AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀರೋಯಿನ್​ಗಳ ಜೊತೆ ಡೇಟ್ ಮಾಡೋದೆ ಸಿದ್ದಾರ್ಥ್ ಕೆಲಸವಾಗಿತ್ತು? ಆದ ಬ್ರೇಕಪ್​​ಗಳೆಷ್ಟು?

Siddharth Birthday: ಸಿದ್ದಾರ್ಥ್ ಕೇವಲ ನಟನೆ ಜೊತೆಗೆ ನಿರ್ಮಾಪಕ, ಚಿತ್ರಕಥೆಗಾರ ಹಾಗೂ ಗಾಯಕ ಕೂಡ ಹೌದು. ಅವರು ಸುಲಭದಲ್ಲಿ ಪಾತ್ರ ಮಾಡುತ್ತಾರೆ. ಅವರು ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗುತ್ತಾ ಇರುತ್ತಾರೆ. 2003ರಲ್ಲಿ ಸಿದ್ದಾರ್ಥ್ ಅವರು ತಮ್ಮ ಬಾಲ್ಯದ ಗೆಳತಿ ಮೇಘನಾ ಅವರನ್ನು ಮದುವೆ ಆದರು. ಆ ಬಳಿಕ ವಿಚ್ಛೇದನ ಪಡೆದರು. ನಂತರ ಹಲವರ ಜೊತೆ ಅವರು ಸುತ್ತಾಡಿದರು.

ಹೀರೋಯಿನ್​ಗಳ ಜೊತೆ ಡೇಟ್ ಮಾಡೋದೆ ಸಿದ್ದಾರ್ಥ್ ಕೆಲಸವಾಗಿತ್ತು? ಆದ ಬ್ರೇಕಪ್​​ಗಳೆಷ್ಟು?
ಸಿದ್ದಾರ್ಥ್-ಅದಿತಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:Apr 17, 2024 | 7:50 AM

Share

ತಮಿಳು ನಟ ಸಿದ್ದಾರ್ಥ್ (Siddharth) ಅವರಿಗೆ ಇಂದು (ಏಪ್ರಿಲ್ 17) ಬರ್ತ್​ಡೇ. ಅವರಿಗೆ ಎಲ್ಲರೂ ವಿಶ್ ತಿಳಿಸುತ್ತಿದ್ದಾರೆ. ಇತ್ತೀಚೆಗೆ ಸಿದ್ದಾರ್ಥ್ ಅವರು ನಟಿ ಅದಿತಿ ರಾವ್ ಹೈದರಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಬಳಿಕ ಅವರ ಮೊದಲ ಬರ್ಥ್​ಡೇ. ಇಷ್ಟು ವರ್ಷ ಅದಿತಿ ಅವರು ಲವರ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದರು. ಈಗ ಭಾವಿ ಪತ್ನಿಯಾಗಿ ಅವರು ಶುಭಾಶಯ ಕೋರಲಿದ್ದಾರೆ. ಈ ವರ್ಷ ಪತಿಯ ಜೊತೆ ಅವರು ಬರ್ತ್​ಡೇ ಆಚರಿಸಿಕೊಳ್ಳಲಿದ್ದಾರೆ. ತಮಿಳು ಸಿನಿಮಾಗಳಲ್ಲಿ ನಟಿಸಿ ಸಿದ್ದಾರ್ಥ್ ಗಮನ ಸೆಳೆದಿದ್ದಾರೆ. ಪ್ರೀತಿ ವಿಚಾರಕ್ಕೆ ಸಿದ್ದಾರ್ಥ್ ಸಾಕಷ್ಟು ಸುದ್ದಿ ಆಗಿದ್ದರು.

ಸಿದ್ದಾರ್ಥ್ ಕೇವಲ ನಟ ಮಾತ್ರ ಅಲ್ಲ. ಅವರು ನಿರ್ಮಾಪಕ, ಚಿತ್ರಕಥೆಗಾರ ಹಾಗೂ ಗಾಯಕ. ಅವರು ಸುಲಭದಲ್ಲಿ ಪಾತ್ರದ ಒಳಗೆ ಹೋಗುತ್ತಾರೆ. ಅವರು ವೈಯಕ್ತಿಕ ವಿಚಾರಕ್ಕೆ ಆಗಗ ಸುದ್ದಿ ಆಗುತ್ತಲೇ ಇರುತ್ತಾರೆ. 2003ರಲ್ಲಿ ಸಿದ್ದಾರ್ಥ್ ಅವರು ತಮ್ಮ ಬಾಲ್ಯದ ಗೆಳತಿ ಮೇಘನಾ ಅವರನ್ನು ಮದುವೆ ಆದರು. ಅವರು ದೆಹಲಿ ಮೂಲದವರು. 2007ರಲ್ಲಿ ಇಬ್ಬರೂ ಬೇರೆ ಆದರು. ಇದಕ್ಕೆ ಕಾರಣ ರಿವೀಲ್ ಆಗಿಲ್ಲ. ಸಿದ್ದಾರ್ಥ್ ಸೋಹಾ ಅಲಿ ಖಾನ್, ಶ್ರುತಿ ಹಾಸನ್ ಹಾಗೂ ಸಮಂತಾ ಜೊತೆ ಡೇಟ್ ಮಾಡಿ ಸುದ್ದಿ ಆಗಿದ್ದರು.

ಸೋಹಾ ಅಲಿ ಖಾನ್

ಸಿದ್ದಾರ್ಥ್ ಹಾಗೂ ಮೇಘನಾ ಬೇರೆ ಆಗಲು ಸೋಹಾ ಅಲಿ ಖಾನ್ ಕಾರಣ ಎನ್ನಲಾಗಿತ್ತು. ಸಿದ್ದಾರ್ಥ್ ಹಾಗೂ ಸೋಹಾ ಒಟ್ಟಾಗಿ ಸುತ್ತಾಡಿದ್ದರು ಎನ್ನಲಾಗಿದೆ. ‘ರಂಗ್​ ದೇ ಬಸಂತಿ’ ಸಿನಿಮಾದಲ್ಲಿ ಸಿದ್ದಾರ್ಥ್ ಹಾಗೂ ಸೋಹಾ ಒಟ್ಟಾಗಿ ನಟಿಸಿದ್ದರು. ಆದರೆ, ಈ ವಿಚಾರವನ್ನು ಅವರು ಒಪ್ಪಿಕೊಂಡಿಲ್ಲ. ಆ ಬಳಿಕ ಸೋಹಾ ಜೊತೆ ಬ್ರೇಕಪ್ ಮಾಡಿಕೊಂಡರು.

ಶ್ರುತಿ ಹಾಸನ್

ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಸಾಕಷ್ಟು ದೊಡ್ಡ ಮೊಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರ ಜೊತೆಗೂ ಸಿದ್ದಾರ್ಥ್ ಡೇಟಿಂಗ್ ಮಾಡಿದ್ದರು. ಸೋಹಾ ಜೊತೆ ಸಿದ್ದಾರ್ಥ್ ಬ್ರೇಕಪ್ ಮಾಡಿಕೊಂಡ ಬಳಿಕ ಸಿದ್ದಾರ್ಥ್​ಗೆ ಶ್ರುತಿ ಹಾಸನ್ ಸಿಕ್ಕರು. ಬ್ರೇಕಪ್ ಆದ ಕೆಲವೇ ತಿಂಗಳಲ್ಲಿ ಸಿದ್ದಾರ್ಥ್ ಅವರು ಶ್ರುತಿ ಹಾಸನ್ ಜೊತೆ ಕಾಣಿಸಿಕೊಳ್ಳಲು ಆರಂಭಿಸಿದರು.  2010ರಲ್ಲಿ ಇವರ ಪರಿಚಯ ಆಯಿತು. ಒಂದು ವರ್ಷ ಇಬ್ಬರೂ ಸುತ್ತಾಡಿದರು. 2011ರ ಮೇ ತಿಂಗಳಲ್ಲಿ ಸಿದ್ದಾರ್ಥ್ ಹಾಗೂ ಶ್ರುತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ಶ್ರುತಿ ತಂದೆ ಕಮಲ್ ಹಾಸನ್ ಕೂಡ ಖುಷಿಯಾಗಿದ್ದರು. ನಂತರ ಕೆಲವೇ ತಿಂಗಳಲ್ಲಿ ಸಿದ್ದಾರ್ಥ್ ಹಾಗೂ ಶ್ರುತಿ ಬೇರೆ ಆದರು. ಅಕ್ಟೋಬರ್​ನಲ್ಲಿ ಇವರ ಬ್ರೇಕಪ್ ಆಯಿತು.

ಇದನ್ನೂ ಓದಿ: ಮತ್ತಷ್ಟು ಬೋಲ್ಡ್​ ಆದ ನಟಿ ಸಮಂತಾ ರುತ್​ ಪ್ರಭು; ಫೋಟೋ ವೈರಲ್​

ಸಮಂತಾ

ಸಮಂತಾ ಜೊತೆಯೂ ಸಿದ್ದಾರ್ಥ್ ಸುತ್ತಾಟ ನಡೆಸಿದ್ದರು. ‘ಜಬರ್ದಸ್ತ್’ ಸಿನಿಮಾದ ಸಂದರ್ಭದಲ್ಲಿ ಇವರ ಭೇಟಿ ಆಯಿತು. ಇವರ ರಿಲೇಶನ್​ಶಿಪ್ ಎರಡೂವರೆ ವರ್ಷ ಇತ್ತು. ಆದರೆ, ದಿನ ಕಳೆದಂತೆ ಸಿದ್ದಾರ್ಥ್ ಅಸಲಿ ಬಣ್ಣ ಅವರಿಗೆ ತಿಳಿಯಿತು. ಅವರು ಸರಿ ಇಲ್ಲ ಎನ್ನುವ ವಿಚಾರ ತಿಳಿಯಿತು. ಆ ಬಳಿಕ ಬ್ರೇಕಪ್ ಮಾಡಿಕೊಂಡರು. ಸಮಂತಾ ವಿಚ್ಛೇದನ ಪಡೆದುಕೊಂಡ ಬಳಿಕ ಅವರನ್ನು ಟೀಕಿಸಿದ್ದರು ಸಿದ್ದಾರ್ಥ್.

ಮದುವೆ

ಹಲವು ವರ್ಷಗಳ ಕಾಲ ಅದಿತಿ ರಾವ್ ಹೈದರಿ ಹಾಗೂ ಸಿದ್ದಾರ್ಥ್ ಪ್ರೀತಿಸುತ್ತಿದ್ದರು. ಇಬ್ಬರ ಎಂಗೇಜ್​ಮೆಂಟ್ ನಡೆದಿದೆ. ಸಿದ್ದಾರ್ಥ್ ಅವರ ಸಂಪೂರ್ಣ ಹಿನ್ನೆಲೆ ತಿಳಿದ ಬಳಿಕವೂ ಅವರು ಯಾವುದೇ ಅಂಜಿಕೆ ಇಲ್ಲದೆ ಮದುವೆ ಆಗಲು ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:49 am, Wed, 17 April 24

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ