AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್: ಸ್ಪರ್ಧಿಗಳ ವಿಚಾರಣೆ ಶುರುವಿಟ್ಟುಕೊಂಡ ಕಿಚ್ಚ ಸುದೀಪ್

Bigg Boss: ಈ ವಾರ ಮನೆಯ ಹಲವು ಸ್ಪರ್ಧಿಗಳು ಮಾನವೀಯತೆ ಮೀರಿ ವರ್ತಿಸಿದ್ದಾರೆ, ಅವರ ವರ್ತನೆಯನ್ನು ಸುದೀಪ್ ಹೇಗೆ ವಿಮರ್ಶಿಸುತ್ತಾರೆ, ಯಾರನ್ನು ಟೀಕಿಸುತ್ತಾರೆ, ಯಾರಿಗೆ ಭೇಷ್ ಎನ್ನುತ್ತಾರೆ. ನ್ಯಾಯ ವಿತರಣೆ ಹೇಗೆ ಮಾಡುತ್ತಾರೆ ಎಂದು ನೋಡಲು ಕಾದಿದ್ದರು. ಅಂತೆಯೇ ವಾರಾಂತ್ಯದ ಪಂಚಾಯ್ತಿಗೆ ಬಂದ ಸುದೀಪ್ ತುಸುವೂ ತಡ ಮಾಡದೆ ಸ್ಪರ್ಧಿಗಳ ವಿಚಾರಣೆ ಆರಂಭಿಸಿದ್ದಾರೆ.

ಬಿಗ್​ಬಾಸ್: ಸ್ಪರ್ಧಿಗಳ ವಿಚಾರಣೆ ಶುರುವಿಟ್ಟುಕೊಂಡ ಕಿಚ್ಚ ಸುದೀಪ್
ಮಂಜುನಾಥ ಸಿ.
|

Updated on: Dec 09, 2023 | 9:44 PM

Share

ಈ ವಾರಾಂತ್ಯದ ಕಿಚ್ಚನ ಪಂಚಾಯ್ತಿಗಾಗಿ ಎಲ್ಲ ಬಿಗ್​ಬಾಸ್ (Bigg Boss) ವೀಕ್ಷಕರು ಎದುರು ನೋಡುತ್ತಿದ್ದರು. ಈ ವಾರ ಮನೆಯ ಹಲವು ಸ್ಪರ್ಧಿಗಳು ಮಾನವೀಯತೆ ಮೀರಿ ವರ್ತಿಸಿದ್ದಾರೆ, ಅವರ ವರ್ತನೆಯನ್ನು ಸುದೀಪ್ ಹೇಗೆ ವಿಮರ್ಶಿಸುತ್ತಾರೆ, ಯಾರನ್ನು ಟೀಕಿಸುತ್ತಾರೆ, ಯಾರಿಗೆ ಭೇಷ್ ಎನ್ನುತ್ತಾರೆ. ನ್ಯಾಯ ವಿತರಣೆ ಹೇಗೆ ಮಾಡುತ್ತಾರೆ ಎಂದು ನೋಡಲು ಕಾದಿದ್ದರು. ಅಂತೆಯೇ ವಾರಾಂತ್ಯದ ಪಂಚಾಯ್ತಿಗೆ ಬಂದ ಸುದೀಪ್ ತುಸುವೂ ತಡ ಮಾಡದೆ ಸ್ಪರ್ಧಿಗಳ ವಿಚಾರಣೆ ಆರಂಭಿಸಿದ್ದಾರೆ.

ಹಾಲ್​ನ ಮಧ್ಯೆ ಪ್ರತ್ಯೇಕವಾಗಿ ಕುರ್ಚಿಯೊಂದನ್ನು ಹಾಕಿಸಿ, ಪ್ರತಿಯೊಬ್ಬ ಸ್ಪರ್ಧಿಯನ್ನೂ ಕುರ್ಚಿಗೆ ಕರೆದು ಈ ವಾರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಅವರವರ ಅಭಿಪ್ರಾಯ ಕೇಳಿದ್ದಾರೆ. ‘ಈ ದಿನ ಮೊದಲಿಗೆ ನಾನು ಮಾತನಾಡುವುದಿಲ್ಲ, ನಿಮ್ಮ ಮಾತುಗಳನ್ನು ಕೇಳುತ್ತೇನೆ’ ಎಂದು, ಸಾಲಾಗಿ ಎಲ್ಲ ಸ್ಪರ್ಧಿಗಳನ್ನೂ ಕರೆದು ಅವರವರ ದೃಷ್ಟಿಕೋನದಲ್ಲಿ ವಾರದ ಕತೆಯನ್ನು ಕೇಳಿದ್ದಾರೆ.

ಮೊದಲಿಗೆ ಕಾರ್ತಿಕ್ ಅನ್ನು ಕರೆದರು ಸುದೀಪ್, ಕುರ್ಚಿಯಲ್ಲಿ ಕುಳಿತ ಕಾರ್ತಿಕ್, ತಮ್ಮ ಪ್ರಕಾರ ನಡೆದ ಘಟನೆಗಳನ್ನು ವಿವರಿಸಿದರು. ತಾನು ವಿನಯ್​ಗೆ ಸಿಕ್ಕಿದ್ದ ಆನೆಯನ್ನು ಡಸ್ಟ್​ಬೀನ್​ಗೆ ಹಾಕಿದ್ದೆ ಅದು ಟಾಸ್ಕ್​ನ ಭಾಗವಾಗಿತ್ತು, ಆದರೆ ಟಾಸ್ಕ್ ಮುಗಿದ ಕೂಡಲೇ ನಾನೇ ಅದನ್ನು ತೊಳೆದು ಟೇಬಲ್​ ಮೇಲಿಟ್ಟೆ ಎಂದರು. ಬಳಿಕ ತಮಗೂ ವಿನಯ್​ಗೂ ಆದ ಜಗಳ ಹಾಗೂ ತನ್ನ ತಪ್ಪಿಲ್ಲದಿದ್ದರೂ ವಿನಯ್ ಉದ್ದೇಶಪೂರ್ವಕವಾಗಿ ಜಗಳ ಮಾಡಿದರು. ನಾನು ಆಡದ ಮಾತನ್ನು ಆಡಿದ್ದೀಯ ಎಂದು ನನ್ನ ಕುಟುಂಬ ಸದಸ್ಯರನ್ನು ಎಳೆದು ತಂದರು ಎಂದರು.

ಇದನ್ನೂ ಓದಿ:ಈ ವಾರ ಬಿಗ್​ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್​ಗೆ ಎಷ್ಟನೆ ಸ್ಥಾನ?

ಬಳಿಕ ಬಂದ ವಿನಯ್, ಕಾರ್ತಿಕ್ ಹೇಳಿದ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ತಿಕ್ ಮಾಡಿದ ಆರೋಪಗಳಿಗೆ ಸ್ಪಷ್ಟನೆ ಕೊಟ್ಟರು. ತನ್ನದು ತಪ್ಪಿಲ್ಲವೆಂದು, ಕಾರ್ತಿಕ್ ಬೇಕೆಂದೇ ನನ್ನನ್ನು ಪ್ರವೋಕ್ ಮಾಡಿ, ನನ್ನಿಂದ ಮಾಡಿಸಿದರು. ನನ್ನ ಆನೆಯನ್ನು ಹಾಳು ಮಾಡಿದರು ಎಂದು ಆರೋಪ ಮಾಡಿದರು.

ಬಳಿಕ ಬಂದ ತುಕಾಲಿ ಸಂತೋಷ್, ಬಹುತೇಕ ತಮ್ಮ ತಂಡದ ಪರವಾಗಿಯೇ ಮಾತನಾಡಿದರು. ಕಾರ್ತಿಕ್ ಹಾಗೂ ಅವರ ತಂಡದ್ದೇ ತಪ್ಪು ಎನ್ನುವಂತೆ ಮಾತನಾಡಿದರು. ತುಕಾಲಿ, ಮಾತನಾಡಿದ ಬಳಿಕ ಮಾತನಾಡಿದ ಸುದೀಪ್, ನಿಮಗೆ ಮಾತನಾಡಲು ಅವಕಾಶ ಕೊಟ್ಟಿದ್ದು ಸೂಕ್ಷ್ಮಗಳನ್ನು ಹೇಳುತ್ತೀರೆಂದೇ ಹೊರತು, ನಡೆದ ಘಟನೆಗಳನ್ನು ಹೇಳಲೋ ಅಥವಾ ಯಾರದ್ದು ತಪ್ಪು, ಯಾರದ್ದು ಸರಿಯೋ ಎಂದು ನನಗೆ ಒಪ್ಪಿಸಿ ಎಂದಲ್ಲ ಎಂದರು. ತುಕಾಲಿ ಸಂತು, ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್