AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಮುಂದೆ ವಿನಯ್​ ಬಗ್ಗೆ ದೂರು ಹೇಳಿದ ಸಂಗೀತಾ

Bigg Boss Kannada: ಬಿಗ್​ಬಾಸ್ ಮನೆಗೆ ಬಂದ ತಂದೆಯ ಬಳಿ ವಿನಯ್​ ಮೇಲೆ ದೂರು ಹೇಳಿದರು ಸಂಗೀತಾ.

ಅಪ್ಪನ ಮುಂದೆ ವಿನಯ್​ ಬಗ್ಗೆ ದೂರು ಹೇಳಿದ ಸಂಗೀತಾ
ವಿನಯ್-ಸಂಗೀತಾ
ಮಂಜುನಾಥ ಸಿ.
|

Updated on: Dec 27, 2023 | 11:46 PM

Share

ಬಿಗ್​ಬಾಸ್ (BiggBoss) ಮನೆಗೆ ಸ್ಪರ್ಧಿಗಳ ಮನೆಯವರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಬುಧವಾರದ ಎಪಿಸೋಡ್​ನಲ್ಲಿ ಮನೆಗೆ ಕಾರ್ತಿಕ್, ಸಿರಿ ಹಾಗೂ ಸಂಗೀತಾ ಅವರುಗಳ ಕುಟುಂಬ ಸದಸ್ಯರು ಆಗಮಿಸಿದ್ದರು. ಇತರೆ ಸ್ಪರ್ಧಿಗಳ ಕುಟುಂಬದ ಒಬ್ಬರು ಅಥವಾ ಇಬ್ಬರು ಮನೆಗೆ ಬಂದರೆ ಸಂಗೀತಾ ಕುಟುಂಬದ ಎಲ್ಲರೂ ಮನೆಗೆ ಬಂದಿದ್ದರು. ಮನೆಯಲ್ಲಿ ಸಂಗೀತಾರ ವೈರಿ ಆಗಿರುವ ವಿನಯ್​, ಆರಂಭದಲ್ಲಿ ಸಂಗೀತಾರ ಕುಟುಂಬದವರನ್ನು ಎದುರುಗೊಳ್ಳದೆ ತುಕಾಲಿ ಹಾಗೂ ಮೈಖಲ್ ಜೊತೆ ಕೋಣೆಯಲ್ಲಿ ಕೂತಿದ್ದರು.

ಮೊದಲಿಗೆ ಸಂಗೀತಾರ ಅತ್ತಿಗೆ ಸುಚಿ ಅವರು ಬಂದರು. ಅದಾದ ಬಳಿಕ ಅವರ ಸಹೋದರ ಬಂದರು. ಸಂಗೀತಾರ ಅಣ್ಣ ವಿನಯ್ ಬಳಿ ಮಾತನಾಡಿ, ‘ನಾನು ನಿಮ್ಮ ಅಭಿಮಾನಿ’ ಎಂದರು. ಬಳಿಕ ‘ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರಿ. ನಿಮ್ಮ ಸ್ಟ್ರಾಟಜಿ ಬಹಳ ಚೆನ್ನಾಗಿದೆ. ಆಟವೇ ಅಗ್ರೆಸ್ಸಿವ್ ಆಗಿದೆ. ಅವಳೂ (ಸಂಗೀತಾ) ಸಹ ಅಗ್ರೆಸ್ಸಿವ್ ನನಗೆ ನಿಮ್ಮ ಯೋಚನೆ ಅರ್ಥವಾಗುತ್ತದೆ. ನೀವು ಬಹಳ ಚೆನ್ನಾಗಿ ಆಡುತ್ತಿದ್ದೀರಿ’ ಎಂದು ಹುರಿದುಂಬಿಸಿದರು.

ಆ ಬಳಿಕ ಸಂಗೀತಾರ ತಾಯಿ ಮತ್ತು ತಂದೆ ಮನೆಗೆ ಬಂದರು. ಸಂಗೀತಾರ ತಂದೆ ಮಾಜಿ ಸೈನಿಕ, ಈಗಲೂ ಫಿಟ್ ಆಗಿ ಕುಸ್ತಿ ಪಟುವಿನಂತೆ ಇದ್ದಾರೆ, ಅವರ ಮೈಕಟ್ಟು ನೋಡಿ ಮನೆಯ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು. ಸಂಗೀತಾ, ವಿನಯ್​ ಅನ್ನು ಉದ್ದೇಶಿಸಿ, ‘ನಮ್ಮ ಅಪ್ಪ ಬಂದಿದ್ದಾರೆ, ನಿಮಗೆ ಹೊಡೆಯುತ್ತಾರೆ, ಮಿಲ್ಟ್ರಿ ಮ್ಯಾನ್ ಅವರು ಗನ್ ತಂದಿದ್ದಾರೆ’ ಎಂದು ತಮಾಷೆಯಾಗಿ ದೂರು ಹೇಳಿದರು. ಸಂಗೀತಾರ ತಂದೆ ನಗುತ್ತಲೇ ಅಯ್ಯೋ ಹಾಗೆಲ್ಲ ಇಲ್ಲ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ತುಕಾಲಿ ಸಂತು ಬಿತ್ತು ಹೆಂಡತಿ ಕೈಲಿ ಏಟು

ಸಂಗೀತಾರ ಬಗ್ಗೆ ಗೊತ್ತಿರದ ವಿಷಯವನ್ನು ಮನೆಯ ಸದಸ್ಯರಿಗೆ ಹೇಳಬೇಕಿತ್ತು, ಈ ವೇಳೆ ಮಾತನಾಡಿದ ಅವರ ಸಹೋದರ, ‘‘ಸಂಗೀತಾ ಕಾರಿನ ಡ್ರೈವರ್​ ಸೀಟಿನಲ್ಲಿ ಕುಳಿತರೆ ಅವರ ಮೈಮೇಲಿ ಕಾಳಿ ಆವಾಹನೆ ಆಗುತ್ತದೆ. ಯಾರಾದರೂ ಎದುರಿನಿಂದ ಕಾರಿಗೆ ಅಡ್ಡ ಬಂದು, ಅಪ್ಪಿ ತಪ್ಪಿ ಸಂಗೀತಾ ಕಡೆ ಗುರಾಯಿಸಿದರೆ ಮುಗಿಯಿತು ಅವರ ಕತೆ ಒಮ್ಮೆಲೆ ಹಾರಿ ಬೀಳುತ್ತಾಳೆ’’ ಎಂದರು.

ಆಗ ಸಂಗೀತಾರ ತಂದೆ, ಸಂಗೀತಾ ವರ್ತೂರುಗೆ ಆವಾಜ್ ಹಾಕಿದ್ದನ್ನು ನೆನಪು ಮಾಡಿಕೊಂಡರು. ವರ್ತೂರು ಸಂತುಗೆ ಕೇಳಿದಳಲ್ಲ, ‘ಏನು ವರ್ತೂರು ಗುರಾಯಿಸುತ್ತಿದ್ದೀರ, ಏನ್ ಸಮಾಚಾರ’ ಎಂದು ಆಗ ವರ್ತೂರು ‘ಅಮ್ಮಾ ನಿಮ್ಮ ಸಹವಾಸ ಬೇಡ ಎಂದು ಕೈಮುಗಿದರಲ್ಲ’ ಅದೇ ಪರಿಸ್ಥಿತಿ ಆಗುತ್ತದೆ ಸಂಗೀತಾರ ಕಾರಿಗೆ ಎದುರು ಬಂದವರಿಗೆ ಎಂದರು. ಜೊತೆಗೆ ಸಂಗೀತಾ ಹೇಗೆ ಚಿಕ್ಕವಳಿದ್ದಾಗ, ‘ಪಿ ಸಂಗೀತಾ’ ಎಂದರೆ ಸಿಟ್ಟು ಮಾಡಿಕೊಳ್ಳುತ್ತಿದ್ದರು ಎಂಬುದನ್ನೂ ಸಹ ರಸವತ್ತಾಗಿ ವಿವರಿಸಿದರು. ಸಂಗೀತಾರ ತಂದೆ, ಡ್ರೋನ್ ಪ್ರತಾಪ್ ನಾಯಕನಾಗಬೇಕು ಎಂದು ಆಯ್ಕೆ ಮಾಡಿ ಕುಟುಂಬದವರನ್ನು ಕರೆದುಕೊಂಡು ಹೊರನಡೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ