AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯತ್ವ ಮರೆತು ಅನುಷಾ ರೈಗೆ ಹೊಡೆದ ಬಿಗ್ ಬಾಸ್ ಮನೆಯ ಸದಸ್ಯರು

ಬಿಗ್ ಬಾಸ್​ ಕಾರ್ಯಕ್ರಮವನ್ನು ಕುಟುಂಬ ಸಮೇತ ನೋಡುವ ಕಾರ್ಯಕ್ರಮ ಎಂದು ಕೆಲವರು ಹೇಳುತ್ತಾರೆ. ಆದರೆ ಬಿಗ್ ಬಾಸ್​ ಮನೆಯ ಒಳಗೆ ಸ್ಪರ್ಧಿಗಳು ನಡೆದುಕೊಳ್ಳುವ ರೀತಿ ನೋಡಿದರೆ ಈ ಕಾರ್ಯಕ್ರಮವನ್ನು ಶಾಂತಿ, ಸಮಾಧಾನದಿಂದ ಫ್ಯಾಮಿಲಿ ಆಡಿಯನ್ಸ್​ ನೋಡಲು ಸಾಧ್ಯವಿಲ್ಲ ಎನಿಸುತ್ತದೆ. ಕೆಲವು ಸ್ಪರ್ಧಿಗಳಿಂದ ಅಂತಹ ವರ್ತನೆ ಕಾಣಿಸುತ್ತಿದೆ.

ಮನುಷ್ಯತ್ವ ಮರೆತು ಅನುಷಾ ರೈಗೆ ಹೊಡೆದ ಬಿಗ್ ಬಾಸ್ ಮನೆಯ ಸದಸ್ಯರು
ಬಿಗ್ ಬಾಸ್
Follow us
ಮದನ್​ ಕುಮಾರ್​
|

Updated on: Oct 22, 2024 | 10:26 PM

ಟಾಸ್ಕ್​ ಆಡುವಾಗ ಬಿಗ್ ಬಾಸ್​ ಸ್ಪರ್ಧಿಗಳು ಮನುಷ್ಯತ್ವ ಮರೆಯುತ್ತಾರೆ. ಟಾಸ್ಕ್ ಗೆಲ್ಲುವುದೇ ಮುಖ್ಯ ಉದ್ದೇಶ ಆದ್ದರಿಂದ ಅದಕ್ಕಾಗಿ ಮಾನವೀಯತೆಯನ್ನು ಪಕ್ಕಕ್ಕೆ ಇಡುತ್ತಾರೆ. ಮಂಗಳವಾರದ (ಅ.22) ಸಂಚಿಕೆಯಲ್ಲಿ ಅದಕ್ಕೆ ಲೇಟೆಸ್ಟ್​ ಉದಾಹರಣೆ ಸಿಕ್ಕಿದೆ. ಅನುಷಾ ರೈ ಅವರು ಟಾಸ್ಕ್​ ಮಾಡುವಾಗ ಅವರ ಗಮನವನ್ನು ಕಡಿಸಲು ಹಲವು ಬಗೆಯ ಪ್ರಯತ್ನ ಮಾಡಲಾಗಿದೆ. ಮೈಗೆ, ಮುಖಕ್ಕೆ ನೀರು ಎರೆಚಲಾಗಿದೆ. ಅಷ್ಟೇ ಅಲ್ಲದೇ ದಿಂಬಿನಿಂದ ಹೊಡೆದು ಬೀಳಿಸಲಾಗಿದೆ. ಬೆನ್ನು ಮೂಳೆಗೆ ಪೆಟ್ಟಾಗುವ ರೀತಿಯಲ್ಲಿ ಅನುಷಾ ಅವರನ್ನು ಹೊಡೆದು ಬೀಳಿಸಿದ್ದಕ್ಕೆ ಭವ್ಯಾ ಗೌಡ ಖಂಡನೆ ವ್ಯಕ್ತಪಡಿಸಿದ್ದಾರೆ.

ಒಂದು ಸುತ್ತಿನ ಆಟ ಮುಗಿಯುವ ವೇಳೆಗಾಗಲೇ ಅನುಷಾ ರೈ ಅವರಿಗೆ ಪೆಟ್ಟಾಗಿತ್ತು. ಹಾಗಿದ್ದರೂ ಕೂಡ ಅವರು ಟಾಸ್ಕ್​ ಅನ್ನು ಬಿಟ್ಟುಕೊಡಬಾರದು ಎಂಬ ಕಾರಣದಿಂದ ಆಟ ಮುಂದುವರಿಸಿದರು. ಈಗಾಗಲೇ ಅವರಿಗೆ ನೋವಾಗಿದೆ ಎಂಬುದು ಗೊತ್ತಿದ್ದರೂ ಕೂಡ ಗೋಲ್ಡ್ ಸುರೇಶ್, ಶಿಶಿರ್, ತ್ರಿವಿಕ್ರಮ್ ಅವರು ಜೋರಾಗಿ ಹೊಡೆದಿದ್ದಾರೆ. ಅನುಷಾ ರೈ ಕೆಳಗೆ ಬಿದ್ದಾಗ ಮೋಕ್ಷಿತಾ ಪೈ, ಗೌತಮಿ ಜಾಧವ್ ಅವರು ಕಣ್ಣೀರು ಹಾಕಿದ್ದಾರೆ.

ಈ ಹೊಡೆದಾಟ ಆಗಿದ್ದರ ಬಗ್ಗೆ ಟಾಸ್ಕ್​ ಮುಗಿದ ಬಳಿಕ ಭವ್ಯಾ ಗೌಡ ಅವರು ಚರ್ಚೆ ಮಾಡಿದ್ದಾರೆ. ಹುಡುಗಿಯರನ್ನು ಟಾರ್ಗೆಟ್​ ಮಾಡಿ ಹೊಡೆದಿದ್ದು ಯಾಕೆ ಎಂದು ಅವರು ಹೇಳಿದ್ದಾರೆ. ಅವರ ಮಾತನ್ನು ತ್ರಿವಿಕ್ರಮ್, ಉಗ್ರಂ ಮಂಜು, ಶಿಶಿರ್ ಮುಂತಾದವರು ವಿರೋಧಿಸಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್​ ಸಲುವಾಗಿ ಇಷ್ಟೆಲ್ಲ ಹೊಡೆದಾಟ ನಡೆಯುತ್ತಿದೆ. ಅನುಷಾ ರೈ ಅವರು ಟಾಸ್ಕ್​ ಬಳಿಕ ಜೋರಾಗಿ ಅತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನಡೆದಿದ್ದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಜಗದೀಶ್

‘ಒಬ್ಬ ವ್ಯಕ್ತಿಗೆ ಆ ರೀತಿ ಹೊಡೆದಾಗ ತುಂಬ ನೋವಾಗುತ್ತದೆ. ಅದರ ಅರಿವು ಇದ್ದರೂ ಕೂಡ ಹೊಡೆದಿದ್ದಾರೆ’ ಎಂದು ಮೋಕ್ಷಿತಾ ಪೈ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪೆಟ್ಟಾಗುತ್ತದೆ ಎಂಬುದು ಗೊತ್ತಿದ್ದೇ ತಾವು ಹೊಡೆದಿದ್ದು ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಈ ಮಾತಿನಿಂದ ಮೋಕ್ಷಿತಾ ಹಾಗೂ ಗೌತಮಿ ಅವರಿಗೆ ನೋವಾಗಿದೆ. 10ನೇ ಸೀಸನ್​ನಲ್ಲಿ ಇದೇ ರೀತಿ ಘಟನೆಗಳು ನಡೆದಾಗ ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರ ಕಣ್ಣಿಗೆ ಸಮಸ್ಯೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?