AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಟ್ ಮಾಡುವಾಗ ತನ್ನದೇ ಕೈ ಬಣ್ಣದ ಬಗ್ಗೆ ಹನುಮಂತ ಬೇಸರ; ಅದಿತಿ ಉತ್ತರಕ್ಕೆ ನಾಚಿ ನೀರಾದ ಸ್ಪರ್ಧಿ

ಫಿನಾಲೆ ಟಿಕೆಟ್​ ಪಡೆಯಲು ಬಿಗ್ ಬಾಸ್​ ಒಂದು ಟಾಸ್ಕ್ ನೀಡಿದ್ದರು. ಯಾರು ಅತಿ ಕಡಿಮೆ ಸಮಯ ತೆಗೆದುಕೊಂಡು ಈ ಟಾಸ್ಕ್ ನಿಭಾಯಿಸುತ್ತಾರೋ ಅವರಿಗೆ ಫಿನಾಲೆಗೆ ಎಂಟ್ರಿ ಸಿಗಲಿದೆ ಎಂದು ಘೋಷಿಸಲಾಗಿತ್ತು. ಮನೆಯಲ್ಲಿ ಇರುವ ಇನ್ನುಳಿದ 8 ಘಟಾನುಘಟಿ ಸ್ಪರ್ಧಿಗಳನ್ನೂ ಮೀರಿಸಿ ಹನುಮಂತ ಈ ಸಾಧನೆ ಮಾಡಿದ್ದಾರೆ. ಅವರಿಗೆ ಅದಿತಿ ಶುಭ ಹಾರೈಸಿದ್ದಾರೆ.

ಹಾರ್ಟ್ ಮಾಡುವಾಗ ತನ್ನದೇ ಕೈ ಬಣ್ಣದ ಬಗ್ಗೆ ಹನುಮಂತ ಬೇಸರ; ಅದಿತಿ ಉತ್ತರಕ್ಕೆ ನಾಚಿ ನೀರಾದ ಸ್ಪರ್ಧಿ
ಅದಿತಿ-ಹನುಮಂತ
ರಾಜೇಶ್ ದುಗ್ಗುಮನೆ
|

Updated on: Jan 11, 2025 | 6:54 AM

Share

ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಪಾಲಿಗೆ ಫಿನಾಲೆ ದೂರದ ಬೆಟ್ಟವಲ್ಲ. ಆ ಬೆಟ್ಟವನ್ನು ಏರಿಯಾಗಿದೆ. ಫಿನಾಲೆ ಟಿಕೆಟ್ ಪಡೆದು ಡೈರೆಕ್ಟ್ ಆಗಿ ಕೊನೆಯ ವಾರಕ್ಕೆ ಹೋಗಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ವಿಸೇಷ ಎಂದರೆ ಫಿನಾಲೆ ಟಿಕೆಟ್ ಪಡೆದವರನ್ನು ಅಭಿನಂದಿಸೋಕೆ ‘ಛೂ ಮಂತರ’ ಚಿತ್ರದ ಶರಣ್ ಹಾಗೂ ಅದಿತಿ ಪ್ರಭುದೇವ ಆಗಮಿಸಿದ್ದರು. ಇವರು ಹನುಮಂತಗೆ ಶುಭಾಶಯ ಕೋರಿದ್ದಾರೆ.

ಹಗ್ಗದಿಂದ ಮಾಡಿದ ದೊಡ್ಡ ಜಾಲದ ಮಾದರಿಯನ್ನು ಗಾರ್ಡನ್ ಏರಿಯಾದಲ್ಲಿ ನಿಲ್ಲಿಸಲಾಗಿತ್ತು. ಇದರ ಮೇಲೆ ವಿವಿಧ ಕೀ ಇರುತ್ತದೆ. ಈ ಕೀನ ತೆಗೆದುಕೊಂಡ ಸ್ಪರ್ಧಿ ಮರಳಿ ಬಂದು ಕೀ ಮೂಲಕ ಪೆಟ್ಟಿಗೆ ತೆಗೆಯಬೇಕು. ತೆಗೆದ ಬಳಿಕ ಆ ಬಾಕ್ಸ್​ನಲ್ಲಿರುವ ಬಾವುಟವನ್ನು ಹಿಡಿದು ಮತ್ತೆ ಹಗ್ಗದ ಜಾಲವನ್ನು ಏರಿ, ಅದರ ಮೇಲಿರುವ ಒಂದು ಹಲಗೆಯ ಮೇಲೆ ನಿಂತು ಬಾವುಟವನ್ನು ಅಲ್ಲಿರುವ ಪೈಪ್​ಗೆ ಸಿಕ್ಕಿಸಿ ‘ಬಿಗ್ ಬಾಸ್’ ಎಂದು ಹೇಳಬೇಕು.

ಈ ಟಾಸ್ಕ್​​ಗೆ ಭವ್ಯಾ ಹಾಗೂ ರಜತ್ ಮೂರು ನಿಮಿಷಕ್ಕೂ ಹೆಚ್ಚಿನ ಸಮಯ ತೆಗೆದುಕೊಂಡರು. ತ್ರಿವಿಕ್ರಂ ಅವರು ಎರಡು ನಿಮಿಷ ಇಪ್ಪತ್ತೊಬ್ಬಂತ್ತು ಸೆಕೆಡ್ ತೆಗೆದುಕೊಂಡರು. ಹನುಮಂತ ಅವರು ಎರಡು ನಿಮಿಷ ಇಪ್ಪತ್ತೇಳು ಸೆಕೆಂಡ್​ನಲ್ಲಿ ಟಾಸ್ಕ್ ಪೂರ್ಣಗೊಳಿಸಿ ಭೇಷ್ ಎನಿಸಿಕೊಂಡರು. ಈ ಮೂಲಕ ಟಿಕೆಟ್ ಟು ಫಿನಾಲೆ ಟಿಕೆಟ್​ನ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ ಹನುಮಂತ ಎಂಟ್ರಿ; ಘಟಾನುಘಟಿಗಳೆಲ್ಲ ಗಪ್​ಚುಪ್​

ಈ ಟಿಕೆಟ್ ನೀಡೋಕೆ ಶರಣ್ ಹಾಗೂ ಅದಿತಿ ಬಂದಿದ್ದರು. ಟಿಕೆಟ್ ನೀಡಿದ ಬಳಿಕ ಹನುಮಂತ ಹಾಗೂ ಅದಿತಿ ಪ್ರತ್ಯೇಕವಾಗಿ ಹೋಗಿ ನಿಂತರು. ಈ ವೇಳೆ ಅದಿತಿ ಹನುಮಂತನ ಕೈ ಸಹಾಯದಿಂದ ಹಾರ್ಟ್ ಮಾಡಲು ಹೋದರು. ಆಗ ಹನುಮಂತಗೆ ಅದಿತಿ ಕೈ ಬಣ್ಣ ನೋಡಿ ಬೇಸರವಾಯಿತು. ‘ನನ್ನ ಕೈ ಕಪ್ಪಿದೆ’ ಎಂದು ಬೇಸರ ಹೊರಹಾಕಿದರು. ಆಗ ಇದಕ್ಕೆ ಉತ್ತರಿಸಿದ ಅದಿತಿ, ‘ಮನಸ್ಸು ಬೆಳ್ಳಗಿದೆ’ ಎಂದರು. ಇದರಿಂದ ಹನುಮಂತ ನಾಚಿ ನೀರಾದರು. ಈ ವಾರ ರಿಲೀಸ್ ಆದ ಹಾರರ್ ಸಿನಿಮಾ ‘ಛೂ ಮಂತರ್’ ಪ್ರಚಾರಕ್ಕಾಗಿ ಶರಣ್ ಹಾಗೂ ಅದಿತಿ ಬಿಗ್ ಬಾಸ್​ಗೆ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ