AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲೇ ಅಂತ್ಯವಾಗುತ್ತೆ ಭವ್ಯಾ-ತ್ರಿವಿಕ್ರಂ ಪ್ರೀತಿ? ಸಿಕ್ಕಿದೆ ಸೂಚನೆ

ಬಿಗ್ ಬಾಸ್ ಕನ್ನಡದಲ್ಲಿ ತ್ರಿವಿಕ್ರಂ ಅವರು ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಕಪ್ ಗೆದ್ದರೆ ಮಾತ್ರ ಭವ್ಯಾ ಒಪ್ಪುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಆದರೆ, ಇಬ್ಬರ ನಡುವೆ ಜಗಳಗಳು ಹೆಚ್ಚಾಗುತ್ತಿದ್ದು, ಅವರ ಪ್ರೇಮ ಸಂಬಂಧ ಮುಂದುವರಿಯುವುದೇ ಎಂಬ ಅನುಮಾನವಿದೆ. ಟಾಸ್ಕ್​ನಲ್ಲಿ ತ್ರಿವಿಕ್ರಂ ಹೆಸರನ್ನು ಭವ್ಯಾ ಹೇಳದಿರುವುದು ಹೊಸ ಜಗಳಕ್ಕೆ ಕಾರಣವಾಗಿದೆ.

ಬಿಗ್ ಬಾಸ್ ಮನೆಯಲ್ಲೇ ಅಂತ್ಯವಾಗುತ್ತೆ ಭವ್ಯಾ-ತ್ರಿವಿಕ್ರಂ ಪ್ರೀತಿ? ಸಿಕ್ಕಿದೆ ಸೂಚನೆ
ಭವ್ಯಾ-ತ್ರಿವಿಕ್ರಂ
ರಾಜೇಶ್ ದುಗ್ಗುಮನೆ
|

Updated on:Jan 14, 2025 | 10:11 AM

Share

ಬಿಗ್ ಬಾಸ್ ಮನೆಯಲ್ಲಿ ಈವರೆಗೆ ಸಾಕಷ್ಟು ಪ್ರೀತಿಗಳು ಹುಟ್ಟಿವೆ. ಹುಟ್ಟಿದ ಪ್ರೀತಿ ಕೆಲವೊಮ್ಮೆ ಉಳಿದುಕೊಂಡರೆ ಇನ್ನೂ ಕೆಲವೊಮ್ಮೆ ಅಂತ್ಯವಾಗಿದೆ. ಇನ್ನೂ ಅನೇಕ ಸಂದರ್ಭದಲ್ಲಿ ಈ ಪ್ರೀತಿ-ಪ್ರೇಮ ಆಟದ ಮೈಲೇಜ್​ಗೆ ಮಾಡುವ ತಂತ್ರವೂ ಆಗಿರುತ್ತದೆ. ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿದೆ. ತ್ರಿವಿಕ್ರಂ ಅವರು ಓಪನ್ ಆಗಿ ಭವ್ಯಾಗೆ ಪ್ರಪೋಸ್ ಮಾಡಿದ್ದಾರೆ. ಆದರೆ, ಇದು ದೊಡ್ಮನೆಯಲ್ಲಿ ಕೊನೆ ಆಗುವ ಸೂಚನೆಯೂ ಸಿಕ್ಕಿದೆ.

ಕಳೆದ ವಾರ ತ್ರಿವಿಕ್ರಂ ಅವರು ಭವ್ಯಾಗೆ ಪ್ರಪೋಸ್ ಮಾಡಿದ್ದರು. ಪ್ರೀತಿ ಒಪ್ಪಿಕೊಳ್ಳುತ್ತೀರಾ ಅಥವಾ ಇಲ್ಲವಾ ಎಂದು ನೇರವಾಗಿ ಕೇಳಿದ್ದರು. ಆದರೆ, ಭವ್ಯಾ ದೊಡ್ಮನೆಯಲ್ಲಿ ಇದಕ್ಕೆ ಉತ್ತರ ನೀಡುವುದಿಲ್ಲ ಎಂದು ಹೇಳಿದ್ದು ಅಲ್ಲದೆ, ಕಪ್ ಗೆದ್ದು ಬಂದರೆ ಮರುಯೋಚಿಸದೆ ಒಪ್ಪಿಕೊಳ್ಳುತ್ತೇನೆ ಎಂದು ನೇರವಾಗಿ ಹೇಳಿದ್ದರು. ಫಿನಾಲೆ ಸಮೀಪಿಸುವಾಗ ಈ ಬೆಳವಣಿಗೆ ನಡೆದಿದೆ. ಇದರ ಜೊತೆ ಕಿರಿಕ್​ಗಳು ಕೂಡ ಆಗುತ್ತಿವೆ.

ಭವ್ಯಾ ಜೈಲಿನಲ್ಲಿ ಇದ್ದಾಗ ತ್ರಿವಿಕ್ರಂ ಅವರು ಬಂದು ಒಂದು ವಿಚಾರ ಕೇಳಿದ್ದಾರೆ. ‘ನನ್ನನ್ನು ಬಿಟ್ಟು ಬೇರೆ ಯಾರೇ ಬಂದು ಮಾತನಾಡಿದರೂ ನೀನು ಮಾತನಾಡುತ್ತೀಯಾ. ನಾವು ಇಲ್ಲಿ ಕೆಲಸಕ್ಕೆ ಬಂದಿರೋದು. ಚೆನ್ನಾಗಿ ಕೆಲಸ ಮಾಡಿದರೆ ದುಡ್ಡು ಸಿಗುತ್ತದೆ’ ಎಂದರು ತ್ರಿವಿಕ್ರಂ. ಈ ಮೂಲಕ ಭವ್ಯಾ ಉದ್ದೇಶ ಪೂರ್ವಕವಾಗಿ ತಮ್ಮ ಬಳಿ ಮಾತನಾಡುತ್ತಿಲ್ಲ ಎಂಬುದನ್ನು ಹೇಳಿದ್ದಾರೆ.

ಆ ಬಳಿಕ ತ್ರಿವಿಕ್ರಂ ಹಾಗೂ ಭವ್ಯಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಟಾಸ್ಕ್​ ವೇಳೆ ಮೂವರು ಎದುರಾಳಿಯನ್ನು ಭವ್ಯಾ ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ, ಭವ್ಯಾ ಅವರು ತ್ರಿವಿಕ್ರಂ ಹೆಸರನ್ನು ಹೇಳಿಲ್ಲ. ಈ ಬಗ್ಗೆ ತ್ರಿವಿಕ್ರಂ ಅವರು ಭವ್ಯಾ ಬಳಿ ಹೋಗಿ ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೂ ಸಣ್ಣ ಜಗಳ ಆಗಿದೆ. ಆ ಬಳಿಕ ಟಾಸ್ಕ್ ಒಂದರಲ್ಲಿ ಭವ್ಯಾ ಅವರು ತ್ರಿವಿಕ್ರಂನ ಆಯ್ಕೆ ಮಾಡಿದರು. ಇದಕ್ಕೂ ತ್ರಿವಿಕ್ರಂ ಅವರು ಕೊಂಕು ತೆಗೆದರು.

ಇದನ್ನೂ ಓದಿ: ಕೆಟ್ಟದ್ದು ಮಾಡಿದ್ದರೂ ಭವ್ಯಾಗೆ ದೊಡ್ಡ ಅವಕಾಶ ನೀಡಿದ ಹನುಮಂತ; ಫಿನಾಲೆ ಹೋಗೋದು ಮತ್ತಷ್ಟು ಸುಲಭ 

ಸದ್ಯ ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಕಿರಿಕ್ ಹೆಚ್ಚುತ್ತಲೇ ಇದೆ. ಆ ಬಳಿಕ ಇದನ್ನು ಪರಿಹರಿಸಿಕೊಂಡು ಪರಸ್ಪರ ಮಾತನಾಡುತ್ತಾರೆ. ಆದರೆ, ಈ ಜಗಳ ಹೀಗೆ ಮುಂದುವರಿದರೆ ಬಿಗ್ ಬಾಸ್ ಮನೆಯಲ್ಲೇ ಪ್ರೀತಿ ಕೊನೆ ಆದರೂ ಅಚ್ಚರಿ ಏನಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:31 am, Tue, 14 January 25

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?