AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ

Bigg Boss Finale: ಬಿಗ್​ ಬಾಸ್​​ನಲ್ಲಿ ಇದು ಕೊನೆಯ ವಾರವಾಗಿದ್ದರೂ ಕೂಡ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್​ ನೀಡಲಾಗಿದೆ. ಇದರಲ್ಲೂ ಮಂಜು ಪಾವಗಡ ಮತ್ತು ಅರವಿಂದ್​ ಕೆಪಿ ನಡುವೆ ತೀವ್ರ ಜಿದ್ದಾಜಿದ್ದಿ ನಡೆದಿದೆ.

ಬಿಗ್​ ಬಾಸ್​ ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ
ಬಿಗ್​ ಬಾಸ್​ ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ
TV9 Web
| Edited By: |

Updated on: Aug 03, 2021 | 1:27 PM

Share

ಬಿಗ್​ ಬಾಸ್​ ಕನ್ನಡ (BBK8) ಸೀಸನ್​ 8ರ ಫಿನಾಲೆಗೆ ದಿನಗಣನೆ ಆರಂಭ ಆಗಿದೆ. ಮೊದಲ ದಿನದಿಂದಲೂ ಪರಸ್ಪರ ಪೈಪೋಟಿ ನೀಡಿಕೊಂಡು ಬಂದಿದ್ದ ಸ್ಪರ್ಧಿಗಳಿಗೆ ಈಗ ಟೆನ್ಷನ್​ ಹೆಚ್ಚಿದೆ. ಆರಂಭದಲ್ಲಿ 17 ಜನರಿಂದ ತುಂಬಿಕೊಂಡಿದ್ದ ಮನೆಯಲ್ಲಿ ಈಗ ಕೇವಲ 6 ಜನ ಇದ್ದಾರೆ. ಫಿನಾಲೆ (Bigg Boss Finale) ಬರುವುದರೊಳಗೆ ಇನ್ನೊಬ್ಬರು ಎಲಿಮಿನೇಟ್​ ಆಗುತ್ತಾರೆ. ಫಿನಾಲೆ ಎಪಿಸೋಡ್​ನಲ್ಲಿ 5 ಜನರ ನಡುವೆ ಹಣಾಹಣೆ ಇರುತ್ತದೆ. ಅಂತಿಮವಾಗಿ ಕಿಚ್ಚ ಸುದೀಪ್​ ಎಡ-ಬಲದಲ್ಲಿ ನಿಲ್ಲಿಸಿಕೊಳ್ಳುವುದು ಇಬ್ಬರನ್ನು ಮಾತ್ರ. ಆ ಇಬ್ಬರು ಯಾರ ಎಂಬ ಪ್ರಶ್ನೆಗೆ ವೀಕ್ಷಕರ ಮನದಲ್ಲಿ ಒಂದಷ್ಟು ಉತ್ತರಗಳಿವೆ. ಅದರಲ್ಲೂ ಮಂಜು ಪಾವಗಡ (Manju Pavagada) ಮತ್ತು ಅರವಿಂದ್​ ಕೆಪಿ (Aravind KP) ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.

ಟಾಸ್ಕ್​ ವಿಚಾರದಲ್ಲಿ ಅರವಿಂದ್​ ಕೆಪಿ ಮತ್ತು ಮಂಜು ಪಾವಗಡ ನಡುವೆ ಮೊದಲಿನಿಂದಲೂ ಟಫ್​ ಸ್ಪರ್ಧೆ ಇದೆ. ಅದರಲ್ಲಿ ಇಬ್ಬರದ್ದೂ ಸಮಬಲ ಇದೆ ಎನ್ನಬಹುದು. ಆದರೆ ಮನರಂಜನೆ ವಿಚಾರದಲ್ಲಿ ಅರವಿಂದ್​ಗಿಂತಲೂ ಮಂಚು ಹೆಚ್ಚು ಅಂಕ ಗಿಟ್ಟಿಸುತ್ತಾರೆ. ಇಬ್ಬರಿಗೂ ನಾಯಕತ್ವದ ಗುಣ ಇದೆ. ಬಿಗ್​ ಬಾಸ್​ ಫಿನಾಲೆ ದಿನ ಇವರಿಬ್ಬರ ನಡುವೆ ಅಂತಿಮ ಹಣಾಹಣಿ ನಡೆಯಲಿದೆ ಎಂಬ ಅಭಿಪ್ರಾಯ ಬಹುತೇಕರಿಗೆ ಇದೆ. ಆ ಅಭಿಪ್ರಾಯವನ್ನು ಪುಷ್ಠಿಗೊಳಿಸುವಂತಹ ಘಟನೆಗಳು ಬಿಗ್​ ಬಾಸ್​ ಮನೆಯಲ್ಲಿ ನಡೆಯುತ್ತಲೇ ಇವೆ.

ಇದು ಕೊನೆಯ ವಾರವಾಗಿದ್ದರೂ ಕೂಡ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಒಂದು ಕಠಿಣ ಟಾಸ್ಕ್​ ನೀಡಿದ್ದಾರೆ. ಒಂದು ವೃತ್ತದೊಳಗೆ ಎಲ್ಲ ಸ್ಪರ್ಧಿಗಳನ್ನು ನಿಲ್ಲಿಸಲಾಗಿದೆ. ಎಲ್ಲರಿಗೂ ಒಂದೊಂದು ಗುರಾಣಿಯನ್ನು ನೀಡಲಾಗಿದೆ. ಆ ಗುರಾಣಿಯ ಸಹಾಯದಿಂದ ಇನ್ನುಳಿದ ಸದಸ್ಯರನ್ನು ವೃತ್ತದಿಂದ ಹೊರಗೆ ತಳ್ಳಬೇಕು. ಕೊನೆಯವರೆಗೂ ವೃತ್ತದೊಳಗೆ ಉಳಿಯುವ ಒಬ್ಬ ಸ್ಪರ್ಧಿಯು ಟಾಸ್ಕ್​ ಗೆಲ್ಲುತ್ತಾರೆ.

ಈ ಟಾಸ್ಕ್​ಗೆ ಸಂಬಂಧಿಸಿದ ಪ್ರೋವೋವನ್ನು ಕಲರ್ಸ್​ ಕನ್ನಡ ವಾಹಿನಿ ತನ್ನ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಮಂಜು ಪಾವಗಡ ಹಾಗೂ ಅರವಿಂದ್​ ಕೆಪಿ ನಡುವೆ ಈ ಟಾಸ್ಕ್​ ಶುರುವಾಗಿದೆ. ಅಂತಿಮವಾಗಿ ವೃತ್ತದೊಳಗೆ ಉಳಿದುಕೊಂಡಿರುವುದು ಅರವಿಂದ್​ ಕೆಪಿ ಮತ್ತು ಮಂಜು ಪಾವಗಡ ಎಂಬುದು ಪ್ರೋಮೋದಿಂದಲೇ ತಿಳಿದುಬಂದಿದೆ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಆ.3ರ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

ಕೊನೇ ವಾರದ ಈ ಟಾಸ್ಕ್​ನಲ್ಲಿಯೂ ಅರವಿಂದ್​ ಮತ್ತು ಮಂಜು ನಡುವೆ ಅಂತಿಮ ಹಣಾಹಣಿ ಏರ್ಪಟ್ಟಿದ್ದರಿಂದ ಫಿನಾಲೆ ದಿನವೂ ಅವರೇ ವಿನ್ನರ್​ ಮತ್ತು ರನ್ನರ್​ ಅಪ್​ ಸ್ಥಾನಕ್ಕೆ ಪೈಪೋಟಿ ನಡೆಸುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಎಲ್ಲ ಕೌತುಕಕ್ಕೆ ಆ.8ರಂದು ತೆರೆಬೀಳಲಿದೆ.

ಇದನ್ನೂ ಓದಿ:

‘ಅರವಿಂದ್ ಬೈಕ್​ ಮಿಸ್​ ಹೊಡೆಯುತ್ತಿದೆ, ಫಿನಾಲೆ ಗೆಲ್ಲೋದು ಮಂಜು ಪಾವಗಡ’

ಅರವಿಂದ್​ಗೆ ಗೆಲುವಿನ ಮಾಲೆ, ಮಂಜು ರನ್ನರ್​ ಅಪ್​; ಇದು ಬಿಗ್​ ಬಾಸ್​ ಮನೆ ಭವಿಷ್ಯ

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ