AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanush Profile: ಬಿಗ್​​ಬಾಸ್ ಮನೆಗೆ ಅಮ್ಮನ ಮಗ ಧನುಶ್, ಯಾರೀತ?

Bigg Boss Kannada season 12: ಬಿಗ್​​ಬಾಸ್ ಮನೆಗೆ ಬಗೆ ಬಗೆಯ ವ್ಯಕ್ತಿತ್ವವುಳ್ಳ, ಹಿನ್ನೆಲೆಯುಳ್ಳ ಸ್ಪರ್ಧಿಗಳು ಬಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಕೆಲ ಧಾರಾವಾಹಿ ನಟರು, ಕಾಮಿಡಿ ಶೋ ಸ್ಪರ್ಧಿಗಳು ಬಂದಿದ್ದಾರೆ. ಕಳೆದ ಬಾರಿ ‘ಗೀತಾ’ ಧಾರಾವಾಹಿಯ ನಾಯಕಿ ಬಿಗ್​​ಬಾಸ್ ಮನೆಗೆ ಬಂದಿದ್ದರು, ಈ ಬಾರಿ ‘ಗೀತಾ’ ಧಾರಾವಾಹಿಯ ನಾಯಕ ಧನುಶ್ ಅವರು ಈ ಬಾರಿ ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ಪ-ಅಮ್ಮ, ಪತ್ನಿ, ಗೆಳೆಯರನ್ನು ಬಿಟ್ಟು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

Dhanush Profile: ಬಿಗ್​​ಬಾಸ್ ಮನೆಗೆ ಅಮ್ಮನ ಮಗ ಧನುಶ್, ಯಾರೀತ?
Dhanush
ಮಂಜುನಾಥ ಸಿ.
|

Updated on:Sep 28, 2025 | 8:15 PM

Share

ಬಿಗ್​​ಬಾಸ್ ಮನೆಗೆ ಬಗೆ ಬಗೆಯ ವ್ಯಕ್ತಿತ್ವವುಳ್ಳ, ಹಿನ್ನೆಲೆಯುಳ್ಳ ಸ್ಪರ್ಧಿಗಳು ಬಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಕೆಲ ಧಾರಾವಾಹಿ ನಟರು, ಕಾಮಿಡಿ ಶೋ ಸ್ಪರ್ಧಿಗಳು ಬಂದಿದ್ದಾರೆ. ಕಳೆದ ಬಾರಿ ‘ಗೀತಾ’ ಧಾರಾವಾಹಿಯ ನಾಯಕಿ ಬಿಗ್​​ಬಾಸ್ ಮನೆಗೆ ಬಂದಿದ್ದರು, ಈ ಬಾರಿ ‘ಗೀತಾ’ ಧಾರಾವಾಹಿಯ ನಾಯಕ ಧನುಶ್ ಅವರು ಈ ಬಾರಿ ಬಿಗ್​​ಬಾಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ಪ-ಅಮ್ಮ, ಪತ್ನಿ, ಗೆಳೆಯರನ್ನು ಬಿಟ್ಟು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ.

ಇಷ್ಟು ವರ್ಷ ‘ಗೀತಾ’ ಧಾರಾವಾಹಿಯ ವಿಜಿ ಆಗಿ ಜನರಿಗೆ ಪರಿಚಯ ಆಗಿರುವ, ಸಾಕಷ್ಟು ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಆದರೆ ಅವರು ಧನುಶ್ ಆಗಿ ಕರ್ನಾಟಕದ ಜನರಿಂದ ಆಶೀರ್ವಾದ ಪಡೆಯಬೇಕು ಎಂಬ ಕಾರಣಕ್ಕೆ ಇದೀಗ ಅವರು ಬಿಗ್​​ಬಾಸ್ ಮನೆಗೆ ಬರುತ್ತಿದ್ದಾರಂತೆ. ನಟನಾಗಿ ಪ್ರೂವ್ ಮಾಡಿಕೊಂಡಿದ್ದೇನೆ, ಆದರೆ ಧನುಶ್ ಆಗಿಯೂ ಜನರಿಂದ ಆಶೀರ್ವಾದ ಪಡೆಯಬೇಕು ಎಂದುಕೊಂಡು ಈಗ ಬಿಗ್​​ಬಾಸ್ ಮನೆಗೆ ಬಂದಿದ್ದೇನೆ ಎಂದಿದ್ದಾರೆ ಧನುಶ್.

ಧನುಶ್ ಅವರು ತುಂಬು ಕುಟುಂಬದಲ್ಲಿ ಬದುಕುತ್ತಿರುವ ವ್ಯಕ್ತಿ. ಅಪ್ಪನೊಂದಿಗೆ ಹಾಗೂ ಅಮ್ಮನೊಂದಿಗೆ ಧನುಶ್ ಅವರಿಗೆ ಆತ್ಮೀಯತೆ ಇದೆಯಂತೆ. ‘ನಾನು ಅಮ್ಮನ ಮಗ’ ಎನ್ನುವ ಧನುಶ್, ಅಮ್ಮನ ಮಾತನ್ನು ಎಂದಿಗೂ ಮೀರುವುದಿಲ್ಲವಂತೆ. ಅಮ್ಮನೊಂದಿಗೆ ಬಹಳ ಆತ್ಮೀಯತೆ ಧನುಶ್ ಅವರಿಗೆ ಇದೆ.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ ಸೀಸನ್ 12: ಈ ಬಾರಿಯ ಮನೆ ಹೀಗಿದೆ ನೋಡಿ

ಧನುಶ್ ಅವರು ಮದುವೆಯಾಗಿ ಒಂದೂವರೆ ವರ್ಷಗಳಾಗಿವೆಯಷ್ಟೆ. ಆಷಾಡಮಾಸದಲ್ಲಿ ಬಿಟ್ಟರೆ ಗಂಡನನ್ನು ಬಿಟ್ಟು ಇದ್ದಿದ್ದೇ ಇಲ್ಲವಂತೆ. ಆದರೆ ಈಗ ಮೊದಲ ಬಾರಿಗೆ ಇಷ್ಟು ದಿನಗಳ ಕಾಲ ಪತಿಯನ್ನು ಬಿಟ್ಟು ಇರಲಿದ್ದಾರೆ. ಧನುಶ್ ಸಹ ಪತ್ನಿಯನ್ನು ಬಹಳ ಪ್ರೀತಿಸುತ್ತಾರಂತೆ. ಆಕೆ ಶಾಂತವಾಗಿದ್ದು, ನನ್ನನ್ನು ಶಾಂತವಾಗಿಟ್ಟಿರುತ್ತಾಳೆ, ಅವಳು ಖುಷಿಯಾಗಿದ್ದು, ನನ್ನನ್ನು ಖುಷಿಯಾಗಿ ಇರಿಸಿದ್ದಾಳೆ ಎಂದಿದ್ದಾರೆ ಧನುಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:13 pm, Sun, 28 September 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್