ್ಗೆ ನಿಮಗೆ ಗೊತ್ತೇ?
ಸುಶಾಂತ್​ ಸಿಂಗ್​
ರಾಜೇಶ್ ದುಗ್ಗುಮನೆ
|

Updated on:Jun 13, 2021 | 7:40 PM

Share

ಸುಶಾಂತ್ ಸಿಂಗ್​ ರಜಪೂತ್​ ಕೇವಲ ನಟನಾಗಿರಲಿಲ್ಲ. ಅವರಲ್ಲಿ ಒಂದು ಅಗಾಧವಾದ ಕನಸಿತ್ತು. ಸಾರ್ವಜನಿಕವಾಗಿ ಕಾಣಿಸಿಕೊಂಡಾಗೆಲ್ಲ ಅವರು ನಗುತ್ತಲೇ ಮಾತನಾಡುತ್ತಿದ್ದರು. ಇಷ್ಟೆಲ್ಲ ಕನಸುಗಳನ್ನು ಕಂಡಿದ್ದ ಸುಶಾಂತ್​ ನಿಧನರಾಗಿ ಸೋಮವಾರ (ಜೂನ್​ 14) ಒಂದು ವರ್ಷ ಕಳೆಯಲಿದೆ. ಹಾಗಾದರೆ ಸುಶಾಂತ್ ಸಿಂಗ್​ ಕಂಡ ಕನಸುಗಳೇನು? ಆ ಬಗ್ಗೆ ಇಲ್ಲಿದೆ ಮಾಹಿತಿ.  

ಸುಶಾಂತ್​ ಸಿಂಗ್​ ಆಗಸದಲ್ಲಿ ಹಾರಾಡುವ ಕನಸು ಕಂಡಿದ್ದರು. ಅಂದರೆ, ಪೈಲಟ್​ ಲೈಸೆನ್ಸ್​ ಪಡೆದು ಫ್ಲೈಟ್​ ಹಾರಿಸುವ ಕನಸನ್ನು ಕಂಡಿದ್ದರು. ಅವರಿಗೆ, ಆಗಸದಲ್ಲಿ ಹಾರಾಡುವುದು ಎಂದರೆ, ಒಂದು ಅದ್ಭುತ ಎನಿಸುತ್ತಿತ್ತಂತೆ.

ಇನ್ನು, ಆಸಕ್ತ 100 ಮಕ್ಕಳನ್ನು ಸುಶಾಂತ್​ ನಾಸಾ ವರ್ಕ್​ಶಾಪ್​ಗೆ ಕಳಿಸಬೇಕು ಎಂದುಕೊಂಡಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು, ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ನಾಸಾ ವರ್ಕ್​​ಶಾಪ್​ಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ, ಅದು ಸಾಧ್ಯವಾಗಿಲ್ಲ. ನಟನಾದಮೇಲೆ ಅಲ್ಲಿಗೆ ತೆರಳೋಕೆ ಅವಕಾಶ ಸಿಕ್ಕಿತ್ತು ಎಂದಿದ್ದರು.

ಸುಶಾಂತ್​ ಐರನ್​ ಮ್ಯಾನ್​ ಮ್ಯಾರಥಾನ್​ನಲ್ಲಿ ಪಾಲ್ಗೊಳ್ಳುವ ಆಸೆ ಇಟ್ಟುಕೊಂಡಿದ್ದರು. ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೆಣ್ಣುಮಕ್ಕಳಿಗೆ ಹೇಳಿಕೊಡುವುದು, ಕೃಷಿ ಮಾಡೋದು ಹೇಗೆ ಎಂದು ಕಲಿಯುವುದು, ಮಳೆಯಲ್ಲಿ ಫುಟ್​ಬಾಲ್​ ಆಡುವುದು, ಯುರೋಪ್​ ರಾಷ್ಟ್ರಗಳನ್ನು ರೈಲಿನಲ್ಲಿ ಸುತ್ತುವುದು, ಲ್ಯಾಂಬೋರ್ಗಿನಿ ಕಾರು ಖರೀದಿಸೋದು, ಪುಸ್ತಕ ಬರೆಯೋದು ಅವರ ಕನಸುಗಳ ಸಾಲಿನಲ್ಲಿದ್ದವು.

ಪದವಿ ಮುಗಿಯುವುದಕ್ಕೂ ಮೊದಲೇ ಸುಶಾಂತ್​ ನಟನೆಗೆ ಕಾಲಿಡುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ, ಪದವಿ ಪೂರ್ಣಗೊಂಡಿರಲಿಲ್ಲ. ಅವರಿಗೆ ಪದವಿ ಪಡೆಯುವ ಆಸೆ ಇತ್ತು. ಧ್ಯಾನ ಮಾಡಲು ಕೇದಾರನಾಥಕ್ಕೆ ಹೋಗಬೇಕು ಎಂದುಕೊಂಡಿದ್ದರು. ಇದೇ ರೀತಿಯಲ್ಲಿ ಸುಶಾಂತ್ ಒಟ್ಟು 50 ಆಸೆಗಳನ್ನು ಹೊಂದಿದ್ದರು. ಆದರೆ, ಆ ಎಲ್ಲ ಆಸೆಗಳು ಈಡೇರುವ ಮೊದಲೇ ಸುಶಾಂತ್​ ಮೃತಪಟ್ಟಿದ್ದಾರೆ.

ಸುಶಾಂತ್​ ಸಿಂಗ್​ ಮೃತಪಟ್ಟು ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸುಶಾಂತ್​ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಟ್ವೀಟ್​ ಮಾಡುವ ಮೂಲಕ ಸುಶಾಂತ್​ಗೆ ನಮನ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: SSR Case: ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?

Published On - 7:38 pm, Sun, 13 June 21

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್