Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಮುಂದೆ ವಿನಯ್​ ಬಗ್ಗೆ ದೂರು ಹೇಳಿದ ಸಂಗೀತಾ

Bigg Boss Kannada: ಬಿಗ್​ಬಾಸ್ ಮನೆಗೆ ಬಂದ ತಂದೆಯ ಬಳಿ ವಿನಯ್​ ಮೇಲೆ ದೂರು ಹೇಳಿದರು ಸಂಗೀತಾ.

ಅಪ್ಪನ ಮುಂದೆ ವಿನಯ್​ ಬಗ್ಗೆ ದೂರು ಹೇಳಿದ ಸಂಗೀತಾ
ವಿನಯ್-ಸಂಗೀತಾ
Follow us
ಮಂಜುನಾಥ ಸಿ.
|

Updated on: Dec 27, 2023 | 11:46 PM

ಬಿಗ್​ಬಾಸ್ (BiggBoss) ಮನೆಗೆ ಸ್ಪರ್ಧಿಗಳ ಮನೆಯವರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಬುಧವಾರದ ಎಪಿಸೋಡ್​ನಲ್ಲಿ ಮನೆಗೆ ಕಾರ್ತಿಕ್, ಸಿರಿ ಹಾಗೂ ಸಂಗೀತಾ ಅವರುಗಳ ಕುಟುಂಬ ಸದಸ್ಯರು ಆಗಮಿಸಿದ್ದರು. ಇತರೆ ಸ್ಪರ್ಧಿಗಳ ಕುಟುಂಬದ ಒಬ್ಬರು ಅಥವಾ ಇಬ್ಬರು ಮನೆಗೆ ಬಂದರೆ ಸಂಗೀತಾ ಕುಟುಂಬದ ಎಲ್ಲರೂ ಮನೆಗೆ ಬಂದಿದ್ದರು. ಮನೆಯಲ್ಲಿ ಸಂಗೀತಾರ ವೈರಿ ಆಗಿರುವ ವಿನಯ್​, ಆರಂಭದಲ್ಲಿ ಸಂಗೀತಾರ ಕುಟುಂಬದವರನ್ನು ಎದುರುಗೊಳ್ಳದೆ ತುಕಾಲಿ ಹಾಗೂ ಮೈಖಲ್ ಜೊತೆ ಕೋಣೆಯಲ್ಲಿ ಕೂತಿದ್ದರು.

ಮೊದಲಿಗೆ ಸಂಗೀತಾರ ಅತ್ತಿಗೆ ಸುಚಿ ಅವರು ಬಂದರು. ಅದಾದ ಬಳಿಕ ಅವರ ಸಹೋದರ ಬಂದರು. ಸಂಗೀತಾರ ಅಣ್ಣ ವಿನಯ್ ಬಳಿ ಮಾತನಾಡಿ, ‘ನಾನು ನಿಮ್ಮ ಅಭಿಮಾನಿ’ ಎಂದರು. ಬಳಿಕ ‘ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರಿ. ನಿಮ್ಮ ಸ್ಟ್ರಾಟಜಿ ಬಹಳ ಚೆನ್ನಾಗಿದೆ. ಆಟವೇ ಅಗ್ರೆಸ್ಸಿವ್ ಆಗಿದೆ. ಅವಳೂ (ಸಂಗೀತಾ) ಸಹ ಅಗ್ರೆಸ್ಸಿವ್ ನನಗೆ ನಿಮ್ಮ ಯೋಚನೆ ಅರ್ಥವಾಗುತ್ತದೆ. ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರಿ’ ಎಂದು ಹುರಿದುಂಬಿಸಿದರು.

ಆ ಬಳಿಕ ಸಂಗೀತಾರ ತಾಯಿ ಮತ್ತು ತಂದೆ ಮನೆಗೆ ಬಂದರು. ಸಂಗೀತಾರ ತಂದೆ ಮಾಜಿ ಸೈನಿಕ, ಈಗಲೂ ಫಿಟ್ ಆಗಿ ಕುಸ್ತಿ ಪಟುವಿನಂತೆ ಇದ್ದಾರೆ, ಅವರ ಮೈಕಟ್ಟು ನೋಡಿ ಮನೆಯ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು. ಸಂಗೀತಾ, ವಿನಯ್​ ಅನ್ನು ಉದ್ದೇಶಿಸಿ, ‘ನಮ್ಮ ಅಪ್ಪ ಬಂದಿದ್ದಾರೆ, ನಿಮಗೆ ಹೊಡೆಯುತ್ತಾರೆ, ಮಿಲ್ಟ್ರಿ ಮ್ಯಾನ್ ಅವರು ಗನ್ ತಂದಿದ್ದಾರೆ’ ಎಂದು ತಮಾಷೆಯಾಗಿ ದೂರು ಹೇಳಿದರು. ಸಂಗೀತಾರ ತಂದೆ ನಗುತ್ತಲೇ ಅಯ್ಯೋ ಹಾಗೆಲ್ಲ ಇಲ್ಲ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ತುಕಾಲಿ ಸಂತು ಬಿತ್ತು ಹೆಂಡತಿ ಕೈಲಿ ಏಟು

ಸಂಗೀತಾರ ಬಗ್ಗೆ ಗೊತ್ತಿರದ ವಿಷಯವನ್ನು ಮನೆಯ ಸದಸ್ಯರಿಗೆ ಹೇಳಬೇಕಿತ್ತು, ಈ ವೇಳೆ ಮಾತನಾಡಿದ ಅವರ ಸಹೋದರ, ‘‘ಸಂಗೀತಾ ಕಾರಿನ ಡ್ರೈವರ್​ ಸೀಟಿನಲ್ಲಿ ಕುಳಿತರೆ ಅವರ ಮೈಮೇಲಿ ಕಾಳಿ ಆವಾಹನೆ ಆಗುತ್ತದೆ. ಯಾರಾದರೂ ಎದುರಿನಿಂದ ಕಾರಿಗೆ ಅಡ್ಡ ಬಂದು, ಅಪ್ಪಿ ತಪ್ಪಿ ಸಂಗೀತಾ ಕಡೆ ಗುರಾಯಿಸಿದರೆ ಮುಗಿಯಿತು ಅವರ ಕತೆ ಒಮ್ಮೆಲೆ ಹಾರಿ ಬೀಳುತ್ತಾಳೆ’’ ಎಂದರು.

ಆಗ ಸಂಗೀತಾರ ತಂದೆ, ಸಂಗೀತಾ ವರ್ತೂರುಗೆ ಆವಾಜ್ ಹಾಕಿದ್ದನ್ನು ನೆನಪು ಮಾಡಿಕೊಂಡರು. ವರ್ತೂರು ಸಂತುಗೆ ಕೇಳಿದಳಲ್ಲ, ‘ಏನು ವರ್ತೂರು ಗುರಾಯಿಸುತ್ತಿದ್ದೀರ, ಏನ್ ಸಮಾಚಾರ’ ಎಂದು ಆಗ ವರ್ತೂರು ‘ಅಮ್ಮಾ ನಿಮ್ಮ ಸಹವಾಸ ಬೇಡ ಎಂದು ಕೈಮುಗಿದರಲ್ಲ’ ಅದೇ ಪರಿಸ್ಥಿತಿ ಆಗುತ್ತದೆ ಸಂಗೀತಾರ ಕಾರಿಗೆ ಎದುರು ಬಂದವರಿಗೆ ಎಂದರು. ಜೊತೆಗೆ ಸಂಗೀತಾ ಹೇಗೆ ಚಿಕ್ಕವಳಿದ್ದಾಗ, ‘ಪಿ ಸಂಗೀತಾ’ ಎಂದರೆ ಸಿಟ್ಟು ಮಾಡಿಕೊಳ್ಳುತ್ತಿದ್ದರು ಎಂಬುದನ್ನೂ ಸಹ ರಸವತ್ತಾಗಿ ವಿವರಿಸಿದರು. ಸಂಗೀತಾರ ತಂದೆ, ಡ್ರೋನ್ ಪ್ರತಾಪ್ ನಾಯಕನಾಗಬೇಕು ಎಂದು ಆಯ್ಕೆ ಮಾಡಿ ಕುಟುಂಬದವರನ್ನು ಕರೆದುಕೊಂಡು ಹೊರನಡೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?