AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅರವಿಂದ್ ಪೊಸೆಸಿವ್​​ನೆಸ್​ ಒಂದು ದಿನ ನಿಮಗೆ ಉಸಿರುಗಟ್ಟಿಸುತ್ತದೆ’; ದಿವ್ಯಾಗೆ ಇದು ಎಚ್ಚರಿಕೆಯ ಗಂಟೆ

ಅರವಿಂದ್​ ನೋಡಿದರೆ ನಿನ್ನ ತಂದೆಯನ್ನು ಕಂಡಂತೆ ಆಗುತ್ತದೆ ಎಂದು ದಿವ್ಯಾಗೆ ಹೇಳಿದರು ಪ್ರಶಾಂತ್​. ಏಕೆ ಎನ್ನುವ ಪ್ರಶ್ನೆಯನ್ನು ದಿವ್ಯಾ ಕೇಳಿದರು.

‘ಅರವಿಂದ್ ಪೊಸೆಸಿವ್​​ನೆಸ್​ ಒಂದು ದಿನ ನಿಮಗೆ ಉಸಿರುಗಟ್ಟಿಸುತ್ತದೆ’; ದಿವ್ಯಾಗೆ ಇದು ಎಚ್ಚರಿಕೆಯ ಗಂಟೆ
ದಿವ್ಯಾ ಉರುಡುಗ
TV9 Web
| Edited By: |

Updated on: Aug 06, 2021 | 6:42 AM

Share

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇವರ ನಡುವೆ ಪ್ರೀತಿ ಇದೆ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದೆ. ದಿವ್ಯಾಗೆ ಅರವಿಂದ್ ಕೊಂಚ ಹೆಚ್ಚೇ ಕಾಳಜಿ ತೋರಿಸುತ್ತಾರೆ. ಆದರೆ, ಕೆಲವೊಮ್ಮೆ ಇದು ಅತಿಯಾಗುತ್ತದೆ ಎಂಬುದು ಪ್ರಶಾಂತ್​ ಸಂಬರಗಿ ಅಭಿಪ್ರಾಯ. ಈ ಬಗ್ಗೆ ಅವರು ಓಪನ್​ ಆಗಿಯೇ ಹೇಳಿದ್ದಾರೆ. ಆದರೆ, ದಿವ್ಯಾ ಇದನ್ನು ಒಪ್ಪಿಕೊಂಡಿಲ್ಲ.

‘ಅರವಿಂದ್​ ನೋಡಿದರೆ ನಿನ್ನ ತಂದೆಯನ್ನು ಕಂಡಂತೆ ಆಗುತ್ತದೆ’ ಎಂದು ದಿವ್ಯಾಗೆ ಪ್ರಶಾಂತ್ ಹೇಳಿದರು​. ‘ಏಕೆ?’ ಎನ್ನುವ ಪ್ರಶ್ನೆಯನ್ನು ದಿವ್ಯಾ ಕೇಳಿದರು. ‘ಆತ ಕೆಲವೊಮ್ಮೆ ನಡೆದುಕೊಳ್ಳುವ ರೀತಿ ಹಾಗೆಯೇ ಇರುತ್ತದೆ. ತುಂಬಾ ಸ್ಟ್ರಿಕ್ಟ್​ ಆಗಿ ನಡೆದುಕೊಳ್ಳುತ್ತಾನೆ’ ಎಂದರು ಪ್ರಶಾಂತ್​.

ಸ್ವಲ್ಪ ಸಮಯದ ನಂತರ ಇಬ್ಬರೂ ಗಾರ್ಡನ್​ ಏರಿಯಾದಲ್ಲಿ ಕೂತರು. ಈ ವೇಳೆ ಪ್ರಶಾಂತ್​ ಇದೇ ಮಾತನ್ನು ಹೇಳಿದರು. ‘ಅರವಿಂದ್ ತುಂಬಾ ಪೊಸೆಸಿವ್. ಅವರ ಪೊಸೆಸಿವ್​ನೆಸ್​ ಮುಂದೊಂದು ದಿನ ನಿನಗೆ ಉಸಿರುಗಟ್ಟಿಸುತ್ತದೆ. ಅವನು ನಿನ್ನ ಜತೆ ನಡೆದುಕೊಳ್ಳೋದು ಜಡ್​ ಪ್ಲಸ್​ ಸೆಕ್ಯೂರಿಟಿ ತರ ಕಾಣಿಸುತ್ತದೆ. ಆರಂಭದಲ್ಲಿ ಇದು ಚೆನ್ನಾಗಿ ಕಾಣುತ್ತದೆ. ಆದರೆ, ಮುಂದೊಂದು ದಿನ ನಿನಗೆ ಸ್ಪೇಸ್​ ಬೇಕು ಅನಿಸುತ್ತದೆ. ಹೀಗಾಗಿ, ಆ ಪೊಸೆಸಿವ್​ನೆಸ್​ಗೆ ಈಗಲೇ ಬ್ರೇಕ್​ ಹಾಕು’ ಎಂದು ಕಿವಿ ಮಾತು ಹೇಳಿದರು. ದಿವ್ಯಾ ಉರುಡುಗ ಈ ಮಾತನ್ನು ಒಪ್ಪಿಲ್ಲ. ‘ಪಾಪ ಆ ರೀತಿ ಇಲ್ಲ. ಅವರು ಸೂಕ್ಷ್ಮ’ ಎಂದರು ದಿವ್ಯಾ.

ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫಿನಾಲೆ ತಲುಪಿದ್ದಾರೆ. ಇವರಲ್ಲಿ ಅತಿ ಹೆಚ್ಚು ವೋಟ್​ ಪಡೆದವರು ಗೆಲ್ಲುತ್ತಾರೆ. ಇವರಲ್ಲಿ ಗೆಲ್ಲೋದು ಯಾರು ಎನ್ನುವ ಬಗ್ಗೆ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಮೇಲೂ ದಿವ್ಯಾಗೆ ಮಂಜು ಮೇಲಿನ ಭಾವನೆ ಬದಲಾಗಿಲ್ಲ; ಇಲ್ಲಿದೆ ವಿಡಿಯೋ ಸಾಕ್ಷಿ

ಫಿನಾಲೆ ಹಿಂದಿನ ವಾರದಲ್ಲಿ ಪ್ರಶಾಂತ್​ ಕಮ್​ಬ್ಯಾಕ್​; ಮಂಜು, ಅರವಿಂದ್​ ಹಿಂದಿಕ್ಕಿದ ಸಂಬರಗಿ

Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ